Tuesday, January 25, 2011

ಸದ್ಧು!ಅಧಿವೇಶನ ನಡೆಯುತಿದೆ

«zsÁ£À ªÀÄAqÀ®zÀ°è C¢üªÉñÀ£À £ÀqÉAiÀÄÄwÛzÉ. ¥Àæw¥ÀPÀëUÀ¼À C§âgÀ, CgÀZÁlUÀ¼ÀÄ, DqÀ½vÀ ¥ÀPÀëUÀ¼À ¤¸ÀìºÁAiÀÄPÀvÉUÀ¼ÉqÉAiÀÄ°è ¸ÀªÀÄAiÀÄ ¥ÉÇïÁUÀÄwÛzÉ. £ÉÆÃn¥sÉÊö, r£ÉÆÃn¥sÉÊUÀ¼À ¸ÀAUÀw ZÀZÉðUÀ½®èzÉ PÀ¼ÉzÀÄºÉÆÃUÀÄwÛzÉ. AiÀiÁªÀÅzÉÆÃ ¸ÀgÀPÁgÀUÀ¼À PÁ®zÀ ¨sÀƺÀUÀgÀtUÀ¼ÀÄ EAzÉA¢£ÀzÉÆÝà ¸ÉÊlÄUÀ¼ÉqÉAiÀİè vÀ¼ÀÄPÀÄ ºÁQPÉÆAqÀÄ ¸ÀzÀ£ÀzÀ C§âgÀ eÁ¹ÛAiÀiÁUÀÄwÛzÉ. vÀ£Àß ¥ÁrUÉ J¯ÉÆèà ªÀÄÆ¯ÉAiÀÄ°è ©zÀÄÝPÉÆArgÀÄwÛzÀÝ d«ÄäUÉ PÉÆÃnUÀ¼À ¨É¯É §AzÀÄ ©nÖzÉ. MAzÀÄ vÀÄAqÀÄ £É® PÀ£ÁðlPÀzÀ°è ªÀģɪÀiÁvÁV ©nÖzÉ. d£À¥Àæw¤¢üUÀ¼À ¸ÀA§A¢üPÀgÁgÉÆÃ PÁAiÉÄÝAiÀÄ ¸ÀÄRªÀ£ÀÄß C£ÀĨsÀ«¸ÀÄwÛzÁÝgÉ. EzÀÄ gÁdzsÁ¤AiÀÄ PÀvÉ. vÀÄAqÀÄ ¨sÀÆ«ÄAiÉÆAzÀÄ §ÈºÀvï §æºÁäAqÀzÀAvÉ «zsÁ£ÀªÀÄAqÀ®zÀ°è ZÀZÉðAiÀiÁV £É®zÀ ªÀĺÀvÀéªÀ£ÀÄß ¸Áj ºÉýzÀAwzÉ. gÁvÉÆæÃgÁwæ £ÉÆÃn¥sÉÊ DVzÀÝ ¨sÀÆ«Ä ¨É¼ÀUÁUÀĪÀÅzÀgÉÆ¼ÀUÉ r£ÉÆÃn¥sÉÊ DV AiÀiÁgÀzÉÆÝà PÉÊ ¸ÉÃjPÉÆAqÀ PÀvÉ gÁdzsÁ¤AiÀÄzÁÝzÀgÉ C°èAzÀ zÀÆgÀzÀ PÀgÁªÀ½AiÀÄ°è £ÀqÉzÀzÉÝà ¨ÉÃgÉÆAzÀÄ PÀvÀÉ. CzÀÄ «zsÁ£ÀªÀÄAqÀ®zÀ°è ZÀZÉðAiÀiÁUÀ°®èö. DUÀĪÀÅzÀÆ E®èö. KPÉAzÀgÉ PÀgÁªÀ½AiÀÄ ¸ÀzÀåzÀ ZÀZÉðAiÀÄ ¨sÀÆ«ÄUÉ

D AiÉÆÃUÀ«®èö. D ¨sÀÆ«Ä gÁvÉÆæÃgÁwæ £ÉÆÃn¥sÉÊ DV©qÀÄvÀÛzÉ . ºÁUÁV CzÉÆAzÀÄ ©ü£Àß PÀvÉ.

CzÀÄ gÁdzsÁ¤AiÀÄ ¨sÀÆ«ÄAiÀÄAvÉ vÀÄAqÀÄ ¨sÀÆ«ÄAiÀÄ PÀvÉAiÀÄ®èö. ºÀZÀѺÀ¸ÀÄj£À, £À¼À£À½¸ÀÄwÛzÀÝ JPÀgÉUÀlÖ¯É ¨sÀÆ«ÄAiÀÄ PÀvÉÉ. PÀ¼ÉzÀÄºÉÆÃzÀ ¸Á«gÁgÀÄ JPÀgÉ ¨sÀÆ«ÄAiÀÄ PÀvÉÉ. E£ÀÆß PÀ¼ÉzÀÄPÉÆ¼Àî®Ä ¸ÀgÀwAiÀİègÀĪÀ ªÀåxÉ. «zsÁ£ÀªÀÄAqÀ®zÀ°è ZÀaðvÀ «µÀAiÀÄ. DqÀA§gÀzÀ §zÀÄQ£À ¨sÀÆ«ÄAiÀÄzÁÝzÀgÉ F ¨sÀÆ«Ä C¹ÛvÀéPÁÌV ºÉÆÃgÁqÀÄwÛgÀĪÀ PÀvÉ. gÁdzsÁ¤AiÀÄ ¨sÀÆ«Ä G¼ÀîÀªÀjUÁVAiÀiÁzÀgÉ PÀgÁªÀ½AiÀÄ ¨sÀÆ«Ä E®èzÀªÀgÀzÀÄÝö.

CzÀÄ MSEZÀ.

ªÀÄAUÀ¼ÀÆgÀÄ «±ÉõÀ DyðPÀ ªÀ®AiÀÄ JAzÀgÉ ºÁUÉAiÉÄ. CzÀPÉÌ JzÀÄgÀÄ §AzÀªÀgÀ£ÀÄß CzÀÄ ¸À»¸ÀĪÀÅ¢®èö. ºÁUÁV CzÀgÀ §UÉÎ ªÀiÁvÁqÀ§®è zsÉÊAiÀÄð E°è£À ¥ÀæeÁÕªÀAvÀjUÀÆ ¸ÁPÁUÀĪÀÅ¢®èö. »ÃUÉ ªÀwð¸ÀÄvÀÛ¯Éà CzÀÄ 1800 a®ègÉ JPÀgÉ PÀȶ ¨sÀÆ«ÄAiÀÄ£ÀÄß ¸Áé¢üãÀ¥Àr¹PÉÆArvÀÄ. CzÀgÀ ªÀÄÄAzÀĪÀjzÀ ¨sÁUÀªÉA§AvÉ 2035 JPÀgÉAiÀÄ ªÉÄÃ®Æ PÀtÂÚlÄÖ CzÀgÀ PÀ§½PÉAiÀÄ ¥ÀæAiÀÄvÀß ªÀiÁqÀÄwÛzÉ.

ªÉÆzÀ® ºÀAvÀzÀ C£ÁºÀÄvÀUÀ¼À£ÀÄß PÀAqÀ d£À£ÁAiÀÄPÀgÀÄ JgÀqÀ£É ºÀAvÀPÉÌ D¸ÀàzÀ«®è JAzÀÄ ºÉýPÉ PÉÆlÖgÀµÉÖà ºÉÆgÀvÀÄ C¢üPÀÈvÀ ¸ÀÆZÀ£É ºÉÆgÀ§gÀ°®èö. ºÁUÁV MSEZ UÉÆAzÀ®UÀ¼À£ÀÄß ºÀÄnÖ¸ÀÄvÁÛö, ¨sÀAiÀĪÀ£ÀÄß ¤«Äð¸ÀÄvÁÛ vÀ£Àß PÉ®¸À vÁ£ÀÄ ªÀiÁqÀÄwÛzÉ. «zsÁ£ÀªÀÄAqÀ®zÀ vÀÄAqÀÄ £É®zÀ §UÉV£À ZÀZÉðUÀ¼ÉqÉAiÀİè gÉÊvÀgÀ ¨sÀÆ«ÄAiÀÄ ¸ÀAUÀw ZÀZÉðUÉ D¸ÀàzÀ«®èzÉ ºÉÆÃUÀÄwÛzÉ. E«µÀÄÖ PÀgÁªÀ½AiÀÄ gÉÊvÀ£À ¨sÀÆ«ÄAiÀÄ PÀvÉ. FUÀ ªÀÄÄAzÀĪÀgÉ¢gÀĪÀÅzÀÄ CzÀgÀ JgÀqÀ£É ¨sÁUÀ.

ªÀÄAUÀ¼ÀÆgÀÄ vÁ®ÆPÀÄ ¥ÉªÀÄÄðzÉ JA§ UÁæªÀÄzÀ MAzÀÄ ¨sÁUÀ PÀÄqÀÄ© ¥ÀzÀªÀÅ. §ÄqÀPÀlÄÖ ªÀUÀðzÀ PÀÄqÀÄ© d£ÁAUÀzÀ F UÁæªÀÄ ºÀ¹j£À £É®. ¨sÀvÀÛö, vÀgÀPÁj ¨É¼ÉAiÀÄÄvÁÛ vÀªÀÄä ¥ÁrUÉ vÁ«gÀÄwÛzÀÝ F PÀÄqÀÄ©UÀ¼ÀÄ ±ÀæªÀÄfëUÀ¼ÀÄ. «±ÉõÀ DyðPÀ ªÀ®AiÀÄ ¥ÀæzÉñÀzÀ CAa£À°ègÀĪÀ EªÀjUÉ CzÀjAzÁUÀĪÀ ¥ÀæAiÉÆÃd£ÀªÉãÀÆ EgÀ°®èö. vÀªÀÄä vÀgÀPÁjUÀ¼À£ÀÄß ªÀiÁgÀÄvÁÛ ¸ÀªÀÄÈ¢ÞAiÀÄ fêÀ£À £ÀqɸÀÄwÛzÀÝ EªÀjUÉ PÉÆ£ÉUÉ ªÀÄļÀĪÁVzÀÄÝ CzÉà IRGWÀ. MAzÀÄ ¢£À ¸ÀÆAiÀiÁð¸ÀÛzÀ C£ÀAvÀgÀ §AzÀ ¸ÀÆlÄzsÁjUÀ¼ÀÄ ºÉ¨ÉâlÄÖ MwÛ¹PÉÆAqÀÄ ºÉÆÃUÀĪÁUÀ®Æ EªÀjUÉ K£ÉÆAzÀÆ UÉÆwÛgÀ°®èö. ªÀÄgÀÄ¢£À ¸ÀªÉð £ÀqɸÀĪÀ ºÉÆwÛUÉ J®èªÀÇ ¸ÀàµÀÖªÁV ºÉÆÃVvÀÄÛö. ªÀÄÄAzÉ £ÀqÉ¢zÉݯÁè MAxÀgÁ gÀPÀÛ ZÀjvÉæAiÉÄÃ. ¨É¼ÉzÀÄ ¤AwzÀÝ ¨sÀvÀÛö, vÀgÀPÁjUÀ¼À ªÉÄÃ¯É AiÀÄAvÀæUÀ¼ÀÄ ªÀÄtÄÚ ¸ÀÄjzÀªÀÅ. ¨Á«, ¨Á«AiÉÆ¼ÀV£À ªÉÆÃmÁgÀÄUÀ¼ÀÄ ªÀÄÄaÑºÉÆÃzÀªÀÅ. 15 a®ègÉ JPÀgÉ ¥ÀæzÉñÀ ¸À¥ÁlÄ ªÉÄÊzÁ£ÀªÁ¬ÄvÀÄ. PÀÄqÀÄ©UÀ¼À ªÀÄ£ÉAiÀÄ ªÀÄÄA¢£À zÀȱÀå §zÀ¯ÁV ºÉÆÃVvÀÄÛö. C°è £ÀqÉzÀ E£ÀÆß MAzÀÄ «avÀæ ªÉAzÀgÉ ªÉÆzÀ® ºÀAvÀzÀ ¨sÀÆ ¸Áé¢üãÀzÀ°è £É® PÀ¼ÉzÀÄPÉÆAqÀ PÀgÁªÀ½AiÀÄ UÀÄwÛ£À ªÀÄ£ÉUÀ¼À PÀÄlÄA§UÀ½UÉ PÀÄqÀÄ©UÀ¼À eÁUÀzÀ°è ¥ÀÅ£ÀªÀð¸Àw PÀ°à¸À¯Á¬ÄvÀÄ. £ÉÆÃqÀ£ÉÆÃqÀÄvÀÛ¯Éà PÀÄqÀÄ©UÀ¼À ¨sÀÆ«ÄAiÀÄ°è ºÉÆ¸À §qÁªÀuÉAiÉÆAzÀÄ JzÀÄÝ ¤AwvÀÄ. vÀļÀĪÀgÀ UÀÄwÛ£À ªÀÄ£É PÁAQæÃmï §AUÀ¯ÉUÀ¼ÁzÀªÀÅ. UÀÄwÛ£À ªÀÄ£ÉUÀ¼À zÉêÀgÀÄ, zÉʪÀ¸ÁÜ£ÀUÀ½UÀÆ ¥ÀÅ£ÀªÀð¸Àw PÀ°à¸À¯Á¬ÄvÀÄ. Erà 15 JPÀgÉ vÀÄA¨Á zÉêÀjUÀÆ zÉʪÀUÀ½UÀÆ ªÀÄ£ÉUÀ¼ÀÄ JzÀݪÀÅ. ¸ÀA¸ÀÌøwAiÀÄ ¥ÀæwÃPÀªÁzÀ, ¸ÉÆUÀr£À ¸ÀAPÉÃvÀªÁzÀ UÀÄvÀÄÛ ªÀÄvÀÄÛ CzÀgÀ zÉêÀgÀÄ ¸ÀgÀwAiÀÄ°è ¥ÀæwµÁצ¸À®àlÖªÀÅ. CzÀÄgÉzÀÄj£À¯Éèà ¨sÀÆ«Ä PÀ¼ÉzÀÄPÉÆAqÀ PÀÄqÀÄ©UÀ¼À ªÀÄ£ÉUÀ¼ÀÄ ¤AvÀªÀÅ. MAzÉqÉ zÉêÀgÀ£ÀÄß vÀªÉÆänÖUÉ PÁ¸ÉÆäÃ¥Á°nÃPÀgÀtUÉÆ½¹zÀ ²æÃªÀÄAvÀgÀÄ. E£ÉÆßAzÉqÉ C£ÀßPÁÌV ºÉÆÃgÁl ªÀiÁqÀĪÀ PÀÄqÀÄ©UÀ¼ÀÄ! EzÀÄ «avÀæªÁzÀgÀÆ ¸ÀvÀåö. EzɯÁè §Ä¢ÞªÀAvÀgÀ f¯Éè JAzÀÄ PÀgÉzÀÄPÉÆ¼ÀÄîªÀ, MAzÀÄ PÁ®zÀ°è ºÉÆÃgÁlUÀ¼À vÀªÀgÀÄ ªÀÄ£ÉAiÀiÁVzÀÝ zÀQët PÀ£ÀßqÀzÀ°è £ÀqÉ¢zÉ. EA¢UÀÆ £ÀqÉAiÀÄÄwÛzÉ. »ÃUÉ zÉêÀjUÉ PÁélæ¸ï PÀnÖ¹ PÀÄqÀÄ©UÀ¼À£ÀÄß ©Ã¢UÉ vÀAzÀÄ 1800 JPÀgÉUÀ¼À ªÉÆzÀ® ºÀAvÀzÀ MSEZ£À PÁAiÀÄð ªÀÄÄV¬ÄvÀÄ. PÁAQæÃmï £ÁUÀ§£ÀUÀ¼À°è §æºÀäPÀ®±ÀUÀ¼ÀÄ £ÀqÉzÀªÀÅ. CzÀgÉqÉAiÀİè G½zÀªÀgÀÄ ¨ÉgÀ¼ÉtÂPÉAiÀÄ PÀÄqÀÄ©UÀ¼ÀÄ. PÉ®ªÀgÀÄ HgÀÄ ©lÖgÀÄ. PÀưUÉ ºÉÆÃzÀgÀÄ. PÀ¼ÉzÀ ªÁgÀzÀªÀgÉUÀÆ CªÀgÀÄ PÀư£Á° ªÀiÁrPÉÆAqÀÄ, EzÀÝ vÀÄAqÀÄ £É®zÀ°è §¸À¼É, PÀÄA§¼À, vÉÆAqÉ ¨É¼ÉzÀÄPÉÆAqÀÄ §zÀÄQzÀÝgÀÄ. E¢ÃUÀ RGWÀ£À ºÉƸÀ ªÀgÀ¸É¬ÄAzÀ F C®à¸Àé®à £ÉªÀÄä¢UÀÆ ¸ÀAZÀPÁgÀ §A¢zÉ. KPÉAzÀgÉ FUÀ PÀÄqÀÄ©UÀ¼À PÉÊAiÀİè G½¢gÀĪÀ 4.3 JPÀgÉ ¨sÀÆ«ÄAiÀÄ°è ªÉÆzÀ®Ä £ÀqÉzÀAvÉ PÀvÀÛ¯ÁzÀ C£ÀAvÀgÀ ¥ÀvÀæ ªÀåªÀºÁgÀ, ¨ÉzÀj¸ÀÄ«PÉ, eɹ©UÀ¼À ¸ÀzÀÄÝUÀ¼ÀÄ PÉý §gÀÄwÛªÉ. gÁAiÀįï PÀļÀUÀ½gÀĪÀ ©Ã¢AiÀÄ JzÀÄgÉà PÀ¥ÀÅàPÀ¥ÁàzÀ PÀÄqÀÄ©UÀ¼ÀÄ C¤µÀÖªÀ®èªÉà JA§ÄzÀÄ eɹ© ElÄÖPÉÆAqÀªÀgÀ ºÀÄ£ÁßgÀ EgÀ§ºÀÄzÀÄ.PÁgÀt K£Éà EzÀÝgÀÆ DyðPÀ ªÀ®AiÀÄzÀ C¢üPÁjUÀ¼ÀÄ EzÀÄ ªÉÆzÀ®£É zÀeÉðUÁV £ÉÆÃn¥sÉÊ DzÀ ¨sÀÆ«Ä J£ÀÄßwÛzÁÝgÉ. JAzÉÆÃ ªÀÄÄVzÀÄºÉÆÃzÀ ¨sÀƸÁé¢üãÀªÀ£ÀÄß ªÀÄvÉÛ PÉzÀPÀĪÀ ¥ÀæAiÀÄvÀß £ÀqÉ¢zÉ. PÀÄqÀÄ©UÀ¼À£ÀÄß ¸ÀA¥ÀÇtð SÁ° ªÀiÁqÀ®Ä ºÀÄ£ÁßgÀ £ÀqÉAiÀÄÄwÛzÉ. PÀÄqÀÄ©UÀ¼À gÉÆÃzÀ£ÀPÉÌ ¥ÉÃeÁªÀgÀ ¸Áé«ÄUÀ¼À ¥ÀæªÉñÀªÁ¬ÄvÀÄ. C£ÀAvÀgÀ `£ÁªÀÅ gÀ¸ÉÛ PÁªÀÄUÁj ªÀiÁqÀÄwÛzÉÝêɒ JAzÀÄ f¯ÁèqÀ½vÀ ºÉývÀÄ. JAxÁ «¥ÀAiÀiÁð¸À. PÁAQæÃmï £ÁUÀ§£ÀUÀ½UÉ, PÀÄqÀÄ©UÀ¼À §¸À¼ÉUÉ ªÀÄtÄÚ ºÁQ gÁdªÀiÁUÀðzÀ ¤ªÀiÁðt. EzɵÀÄÖ ¸Àj? C£ÀAvÀgÀ PÁ£ÀÆ£ÀħzÀÞªÁVAiÉÄà EzÀ£ÀÄß ªÀiÁqÀÄwÛzÉÝÃªÉ JA§ ªÀiÁvÁqÀÄwÛzÁÝgÉ. K£ÀÄ PÁ£ÀÆ£ÀħzÀÞªÁVzÉ JAzÀgÉ E£ÀÆß «avÀæUÀ¼ÀÄ vÉgÉzÀÄPÉÆ¼ÀÄîvÀÛªÉ. PÀÄqÀÄ©UÀ¼ÉA§ CPÀëgÀeÁÕ£À«®èzÀªÀjUÉ EAVè¶£À°è ¦æAmËlÄ vÉUÉzÀ, ªÉƺÀj£À ®PÉÆÃmÉUÀ¼ÀÄ gÀªÁ£ÉAiÀiÁUÀÄvÀÛªÉ. CzÀ£ÀÄß gÀƦ¸ÀĪÀÀ ªÉ¯ï¥Àæ£Ë£ïìqï EAVèµï §®èªÀgÀÄ PÀÄqÀÄ©UÀ¼ÉÆqÀ£É ªÀåªÀºÀj¸ÀÄwÛzÁÝgÉ. PÀ£ÀßqÀªÉà ¸ÀjAiÀiÁV §gÀzÀ F PÀÄqÀÄ©UÀ¼ÉÆA¢UÉ JA.J¸ï.E.gÀhÄqï ªÀåªÀºÀj¹zÀÄÝ »ÃUÉ. MAzÀÄ ºÉ¨ÉâlÄÖ MwÛ¹PÉÆ¼ÀÄîªÀÅzÀÄ EªÀjAzÉãÀÆ PÀµÀÖªÀ®èö. ªÁ¸ÀÛªÀªÁV EzÀÄ £ÉÆÃn¥sÉÊ DzÀ ¨sÀÆ«ÄAiÉÄà C®èö. DzÀgÉ E¢ÃUÀ CzÀ£ÀÄß ªÉÆzÀ® ºÀAvÀzÀ £ÉÆÃn¥sÉÊ DzÀ ¨sÀÆ«Ä JAzÀÄ ºÉüÀÄwÛzÉ. CrUÀrUÉ UÉÆAzÀ®, ¸ÁªÀiÁ£ÀåjUÉ , ºÉÆÃgÁlUÁgÀjUÉ ¸ÀÄ®¨sÀªÁV CxÀðªÁUÀzÀ ºÁUÉ PÀqÀvÀUÀ¼À£ÀÄß ¸ÀȶָÀÄwÛzÉ. CµÀÖPÀÆÌ gÀ¸ÉÛ ªÀiÁqÀ®Ä 4 JPÀgÉ ¨sÀÆ«Ä KPÉ JA§ÄzÉà CxÀðªÁUÀÄwÛ®èö. EAzÀÄ PÀÄqÀÄ© ¥ÀzÀ«UÉ vÉgÀ½zÀgÉ JAxÀªÀjUÀÆ ¥Àj¹ÜwAiÀÄ ªÀĪÀÄðªÉãÀÄ JA§ÄzÀÄ CjªÁUÀÄvÀÛzÉ. `§¯ÁvÁÌgÀzÀ ¨sÀÆ ¸Áé¢üãÀvÉ ¸À®èzÀÄ’ JA§ PÉÃAzÀæ ªÀÄvÀÄÛ gÁdå ¸ÀgÀPÁgÀUÀ¼À DzÉñÀzÀ G®èAWÀ£É E°è ¸ÀàµÀÖªÁV DVzÉ. PÀÄqÀÄ©UÀ¼À eÁUÀªÀ£ÀÄß QvÀÄÛ ¥ÀÅ£ÀªÀð¸Àw PÀ°à¸ÀĪÀÅzÁzÀgÉ PÀÄqÀÄ©UÀ½UÉ ªÀ¸ÀwAiÀÄ ºÀQÌ®èªÉÃ? CzÀÄ PÁ£ÀÆ£ÀÄ ¨Á»gÀªÀ®èªÉÃ? ºÀt ¤ÃqÀ§ºÀÄzÀÄ. DzÀgÉ PÀȶAiÉÆAzÀ£ÀÄß ©lÄÖ ¨ÉÃgÉãÀ£ÀÆß w½AiÀÄzÀ PÀÄqÀÄ©UÀ¼ÀÄ ªÀiÁqÀĪÀÅzÉãÀÄ? ºÉÆÃUÀĪÀÅzɰèUÉ? EAzÀÄ PÀÄqÀÄ© ¥ÀzÀªÀÅ gÀ¸ÉÛAiÀÄ°è ¸ÁVzÀgÉ §®UÀqÉUÉ PÁtĪÀÅzÀÄ «avÀæ §qÁªÀuÉ. JqÀUÀqÉAiÀİè PÀÄqÀÄ©UÀ¼À ¥ÀÅlÖ ªÀÄ£ÉUÀ¼ÀÄ. MAxÀgÁ «µÀtÚvÉAiÀÄ£ÀÄßAlÄ ªÀiÁqÀÄvÀÛªÉÉ. ºÉƸÀ §qÁªÀuÉAiÀİè MvÉÆÛvÁÛV PÀ°à¹PÉÆlÖ zÉÃUÀÄ®UÀ¼À°è zÉêÀjgÀĪÀ£ÉÆÃ CxÀªÁ PÀÄqÀÄ©UÀ¼À gÉÆÃzÀ£ÀzÀ°ègÀĪÀªÀ£ÉÆÃ JA§ ªÉÃzÀ£ÉAiÉÆÃ ¸ÀAªÉÃzÀ£ÉAiÉÆÃ K£ÉÆÃ MAzÀÄ ºÁzÀÄ ºÀÉÆÃUÀÄvÀÛzÉ. ¥sÁåAl¹ ¥Àæ¥ÀAZÀzÉÆ¼ÀUÉ ºÉÆPÀÌ C£ÀĨsÀªÀªÁUÀÄvÀÛzÉ.

ªÀÄAUÀ¼ÀÆgÀÄ «±ÉõÀ DyðPÀ ªÀ®AiÀÄzÀ EAxÀ CmÁmÉÆÃ¥ÀUÀ¼ÀÄ PÉêÀ® PÀgÁªÀ½UÉ ¹Ã«ÄvÀ JAzÀÄPÉÆ¼ÀÄîªÀ ºÁUÀÆ E®èö. EzÀgÀ AiÀıÀ¸ÀÄì ºÀ®ªÀÅ PÀȶ ¨sÀÆ«ÄAiÀÄ£ÀÄß §°vÉUÉzÀÄPÉÆ¼Àî®Ä PÁAiÀÄÄwÛzÉ ªÀÄvÀÄÛ EAzÀÄ £ÀqÉAiÀÄÄwÛgÀĪÀ gÀPÀ̸ÀvÀ£ÀUÀ¼ÀÄ £ÁªÀÅ PÀAqÀµÉÖà C®èè PÀÆqÀ. KPÉAzÀgÉ CzÀgÀ ¨ÁºÀÄUÀ¼ÀÄ D¼ÀªÁVAiÀÄÆ, «±Á®ªÁVAiÀÄÆ ªÁ妹ªÉ. CzÀÄ ºÀ®ªÀgÀ ¨ÁAiÀÄ£ÀÄß ªÀÄÄaѹzÉ. PÉ®ªÀgÀÄ ªÀiÁvÁqÀ®Ä ºÉzÀgÀÄwÛzÁÝgÉ. ºÀ®ªÀgÀÄ ¸ÁwéPÀvÉAiÀÄ ªÉÆgÉ ºÉÆÃVzÁÝgÉ. E£ÀÄß PÉ®ªÀgÀÄ ªÀÄÄRªÁqÀ ºÉÆzÀÄÝPÉÆArzÁÝgÉ. PÀȶAiÀÄ GvÀÄÛAUÀ, ªÉʨsÀªÀzÀ §UÉÎ ªÀiÁvÁqÀÄvÀÛ¯Éà ¥Àj¹ÜwUÉ §°AiÀiÁV ªÀiÁgÁlªÁV ºÉÆÃzÀªÀjzÁÝgÉ. ¥ÀwæPÁ ¥Àæ¥ÀAZÀ, eÁ»ÃgÁvÀÄ dUÀvÀÄÛö, J£ïfNUÀ¼ÀÄ , GzÉÆåÃUÀUÀ¼ÀÄ M¨ÉÆâ§âgÁV JA.J¸ï.E.gÀhÄqï £ÀvÀÛ ªÁ°PÉÆ¼ÀÄîwÛzÁÝgÉ. CzÀgÀ CªÀiÁ£ÀĵÀvÉAiÀÄ£ÀÄß ºÉÆgÀUɼÉAiÀÄĪÀ ¥ÀvÀæPÀvÀðjUÉ MvÀÛqÀUÀ¼ÀÄ ¸ÁªÀiÁ£ÀåªÁUÀÄwÛªÉ. EzɯÁè AiÀiÁPÁV DUÀÄwÛzÉ? CzÀÆ PÀgÁªÀ½AiÀÄAxÀ ¥ÀæzÉñÀzÀ°èö? MAzÀÄ ¸ÀªÀÄAiÀÄzÀ°è Erà ¥Àj¸ÀgÀ ZÀ¼ÀªÀ½AiÀÄ PÉÃAzÀæ©AzÀĪÁVzÀÝ PÀgÁªÀ½ PÀ£ÁðlPÀzÀ°è ¥Àj¸ÀgÀPÉÌà ªÀiÁgÀPÀªÁUÀĪÀ AiÉÆÃd£ÉUÀ½UÉ KPÉ EAzÀÄ «gÉÆÃzsÀ ªÀåPÀÛªÁUÀÄwÛ®èö? ¥À²ÑªÀÄ WÀlÖªÀ£Éßà G½¹ JAzÀÄ ¥ÁzÀAiÀiÁvÉæ ªÀiÁrzÀªÀjÃUÀ RGWÀ£À »AzÉ ¤AvÀÄ ©nÖzÁÝgÉ. ªÀÄAUÀ¼ÀÆj£À°è PÉAlÄQ ¥ÉæÊqï aPÀ£ï DgÀA¨sÀUÉÆArzÉ, PÀAlPÀ¥ÁæAiÀÄ

JA.J¸ï.E.gÀhÄqï DmÁmÉÆÃ¥À ºÉZÀÄÑwÛzÉ. d£À ¨sÀAiÀÄ¢AzÀ®Æ ¨sÀQÛ¬ÄAzÀ®Æ Cað¸ÀĪÀ PÀ®Äènð, ¥ÀAdİð, gÁd£ï zÉʪÀÀ, PÉÆqÀªÀÄtÂvÁÛAiÀÄ, ¦°ZÁªÀÄÄArUÀ½UÉ ªÀiÁ¯ï£ÀAxÀ ªÀÄ£ÉUÀ¼À ¤ªÀiÁðtªÁVªÉ. EzɯÁè PÀgÁªÀ½UÉ ¸ÁzsÀĪÉÃ? «gÉÆÃ¢ü¸À®Ä PÁgÀtUÀ½®èªÉÃ? PÀÄqÀÄ©UÀ¼À MPÀ̯ɩâ¸ÀÄ«PÉ ªÀÄÆ®¸ÀA¸ÀÌøwAiÀÄ £Á±ÀªÀ®èªÉÃ? gÁµÀÖç¸ÀAvÀ UÀÄgÀÆf UÉÆÃ¼ÀªÀ®PÀgÀgÀÄ CAzÉà ``£ÀªÀÄä ºÉÆÃgÁl PÉêÀ® ¸ÁévÀAvÀæ÷åPÀ̵ÉÖà ¹Ã«ÄvÀªÁUÀ¨ÁgÀzÀÄ. vÀªÀÄä £ÁUÀjPÀvÉAiÀÄ ºÉÃjPÉAiÀÄ «gÀÄzÀÞ , ¸ÀA¸ÀÌøwAiÀÄ gÀPÀëuÉUÁV ºÉÆÃgÁl ªÀÄÄAzÀĪÀjAiÀĨÉÃPÀÄ” CA¢zÀÝgÀÄ. DzÀgÉ E¥ÀàvÀÄÛ£ÀÆgÁ ºÀ£ÉÆßAzÁzÀgÀÆ ªÀÄÆ®¸ÀA¸ÀÌøwAiÀÄ £Á±ÀzÀ «gÀÄzÀÞ ¸ÁªÀðwæPÀ ºÉÆÃgÁlPÉÌ E£ÀÆß wêÀævÉ d£ÀgÀ°è §gÀ°®èö. vÀªÀÄUÉ ¨ÉÃPÁzÁUÀ r£ÉÆÃn¥sÉÊ ªÀiÁrPÉÆ¼ÀÄîªÀ DqÀ½vÀ PÀÄqÀÄ©UÀ¼ÀAvÀºÀ vÀ¼ÀªÀÄlÖzÀ d£ÀjUÉ r£ÉÆÃn¥sÉÊ ªÀiÁqÀ®Ä E£ÀÆß ªÀÄ£À¸ÀÄì ªÀiÁr®èö. £ÁªÀÅ MAzÀAvÀÆ £É£À¦£À°èlÄÖ

PÉÆ¼Àî¨ÉÃPÀÄ. ªÀÄÆ® ¸ÀA¸ÀÌøwAiÀÄ PÁ¼Àf ªÀÄvÀÄÛ JA.J¸ï.E.gÀhÄqï ¥ÉæÃªÀÄ MmÉÆÖnÖUÉà EgÀ®Ä ¸ÁzsÀå«®èö.

£Á«£ÀÆß ºÀ¼Éà »¹ÖçÃAiÀÄ UÀÄAV£À¯Éèà EzÉÝÃªÉ JAzÀÄ C¤¸ÀÄvÀÛzÉ. ªÁ¸ÉÆÌÃqÀUÁªÀÄ ¸ÀªÀÄÄzÀæªÀiÁUÀðzÀ ªÀÄÆ®PÀ ¨sÁgÀvÀPÉÌ PÁ°j¹zÀÄÝ, eÁªÉÆj£ï zÉÆgÉ DvÀ¤UÉ ¨sÀÆ«Ä PÉÆnÖzÀÄÝö, ªÉÄt¸ÀÄ, K®QÌ AiÀÄÄgÉÆÃ¦UÉ gÀ¥sÀÅÛ DVzÀÄÝö, C£ÀAvÀgÀ M§âgÁzÀ ªÉÄÃ¯ÉÆ§âgÀÄ LgÉÆÃ¥ÀågÀÄ §A¢zÀÄÝö, F¸ïÖEArAiÀiÁ ¸ÁÜ¥À£ÉAiÀiÁVzÀÄÝ , ©ænµÀgÀÄ D½zÀÄÝö, q˯ïºË¹ zÀvÀÄÛ ªÀÄPÀ̽UÉ ºÀQÌ®è JA¢zÀÄÝö, ªÉ¯Éè¹è ¸ÀºÁAiÀÄPÀ ¸ÉÊ£Àå¥ÀzÀÞw «¢ü¹zÀÄÝö, UÁA¢üÃfà Hl ©nÖzÀÄÝ, ªÀÄÄAzÉ J¯Áè ¸ÀjºÉÆÃV ¨sÁgÀvÀPÉÌ ¸ÁévÀAvÀæ÷å ¹QÌ ªÀ¸ÁºÀvÀÄ ªÀåªÀ¸ÉÜ PÉÆ£ÉUÉÆArvÀÄ JAzÀÄ ¥ÀoÀåzÀ PÀxÉAiÀÄ£Éßà £ÀA©PÉÆArzÉÝêÉ. DzÀgÉ £ÀªÀ ªÀ¸ÁºÀvÀÄ ªÀåªÀ¸ÉÜ §UÀ®¯Éèà PÀÆwzÉ. DzÀgÉ ºÉÆÃgÁqÀ¨ÉÃPɤ¸ÀÄwÛ®è KPÉAzÀgÉ C°è C¢üªÉñÀ£À £ÀqÉAiÀÄÄwÛzÉ.

Thursday, January 13, 2011

ರಾಣಿ ಇಲ್ಲದ ಹೊತ್ತು; ಕೋಟೆಯ ಒಂದು ಸುತ್ತು


ಕೋಟೆಗಳನ್ನು ನೋಡಿದಾಗ ಒಂದು ಗಂಭೀರತೆಯೂ ಗೋಚರವಾಗುತ್ತದೆ. ಏಕೆಂದರೆ ಕೋಟೆಯೆಂದರೆ ಗಂಭೀರತೆಯದ್ದೇ ಇನ್ನೊಂದು ಸಂಕೇತಗಳು. ಕೋಟೆಗಳು ಹಲವು ವಿಶೇಷತೆಗಳ ಗೂಡುಗಳು. ಅವು ನಿಗೂಢ. ಕಲ್ಲುಗಳು ಹೇಳುವ ಕಥೆಗಳು ಇತಿಹಾಸದ ಪ್ರತೀಕಗಳು.
ಅವು ಎದೆಯುಬ್ಬಿಸಿ ನಿಂತಂತೆ ಕಾಣುವ ಕಟ್ಟಡಗಳಷ್ಟೇ ಅಲ್ಲದೆ ಸಹಸ್ರ ಸಹಸ್ರ ಶೌರ್ಯದ ಕಥೆಯನ್ನು ಒಳಗೆ ಬಚ್ಚಿಟ್ಟ್ಟುಕೊಂಡಿರುತ್ತವೆ. ಅವುಗಳ ಒಳಸುಳಿಯೊಳಗೆ, ಸುರಂಗ ಮಾರ್ಗಗಳ ಅಂತರಾಳಗಳೊಳಗೆ, ಕತ್ತಲ ಕೋಣೆಗಳ ಸೆರೆಮನೆಗಳೊಳಗೆ ಅಸ್ಪಷ್ಟವಾದ, ಅಗೋಚರವಾದ ಮಿಡಿತವೊಂದು ಇನ್ನೂ ಇದ್ದಂತೆ ಕಂಡುಬರುತ್ತವೆ.

ಏಕೆಂದರೆ ಕೋಟೆಗಳೊಳಗೊಂದು ಇತಿಹಾಸವಿರುತ್ತವೆ. ವೀರವಾಣಿಗಳಿರುತ್ತವೆ. ಬಹುಶಃ ವೀರತೆಯನ್ನು ಸೂಚಿಸದ ಕೋಟೆ - ಕೊತ್ತಲಗಳೇ ಜಗತ್ತಿನಲ್ಲಿಲ್ಲ. ಝಾನ್ಸಿಯದ್ದು ಅಂಥಾ ಒಂದು ಕೋಟೆ. ಅದು ಕೋಟೆ ಎಂಬ ಶಬ್ದ ಅನ್ವರ್ಥವಾಗುವಂಥ ಕೋಟೆ. ಅಲ್ಲಿ ಝಾನ್ಸಿ ಎಂಬ ಪದ ಎಷ್ಟು ಪವಿತ್ರವೊ ಲಕ್ಷ್ಮೀ ಎಂಬ ಶಬ್ದವೂ ಅಷ್ಟೇ ಪವಿತ್ರ. ಕೊನೆಗೆ ಝಾನ್ಸಿ ಮತ್ತು ಲಕ್ಷ್ಮೀ ಎಂಬೆರಡೂ ಭಾವನೆಗಳನ್ನು ಬಿಡಿಬಿಡಿಯಾಗಿಸಲು ಸಾಧ್ಯವೇ ಇಲ್ಲ. ಏಕೆಂದರೆ ಝಾನ್ಸಿ ಲಕ್ಷ್ಮೀಯದ್ದು, ಲಕ್ಷ್ಮೀಝಾನ್ಸಿಯವಳು. ಮೇರಿ ಝಾನ್ಸಿಕೋ ಕಭಿ ನಹೀ ದೂಂಗೀ ಎಂಬ ಘೋಷಣೆಯನ್ನು ರಾಣಿ ಲಕ್ಷ್ಮೀಬಾಯಿ ಇದೇ ಕೋಟೆಯಲ್ಲಿ ಹಾಕಿದ್ದಳು. ಹಾಗಾಗಿ ಇತಿಹಾಸದ ಆಸಕ್ತಿ ಹುಟ್ಟಿಸುವವರಿಗೆ ಇಂದಿಗೂ ಝಾನ್ಸಿ ಎಂದರೆ ಲಕ್ಷ್ಮೀ ಎಂದ ಹಾಗೆಯೇ ಆಗುತ್ತದೆ.


1857ರ ಕ್ರಾಂತಿಯ ಮಹತ್ತ್ವದ ಘಟನೆಗಳು ಝಾನ್ಸಿಯಲ್ಲಿ ನಡೆದವು. ಧೂರ್ತಶಕ್ತಿ ಮತ್ತು ಮಾತೃ ಶಕ್ತಿಗಳ ನಡುವಣ ಸಮರವೆಂದೇ ಕಂಡು ಬರುವ ಝಾನ್ಸಿಯ ಕಥಾನಕ ಹಲವು ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಯಿತು. ಪುಟ್ಟ ಸಂಸ್ಥಾನವೊಂದರ ರಾಣಿಯ ಬಲಿದಾನ ಆಂಗ್ಲ ಆಡಳಿತ ಅಂದು ಎದುರಿಸಿದ್ದ ಪರಿಸ್ಥಿತಿಗಳಿಗೆ ಕನ್ನಡಿಯಾಗಿ ನಿಲ್ಲುತ್ತದೆ. 57ರ ಕ್ರಾಂತಿಯ ಅನಂತರ ಇದೇ ಪರ್ಯಾಯ ಖಂಡದ ಸ್ಥಿತಿಗತಿಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಝಾನ್ಸಿಯೂ ಬದಲಾಗಿದೆ. ಆದರೆ ಝಾನ್ಸಿಯ ಕೋಟೆ ಮಾತ್ರ 1857ರ ಅನಂತರವೂ ಹಾಗೆಯೇ ನಿಂತಿದೆ. ಕೋಟೆಯೊಳಗಿನ್ನೂ ನೆನಪುಗಳಿವೆ. ನೆನಪುಗಳನ್ನೇ ನಾಶಪಡಿಸಿದ ಸಾಕ್ಷಿಗಳೂ ನಿಚ್ಚಳವಾಗಿ ಗೋಚರವಾಗಿವೆ. ಝಾನ್ಸಿಯ ಕೊತ್ತಲದಲ್ಲಿ ಎಷ್ಟೆಲ್ಲಾ ಪತಾಕೆಗಳು ಪಟಪಟನೆ ಹಾರಿ ಇಳಿದುಹೋದುವು.
ಬುಂದೇಲದ ಅರಸ ಬೀರ್ಸಿಂಗ್ ಜುದೇವ್ 1613ರಲ್ಲಿ ಕಟ್ಟಿದ ಕೋಟೆ ಅನಂತರ ಮೊಗಲರ, ಮರಾಠರ, ಕೊನೆಗೆ ಬ್ರಿಟಿಷರ ವಶವಾಗುತ್ತಾ ಝಾನ್ಸಿಯ ಇತಿಹಾಸವನ್ನು ಬದಲಿಸುತ್ತಾ ಬಂತು. 16 ಎಕರೆ ವಿಸ್ತೀರ್ಣದ ಈ ಕೋಟೆಯಲ್ಲಿ ಖಂಡೇರಾವ್ ದ್ವಾರ, ಉನ್ನಾವ್ ದ್ವಾರ. ಲಕ್ಷ್ಮೀ ಸಾಗರ ದ್ವಾರ ಮುಂತಾದ ಹತ್ತು ದ್ವಾರಗಳಿವೆ. ಝಾನ್ಸಿ ಪಟ್ಟಣದ ನಡುಭಾಗದಲ್ಲಿ ಎದೆಯುಬ್ಬಿಸಿ ನಿಂತಿರುವ ಕೋಟೆ ಹೊರಗಿಂದ ನೋಡುತ್ತಲೆ ಇದರೊಳಗೆ ಏನೋ ಇದೆ. ಏನನ್ನೋ ಬಚ್ಚಿಟ್ಟುಕೊಂಡಿದೆ ಎಂದೇ ಅನಿಸುತ್ತದೆ. ಕೋಟೆಯ ಒಳನುಗ್ಗಿದಂತೆಯೇ ನೋಡುಗರು ಒಂದು ಧ್ಯಾನಸ್ಥ ಸ್ಥಿತಿಗೆ ಇಳಿದು ಬಿಡುತ್ತಾರೆ. ಕೋಟೆಯೊಳಗೆ ಹೊರ ಪ್ರಪಂಚ ಎಲ್ಲೋ ದೂರದ ಲೋಕ. ಕೋಟೆಯೊಳಗೆ ಇತಿಹಾಸವಷ್ಟೇ ಸತ್ಯ. ಆಧುನಿಕ ಬದುಕಿನ ಸರಕುಗಳಿಗಿಲ್ಲಿ ಆಸ್ಪದವಿಲ್ಲ. ಕೋಟೆಗೆ ನುಗ್ಗಿದೊಡನೆಯೇ ಖಡಕ್ ಬಿಜಲಿ ಮತ್ತು ಭವಾನಿ ಶಂಕರ್ ಎಂಬ ಎರಡು ಬೃಹತ್ ತೋಪುಗಳು ಸಿಮೆಂಟ್ ಕಟ್ಟೆಯ ಮೇಲೆ ಪ್ರತಿಷ್ಠಾಪಿತವಾಗಿರುವುದು ದರ್ಶನವಾಗುತ್ತದೆ. ಯಾವ ವೀರ ಯೋಧರು ಅದನ್ನು ಬಳಸುತ್ತಿದ್ದರೋ ಏನೋ, ಅದಿಂದು ಮ್ಯೂಸಿಯಂ ಪೀಸ್ನಂತೆ ಅನಾಥವಾಗಿ ಬಿದ್ದಂತೆ ಭಾಸವಾಗುತ್ತದೆ.
ಮುಂದೆ ನಡೆದರೆ ದ್ವಾರಪಾಲಕನಿಲ್ಲದ ದ್ವಾರದೊಳಗೆ ಎರಡು ಕುಶಾಲ ತೋಪುಗಳು ಕಾಣಸಿಗುತ್ತವೆ. ಅವೂ ಸಿಡಿಯದೆ ಶತಮಾನಗಳೇ ಸಂದು ಹೋದುವು. ಗಂಗಾಧರ ಬಾಬಾ ಸಾಹೇಬ ಪೇಶ್ವೆ ಎಷ್ಟು ಶ್ರದ್ಧೆಯಿಂದ ಇದನ್ನು ತನ್ನ ಮದುವೆಗೆ ಸಿದ್ಧಪಡಿಸಿದ್ದನೋ, ಹೊಳಪುಗೊಳಿಸಿದ್ದನೋ ಏನೋ. ಅನಂತರ ಹಲವು ವರ್ಷ ಮರಾಠರ ಪೇಶ್ವೆಗಳಿಗೆ, ಬಂದೇಲದ ಅರಸರಿಗೆ, ಗೆಳೆಯ ಅರಸರಿಗೆಲ್ಲಾ ಈ ಕುಶಾಲ ತೋಪುಗಳು ಮೊಳಗಿದವು. ಆತನ ಕಾಲಾನಂತರ ಪತ್ನಿ ಲಕ್ಷ್ಮೀಬಾಯಿಯ ಕಾಲಾವಧಿಯಲ್ಲಿ ಕುಶಾಲ ತೋಪುಗಳು ಸಿಡಿಯುವ ಪ್ರಸಂಗವೇ ಬರಲಿಲ್ಲ. ಆಗಿನ ಕಾಲದಲ್ಲಿ ಸಿಡಿದದ್ದೆಲ್ಲಾ ಖಡಕ್ ಬಿಜಿಲಿ ಮತ್ತು ಭವಾನಿ ಶಂಕರ್ ತೋಪುಗಳು ಮಾತ್ರ. ದತ್ತಕ ಹಕ್ಕಿನ ಕಾನೂನು ನಾಡಿನ ಕುಶಾಲತೆಯನ್ನೇ ನುಂಗಿ ಹಾಕಿತ್ತು.
ಕೋಟೆಯೊಳಗೊಂದು ಕೋರ್ಟಿದೆ. ಕಾನ್ಪುರ, ಫೈಜಾಬಾದ್ ಮತ್ತು ಔದ್ಗಳ ನಡುವಿನ ಜನರಿಗೆ ರಾಜಾ ಗಂಗಾಧರ ಪೇಶ್ವೆಯೂ, ರಾಣಿ ಲಕ್ಷ್ಮೀಬಾಯಿಯೂ ನ್ಯಾಯದಾನ ಮಾಡಿದ್ದ ಕೋರ್ಟ್ ಕೋಟೆಯ ಹೃದಯಭಾಗದಲ್ಲಿದೆ. ರಾಣಿ ಇಲ್ಲದ ಮೇಲೆ ನ್ಯಾಯವೇನು ಉಳಿದೀತು ಝಾನ್ಸಿಯಲ್ಲಿ. ರಾಣಿಯ ಅನಂತರ ಬ್ರಿಟಿಷರಿಗೆ ಕೋರ್ಟ್ ನ ಅವಶ್ಯಕತೆಯೇ ಬೀಳಲಿಲ್ಲ. ಹಾಗಾಗಿ 1896ರಲ್ಲಿ ಕೋರ್ಟ್ ನೀರಿನ ಟ್ಯಾಂಕ್ ಆಯಿತು. ಹಾಗೆಯೇ ರಾಣಿಯ ಸಖಿಯರ ಕಲರವದಿಂದ, ಅಂತಪುರದ ಸ್ತ್ರೀಯರಿಂದ ಗಿಜಿಗಿಟ್ಟುತ್ತಿದ್ದ ನಾಲ್ಕು ಅಂತಸ್ತಿನ ರಾಣಿ
ಸ ಇಂದು ಬಾವಲಿಗಳ ತಾಣ.
ರಾಣಿವಾಸದ ಒಳಗೋಡೆಗಳು ಪ್ರಜೆಗಳೇ ಪ್ರಭುಗಳಾದ ಹೊತ್ತಿನಿಂದ ಸುಣ್ಣ ಬಣ್ಣವನ್ನೇ ಕಾಣದೆ ಮಾಸಲು ಮಾಸಲಾಗಿದೆ. 1613ರಲ್ಲಿ ಸ್ಥಾಪನೆಯಾದ ಈ ಮಹಲು ಸತತ ಹೊಡೆತ ಸಹಿಸಿಯೂ, ಸ್ವತಃ ರಾಣಿಯನ್ನು ಕೇಂದ್ರೀಕರಿಸಿ ಧಾಳಿಗಳಾದರೂ, ರಾಣಿಯೇ ಇಲ್ಲದಿದ್ದರೂ ಇವತ್ತಿಗೂ ಉಳಿದುಕೊಂಡದ್ದು ವಿಶೇಷವಾಗಿ ಕಾಣುತ್ತದೆ. ರಾಣಿವಾಸದ ಎದುರೇ ಉದ್ದಕ್ಕೆ ಉದ್ಯಾನದಂತೆ ಕಾಣುವ ಹಸಿರು ಅಂಗಣ. ಅದರ ಅಂಚಿಗೆ ಸೈನಿಕರಿಲ್ಲದ ಸೈನಿಕರ ಬಿಡಾರ. ಆ ಬಿಡಾರದ ಗೋಡೆಯನ್ನೇರಿ ನೋಡಿದರೆ ದಕ್ಷಿಣ ದಿಕ್ಕಿನಲ್ಲಿ ಫರ್ಲಾಂಗು ದೂರದಲ್ಲೊಂದು ಕೊಳ. ಲಕ್ಷ್ಮೀಬಾಯಿ ಪ್ರಾತಃಕಾಲ ಮಿಂದೇಳುತ್ತಿದ್ದ ಕೊಳದಲ್ಲೀಗ ಝಾನ್ಸಿ ಪೋರರ ಸ್ವಿಮ್ಮಿಂಗ್ ಕಲಿಯುವ ದೃಶ್ಯ ಮನಸ್ಸನ್ನು ಕೊಂಚ ಇತಿಹಾಸ ವಿಮುಖವನ್ನಾಗಿ ಮಾಡುತ್ತವೆ.

ಕೋಟೆಯ ಉತ್ತರದಿಕ್ಕಿನಲ್ಲಿ ಹವಾಮಹಲು ಗಮನ ಸೆಳೆಯುವ ಪ್ರದೇಶ. ಕೋಟೆಯ ಎತ್ತರದ ಭಾಗವೂ ಸಹ ಇದೇ. ಇಲ್ಲಿನ ಹವಾಮಹಲುಗಳು ಉತ್ತರ ಪ್ರದೇಶದ ಸೆಕೆಯಲ್ಲೂ ಚಳಿಗಾಲದ ತಂಪನ್ನು ನೀಡುತ್ತವೆ. ರಾಣಿ ಇಲ್ಲದ ಮೇಲೆ ಬ್ರಿಟಿಷರು ಇಂಥ ಹವಾಮಹಲುಗಳಲ್ಲಿ ಒಂದನ್ನು ತಮ್ಮ ಅಡುಗೆ ಕೋಣೆಯನ್ನಾಗಿ ಮಾಡಿಕೊಂಡರು. ಬ್ರಿಟಿಷರ ದಾಸ್ಯವೋ ಅಥವಾ ತಂಪು ಹವೆಯ ಅನಗತ್ಯವೋ. ಅಲ್ಲಿ ಅಡುಗೆ ಕೋಣೆ ಇರುವುದಂತೂ ರಾಜಗಾಂಭೀರ್ಯಕ್ಕೆ ಧಕ್ಕೆಯಾದಂತೆನಿಸುತ್ತದೆ. ಹಾಗೆಯೇ ರಾಣಿಯ ಅಮೋಧ ಉದ್ಯಾನವನ್ನು ಬ್ರಿಟಿಷರು ಶಸ್ತ್ರಗಾರವನ್ನಾಗಿ ಮಾಡಿಕೊಂಡರು. ಕೋಟೆಯ ಅದೇ ಭಾಗದ ಮತ್ತೊಂದು ಹವಾಮಹಲನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಿಂದೆ ಇದೇ ಮಹಲಿನ ಬಾಲ್ಕನಿಯಲ್ಲಿ ಕೂತು ರಾಜಮಹಾರಾಜರು ಬಯಲು ಸಭಾಂಗಣದಲ್ಲಿ ನಡೆಯುತ್ತಿದ್ದ ಆಸ್ಥಾನ ನರ್ತಕಿಯರ ನೃತ್ಯವನ್ನು ವೀಕ್ಷಿಸುತ್ತಿದ್ದರಂತೆ.

1857ರ ಹೊತ್ತಲ್ಲಿ ಖ್ಯಾತ ನರ್ತಕಿಯರಾದ ಗಜರಾಬಾಯಿ ಮತ್ತು ಮೋತಿಬಾಯಿಯರು ಇದೇ ಬಯಲು ರಂಗಮಂದಿರ ಭಾಡಾಧರೀ ಛತ್ನಲ್ಲಿ ನೃತ್ಯ ಮಾಡುತ್ತಿದ್ದರಂತೆ. ಕ್ರಾಂತಿಯ ಸಮಯದಲ್ಲಿ ಅವರಿಬ್ಬರೂ ನೃತ್ಯಕ್ಕೆ ಮಂಗಳ ಹಾಡಿ ಸೇನೆಗೆ ಸೇರ್ಪಡೆಗೊಂಡರಂತೆ. ಅವರಲ್ಲಿ ಮೋತಿ ಬಾಯಿಯಂತೂ ಭವಾನಿ ಶಂಕರ್ ತೋಪನ್ನು ಸ್ವತಃ ಚಲಾಯಿಸುತ್ತಿದ್ದಳಂತೆ. ರಾಣಿ ಆಳಿದ ಕೋಟೆಯಲ್ಲಿ ಇದೇನೂ ಆಕಸ್ಮಿಕ ಎನಿಸುವುದಿಲ್ಲ.

ಕೋಟೆಯ ಮತ್ತೊಂದು ವಿಶೇಷತೆಯೆಂದರೆ 400 ವರ್ಷದ ಹಿಂದಿನ ಶಿವಾಲಯ. ಕೋಟೆಯ ತಳಭಾಗದಲ್ಲಿರುವ ದೇಗುಲದ ಪ್ರದೇಶವೇ ವಿಶಿಷ್ಟವಾದದ್ದು. ಎತ್ತರದ ಗುಡ್ಡದ ಮೇಲಿರುವ ಕೋಟೆಯಲ್ಲಿ ಶಿವನದ್ದು ಕೋಟೆಯ ಕೆಳಭಾಗದ ಸ್ಥಾನ. ಕೋಟೆಯ ದಕ್ಷಿಣ ಭಾಗದಿಂದ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಝಾನ್ಸಿ ಪಟ್ಟಣದ ಅರ್ಧಭಾಗ ಕಾಣುವುದರ ಜೊತೆಗೆ ಕಣ್ಣು ಕೆಳಹಾಯಿಸಿದರೆ ವಿಶಿಷ್ಟ ಶೈಲಿಯ ಶಿವಾಲಯವೂ ಝಾನ್ಸಿಗೆ ತಾನು ಸರಿಸಮಾನನೋ ಎಂಬಂತೆ ಕಾಣುತ್ತದೆ. ಆಕರ್ಷಕ ಗ್ರಾನೈಟ್ ಶಿಲೆಯ ಈ ಶಿವಲಿಂಗವನ್ನು ಮರಾಠರ ಅರಸ ನರುಶಂಕರನ ಕಾಲದಲ್ಲಿ ನಿರ್ಮಿಸಲಾಯಿತು. 1721ರಿಂದ 30ರ ವರೆಗೆ ಆಳ್ವಿಕೆ ನಡೆಸಿದ ಈ ಅರಸನ ಕಾಲದಲ್ಲಿ ಝಾನ್ಸಿ ಕೋಟೆ ಅಮೂಲಾಗ್ರವಾಗಿ ದುರಸ್ತಿಗೊಂಡಿತು. ಬುಂದೇಲ್ ಮತ್ತು ಮರಾಠಾ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯದ ಶಿವಲಿಂಗವನ್ನು ಲಕ್ಷ್ಮೀಬಾಯಿ ದಿನನಿತ್ಯ ಸ್ವತಃ ಪೂಜಿಸುತ್ತಿದ್ದಳು. ಅಂದು ರಾಣಿ ಅರ್ಚಿಸುತ್ತಿದ್ದ ಶಿವ ಇಂದು ಯಾರೂ ಮುಟ್ಟಿ ಪೂಜಿಸಬಲ್ಲ ದೇವನಾಗಿ ಉಳಿದಿದ್ದಾನೆ.

ಕೇವಲ ರಾಣಿಯ ಒಡೆತನದಲ್ಲಿ ಇದ್ದ ಕಾರಣಕ್ಕೆ ಝಾನ್ಸಿಯ ಕೋಟೆ ವಿಶೇಷವೆನಿಸುವುದಿಲ್ಲ. ಝಾನ್ಸಿಯ ಕೋಟೆಗಳು ಹೇಳುವ ಕಥೆಗಳು ಅವುಗಳನ್ನು ಒಂದು ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸುತ್ತವೆ. ಕೇವಲ ಅರಮನೆ, ಸೆರೆಮನೆ, ಕುದುರೆಲಾಯ, ಫಾಶೀಮನೆಗಳಿದ್ದ ಕಾರಣಕ್ಕೆ ಕೋಟೆ ವಿಶೇಷ ಎನ್ನುವಂತಿದ್ದರೆ ಝಾನ್ಸಿ ಕೋಟೆಯೂ ಇತರ ಎಷ್ಟೋ ಕೋಟೆಗಳ ಜೊತೆ ಒಂದಾಗಿ ಉಳಿದು ಬಿಡುತ್ತಿತ್ತು. ಆದರೆ ಝಾನ್ಸಿಯಲ್ಲಿದ್ದವಳು ರಾಣಿ ಲಕ್ಷ್ಮೀಬಾಯಿ. ಅಲ್ಲೇ ಸೈನಿಕರ ಬಿಡಾರವಿದ್ದ ಒಂದು ಸ್ಥಳದಲ್ಲಿ ಒಂದು ಸಮಾಧಿಯೂ ರಾಣಿಯ ಗಾಥೆಯನ್ನು ಮತ್ತಷ್ಟು ವಿಸ್ತರಿಸಿ ಹೇಳುತ್ತವೆ. ಸಮಾಧಿಯ ಪಕ್ಕದಲ್ಲಿ ಹೀಗೆ ಫಲಕವನ್ನೂ ನೇತು ಹಾಕಲಾಗಿದೆ. ಗನ್ನರ್ ಗುಲಾಮ್ ಗೌಸ್ ಖಾನ್, ಮೋತಿಬಾಯಿ ಮತ್ತು ಖುಧಾಭಕ್ಷ್ ಅವರನ್ನು 1858ರ ಜೂನ್ 4ರಂದು ಇಲ್ಲಿ ಸಮಾಧಿ ಮಾಡಲಾಗಿದೆ ಎಂದು ಬರೆಯಲಾಗಿದೆ. ಸ್ವಾತಂತ್ರ್ಯದ ಕನಸು ಕಂಡಿದ್ದ ಜೀವಗಳು ಸಮಾಧಿಯಾಗಿ ಶತಮಾನಗಳು ಕಳೆದಿವೆ.



ಹಾಗೆ ಸ್ವಾತಂತ್ರ್ಯದ ಕನಸು ಕಂಡಿದ್ದ ಲಕ್ಷ್ಮೀ ಬಾಯಿ ಬ್ರಿಟಿಷರ ಎದುರು ಸೆಡ್ಡು ಹೊಡೆದು ನಿಂತವಳು. ಕೆಚ್ಚಿನಿಂದಲೇ ಝಾನ್ಸಿಯನ್ನು ರೂಪಿಸಿದವಳು. ತನ್ನದೇ ರಣನೀತಿಯನ್ನು ರೂಪಿಸಿಕೊಂಡವಳು. ಬೋರ್ಕರ್, ಹ್ಯೂರೋಸ್ರ ದಾಳಿಯ ಸಂದರ್ಭದಲ್ಲಿ ಬುದ್ಧಿಮತ್ತೆಯ ಮತ್ತು ಜಗತ್ತಿನ ಅತಿ ವಿರಳ ಯುದ್ಧ ನಿರ್ಧಾರಗಳನ್ನು ಕೈಗೊಂಡವಳು. ಅಂಥ ಅಸಂಖ್ಯ ಸಾಕ್ಷಿಗಳು ಝಾನ್ಸಿ ಕೋಟೆಯಲ್ಲಿ ಸಿಗುತ್ತವೆ. ಬ್ರಿಟಿಷರು ಕೋಟೆಯನ್ನು ಮುತ್ತಿದಾಗ ಲಕ್ಷ್ಮೀ ಬೆನ್ನಿಗೆ ದಾಮೋದರ ರಾಯನನ್ನು ಕಟ್ಟಿಕೊಂಡು ಕುದುರೆ ಏರಿ ಕೋಟೆಯಿಂದಲೇ ಹಾರಿ ಗ್ವಾಲಿಯರಿಗೆ ಪಲಾಯನ ಮಾಡಿದ ಜಾಗ ಮೈ ನವಿರೇಳಿಸುತ್ತವೆ. ಇತಿಹಾಸ ಮತ್ತೆ ಮರೆತು ಹೋಗುತ್ತವೆ. ಹಲವು ಗುಪ್ತ ಮಾರ್ಗಗಳು ಕೋಟೆಯುದ್ದಕ್ಕೂ ಸಿಗುತ್ತವೆ. ಇಂದು ಅವೆಲ್ಲವನ್ನೂ ಮುಚ್ಚಲಾಗಿದೆ.

ಕೋಟೆ ದರ್ಶಿಸುವವರಿಗೆ ಕೊಂಚ ಇತಿಹಾಸದ ಬಗ್ಗೆ ಆಸಕ್ತಿ ಇದ್ದದ್ದೇ ಆದರೆ ಕೋಟೆಯೊಳಗೆ ಚಮಣಾಜಿ ಅಪ್ಪಾ ಸಾಹೇಬ ಪೇಶ್ವೆಯ ಆಜ್ಞೆ, ಗಂಗಾಧರನ ಆಳುಗಳು, ಸಖಿಯರ ನಗು, ಫೈಜಾಬಾದಿಗೆ ಹೋದ ಗುಪ್ತಚರನ ನಿರೀಕ್ಷೆಯಲ್ಲಿರುವ ಸೇನಾ ಪ್ರಮುಖನ ಕಾತರ, ತೋಪುಖಾನೆಯನ್ನು ಉಜ್ಜಿ ಹೊಳಪಿಸುತ್ತಿರುವ ಕೆಲಸಗಾರರು ಎಲ್ಲವನ್ನೂ ಕೇಳಬಹುದು, ನೋಡಬಹುದು, ಅನುಭವಿಸಬಹುದು. ಯೋಧನ ಧ್ವನಿಯ ಸುಂದರ ಸ್ತ್ರೀಯು ಬ್ರಿಟಿಷ್ ಮೇಜರ್ ಎಲಿಸನಿಗೆ ಮೇರಿ ಝಾನ್ಸಿಕೋ ಕಭೀ ನಹೀ ದೂಂಗೀ ಎಂದು ಇಲ್ಲೇ ಎಲ್ಲೋ ಗುಡುಗಿದ್ದಿರಬಹುದು ಎಂಬ ಭಾವನೆಯಿಂದ ಕಣ್ಣುಗಳು ಕೋಟೆಯ ಬುರುಜುಗಳ ಮೇಗಡೆ, ಧ್ವಜಸ್ತಂಭದ ಕೆಳಗಡೆ ಭಾರಾಗಾಂವ್ ದರವಾಜಾದ ಎದುರುಗಡೆ ಹುಡುಕತೊಡಗಬಹುದು.


ಈ ನಯನಾ ನೂತನ


ಕಳೆದ ವಾರ ಕನ್ನಡದಲ್ಲಿ ಬಹಳಷು ಪುಸ್ತಕಗಳು ಬಿಡುಗಡೆಯಾದವು.ಪತ್ರಿಕೆಗಳ ಸಾಧರ ಸ್ವಿಕಾರಗಳಲ್ಲಿ ಅವು ಗೋಚರಿಸಿ,ಫೇಸ್ ಬುಕ್ಕುಗಳಲ್ಲಿ ಚರ್ಚೆಯಾಗಿ ಯಾರ ಪುಸ್ತಕ ಟಾಪ್ ಎಷ್ಟರಲ್ಲಿದೆ ಎಂಬ ಕುತೂಹಲ ಹುಟ್ಟಿಸುವಂತೆ ಮಾಡಿದವು.ಆದರೆ ಶಿವರಾಮ ಕಾರಂತರ ಹುಟ್ಟೂರು ಉಡುಪಿಯ ಕೋಟದಲ್ಲಿ ಬಿದುಗಡೆಯಾದ ಒಂದು ಪುಸ್ತಕದ ಸುದ್ದಿ ಬಹುಶ ಪತ್ರಿಕೆಗಳ ಕೋಸ್ಟಲ್ ಪುಟಗಳಿಗಷ್ಟೇ ಸೀಮಿತವಾದವು.
ಅ ಪುಸ್ತಕದ ಹೆಸ್ರು “ಈ ನಯನ ನೂತನ”.ಮುಖಪುಟದಲ್ಲಿ ಜಯಂತ್ ಕಾಯ್ಕಿಣಿಯವರ ಚಿತ್ರವಿದ್ದರೂ ಅದು ಅವರ ಕಥೆಯಲ್ಲ,ಕವನ ಸಂಗ್ರಹವಲ್ಲ.ಅದು ಅವರು ಬರೆದ ಚಲನಚಿತ್ರ ಗೀತೆಗಳ ಬಗ್ಗೆ ಬೇರೆಯವರು ಬರೆದ ಪುಸ್ತಕ.ಪುಸ್ತಕದ ಸಂಪಾದಕ ಅವಿನಾಶ್ ಕಾಮತ್ ಎಂಬ ರೇಡೀಯೋ ಜಾಕಿ.ಮಾತಿನಲ್ಲೇ ಮನೆಕಟ್ಟುವ ಉದ್ಯೋಗದ ಹುಡುಗ.ಜಯಂತ್ ಎಂದರೆ ಹುಚ್ಚು ಅಭಿಮಾನ ಬೇರೆ.ಹಾಡುಗಳೊಟ್ಟಿಗೆ ಆಟವಾಡುತ್ತಾ ಆಡುತ್ತ ಈತ ಜಯಂತರ ಅಭಿಮಾನಿಗಳನ್ನು,ಅವರನ್ನು ಹತ್ತಿರದಿಂದ ಕಂಡವರನ್ನು ಕಲೆಹಾಕುತ್ತಾನೆ.ಹೀಗೆ ಆತನ ಒಂದೂವರೆ ವರ್ಷದ ಪ್ರಯತ್ನದ ಫಲವೇ ಈ ನಯನಾ ನೂತನ.ಮೊನ್ನೆ ಕೋಟದಲ್ಲಿ ಬಿಡುಗಡೆಯಾಗಿದ್ದೂ ಇದೇ ಪುಸ್ತಕ.ಸ್ವತ ಜಯಂತ ಕಾಯ್ಕಿಣಿಯವರೇ ಬಿಡುಗಡೆ ಮಾಡಿ ಸಂಕೋಚವಾಗಿದೆ ಎಂದಿದ್ದರು.
ಬಿದುಗಡೆ ಮಾದಿದ ಕಾಯ್ಕಿಣಿಯವರು “ಕನ್ನಡದಲ್ಲಿ ಇದೋಂದು ವಿಶಿಷ್ಟ ಪ್ರಯೋಗ”ಎಂದರು. ಅದು ನಿಜವೂ ಕೂಡ ಏಕೆಂದರೆ ಸಿನಿಮಾಹಾಡನ್ನು ಕೇಳಿದ ಸಮಾಜದ ನಾನಾ ಕ್ಷೇತ್ರದ ಮಂದಿ ಬರೆದ ಸಾಹಿತ್ಯ ಕನ್ನಡದಲ್ಲಿ ಇದೇ ಮೊದಲು.ಒಂದು ವಿಷಯದ ಬಗ್ಗೆ ಹಲವರಿಂದ ಲೇಖನಗಳನ್ನು ಬರೆಸುವ ರಿಸ್ಕ್ ಅನ್ನು ವತ್ತಿಯಲ್ಲಿ ಸಾಹಿತಿಯೂ ಅಲ್ಲದ,ಪತ್ರಕರ್ತನೂ ಅಲ್ಲದ ೨೩ರ ಅವಿನಾಶ್ ಕಾಮತ್ ಮಾಡಿರುವುದು ಕೇವಲ ಜಯಂತ್ ಮೇಲಿನ ಅಭಿಮಾನದಿಂದ.ಜಯಂತ್ ಹಾಡುಗಳ ಬಗ್ಗೆ ಕೇವಲ ಅಭಿಮಾನ ಎಂದರೂ ನ್ಯಾಯ ಒದಗಿಸಿದಂತಾಗದು.ಏಕೆಂದರೆ ಜಯಂತ್ ಹೋಗಿದ್ದು ಅಂಥಾ ಒಂದು ಕ್ಷೇತ್ರಕ್ಕೆ.ಅದುವರೆಗೆ ನವಿರಾದ ಸಾಲುಗಳಲ್ಲಿ ಕಥೆ-ಕವನ ಬರೆಯುತಿದ್ದ ಜಯಂತರು ಇದ್ದಕ್ಕಿದ್ದ ಹಾಗೆ ಸಿನಿಮಾಕ್ಕೆ ಹಾದು ಬರೆಯಲು ಹೋದಾಗ ಹಲವ್ರು ಸಂಕಟಗೊಂಡಿದ್ದರು. ಕಾಯಕವೇ ಕೈಲಾಸವಾಗುವ ಮುಂಬೈ,ಕೈಲಾಸದಲ್ಲೆ ಕಾಯಕವನ್ನು ಕಾಣುವ ಗೋಕರ್ಣವಿನ್ನು ಮರೆಯಾಗಿಹೋಯಿತು ಎಂದು ಬಹುತೇಕರು ಸಂಕಟಪಟ್ಟಿದ್ದ್ರು.ಸಾಹಿತ್ಯದ ಸೊಗಡನ್ನು ಜಯಂತ್ ಅನವಶ್ಯಕವಾಗಿ ಬಲಿಗೊಟ್ಟರೆಂದೂ ಕೆಲವರು ನೊಂದುಕೊಂಡಿದ್ದರು.ಏಕೆಂದರೆ ಸಿನಿಮಾ ಸಾಹಿತ್ಯಕ್ಕೆ ಸಂಗೀತದ ಗುಣಗಳೊಂದಿಗೆ ರಾಜೀ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿರುತ್ತದೆ.ಈ ರಾಜೀ ಮಾಡಿಕೊಳ್ಳುವ ಭರದಲ್ಲಿ ಜಯಂತರ ಸೂಕ್ಷ್ಮ ಸಂವೇದನೆಗಳು ಉಳಿದಾವೇ ಎಂಬ ಗುಮಾನಿ ಕೂಡ ಸತ್ಯವೆ.ಮೊದಲೇ ಸಂಗೀತ ಮತ್ತು ಸಾಹಿತ್ಯಕ್ಕೆ ಪರಸ್ಪರ ಬೆರೆಯದೆ ವಿಧಿ ಇಲ್ಲ ಎಂಬಂತಹ ನೆಂಟಸ್ಥನ.
ಅದರೂ ಜಯಂತ್ ಸಿನಿಮಾ ಕ್ಷೆತ್ರದಲ್ಲಿ ಯಶಸ್ವಿಯಾದರು.ಕೇವಲ ಯಶಸ್ವಿ ಮಾತ್ರವಲ್ಲ ಕನ್ನಡದ ಜನತೆ ಜಯಂತ್ ಸುರಿಸಿದ ಮಳೆಯಲ್ಲಿ ತೋಯ್ದುಹೋದರು.ಒಂದರ್ಥದಲ್ಲಿ ಹೇಳಬೇಕೆಂದರೆ ಜಯಂತರ ಲೇಖನಿ ಮತ್ತಷ್ಟು ಸೂಕ್ಷ್ಮವಾಯಿತು.ಅವರ ಸಾಲುಗಳು ಸಂಗೀತಕ್ಕೆ ಪ್ರತಿಸ್ಪರ್ಧಿಯಾಗದೆ ಸಮಸ್ಪರ್ಧಿಯಾದವು.ಕವಿಯೊಬ್ಬ ಸಿನಿಮಾಕ್ಕೂ ಲಗ್ಗೆ ಇಟ್ಟ.ಅನಂತರ ಆದುದೆಲ್ಲಾ ಇತಿಹಾಸ.ಇಡೀ ಕನ್ನಡ ಚಿತ್ರರಂಗ ಒಂದು ತಿರುವನ್ನು ಪದೆದುಕೊಂಡಿತು.ಅವರ ಎಲ್ಲಾ ಹಾಡುಗಳು ಜನರ ಹಾಡುಗಳಾದವು.ಪ್ರತಿಯೊಬ್ಬರ ಹದಯದ ಹಾಡುಗಳಾದವು. ಅದುವರೆಗೆ ಅವರು ತಾವು ಕಂಡಿಲ್ಲದಿದ್ದದ್ದನ್ನು ಕಂಡರು.ಬಾಲ್ಯದಲ್ಲಿ ತಾವು ಚಂದಾಮಾಮ ಓದಿದಂತೆ ರಸವತ್ತಾಗಿ ಹಾಡನ್ನು ಕೇಳಿದರು.
ಹಾಡುಗಳಿಂದ ಜಯಂತರಿಗೆ ಹಲವು ಅಬಿಮಾನಿಗಳು ಹುಟ್ಟಿಕೊಂಡರು.ಹಾಡು ಬರೆದವನಿಗೆ ಸಿಗುವ ಅಪರೂಪದ ಮರ್ಯಾದೆಯಿದು ಎಂದರೂ ತಪ್ಪಿಲ್ಲ.ಕವಿಯೊಬ್ಬನೂ ಸಲೆಬ್ರಿಟಿಯಾಗಬಹುದೆಂಬುದಕ್ಕೂ ಜಯಂತ್ ಕಾಯ್ಕಿಣಿ ಉದಾಹರಣೆ.ದೇವಸ್ಥಾನ ಕಟ್ತಿಸುವ,ಧಾನಧರ್ಮ ಮಾಡುವ,ಚಂದ್ರನಲ್ಲೂ ಚಂದ್ರಾಬಡಾವಣೆಯಲ್ಲೂ ಸೈಟು ಕೊಡುವ ಅಭಿಮಾನಿ ದೇವರುಗಳನ್ನು ನಾವು ನೋಡಿದ್ದೇವೆ.ಅಭಿಮಾನದ ಪರಾಕಾಷ್ಟೆಗೆ ನಗಾಡಿದ್ದೇವೆ,ತಮಾಷೆ ಮಾಡಿದ್ದೇವೆ.ಆದರೆ ರೇಡಿಯೋದಲ್ಲಿ ಚೇಷ್ಟೆಯ ಮಾತಾಡುತ್ತಾ ವಟವಟ ಎನ್ನುವ ಈ ಹುಡುಗನ ಅಭಿಮಾನಕ್ಕೆ ನಗಾಡಬೇಕೆನಿಸುವುದಿಲ್ಲ.ಬದಲು ಆತನ ಅಭಿಮಾನಕ್ಕೆ ಮರುಳಾಗುತ್ತೇವೆ.ಅಕ್ಷರ ಗಾರುಡಿಗನಿಗೆ ಅಕ್ಷರದಲ್ಲೇ ಅಕ್ಕರೆಯ ಅರ್ಪಣೆ ಮಾಡಿದಾತನ ಬಗ್ಗೆ ನಮಗೂ ಅಭಿಮಾನವುಂಟಾಗುತ್ತದೆ.

ಈ ನಯನ ನೂತನ ದಲ್ಲಿ ಜಯಂತರ ಹಾಡುಗಳ ಬಗ್ಗೆ ಇಪ್ಪತ್ತಾರು ಜನ ಬರೆದಿದ್ದಾರೆ.ಸುಬ್ರಾಯ ಚೊಕ್ಕಾಡಿಯವರ ಮುನ್ನುಡಿಯಿದೆ.ಜಯಂತರಿಂದ ಹಾಡು ಬರೆಸಿದ ಯೋಗರಾಜ ಭಟ್ಟರು,ಅವರ ಗೀತೆಗೆ ಸಂಗೀತ ಕೋಟ್ಟ ಮನೋಮೂರ್ತಿಗಳ ಮಾತು,ನಟ ರಮೇಶ್ ಅರವಿಂದ್,ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್,ಪ್ರಾಧ್ಯಾಪ್ಯಕ ವರದೇಶ ಹಿರೇಗಂಗೆ,ಪತ್ರಕರ್ತೆ ಸಂಧ್ಯಾ ಪೈ,ಚಿಂತಕ ಮುರುಳೀಧರ ಉಪಾಧ್ಯ ಹಿರಿಯಡಕ,ನಿರೂಪಕಿ ಅಪರ್ಣ, ಜೈಹೋ ಗಾಯಕ ವಿಜಯಪ್ರಕಾಶ ಮೊದಲಾದವರ ಲೇಖನಗಳಿವೆ. ಇಲ್ಲಿನ ಬಹುತೇಕ ಬರಹಗಳು ಜಯಂತ್ ಹಾಡಿನ ಬೆರಗಿನ ಫಲವಾಗಿ ರೂಪುಗೊಂಡ ಸಾಲುಗಳು.ಅದಕ್ಕಲ್ಲದಿದ್ದರೂ ಇಂದು ವಿನೂತನ ಪ್ರಯತ್ನಕ್ಕಂತೂ ಈ ನಯನ ನೂತನ ಇಷ್ಟವಾಗುತ್ತದೆ.

Friday, January 7, 2011

ಬಂದಾದ ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು..

ಬೆಲೆ ಏರಿಕೆಯ ವಿರುದ್ಧ ಕರೆ ನೀಡಿದ್ದ ಭಾರತ ಬಂದ್ ಯಶಸ್ವಿಯಾಗಿತ್ತು. ಯಶಸ್ವಿಯಾಗಿತ್ತು ಎಂದರೆ, ಬಸ್ಸುಗಳು ಓಡಾಟ ನಡೆಸದೆ ನಿಂತಿದ್ದವು. ಅಂಗಡಿಗಳು ಮುಚ್ಚಿದ್ದವು. ಉಳ್ಳವರು ತಂತಮ್ಮ ವಾಹನಗಳಲ್ಲಿ ತೊಂದರೆ ಇಲ್ಲದೆ ಸಾಗುತ್ತಿದ್ದರೆ, ಇಲ್ಲದವರು ಬಸ್ಸುಗಳಿಲ್ಲದೆ ತೊಂದರೆ ಅನುಭವಿಸಿದರು. ದಿನದ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಜನಕ್ಕೆ ಬಂದ್ ಕೂಡ ಬೆಲೆ ಏರಿಕೆಯಂತೆ ಬಿಸಿ ತಟ್ಟಿತ್ತು. ಅಂಥ ಬಂದ್ ನ ದಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದ ಮಂಗಳೂರಿನಲ್ಲಿ ಅದೊಂದು ಕೊಠಡಿ ಮಾತ್ರ ತೆರೆದಿತ್ತು. ಆ ತೆರೆದ ಅಂಗಡಿಯಂತಿದ್ದ ವೇದಿಕೆಯೊಂದರಲ್ಲಿ ನರಪೇತಲನಂತಿರುವ ಜೀವವೊಂದು ಮಲಗಿತ್ತು. ಯಾವ ಕೋನದಿಂದ ನೋಡಿದರೂ ಭಾರತೀಯ ರೈತನಂತೆಯೇ ಕಾಣುತ್ತಿದ್ದ ಕುರುಚಲು ಗಡ್ಡದ, ಸೊರಗಿದ ಮುಖದ, ಸಾಕಷ್ಟು ಬಳಲಿದ್ದ ಅವರ ಪರಿಚಯವನ್ನು ವೇದಿಕೆಯಲ್ಲಿದ್ದ ಫಲಕ ಹೇಳುತ್ತಿತ್ತು. ಅವರು ಗ್ರೆಗರಿ ಪತ್ರಾವೋ. ಅವರು ದ. ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವದಿಯ ಉಪವಾಸ ಕೂತಿದ್ದರು. ಏಕೆಂದರೆ ಅವರು ಕೃಷಿಕರಾಗಿದ್ದರು. ಕೃಷಿ ಮಾಡಿದ್ದರು. ಉತ್ತಿದ್ದರು. ಬಿತ್ತಿದ್ದರು. ಅದಕ್ಕಾಗಿ ಅತ್ತಿದ್ದರು.

ಗ್ರೆಗರಿ ಪತ್ರಾವೋ ಉಪವಾಸ ಪ್ರಕರಣದ ಕಾರಣ ಕೂಡ ತುಂಬಾ ಹಳೆಯದೇನಲ್ಲ. ಇದೇ ೨೦೧೦ರಲ್ಲಿ ನಡೆದ ಘಟನೆ ಅವರನ್ನು ಇಂದು ಊರೆಲ್ಲಾ ಮುಚ್ಚಿದ್ದಾಗ ಬೀದಿಯಲ್ಲಿ ಬಿದ್ದುಕೊಳ್ಳುವಂತೆ ಮಾಡಿದೆ. ವಾಸ್ತವವಾಗಿ ಅವರು ಇದೇ ಎಪ್ರಿಲ್ ನಿಂದಲೇ ಬೀದಿಗೆ ಬಂದಿದ್ದರು. ರೈತನಾಗಿದ್ದ ತಪ್ಪಿಗೆ ಬದುಕಲ್ಲಿ ಸೋತಿದ್ದರು. ಬ್ರಿಟಿಷ್ ಇಂಡಿಯಾದಲ್ಲಿ ನಡೆಯುತ್ತಿದ್ದ ಘಟನೆಗಳ ಪುನರಾವರ್ತನೆ ಎಪ್ರಿಲ್ ೨೮ರ ಮುಂಜಾನೆ ಗ್ರೆಗರಿ ಪತ್ರಾವೋರವರ ಬದುಕಲ್ಲೂ ನಡೆಯಿತು.

ಗ್ರೆಗರಿ ಮಂಗಳೂರು ತಾಲೂಕು ಕಳವಾರು ಗ್ರಾಮದ ಓರ್ವ ಆದರ್ಶ ಕೃಷಿಕ. ವರ್ಷಕ್ಕೆ ಮೂರು ಬೆಳೆ ಬೆಳೆಯುವ ಫಲವತ್ತಾದ ೧೪.೨೭ ಎಕ್ರೆ ಭೂಮಿಯಲ್ಲಿ ಭತ್ತ, ಅಡಿಕೆ, ತೆಂಗು, ವೆನಿಲಾ, ಗೇರು, ಬಾಳೆ, ವೀಳ್ಯ, ತರಕಾರಿಗಳನ್ನು ಬೆಳೆಸಿಕೊಂಡು, ಜಾನುವಾರುಗಳನ್ನು ಸಾಕಿಕೊಂಡು ೭೬ ವರ್ಷದ ತನ್ನ ತಾಯಿ, ತಮ್ಮಂದಿರು, ಅಕ್ಕನ ಮಕ್ಕಳೊಂದಿಗೆ ತನ್ನ ೩೫೦ ವರ್ಷ ಹಳೆಯದಾದ ಮನೆಯಲ್ಲಿ ಸುಖದಿಂದ ಬದುಕುತ್ತಿದ್ದರು. ಗ್ರಾಮ ಪಂಚಾಯತಿ ಚುನಾವಣೆಗೂ ಸ್ಪರ್ಧಿಸಿ ಉಪಾಧ್ಯಕ್ಷರೂ ಆಗಿದ್ದರು. ವಿಶೇಷ ಎಂದರೆ ತನ್ನ ೧೪ ಚಿಲ್ಲರೆ ಎಕರೆ ಭೂಮಿಯನ್ನು ಸಂಪೂರ್ಣ ಸಾವಯವ ಕೃಷಿ ಭೂಮಿಯಾಗಿ ಪರಿವರ್ತಿಸಿ ಊರಿನಲ್ಲೇ ಗಮನ ಸೆಳೆದಿದ್ದರು. ಸಾವಯವ ಎಂದರೆ ಕಿಂಚಿತ್ತೂ ರಸಗೊಬ್ಬರ ಹಾಕದೆ ಜಮೀನನ್ನು ಅತ್ಯಂತ ಸಹಜವಾಗಿ, ಆರೋಗ್ಯವಾಗಿ ಕಾಪಾಡಿಕೊಂಡು ಬಂದ ಸೃಜನಶೀಲ ಕೃಷಿಕ ಗ್ರೆಗರೀ ಪತ್ರಾವೋ. ಹೇಳಬೇಕೆಂದರೆ ಮುಖ್ಯಮಂತ್ರಿಗಳ ಸಾವಯವ ರೈತನ ಮನೆಯ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಹ ಮನೆ, ಜಮೀನು ಈ ರೈತನದಾಗಿತ್ತು. ಹೀಗೆ ಮಣ್ಣಿನಿಂದ ಹೊನ್ನು ತೆಗೆಯುತ್ತಿದ್ದ ಗ್ರೆಗರಿ ಕುಟುಂಬಕ್ಕೆ ಕಷ್ಟವೆಂಬುದಿರಲಿಲ್ಲ. ಸ್ವರ್ಗಕ್ಕೆ ಕಿಚ್ಚು ಹಚ್ಚೆಂಬಂತೆ ಬದುಕುತ್ತಿದ್ದ ಇವರಿಗೆ ಕಂಟಕವಾಗಿದ್ದು ಕೊನೆಗೂ ಅದೇ ಭೂಮಿ.

ಈ ರೈತನ ಪಾಲಿಗೆ ಯಮನಂತೆ ಎರಗಿದ್ದು ಕರಾವಳಿಯನ್ನೇ ನುಂಗಿ ನೀರು ಕುಡಿಯಲು ಸಿದ್ಧವಾಗಿರುವ ಅದೇ ಎಂಎಸ್‌ಇಝಡ್. ಕರಾವಳಿಯ ರೈತರ ಪಾಲಿಗೆ ದುಃಸ್ವಪ್ನವಾಗಿರುವ ಎಂಎಸ್‌ಇಝಡ್. ಅನ್ನದ ಬಟ್ಟಲನ್ನು ಕಿತ್ತು ವಿಷವನ್ನು ತಯಾರಿಸುವ, ಕಾಣದ ಧಣಿಗಳಿಗೆ ನೆಲವನ್ನು ಕಿತ್ತುಕೊಡುವ ಅಕ್ಟೋಪಸ್. ಹೀಗೆ ವಿಶೇಷ ಅರ್ಥ ವಲಯಕ್ಕೆ, ಅದೊಡ್ಡುವ ಆಮಿಷಕ್ಕೆ ಒಳಗಾಗಿ ಹಲವಾರು ರೈತರು ತಮ್ಮ ಭೂಮಿ ಒಪ್ಪಿಸಿದ್ದಾಗ, ಕಳಕೊಂಡಾಗ ಗ್ರೆಗರಿ ಪತ್ರಾವೋ ಕುಟುಂಬ ಭೂಮಿ ಬಿಟ್ಟುಕೊಡಲು ಒಪ್ಪದೆ ಎಂಎಸ್‌ಇಝಡ್‌ನ ಒತ್ತಡ-ಆಮಿಷಗಳನ್ನು ತಿರಸ್ಕರಿಸಿತು. ಅದರ ವಿರುದ್ಧ ಕಾನೂನು ರೀತಿಯ ಹೋರಾಟಗಳನ್ನು ನಡೆಸುತ್ತಾ ಬಂದ ಪತ್ರಾವೋ ಕುಟುಂಬ ಹಲವು ಬೇಡಿಕೆಗಳನ್ನಿಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂತಿತು.

ರೈತನೇ ರಾಷ್ಟ್ರದ ಬೆನ್ನೆಲುಬು ಎನ್ನುವ ದೇಶದಲ್ಲಿ ಇದು ತೀರಾ ಸಾಧಾರಣ ಮಟ್ಟದ, ತೀರಾ ಮಾನವೀಯವಾದ ಬೇಡಿಕೆ. ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ, ಸಾವಯವ ರೈತನ ಮನೆಯಲ್ಲಿ ವಾಸ್ತವ್ಯ ಮಾಡುವ ಸರಕಾರ ಇದರ ಬಗ್ಗೆ ಆರಂಭದಲ್ಲಿ ಗಮನ ಹರಿಸಲಿಲ್ಲ. ಕೊನೆಗೂ ಸರಕಾರ ಆಶ್ವಾಸನೆಯನ್ನು ನೀಡಿದೆ. ಆದರೆ ದುಷ್ಟ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳುವ ಮಾತನಾಡಿಲ್ಲ. ಎಮ್.ಎಸ್.ಇ.ಝಡ್ ನ ತಂಟೆಗೆ ಹೋಗಿಲ್ಲ. ಅಂದರೆ ಇನ್ನಷ್ಟು ಮನೆಗಳು ಉರುಳಲಾರದು ಎಂಬುದಕ್ಕೆ ಸರಕಾರ ಗ್ಯಾರಂಟಿಯನ್ನು ಕೊಡಲಿಲ್ಲ. ಒಂದೆಡೆ ನೇಗಿಲಯೋಗಿಯ ಹಾಡಿಗೆ ಡ್ರಮ್‌ಬಡಿಸಿ, ಹಾಡಿಸಿ, ಕುಣಿಸಿ, ಸಾವಯವ ರೈತನ ಮನೆಯಲ್ಲಿ ತಂಗುವವರು ಎಂಎಸ್‌ಇಝಡ್ ನ ಬಗ್ಗೆ ಖಡಕ್ ನಿಲುವನ್ನು ತಾಳಿಲ್ಲ.

ಪತ್ರಾವೋ ಬೇಡಿಕೆ ದೇಶದ ಸಮಸ್ತ ರೈತ ಸಮುದಾಯದ ಬೇಡಿಕೆ. ದಮನಿತ ರೈತರ ದನಿಗೆ ಪತ್ರಾವೋ ಉಪವಾಸ ಒಂದು ಸಂಕೇತ.

ಒಂದಾನೊಂದು ಕಾಲದಲ್ಲಿ ಬಾಳ ಎಂಬ ಊರು ಇಲ್ಲಿತ್ತಂತೆ

ಒಂದು ಕಾಲದಲ್ಲಿ ಅಲ್ಲೊಂದು ಊರಿತ್ತಂತೆ. ಅದರ ಸಡಗರಕ್ಕೆ ಮನ ತುಂಬಿಹೋಗುತ್ತಿತ್ತಂತೆ. ಹಸಿರೆಲ್ಲಾ ತಾನೆಂದಿತೋ ಎಂಬಂತಹ ಸಮೃದ್ಧಿ ಅಲ್ಲಿತ್ತಂತೆ. ಹಕ್ಕಿಪಕ್ಕಿಗಳ ಕಲರವಕ್ಕೂ, ಚಿಣ್ಣರ ಹುಯಿಲಿಗೂ, ಕರುಗಳ ಅಂಬಾ ಕೂಗಿಗೂ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುವ ರೂಪಕ ಸುಳಿದು ಹೋಗುತ್ತಿತ್ತಂತೆ. ಬಂಗಾರದಂಥಾ ಬೆಳೆಗೆ ತೆನೆ ತೂಗಿ ಬಾಗುತ್ತಿತ್ತಂತೆ. ಸಂಪತ್ತು ಅಡಿಕೆ- ತೆಂಗು ಬಾಳೆಗಳ ರೂಪದಲ್ಲಿ ಫಲ ನೀಡಿ ಚಿನ್ನವೇ ತಾನೆಂಬಂತೆ ನಳನಳಸುತ್ತಿತ್ತಂತೆ. ರೈತನ ಬಾಳನ್ನು ಹಸನುಗೊಳಿಸುತ್ತಿತ್ತಂತೆ. ಒಂದಾನೊಂದು ಕಾಲದಲ್ಲಿ ಆ ಹಳ್ಳಿಯಲ್ಲಿ ಕೂಡು ಕುಟುಂಬಗಳು ತುಂಬುಜೀವನ ನಡೆಸುತ್ತಿದ್ದವಂತೆ.

ಹೀಗೆ ಒಂದಾನೊಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದ, ಈಗ ಕಾಲಗರ್ಭಕ್ಕೆ ಸೇರಿಹೋದ ಆ ಗ್ರಾಮದ ಬಗ್ಗೆ ಹಲವು ವೈಭವದ ಮಾತುಗಳು ಈಗಲೂ ದ.ಕ.ದಲ್ಲಿ ಕೇಳಿಬರುತ್ತವೆ. ಸಮೃದ್ಧ ನೀರು ಹರಿಯುತ್ತಿದ್ದ, ಹಾಲು ತುಳುಕುತ್ತಿದ್ದ, ಸ್ವಚ್ಛಂದ ಗಾಳಿ ಬೀಸುತ್ತಿದ್ದ ಬಾಳ ವೈನಾಗಿದ್ದ ಆ ಗ್ರಾಮದ ಹೆಸರು ಬಾಳ ಆಗಿತ್ತಂತೆ.

ನಾಗರಿಕತೆಯ ಹೊಡೆತಕ್ಕೆ ಸಿಕ್ಕಿ ಬಲಿಯಾಗಿ ಹೋದ ಬಹಳ ಗ್ರಾಮಗಳ ಪೈಕಿ ಬಾಳವೂ ಒಂದು ಮತ್ತು ಬಾಳ ಮಹತ್ತ್ವದ್ದು. ಆಧುನಿಕ ಪ್ರಪಂಚದ ಆದ್ಯತೆಗಳಿಗೆ ತನ್ನ ಹಿತವನ್ನು ಬಲಿಕೊಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬಾಳ ಇಂದು ವಿಳಾಸದಲ್ಲಿಲ್ಲದ ಒಂದಾನೊಂದು ಕಾಲದ ಊರು. ಇದೀಗ ಬಾಳವಿದ್ದ ಪ್ರದೇಶ ತಂತ್ರಜ್ಞಾನದ ಶ್ರೀಮಂತಿಕೆಗೆ, ವಿಜ್ಞಾನದ ಉತ್ತಂಗಕ್ಕೆ ಸಾಕ್ಷಿಯಾಗಿ ನಿಂತಿದೆ. ಆದರೆ ಹಿಂದಿನ ಮಿಡಿತವೆಲ್ಲೋ ಮಾಯವಾಗಿದೆ. ಮೂಲದ ಸ್ವರೂಪ ಗುರುತು ಸಿಗದಂತೆ ಊರಿನ ಕುರುಹುಗಳು ಮಣ್ಣು ಸೇರಿವೆ.

ಮಂಗಳೂರಿನಿಂದ ಉತ್ತರಕ್ಕೆ 15 ಕಿ.ಮೀ. ದೂರದ ಬಾಳ ಇಂದು ಬೃಹತ್ ತೈಲ ಶುದ್ಧೀಕರಣ ಘಟಕ. ಅದರ ಸುತ್ತಲೂ ಇಂದು ಪೇಟೆ ಎದ್ದಿದೆ. ಪೇಟೆ ಬದಿಯ ಎಲ್ಲಾ ಕೊಳಕುಗಳೂ ಅಲ್ಲಿ ಸೃಷ್ಟಿಯಾಗಿವೆ. ಜನಜಂಗುಳಿ, ಕಾರ್ಮಿಕರು, ತ್ಯಾಜ್ಯ, ಅಂಗಡಿ ಮುಂಗಟ್ಟು ಒಟ್ಟಾರೆ ಆಧುನಿಕವೆನ್ನುವ ಸಂಪತ್ತು ಅಲ್ಲಿ ಸಂಚಯವಾಗಿದೆ. ಬಾಳ ಗ್ರಾಮದವರ ವಂಶವೃಕ್ಷದ ಸಮಾಧಿಯ ಮೇಲೆ ಎಂಆರ್ಪಿಎಲ್ ಎಂಬ ದೈತ್ಯ ತೈಲ ಘಟಕ ಪ್ರತಿಷ್ಠಾಪಿಸಲ್ಪಟ್ಟಿದೆ. ಭಾರತ ಸರಕಾರದ ಓಎನ್ಜಿಸಿ ಅಧೀನದ ಈ ಉದ್ಯಮ ನೋಡನೋಡುತ್ತಲೇ ತೈಲದ ಮೂಲಕ ಒಂದು ಗ್ರಾಮವನ್ನು, ಆ ಮೂಲಕ ಒಂದು ಸಂಸ್ಕೃತಿಯನ್ನು ಕೊಚ್ಚಿ ಹಾಕಿಬಿಟ್ಟಿದೆ. 6.69 ಮಿಲಿಯನ್ ಮೆಟ್ರಿಕ್ಟನ್ ಸಾಮರ್ಥ್ಯದ ಈ ಬೃಹತ್ ತೈಲ ಶುದ್ದೀಕರಣ ಸಮಸ್ತ ಕರಾವಳಿಗೆ ಕಂಟಕವಾಗುತ್ತಾ ಸಾಗುತ್ತಿದೆ. ಅಭಿವೃದ್ಧಿಯ ನಡೆಗೆ ಬಾಳದಂತಹ ಹಲವು ಗ್ರಾಮಗಳನ್ನು ನುಂಗಿ ಹಾಕಲು ಕಾತರಿಸುತ್ತಿದೆ. ಯಾವ ಕಂಪೆನಿಯಿಂದ ತಮ್ಮ ಉದ್ದಾರವಾಗುತ್ತದೆಂದು ಜನ ನಂಬಿಕೊಂಡಿದ್ದರೋ ಯಾವ ಕೆಲಸವನ್ನು ನಂಬಿ ತಮ್ಮ ನೆಲವನ್ನು ರೈತರು ಕಾಣದ ದಣಿಗಳಿಗೆ ಒಪ್ಪಿಸಿದ್ದರೋ ಅಂಥವರು ಇಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಏಕೆಂದರೆ ಸ್ಥಳೀಯರಿಗೆ ಉದ್ಯೋಗ ನೀಡುವೆವೆಂಬ ಭರವಸೆ ಈಗಾಗಲೇ ಹುಸಿಯಾಗಿದೆ. ಕಲ್ಪಿಸಿದ್ದ ಪುನರ್ ವಸತಿ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲವಾಗಿದೆ. ದಟ್ಟ ರಾಸಾಯನಿಕ ತ್ಯಾಜ್ಯ ಸಮುದ್ರ ಸೇರುತ್ತಿದೆ. ಹೀಗೆ ಮೋಸ ಹೋದ ಸ್ಥಳೀಯರು ಕಳಕೊಳ್ಳುವ ಆಟವನ್ನು ಅಂದಿನಿಂದಲೇ ಶುರುವಿಟ್ಟುಕೊಂಡರು. ಅರ್ಥಾತ್ ಯಾವಾಗ ಮಂಗಳೂರಿಗೆ ಎಂಆರ್ಪಿಎಲ್ ಬಂತೋ ಅಂದಿನಿಂದಲೇ ಕರಾವಳಿಗೆ ಕಂಟಕವೂ ಆರಂಭವಾಗಿಬಿಟ್ಟಿತು.

ಏಕೆಂದರೆ ಕರಾವಳಿಯ ಇಂದಿನ ಎಲ್ಲಾ ಕಂಟಕಗಳಿಗೆ ಎಂಆರ್ಪಿಎಲ್ ಒಂದಲ್ಲ ಒಂದು ವಿಧದಲ್ಲಿ ಕಾರಣವಾಗಿದೆ ಮತ್ತು ಕರಾವಳಿಗೆ ಬರುತ್ತಿರುವ ಹೊಸಹೊಸ ಯೋಜನೆಗಳು ಈ ತೈಲ ಶುದ್ಧೀಕರಣ ಘಟಕದ ಕಾರಣದಿಂದಲೇ ಆರಂಭವಾಗುತ್ತಿದೆ. ಹಾಗೆ ಕರಾವಳಿಯ ಎಲ್ಲಾ ಯೋಜನೆಗಳ ಮೂಲ ಬೇರಿನಂತಿರುವ ಈ ತೈಲ ಶುದ್ಧೀಕರಣ ಘಟಕ ಇದೀಗ ಮಂಗಳೂರಿನ ಗ್ರಾಮಾಂತರ ಪ್ರದೇಶವನ್ನೂ ಇಂಚಿಂಚಾಗಿ ಕಬಳಿಸುವ ಕಾಯಕದಲ್ಲಿ ತೊಡಗಿಕೊಂಡಿದೆ. ಅಂದರೆ ಮಂಗಳೂರು ವಿಶೇಷ ಆರ್ಥಿಕ ವಲಯದ ವೊದಲ ಹಂತದ ಯೋಜನೆಯಲ್ಲಿ ಈ ತೈಲ ಶುದ್ಧೀಕರಣ ಘಟಕ ತನ್ನ ವ್ಯಾಪ್ತಿ, ಕಾರ್ಯವನ್ನು ವಿಸ್ತರಿಸಿಕೊಳ್ಳಲಿದೆ. ಹಲವು ಗ್ರಾಮಗಳು ಬಾಳದ ಸಾಲಿಗೆ ಸೇರಿ ಹೋಗಲಿದೆ. ಈಗಲೇ ಭಾರತದ ಏಕೈಕ ಎರಡು ಹೈಡ್ರೋಕ್ರಾಕರ್ಸ್ ಪ್ರೊಡೆಕ್ಟಿಂಗ್ ಪ್ರೀಮಿಯಂ ಡಿಸೇಲ್ ಮತ್ತು ಅಷ್ಟೇ ಪ್ರಮಾಣದ ಅನ್ಲೀಡೆಡ್ ಪೆಟ್ರೋಲ್ ಸಾಮಥ್ರ್ಯದ ಘಟಕಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಮರ್ಥ್ಯ ಗಳಿಸಿಕೊಳ್ಳಲಿವೆ. ಅಂದರೆ ಕರಾವಳಿಯ ಮತ್ತಷ್ಟು ಪ್ರದೇಶ ಮಲೀನಕ್ಕೆ ಸಜ್ಜಾಗುತ್ತಿದೆ. ಸಮುದ್ರಕ್ಕೆ ಇನ್ನಷ್ಟು ತ್ಯಾಜ್ಯ ಸೇರಲಿದೆ. ಜೀವ ವೈವಿಧ್ಯ ನಾಶಕ್ಕೆ ಮತ್ತಷ್ಟು ವೇಗಬರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ತೈಲ ಶುದ್ಧೀಕರಣ ಘಟಕಕ್ಕೆ ಸಂಸ್ಕೃತಿಗಳೂ ಬಲಿಯಾಗಲಿವೆ.

ಉದ್ದೇಶಿತ ವಿಶೇಷ ಆರ್ಥಿಕ ವಲಯದ ಒಂದನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದೆ ಮತ್ತು ಕುತ್ತೆತ್ತೂರು, ಪೆರ್ಮುದೆ, ತೆಂಕ ಎಕ್ಕಾರು, ದೇಲಂತಬೆಟ್ಟು ಗ್ರಾಮಗಳ ಅರ್ಧಭಾಗ ಮತ್ತು ಅದಕ್ಕಿಂತಲೂ ಹೆಚ್ಚಿನ ಭಾಗಗಳು ಎಂಎಸ್ಇಝೆಡ್ ಪಾಲಾಗಿವೆ. ಅಲ್ಲಿ ತೈಲ ಘಟಕ ಮತ್ತು ಅದರ ಸಂಬಂಧಿತ ಕಾರ್ಯಗಳು ಆರಂಭವಾಗುತ್ತವೆ. ಅದರ ಪೂರ್ವಭಾವಿಯಾಗಿ ಅಭಿವೃದ್ಧಿಯ ವ್ಯಾಖ್ಯಾನಗಳ ಭರಾಟೆ ಆರಂಭವಾಗಿಬಿಟ್ಟಿದೆ. ಅಭಿವೃದ್ಧಿಗೆ ಹಲವು ವ್ಯಾಖ್ಯಾನಗಳನ್ನೇನೋ ಕೊಡಬಹುದು. ಆದರೆ ಆದರೆ ಇದ್ದುದನ್ನು ಕೆಡವುದಕ್ಕೆ ಯಾವ ವ್ಯಾಖ್ಯಾನ? ಅದರರ್ಥವೇನು? ಮುಖ್ಯವಾಗಿ ಆಧುನಿಕತೆಯ ಹೆಸರಲ್ಲಿ ಗ್ರಾಮಗಳನ್ನು ಬಲಿಕೊಡುವುದು ಕ್ಷಮಾರ್ಹವಲ್ಲದ ಪ್ರಕ್ರಿಯೆ. ಅದು ದೇಶವನ್ನೇ ಕಸಾಯಿಖಾನೆಗೆ ಕೊಟ್ಟಂತೆ. ಆದರೆ ರಕ್ಕಸ ಯೋಚನೆಗಳ ಎಂಎಸ್ಇಝೆಡ್ಗೆ ಇದಾವುದರ ಪರಿವೆಯಿಲ್ಲ. ಏಕೆಂದರೆ ಅದು ಕರಾವಳಿಯ ಆಯಕಟ್ಟಿನ ಜಾಗಗಳಲ್ಲೇ ಆರ್ಥಿಕ ವಲಯ ರಚನೆಗೆ ಮುಂದಾಗಿದೆ. ಭೂಸ್ವಾಧೀನವೂ ನಡೆಯುತ್ತಿದೆ. ಏನಾಗಿದೆ ಕರಾವಳಿಗೆ? ವಿಶೇಷ ಆರ್ಥಿಕ ವಲಯದ ಅವಶ್ಯಕತೆಯಾದರೂ ಏನಿತ್ತು? ವಿಶೇಷವಾದ ಆರ್ಥಿಕ ವಲಯವಿಲ್ಲದಿದ್ದರೆ ಕರಾವಳಿಯೇನು ದಿವಾಳಿಯೆದ್ದು ಹೋಗುವುದೆ? ಎಂಎಸ್ಇಝೆಡ್ ನಿಗದಿಪಡಿಸಿರುವ ಯಾವ ಭೂಮಿಯೂ ನಿಷ್ಪ್ರಯೋಜಕವಲ್ಲ. ಅವು ಯೋಗ್ಯ ಕೃಷಿ ಭೂಮಿ ಮತ್ತು ಸಮೃದ್ಧ ನೀರಾವರಿ ಇರುವ ಪ್ರದೇಶಗಳು. ಅಂಥ ಭೂಮಿಯಲ್ಲಿ ಕಟ್ಟುವ ಸೌಧ ಸಮಾಧಿಯಲ್ಲದೆ ಮತ್ತೇನು?

ಆರ್ಥಿಕ ವಲಯದ ಎರಡನೇ ಹಂತದಲ್ಲಿ ಸ್ವಾಧೀನಕ್ಕೆ ಒಳಪಡುವ 2345 ಎಕರೆ ಪ್ರದೇಶ ಅಪ್ಪಟ ಕರಾವಳಿಯ ಸೊಗಡಿರುವ, ಆಯಕಟ್ಟಿನ ಜಾಗ. ಮುಂದೆ ಅವೆಲ್ಲವೂ ತಮ್ಮ ಮೂಲ ಬೇರುಗಳನ್ನು ಕಳಚಿಕೊಂಡು ಕೊರಡಾಗಲಿವೆ. ಆ ಕೊರಡಿನಲ್ಲಿ ಮುಂದೆ ಪ್ಲಾಸ್ಟಿಕ್ ಹೂವುಗಳನ್ನು ಅಂಟಿಸಲಾಗುತ್ತದೆ.ರಂಗುರಂಗಿನ ಪ್ಲಾಸ್ಟಿಕ್ ಹೂವುಗಳಲ್ಲಿ ಸೌಂದರ್ಯವನ್ನು ಆಸ್ವಾದಿಸಿ, ಅದರಲ್ಲೇ ನೆರಳನ್ನು ಹುಡುಕಿ ತಂಪು ಎಂದು ವ್ಯಾಖ್ಯಾನಿಸಲಾಗುತ್ತದೆ. ಅದಕ್ಕೆ ಅಡಿಪಾಯವೆಂಬಂತೆ ಎಸ್ಇಝೆಡ್ ಪುನರ್ವಸತಿಯ ಆಸೆ ತೋರಿಸುತ್ತಿದೆ. ಅಂತಾರಾಷ್ಟ್ರೀಯ ದರ್ಜೆಯ ಮೂಲಸೌಲಭ್ಯಗಳ ಮಾತಾಡುತ್ತಿದೆ. ಕೋಟಿಗಟ್ಟಲೆ ಪರಿಹಾರಗಳ ದಾಖಲೆಗಳನ್ನು ಹಾಜರುಪಡಿಸುತ್ತಿದೆ ಎಲ್ಲವೂ ಅಭಿವೃದ್ಧಿಗಾಗಿ, ನಾಗರಿಕತೆಯ ಬೆಳವಣಿಗೆಗಾಗಿ ಒಂದರ್ಥದಲ್ಲಿ ಹೇಳಬೇಕೆಂದರೆ ಕೃಷಿಯ ಸಮೂಲ ನಾಶಕ್ಕಾಗಿ ಮತ್ತು ಸಂಸ್ಕೃತಿಯನ್ನು ಬೇರು ಸಹಿತ ಕಿತ್ತು ಹಾಕಲಿಕ್ಕಾಗಿ. ಆದರೆ ಎಸ್ಇಝೆಡ್ ತೋರಿಸುವ ಭರವಸೆಗಳು ಹುಸಿಯೆಂಬುದು ಎಂಆರ್ಪಿಎಲ್ನ ವರ್ತನೆಗಳಿಂದ ಅರಿವಾಗಿದೆ ಮತ್ತು ಸುಳ್ಳಿನ ಮೂಲಕವೇ ವೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ತಿಗೊಳಿಸಿರುವ ಆರ್ಥಿಕ ವಲಯದ ಕೃತ್ಯಗಳಿಗೆ ಎರಡನೇ ಹಂತದಲ್ಲೇನೂ ಕಷ್ಟವಾಗಲಾರದೆಂದೂ ಅನಿಸುತ್ತದೆ.

ಈ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಬಲವಂತದ ಹಲವು ಬದಲಾವಣೆಗಳು ಸಂಭವಿಸುವ ಹಲವು ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಏಕೆಂದರೆ ಈಗಾಗಲೇ ಮಾಯವಾಗಿರುವ ಕುಡುಬಿ ಪದವು ಎಂಬ ಗ್ರಾಮ ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ತರಕಾರಿಗಳನ್ನು ಪೂರೈಸುತ್ತಿದ್ದ ಗ್ರಾಮವಾಗಿತ್ತು. ಅಲ್ಲಿ ತರಕಾರಿ ಬೆಳೆಯುತ್ತಿದ್ದವರು ಇದೀಗ ಪುನರ್ವಸತಿ ಕಾಲೋನಿ ಸೇರಿದ್ದಾರೆ. ಅಲ್ಲದೆ ಇದೀಗ ಮುಕ್ಕಾಲು ಭಾಗ ಇಲ್ಲವಾಗಿರುವ ಪೆರ್ಮುದೆ ಒಂದಾನೊಂದು ಕಾಲದಲ್ಲಿ ಹೈನುಗಾರಿಕೆಗೆ ಪ್ರಮುಖ ಕೇಂದ್ರವಾಗಿತ್ತು. ಇದೀಗ ಪೆರ್ಮುದೆಯೇ ಇಲ್ಲವಲ್ಲ! ಗೋವುಗಳು ಇನ್ನು ಹೇಗೆ ಇದ್ದಾವು? ಅದೇ ರೀತಿ ವರ್ಷಕ್ಕೆ 2 ಅಥವಾ ಮೂರು ಬೆಳೆ ಬೆಳೆಯುತ್ತಿದ್ದ ಎಸ್ಇಝೆಡ್ ವ್ಯಾಪ್ತಿಯ ಹಲವು ಹಳ್ಳಿಗಳು ಇಂದು ಕಾಟಾಚಾರಕ್ಕೆಂಬಂತೆ ಒಂದು ಬೆಳೆ ಬೆಳೆಯುತ್ತಿವೆ. ಕೆಲವು ಕಡೆಗಳಲ್ಲಂತೂ ಕೃಷಿ ಸಂಪೂರ್ಣ ಸ್ತಬ್ಧವಾಗಿದೆ. ಕಾರಣ ಇಂದೋ ನಾಳೆಯೋ ಕೈಬಿಟ್ಟುಹೋಗಲಿರುವ ಭೂಮಿಗೆ ಪ್ರೀತಿ ಕೊಟ್ಟು ಪ್ರಯೋಜನವೇನು ಎಂಬ ಹರಳುಗಟ್ಟಿದ ಸಂಕಟ. ಕೃಷಿ ಸಂಬಂಧಿತ ಸಮಸ್ಯೆಗಳು ಮೂಡುವ ವೊದಲೇ ಕೈಚೆಲ್ಲಿ ಕುಳಿತಿರುವ ಅಪರೂಪದ ರೈತರನ್ನು ಇಲ್ಲಿ ನೋಡಬಹುದು. ಕೃಷಿ ಭೂಮಿಯಲ್ಲಿನ ನೀರವ ಮೌನವನ್ನು ಯಾರೂ ನೋಡಬಹುದು. ಅಂದು ರೈತರೇ ವರ್ಷಕ್ಕೊಮ್ಮೆ ಸೇರಿ ಕಟ್ಟುತ್ತಿದ್ದ ಒಡ್ಡುಗಳು, ಕಿರು ಅಣೆಕಟ್ಟುಗಳು ಮರೆಯಾಗಿ ವರ್ಷಗಳಾಗಿ ಹೋದವು. ಪರಿಣಾಮ ಅಂದಿನಂತೆ ಇಂದು ಜಲಮಟ್ಟ ಏರುತ್ತಿಲ್ಲ. ಕುಡಿಯುವ ನೀರಿಗೇ ತತ್ವಾರ ಪಡುವಂತಹ ಸ್ಥಿತಿಯಲ್ಲಿ ಈ ಪ್ರದೇಶಗಳಿವೆ. ಪ್ರಳಯ ಕಾಲದ ಮಹಾಮೌನದಂತೆ ಅಸ್ತಿತ್ವ ಕಳಕೊಳ್ಳುವ ಗ್ರಾಮಗಳು ಮೂಕವಾಗಿವೆ. ಈ ಪ್ರದೇಶದಲ್ಲಿ ಆತಂಕವೆಂಬುದು ಎಷ್ಟು ಮಡುಗಟ್ಟಿದೆಯೆಂದರೆ ಸೋರುತ್ತಿರುವ ಮನೆಯ ಮಾಡನ್ನೂ ದುರಸ್ತಿ ಮಾಡುವ ಗೊಡವೆಗೆ ಜನರು ಹೋಗುತ್ತಿಲ್ಲ. ಏಕೆಂದರೆ ಅದು ಉಳಿಯುವಂತಹ ಮನೆಯಲ್ಲ. ಮಕ್ಕಳ ಮದುವೆ ಮಾಡಲೂ ಹಿಂದೆ ಮುಂದೆ ಯೋಚಿಸುವಷ್ಟು ಜನರು ಧೈರ್ಯಗುಂದಿದ್ದಾರೆ. ಏಕೆಂದರೆ ಮದುವೆ ದಿನವೇ ಮನೆ ಉರುಳಬಹುದೆಂಬ ಭಯ. ಇವೆಲ್ಲಾ ವಿಶೇಷ ಆಥರ್ಿಕ ವಲಯ ಸೃಷ್ಟಿಸಿರುವ ವಿಶೇಷ ಸವಲತ್ತುಗಳು.

ಇವಲ್ಲದೆ ಎಸ್ಇಝೆಡ್ ಸೃಷ್ಟಿಸಿರುವ ವಿಚಿತ್ರಗಳೂ ಕೆಲವಿವೆ. ಭೂಸ್ವಾಧೀನಕ್ಕೆ ನಿಗದಿಪಡಿಸಿರುವ ಪ್ರದೇಶಗಳು ಮೂಲ ಸೌಲಭ್ಯಗಳಿಂದ ದಿನೇ ದಿನೇ ವಂಚಿತವಾಗುತ್ತಾ ಹೋಗುತ್ತಿವೆ. ಏಕೆಂದರೆ ಇಂಥ ಪ್ರದೇಶಕ್ಕೆ ಯಾವುದೇ ಹೊಸ ಯೋಜನೆ ಅನುಷ್ಠಾನವಾಗುವಂತಿಲ್ಲ. ಅನುದಾನ ಬಿಡುಗಡೆಯಾಗುವಂತಿಲ್ಲ. ಒಂದು ವೇಳೆ ಅದಾಗಲೇ ಘೋಷಣೆಯಾಗಿರುವ ಯೋಜನೆಯಾಗಿದ್ದರೂ ಹಣ ಬಿಡುಗಡೆಯಾಗುವಂತಿಲ್ಲ. ಇದು ಒಂಥರಾ ನಿರಂತರ ಚುನಾವಣಾನೀತಿ ಸಂಹಿತೆಯಂತೆ. ಕುಡಿಯುವ ನೀರು, ಕಾಲುದಾರಿ, ಸಂಪರ್ಕ ಸೇತುವೆಗಳಿಗೂ ಕೂಡ ಸ್ಥಳೀಯ ಸಂಸ್ಥೆಗಳು ಅನುದಾನ ಬಿಡುಗಡೆ ಮಾಡಲಾರದ ಸ್ಥಿತಿಯಲ್ಲಿವೆ. ಹೀಗಾದರೂ ಗ್ರಾಮಗಳು ಖಾಲಿಯಾಗಲಿ ಎಂಬ ಹುನ್ನಾರವೇ ಇದು? ಬಿಟ್ಟು ತೊಲಗಲಿ ಎಂಬ ದಾಷ್ಟ್ರ್ಯವೇ? ಇದರ ಒಟ್ಟೊಟ್ಟಿಗೇ ಕರಾವಳಿ ಮಾಲಿನ್ಯದ ಕೂಪ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿದೆ. ಇದರ ಜೊತೆಗೆ ಇನ್ನೂ ನಾಲ್ಕೈದು ಸಾವಿರ ಎಕರೆ ಐಟಿ ಸಂಬಂಧಿತ ಕಂಪೆನಿಗಳು ಬಂದರೆ ಕರಾವಳಿ ಕರಗುವ ದಿನ ದೂರವಿಲ್ಲ. ಈಗಲೇ ಎಂಆರ್ಪಿಎಲ್ ತೈಲ ಶುದ್ಧೀಕರಣದ 4 ಕಿ.ಮೀ. ವ್ಯಾಪ್ತಿಯಲ್ಲಿ ತೆಳ್ಳಗೆ ತೇಲಿಬರುವ ರಾಸಾಯನಿಕಗಳ ವಾಸನೆ ಮುಂದೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳದೇ ಇದ್ದೀತೇ? ಉದ್ದೇಶಿತ ಎಸ್ಇಝೆಡ್ ಪ್ರದೇಶದಿಂದ ಕೆಲವು ಕಿ.ಮೀ. ದೂರದ ಖ್ಯಾತ ದೇಗುಲಗಳಲ್ಲೂ ತೀರ್ಥಪ್ರಸಾದದ ಹೊತ್ತಲ್ಲಿ ತೈಲದ ಘಾಟು ತಟ್ಟದೇ ಇದ್ದೀತೆ?

ಎಸ್ಇಝೆಡ್ ಮಂಗಳೂರಿನಲ್ಲಾಗಲಿ ಅಥವಾ ನಂದಗುಡಿಯಲ್ಲೇ ಆಗಲಿ ಅವು ದೇಶದೊಳಗಣ ದೇಶಗಳೆಂಬುದರಲ್ಲಿ ಎರಡು ಮಾತಿಲ್ಲ. ಯಾವ ಕಾನೂನುಗಳೂ ಅದರೊಳಗೆ ಜಾರಿಯಾಗವು. ಯಾವ ಮೌಲ್ಯಗಳೂ ಅಲ್ಲಿ ನೀತಿ ರೂಪಿಸಲಾರವು. ಇವು ಮೂಲಸ್ವರೂಪವನ್ನು ಧಿಕ್ಕರಿಸದೇ ಇದ್ದಾವೇ? ಪುನರ್ವಸತಿ ಕೇಂದ್ರಗಳು ಕಾಂಕ್ರೀಟ್ ಕಾಡಲ್ಲಿ ನಾಗಬನವನ್ನು ಕಟ್ಟಿಸಬಹುದು. ಆದರೆ ನಿಜದ ನಾಗನ ಕೊಲ್ಲುತಿವೆಯಲ್ಲಾ....