Tuesday, November 29, 2011

ಅವರು ಕರೆಯದೇ ಬಂದರು; ಇವರು ಕರೆಯೋಲೆಯೊಂದಿಗೇ ಬಂದರು


ಕೆಲವು ಇತಿಹಾಸಗಳು ಸೃಷ್ಟಿಯ ಅಸ್ತಿತ್ವ ಇರುವವರೆಗೂ ಮರೆಯಾಗಲಾರವು ಮತ್ತು ಮರೆಯಲೂಬಾರದು.
ದಕ್ಷಿಣ ಏಷ್ಯಾದ ಸಿಂಧ್ ನಾಚೆಯ ಭಾರತವೆನ್ನುವ ದೇಶ ಪಾಶ್ಚಾತ್ಯರಿಗೆ ಮೊದಲಿನಿಂದಲೂ ಕಣ್ಣುಕುಕ್ಕುವ ದೇಶವೇ. ಪ್ರಾಚೀನದಿಂದಲೂ ಭಾರತ ಅವರ ಕಣ್ಣಿಗೆ ಮಾಯಾನಗರಿಯೇ. ಕನಸ್ಸಿನ ಭೂಮಿಯೇ. ಏಕೆಂದರೆ ಭಾರತ ಅವೆಲ್ಲಕ್ಕಿಂತ ಶ್ರೀಮಂತವೂ ಅವರೆಲ್ಲಾ ಅಗತ್ಯಗಳನ್ನೂ ಕನಸುಗಳನ್ನೂ ಪೂರೈಸಬಲ್ಲ ಅಕ್ಷಯಪಾತ್ರೆಯೂ ಆಗಿತ್ತು. ಆ ದೇಶಗಳ ಸಪ್ಪೆ ಸಾರಿಗೆ ಕರಿಮೆಣಸಿನ ರುಚಿಯನ್ನು ಒದಗಿಸಲು, ಏಲಕ್ಕಿಯ ಘಮವನ್ನು ಸೂಸಲು, ಅತ್ಯುತ್ಕೃಷ್ಟ ಕುಸುರಿಕಲೆಯ ಕಂಬಳಿಯನ್ನು ಹೊದೆಯಲು, ಮನಸಿಗೆ ಮುದ ನೀಡಲು,ಬದುಕನ್ನು ಆನಂದದಾಯಕವಾಗಿಡಲು ಅವರೆಲ್ಲರಿಗೆ ಭಾರತವನ್ನು ಬಿಟ್ಟು ಬೇರೆ ದೇಶಗಳಿರಲಿಲ್ಲ. ಇಲ್ಲಿನ ಎಲ್ಲವೂ ಶ್ರೀಮಂತವೇ. ಆಟಕ್ಕುಂಟು ಲೆಕ್ಕಕಿಲ್ಲ ಎಂಬಂಥ ಯಾವ ಸರಕೂ ಇಲ್ಲಿರಲಿಲ್ಲ. ಇರುವುದೆಲ್ಲವೂ ಇಲ್ಲಿ ಸಮೃದ್ಧ, ಯತೇಚ್ಛ ಮತ್ತು ಸಂಪೂರ್ಣವಾದ ಸರಕುಗಳೇ. ಬಿಸಿಲಿನಿಂದ ಒಣಗಿಯೂ ಹಿಮದಿಂದ ಒದ್ದೆಒದ್ದೆಯಾಗಿಯೂ ಇರುವ ದೇಶಗಳಿಗೆ ಭಾರತದ ಸರಕುಗಳ ಆವಶ್ಯಕತೆಯಿತ್ತು. ಅದಾಗಲೇ ಇಲ್ಲಿನ ಶ್ರೀಮಂತಿಕೆಗಳು ಅವರಿವರ ಕಣ್ಣಿಗೆ ಬೀಳಲಾರಂಭಿಸಿತ್ತು. ಕೋಳಿಮೊಟ್ಟೆಯಿಂದ ಹಿಡಿದು ಮುತ್ತುರತ್ನಗಳವರೆಗೂ ಸಕಲ ಸರಕುಗಳು ಸಂತೆಯ ಕಟ್ಟೆಯಲ್ಲಿ ವ್ಯಾಪಾರವಾಗುತ್ತವೆ ಎಂಬುದೂ ಕುಂಬಳಕಾಯಿ ಎಂಬುದಿದೆಯೆಂದೂ ಅದನ್ನು ರುಚಿಕಟ್ಟಾಗಿ ತಿನ್ನಬಹುದೆಂದೂ ತಿಳಿಯುತಿದ್ದಂತೆಯೇ ಪಾಶ್ಚಾತ್ಯರಿಗೆ ಭಾರತಕ್ಕೊಂದು ಸಮುದ್ರ ಮಾರ್ಗವನ್ನು ಶೋಧಿಸದೆ ಇರಲಾಗಲಿಲ್ಲ. ಹಾಗೆ ವಾಸ್ಗೊಡಗಾಮ ಬಂದಿದ್ದೂ ಜಾಮೋರಿನ್ ಆಶ್ರಯ ಕೊಟ್ಟಿದ್ದೂ ಆತ ವ್ಯಾಪಾರವನ್ನು ಆರಂಭಿಸಿದ್ದೂ ಸಪ್ಪೆ ನಾಲಿಗೆಯ ಬಿಳಿಯರಿಗೆ ಮತ್ತಷ್ಟು ರುಚಿ ಹತ್ತಿದ್ದು ಎಲ್ಲವೂ ಇತಿಹಾಸ.
ಅನಂತರ ಶುರುವಾಗಿದ್ದು ಶುದ್ಧ ವ್ಯಾಪಾರ. ಭಾರತದ ಮಸ್ಲಿನ್ ಬಟ್ಟೆಗಳು, ಸಾಂಬಾರ ಪದಾರ್ಥಗಳು, ನೇಯ್ಗೆಯ ವಸ್ತುಗಳು ಇಲ್ಲಿನ ಸಾಂಪ್ರದಾಯಿಕ ತರಕಾರಿಗಳು, ಹಣ್ಣುಗಳು ಯುರೋಪಿಗೆ ರಪ್ತಾಗಲಾರಂಭಿಸಿತು. ಯುರೋಪಿನಿಂದ ಇಲ್ಲಿಗೆ ಗಹನವಾದುದು ಏನೇನು ಬಂದಿಳಿಯಿತೋ ಎಂಬುದು ಗೊತ್ತಾಗಲಿಲ್ಲ. ಆದರೆ ನಮ್ಮ ಸರಕುಗಳು ಶ್ರೀಮಂತ ಎಂಬ ಅರಿವು ಭಾರತೀಯರಿಗೆ ಕ್ರಮೇಣ ಆಗಿದ್ದಂತೂ ಸತ್ಯ. ಇಂಥ ಒಂದು ಭಾವನೆ ಮೂಡುವುದನ್ನೇ ಕಾಯುತಿದ್ದ ವ್ಯಾಪಾರಿಗಳು ಒಬ್ಬರಾದ ಮೇಲೊಬ್ಬರಂತೆ ಧಾಂಗುಡಿಯಿಟ್ಟರು.ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟೀಷರು ಬಂದರು. ಪರಸ್ಪರ ಕಿತ್ತಾಡಿಕೊಂಡರು. ಎಲ್ಲವೂ ವ್ಯಾಪಾರಕ್ಕಾಗಿ . ಇಲ್ಲಿಯ ಸರಕುಗಳಿಗಾಗಿ. ಕೊನೆಗೆ ಬ್ರಿಟಿಷರೊಬ್ಬರು ಉಳಿದುಕೊಂಡರು. ಇಲ್ಲಿಯ ಹತ್ತಿಯನ್ನು ಕೊಂಡೊಯ್ದರು. ಅಲ್ಲಿ ಬಟ್ಟೆ ಮಾಡಿದರು. ಪುನಃ ಇಲ್ಲಿಗೇ ತಂದು ಮಾರಾಟವನ್ನೂ ಮಾಡಿದರು. ಭಾರತದ ಸೆಣಬು, ಕಬ್ಬುಗಳಿಗೂ ಇದೇ ಗತಿಯಾಯಿತು. ಭಾರತದ ಹಳ್ಳಿಯ ರೈತನ ಬೆವರಿನಿಂದ ಮಾಂಚೆಸ್ಟರ್ -ಲಿವರ್ ಪೂಲ್‌ಗಳು ಬೆಳೆದವು. ನೋಡನೋಡುತ್ತಲೇ ಭಾರತ ಬರಿದಾಗುವ ಪಾತ್ರೆಯಾಯಿತು. ಇಂಗ್ಲೆಂಡ್ ಸೂರ್ಯ ಮುಳುಗದ ಸಾಮ್ರಾಜ್ಯವಾಯಿತು. ಹೀಗೆ ವ್ಯಾಪಾರ ಕೈಗೊಂಡ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪೆನಿ ಎಷ್ಟೊಂದು ಪ್ರಭಾವಿಯಾಗಿ ಬೆಳೆಯಿತೆಂದರೆ ಭಾರತದಲ್ಲಿ ರಾಷ್ಟ್ರೀಯತೆ ಎಂಬುದು ಮತ್ತೊಮ್ಮೆ ಜಾಗೃತವಾಗತೊಡಗಿತು. ಸ್ವದೇಶಿ ಮತ್ತು ಸ್ವಧರ್ಮಗಳಿಗೆ ದೇಶೀಯರು ಹೋರಾಟವನ್ನೇ ಮಾಡಬೇಕಾಯಿತು. ಇದರ ಪರಿಣಾಮವಾಗಿ ೧೮೫೭ರಲ್ಲಿ ಚಳವಳಿಗಳು ನಡೆದವು. ಅನಂತರ ಈಸ್ಟ್ ಇಂಡಿಯಾದ ಕೈಯಿಂದ ಬ್ರಿಟೀಷ್ ಪಾರ್ಲಿಮೆಂಟ್ ಅಧಿಕಾರ ತೆಗೆದುಕೊಂಡರೂ ವ್ಯಾಪಾರವೇನೂ ನಿಲ್ಲಲಿಲ್ಲ. ವ್ಯಾಪಾರದಿಂದ ವಶಹಾತು ಅಥವಾ ವಶಹಾತಿನ ಕಾರಣಕ್ಕೆ ವ್ಯಾಪಾರ ತಂತ್ರ ಭಾರತವನ್ನು ನಲುಗಿಸಿದ್ದೆಷ್ಟು? ಮಾಡಿದ ಗಾಯಗಳೆಷ್ಟು?
ಇದೇ ವ್ಯಾಪಾರದ ತೀವ್ರತೆಗೆ ಕಡಿವಾಣ ಹಾಕಲು ಮೋಹನದಾಸನೆಂಬ ಗಾಂಧಿ ವಕೀಲಿಕೆಯನ್ನು ಬಿಟ್ಟು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಬೇಕಾಯಿತು. ಸಾವರ್ಕರರಂತಹ ಹೋರಾಟಗಾರರು ಸಾಗರದಾಚೆಯ ದ್ವೀಪದಲ್ಲಿ ಕಠೋರ ಶಿಕ್ಷೆ ಅನುಭವಿಸಬೇಕಾಯಿತು. ಗುಡಿಯೊಳಗಣ ಗಣಪನೂ ಬೀದಿಗೆ ಬರಬೇಕಾಯಿತು. ಹಲವು ದಾರ್ಶನಿಕರು, ಆಧುನಿಕ ಋಷಿಮುನಿಗಳು ಜನ್ಮತಾಳಬೇಕಾಯಿತು. ವೀರ ಯೋಧರು ಪ್ರಾಣತೆರಬೇಕಾಯಿತು. ಅವರ ವ್ಯಾಪಾರಕ್ಕೆ ನಮ್ಮ ಮಕ್ಕಳು ಉಪವಾಸವಿರಬೇಕಾಯಿತು. ಅವರ ವ್ಯಾಪಾರಕ್ಕೆ ನಾವು ದುಡಿಯಬೇಕಾಯಿತು. ಅವರ ವ್ಯಾಪಾರಕ್ಕೆಂದೇ ನಾವು ಬೆಳೆಯಬೇಕಾಯಿತು.ಅವರು ಮಾರುವರೆಂದೇ ನಾವು ಧರಿಸುವಂತಾಯಿತು. ಅವರ ವ್ಯಾಪಾರಕ್ಕೆ ನಾವು ಸುಂಕ ತೆರಬೇಕಾಯಿತು. ಕೊನೆಗೆ ಅವರ ವ್ಯಾಪಾರಕ್ಕೆ ನಾವು ಆಳಿಸಿಕೊಳ್ಳಲೂ ಬೇಕಾಯಿತು. ನಮ್ಮತನವನ್ನು ನಾವು ಕಳೆದುಕೊಳ್ಳಲೂಬೇಕಾಯಿತು. ವ್ಯಾಪಾರದ ಹಿಂದೆ ಎಷ್ಟೊಂದು ಕಥೆಗಳಿವೆ ನಮ್ಮ ಹಿಂದೆ. ಆ ಕಥೆಗಳಲ್ಲಿ ಎಷ್ಟೊಂದು ವ್ಯಥೆಗಳಿವೆ!?
ಅಂಥ ವ್ಯಾಪಾರದ ಕಥೆಯನ್ನು ನಾವು ಮರೆಯಬಹುದೇ?
ಏನೆಲ್ಲಾ ನಡೆದುಹೋಯಿತು ಆ ವ್ಯಾಪಾರದಿಂದ. ಜಲಿಯನ್‌ವಾಲಾಬಾಗ್‌ನಂಥ ಹತ್ಯಾಕಾಂಡವನ್ನೂ ,ಅರ್ಥವಾಗದ ಆಕ್ಟ್‌ಗಳನ್ನೂ ಕ್ವಿಟ್ ಇಂಡಿಯಾ ಚಳವಳಿಗಳನ್ನೂ , ಹೇರಿಕೆ-ಹೆದರಿಕೆಗಳನ್ನೂ ಅಡ್ಡಾದಿಡ್ಡಿ ಆಳ್ವಿಕೆಗಳನ್ನೂ , ಕೊನೆಗೆ ಸ್ವಾತಂತ್ರ್ಯವೆಂಬ ಕಾಗದ ಪತ್ರಗಳ ಬಟವಾಟೆಯನ್ನೂ, ನೆಹರೂರಂಥವರು ಗಾಧಿಗೆ ಕೂರುವುದನ್ನೂ ದೇಶ ಮೂಕವಾಗಿ ನೋಡಬೇಕಾಯಿತು. ಎಲ್ಲವೂ ವಿದೇಶಿಯ ವ್ಯಾಪಾರದಿಂದ . ಅವರ ವ್ಯಾಪಾರದ ಸದ್ದುಗಳು ಇಂದಿಗೂ ಭಾರತದ ಕಿವಿಗಳಿಂದ ಸಂಪೂರ್ಣ ಹೊರಟುಹೋಗಿಲ್ಲ.
ಹಾಗಾಗಿ ವ್ಯಾಪಾರದ ಕಥೆ ಭಾರತ ಮರೆಯಭಾರದ ಕಥೆ.
ಆದರೆ, ಅವರ ಆಳುವ ಗುಣವೆನ್ನಿ ಅಥವಾ ನಮ್ಮ ಆಳಿಸಿಕೊಳ್ಳುವ ಗುಣವೆನ್ನಿ ನಮ್ಮ ಇತಿಹಾಸವನ್ನು ನಾವು ಮರೆತಿದ್ದೇವೆ. ಅವರ ಇತಿಹಾಸವನ್ನು ಅವರು ಮರೆತಿಲ್ಲ. ವ್ಯಾಪಾರದ ಗುಂಗು, ವ್ಯಾಪಾರದ ಮೂಲಕ ಭಾರತವನ್ನಾವರಿಸುವ ಆಸೆಯಿನ್ನೂ ಪಾಶ್ಚಾತ್ಯರಲ್ಲಿ ಹೊರಟುಹೋಗಿಲ್ಲ ಎಂಬುದರ ಲಕ್ಷಣಗಳು ಆಗಾಗ್ಗೆ ಕಂಡುಬರುತ್ತಿರುತ್ತವೆ. ಕಳೆದ ವಾರವಷ್ಟೇ ಕೇಂದ್ರ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಒಮ್ಮತ ವ್ಯಕ್ತಪಡಿಸಿ ಜಾರಿಗೆ ತರಲಾಗಿರುವ FDI (forign direct investment)ಅಂದರೆ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ. ೫೧ರಷ್ಟು ಇರಬಹುದು ಎಂಬ ನಿರ್ಣಯವನ್ನು ನೋಡಿದಾಗ ನಮ್ಮ ಮರೆತುಹೋದ ಇತಿಹಾಸವೂ ಅವರು ಮರೆಯಲಾರದ ಇತಿಹಾಸ ಯಾವುದೆಂಬುದು ಗೋಚರವಾಗುತ್ತದೆ. ವ್ಯಾಪಾರದಲ್ಲಿ ವಿದೇಶಿ ಕೈವಾಡ ಎಂದಾಗ ಆಡಳಿತ ಬೆಚ್ಚಿಬೀಳಬೇಕು. ಅಂಥಾ ಇತಿಹಾಸದ ಗಾಢಾ ಛಾಯೆ ಇರುವ ದೇಶದಲ್ಲಿ ಇದೇನಿದು FDI ? ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ? ಯಾವ ದೇಶವೇ ಆಗಲಿ ತನ್ನ ಚಿಲ್ಲರೆ ವ್ಯಾಪಾರ ಪರರ ಸೊತ್ತಾದರೆ ತಾನು ಸತ್ತಂತೆಯೇ. ಇದೀಗ ಭಾರತದಲ್ಲಿ ಆಗುತ್ತಿರುವುದು ಕೂಡ ಅದೇ. ಭಾರತದಲ್ಲಿ ಚಿಲ್ಲರೆ ವ್ಯಾಪಾರವೆಂದರೆ ನೆನಪಾಗುವುದು ವಾರಕ್ಕೊಮ್ಮೆ ನಡೆಯುವ ಸಂತೆಗಳು, ಕಿರಾಣಿ ಅಂಗಡಿಗಳು, ಅಂಗಡಿಯಾತ ಮತ್ತು ಗ್ರಾಹಕನ ನಡುವಿನ ಸಂಬಂಧಗಳು, ಸಾಲಗಳು, ಅಂಗಡಿಯಾತ ಮತ್ತು ಕೃಷಿಕನ ನಡುವಿನ ಅನ್ಯೋನ್ಯತೆಗಳು. ಇಲ್ಲಿ ಚಿಲ್ಲರೆ ವ್ಯಾಪಾರವೆಂದರೆ ಗಾಂಧಿ ಹೇಳಿದ ಗ್ರಾಮ ಸ್ವರಾಜ್ಯದಂಥವು. ಇದು ಅಪ್ಪಟ ಸ್ವಾವಲಂಭನೆಯ ಉದ್ದಿಮೆಗಳು. ಊರ ಮಧ್ಯದಲ್ಲೋ, ರಥಬೀದಿಯಲ್ಲೋ , ಪೇಟೆಯ ಮೂಲೆಯಲ್ಲೋ ,ಸೆಟ್ಟರೋ ಕಾಮತರೋ ಇಟ್ಟುಕೊಂಡ ಕಿರಾಣಿ ಅಂಗಡಿಗಳು ಅಥವಾ ರೈತರೇ ತಾವು ಬೆಳೆದ ಸರಕುಗಳನ್ನು ತಾವೇ ವ್ಯಾಪಾರ ಮಾಡುವ ವಿಧಾನಗಳು ಸಶಕ್ತ ಸಮಾಜದ ಮಾರ್ಗಗಳಾಗಿದ್ದವು. ಭಾರತದಲ್ಲಿ ಈ ಚಿಲ್ಲರೆ ವ್ಯಾಪಾರ ಉದ್ದಿಮೆಗಳು ಅತ್ಯಂತ ಪ್ರಭಾವಿ ಉದ್ಯಮಗಳೆಂದು ಹೆಸರರನ್ನೂ ಪಡೆದಿದ್ದವು. ಎರಡು ರೂ. ಕೊತ್ತಂಬರಿ ಸೊಪ್ಪಿಗೂ ೫೦ಗ್ರಾಮು ಮೆಂತ್ಯಕ್ಕೂ ಕೂಡ ಇಲ್ಲಿ ಸ್ಥಾನವುಂಟು. ಅದರ ಪರಿಣಾಮವಾಗಿ ಈ ಚಿಲ್ಲರೆ ವ್ಯಾಪಾರ ವಲಯ ದೇಶದ ಒಟ್ಟು ಜಿಡಿಪಿ ಯ ಶೇ. ೧೪ರಷ್ಟು ಪಾಲನ್ನು ಪಡೆದುಕೊಂಡಿದೆ. ಸ್ವಾವಲಂಭನೆಯ , ಮಹತ್ತ್ವಾಕಾಂಕ್ಷೆಯ ವ್ಯಕ್ತಿಗೆ ಚಿಲ್ಲರೆ ವ್ಯಾಪಾರ ಉದ್ಯಮ ಗೌರವಾನ್ವಿತ ಸ್ಥಾನವನ್ನು ಕೊಟ್ಟಿದೆ. ದೇಶದ ಒಟ್ಟು ಉದ್ಯೋಗಗಳಲ್ಲಿ ಚಿಲ್ಲರೆ ವ್ಯಾಪಾರ ಉದ್ಯಮ ಶೇ. ೭ರಷ್ಟು ಪಾಲನ್ನು ಹೊಂದಿದೆ. ಇವಿಷ್ಟು ಕಣ್ಣಿಗೆ ಕಾಣುವ ಸಂಗತಿಗಳಾದರೆ ಚಿಲ್ಲರೆ ವ್ಯಾಪಾರಕ್ಕೆ ಪೂರಕವಾಗಿರುವ ಸಂಗತಿಗಳೂ ಹಲವಿವೆ. ಅಂದರೆ ದೇಶದ ಬಹುಸಂಖ್ಯಾತ ಜನರು ಒಂದಲ್ಲಾ ಒಂದು ರೀತಿಯಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ಅವಲಂಭಿಸಲೇ ಬೇಕು. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಭಾರತೀಯ ಕಂಪೆನಿಗಳು ಬಹುಬ್ರಾಂಡ್‌ಗಳ ಚಿಲ್ಲರೆ ವ್ಯಾಪಾರಕ್ಕೆ ಇಳಿದರೂ ಕೂಡ ಭಾರತೀಯ ಚಿಲ್ಲರೆ ವ್ಯಾಪಾರ ಉದ್ದಿಮೆ ಸಂಪೂರ್ಣ ನಾಶವಾಗಿರಲಿಲ್ಲ. ಏಕೆಂದರೆ ಕಿರಾಣಿ ಅಂಗಡಿಗಳ ಮೇಲೆ ಜನರಿಗೊಂದು ನಂಬಿಕೆ ಇದ್ದೇ ಇತ್ತು. ಬಿಗ್ ಬಜಾರಿನ ಬೆಲ್ಲಕಿಂತ ಭಟ್ಟರಂಗಡಿಯ ಬೆಲ್ಲಕ್ಕೇ ಇಂದಿಗೂ ಬೇಡಿಕೆ ಹೆಚ್ಚು. ಹಾಗಾಗಿ ಇಂದಿಗೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕಿರಾಣಿ ಅಂಗಡಿಗಳ ವಹಿವಾಟು ಮಾಲ್‌ಗಳ ವ್ಯವಹಾರಕ್ಕಿಂತ ಸಾವಿರಪಟ್ಟು ಅಧಿಕವಿದೆ. ಈ ಅಂಕಿಅಂಶವನ್ನು ಕಂಡುಹಿಡಿದ ಸರಕಾರ ಇದೀಗ ಚಿಲ್ಲರೆ ವ್ಯಾಪಾರವನ್ನು ವಿದೇಶಿ ಕಂಪೆನಿಗಳ ಪಾದಕ್ಕಿಟ್ಟು ಧನ್ಯತೆಯನ್ನು ಅನುಭವಿಸುತ್ತಿದೆ. ಇನ್ನು ದೇಶದ ೫೩ ಮಹಾನಗರಗಳಲ್ಲಿ ವಾಲ್ ಮಾರ್ಟ್, ಕ್ಯಾರಿಫೋರ್ ಮತ್ತು ಟೆಸ್ಕೋಗಳಂತಹ ಕಂಪೆನಿಗಳು ಮಳಿಗೆಗಳನ್ನು ತೆರೆದು ತೆಂಗಿನ ಕಾಯಿ, ಉದ್ದು, ರವೆಗಳ ವ್ಯಾಪಾರವನ್ನು ಮಾಡಲಿವೆ. ಮಹಾನಗರದಲ್ಲಿ ಪ್ರಭಾವಿಗಳಾಗಿದ್ದ ಕಿರಾಣಿ ಅಂಗಡಿಗಳ ಭಾಗಿಲುಗಳು ಮುಚ್ಚಲಿವೆ. ಯಾವ ಕಾರಣಕ್ಕೂ ಮಣ್ಣಿನ ಮಕ್ಕಳ ಅಂಗಡಿಗಳು ಓಡಿಬಂದವರ ಅಂಗಡಿಗಳ ಸಂಖ್ಯೆಗಿಂತ ಹೆಚ್ಚಂತೂ ಇರಬಾರದೆಂಬುದು ಸರಕಾರದ ಆದೇಶವಾಗಲಿದೆ. ಹೀಗೆ ಶೇ.೫೧ ರಷ್ಟು ಬಂಡವಾಳ ಹೂಡಿಕೆಗೆ ಆಸ್ಪದ ನೀಡುವುದರಿಂದ ಮುಂದಿನ ಮೂರು ವರ್ಷದಲ್ಲಿ ೧೦ ಮಿಲಿಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಮೋಡಿಯ ಮಾತನ್ನೂ ಸರಕಾರ ಹೇಳುತ್ತಿವೆ. ಸ್ವಾವಲಂಭನೆಯ ಉದ್ಯೋಗವನ್ನು ಕಿತ್ತುಕೊಂಡ ಸರಕಾರ ಭಾರತೀಯ ಸೇಲ್ಸ್ ಮ್ಯಾನ್ ಗಳನ್ನು , ವಾಚ್‌ಮ್ಯಾನ್‌ಗಳನ್ನು ಹೆಚ್ಚಿಸಲಿವೆ.
ದೇಶದಲ್ಲಿ ಈಗಾಗಲೇ ಸಗಟು ವ್ಯಾಪಾರದಲ್ಲಿ ವಾಲ್‌ಮಾರ್ಟ್‌ನಂಥ ಕಂಪೆನಿಗಳು ಲಗ್ಗೆ ಇಟ್ಟಿವೆ. ಏಕ ಬ್ರಾಂಡ್ ಮಾರಾಟಮಳಿಗೆಗಳು ಭಾರತದ ಸಣ್ಣಸಣ್ಣ ಪಟ್ಟಣಗಳಲ್ಲೂ ಇವೆ. ಇವುಗಳಾಗಲೇ ಭಾರತೀಯರಿಗೆ ಬ್ರಾಂಡಿನ ಹುಚ್ಚನ್ನು ಹಿಡಿಸಿ ಕೊಳ್ಳುಭಾಕ ಸಂಸ್ಕೃತಿಯನ್ನು ಮಧ್ಯಮವರ್ಗಗಳಲ್ಲಿ ನೆಲೆವೂರಿಸಿವೆ. ಇನ್ನು ಚಿಲ್ಲರೆ ವ್ಯಾಪಾರದಲ್ಲಿ ಬಹುಬ್ರಾಂಡ್ ಮಾರಾಟದ ಸ್ವರೂಪವೇನಾಗಬಹುದೆಂಬುದನ್ನು ಊಹಿಸುವುದು ಅತ್ಯಂತ ಸುಲಭ. ರೀಬಾಕ್ ಬ್ರಾಂಡಿನ ಶೂಗಳಿಗೆ ಐದು ಸಾವಿರ ಕೊಡುವ ಮಾನಸಿಕತೆ ಬ್ರಾಂಡೆಡ್ ಕುಂಬಳ ಕಾಯಿಗೆ ನೂರಿನ್ನೂರು ಕೊಡದಿರುತ್ತದೆಯೇ? ಆ ಕುಂಬಳ ಕಾಯಿ ಪಕ್ಕದ ಊರಲ್ಲಿ ಬೆಳೆದರೂ ಮಾರುಕಟ್ಟೆಯ ಏಕಸ್ವಾಮ್ಯ ಅದನ್ನು ಬ್ರಾಂಡ್ ಆಗಿಯೇ ಮಾರುವ ಅನಿವಾರ್ಯತೆಯನ್ನು ಸೃಷ್ಟಿಗೊಳಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದರೆ ಸರಕಾರ ಮತ್ತು ಧೈತ್ಯ ಕಂಪೆನಿಗಳು ಈಗಾಗಲೇ ಉದ್ವೇಗಭರಿತರಾದಂತೆ ಮಾತಾಡುತಿದ್ದಾರೆ. ರೈತರು ಈಗ ಗಳಿಸುತ್ತಿರುವುದಕ್ಕಿಂತ ಶೇ. ೧೦-೩೦ರಷ್ಟು ಹೆಚ್ಚಿನ ಬೆಲೆಯನ್ನು ಪಡೆಯುತ್ತಾರೆ ಎಂಬುದು ಕೂಡ ಒಂದು ಹೇಳಿಕೆ. ಆದರೆ ರೈತರಿಗೂ ಹೆಚ್ಚಿನ ಬೆಲೆ ಕೊಟ್ಟು ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ನೀಡುತ್ತಾ ಇದ್ದಿದ್ದರೆ ವಾಲ್ ಮಾರ್ಟ್ ಜಗತ್ತಿನ ಅತ್ಯಂತ ದೊಡ್ಡ ಮಾರಾಟ ಸಂಸ್ಥೆಯಾಗುತಿತ್ತೇ ಎಂಬ ಸತ್ಯವನ್ನೂ ಪರಾಮರ್ಶಿಸಬೇಕಲ್ಲವೇ? ಭಾರತದ ರೈತರಿಗೆ ಹೆಚ್ಚಿನ ಬೆಲೆ ತೆರುವುದಕ್ಕಿಂತ ಕಡಿಮೆ ಬೆಲೆಗೆ ವಿದೇಶದಿಂದ ಸರಕುಗಳನ್ನು ತರುವ ಸಂದರ್ಭವನ್ನೇಕೆ ವಿದೇಶಿ ಕಂಪೆನಿಗಳು ಕಳೆದುಕೊಂಡಾರು? ಚೀನಾ ಸರಕುಗಳು ಭಾರತಕ್ಕೆ ಲಗ್ಗೆ ಇಟ್ಟ ದೃಷ್ಟಾಂತವೇ ನಮ್ಮೆದುರು ಇಲ್ಲವೇ? ಒಂದು ತೆಂಗಿನ ಕಾಯಿಗೂ ಹೈಪರ್ ಮಾರ್ಕೆಟ್‌ಗಳಿಗೋ ಸೂಪರ್ ಮಾರ್ಕೆಟ್‌ಗಳಿಗೋ ಹೋಗುವಂತೆ ಮಾಡಿಬಿಟ್ಟಿತಲ್ಲಾ ಸರಕಾರ.
ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ನಮ್ಮ ವ್ಯಾಪಾರಕ್ಕೆ ವಿದೇಶಿಯರ ಉಪದ್ರವ ನಿಂತಿಲ್ಲವೆಂದರೆ ೧೯೪೭ರಲ್ಲಿ ನಮಗೆ ಸಿಕ್ಕಿದ್ದೇನು? ಕ್ವಿಟ್ ಇಂಡಿಯಾ ಎಂದು ಓಡಿಸಿದ್ದು ಯಾರನ್ನು? ಈಸ್ಟ್ ಇಂಡಿಯಾ ಕರೆಯದೇ ಬಂತು. ವಾಲ್ ಮಾರ್ಟ್ ಕರೆಯೋಲೆಯೊಂದಿಗೇ ಬಂತು. ಇಷ್ಟೇ ವ್ಯತ್ಯಾಸ.

ಪ್ರತಿ ಫ್ರೆಂಡ್ ಬೇಕೇ ಬೇಕಾ?



ನೀವು ಪೋಷಕರೇ? ನಿಮಗೆ ವಯಸ್ಸಿಗೆ ಬಂದ ಅಥವಾ ವಯಸ್ಸಿಗೆ ಬರುತ್ತಿರುವ ಮಗಳಿದ್ದಾಳೆಯೇ? ನೀವು ಹೆತ್ತವರ ದಾಯಿತ್ವವನ್ನು ನಿಭಾಯಿಸುವ ತುಡಿತದಲ್ಲಿರುವಿರೇ? ಆಕೆಯ ಅಗತ್ಯದ ನೆಪದಲ್ಲಿ ಮೊಬೈಲ್ ಫೋನನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿರುವಿರೇನು? ಅಥವಾ ಕೊಡಲು ಯೋಚಿಸಿರುವಿರೇನು? ಹಾಗಾದರೆ ಈ ಘಟನೆಗಳತ್ತ ಒಮ್ಮೆ ಕಣ್ಣು ಹಾಯಿಸಿ.
ಆಕೆ ತುಮಕೂರಿನ ಸುಸಂಸ್ಕೃತ ಮನೆತನದ ಹೆಣ್ಣುಮಗಳು. ವೊದಲ ಪಿಯುಸಿ ವಿದ್ಯಾರ್ಥಿನಿ. ಹೆತ್ತವರು ೧೦ನೇ ತರಗತಿಯಲ್ಲಿ ಡಿಸ್ಟಿಂಗ್ಶನ್ ನಲ್ಲಿ ಪಾಸಾದಳೆಂದು ಮೊಬೈಲನ್ನು ಗಿಫ್ಟ್ ಕೊಡಿಸಿದರು. ಒಮ್ಮೆ ಎಲ್ಲೋ ರೀಚಾರ್ಜ್ ಮಾಡಿಸಿದ್ದಾಳೆ. ಅನಾಮಧೇಯ ಕರೆಗಳು ಬರಲಾರಂಭಿಸಿವೆ. ಮಗಳ ಜಗತ್ತು ವಿಶಾಲವಾಗಿದೆಯೆಂದು ಪೋಷಕರು ಒಳಗೊಳಗೇ ಹಿರಿಹಿರಿ ಹಿಗ್ಗಿದರು. ಆಕೆಗೆ ಕರೆ ಮಾಡುತ್ತಿದ್ದವ ತಿಪಟೂರಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುವ ಮುಸಲ್ಮಾನರ ಹುಡುಗ. ದಿನಕಳೆದಂತೆ ಮಗಳ ಫೋನ್ ಸಂಭಾಷಣೆ ಅತಿಯಾದವು. ಪೋಷಕರು ಹೆದರುವಷ್ಟು ಮಗಳು ಫೋನಿನಲ್ಲಿ ತಲ್ಲೀನಳಾದಾಗ ಕಡೆಗೂ ಎಚ್ಚೆತ್ತುಕೊಂಡರು. ಮೊಬೈಲ್ ಪರೀಕ್ಷಿಸಿದಾಗ ಒಂದೇ ನಂಬರಿಗೆ ಕರೆಗಳು ಬಂದಿರುವುದು , ಹೋಗಿರುವುದು ಪತ್ತೆಯಾಯಿತು. ಆ ನಂಬರಿನಾತ ಸಾಬರ ಹುಡುಗನೆಂಬುದೂ ಪತ್ತೆಯಾಯಿತು. ಪೋಷಕರು ಹಿಂದೂ ಸಂಘಟನೆಯ ಆಪ್ತರೊಬ್ಬರಲ್ಲಿ ಹೇಳಿಕೊಂಡರು . ಸಂಘಟನೆಯ ಪ್ರಮುಖರು ಹುಡುಗನ ಜಾತಕ ಜಾಲಾಡಿದಾಗ ಆತ ಕುಖ್ಯಾತ ಸಂಘಟನೆಯೊಂದರ ಕಾರ್ಯಕರ್ತನೆಂದೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದೂ ತಿಳಿದುಬಂತು. ಪ್ರಕರಣ ಪೊಲೀಸ್ ಠಾಣೆಗೆ ಹೋಯಿತು. ಅಷ್ಟಾಗುವಾಗಲೇ ಹುಡುಗನ ಹೆತ್ತವರು ವೊಬೈಲಿನಿಂದ ದಾಖಲಾದ ಎಸ್ಸೆಮ್ಮೆಸ್‌ಗಳ ಪ್ರತಿಯನ್ನು ತೆಗೆಸಿ ಹುಡುಗಿ ಮತ್ತು ಆಕೆಯ ಕುಟುಂಬವನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದರು. ಏಕೆಂದರೆ ಆಘಾತಕರವಾದ ಸಂದೇಶಗಳು ಅಲ್ಲಿದ್ದವು. ಆಗತಾನೇ ಕಾಲೇಜು ಏರಿದ್ದ ತಮ್ಮ ಮುದ್ದಿನ ಮಗಳು ಬಾತ್‌ರೂಮಿನಿಂದ ಕಳುಹಿಸಿದ ಮೆಸೇಜುಗಳು, ತಾನು ಬೆತ್ತಲಾಗುತ್ತಾ ಕಳುಹಿಸಿದ ಕಮೆಂಟ್ರಿಗಳು, ಆಡಿದ ಅಶ್ಲೀಲ ಕರೆಗಳ ಪಟ್ಟಿ ದೊಡ್ಡದಿತ್ತು. ಪೋಷಕರ ಪ್ರಕಾರ ಆಕೆ ತಮ್ಮ ಮುಗ್ದ ಮಗಳೇ. ಇಲ್ಲಿ ತಪ್ಪು ಯಾರದ್ದು? ಮೆಸೇಜ್ ಕಳುಹಿಸಿದ್ದ ಮಗಳದ್ದೇ? ಪೋಲಿ ಸಾಬರ ಹುಡುಗನದ್ದೇ? ಅಥವಾ ಮೊಬೈಲ್ ಕೊಡಿಸಿದ ಪೋಷಕರದ್ದೇ? ಪ್ರೀತಿಯಿಂದ ಕೊಡಿಸಿದ ಒಂದು ಗಿಫ್ಟ್ ಬದುಕಿಗೆ ಮಾರಕವಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಈ ಪ್ರಕರಣದ ಹಿಂದೆ ಸಾಗಿದ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಇಂಥದ್ದೇ ಹಲವು ಪ್ರಕರಣಗಳು ಎದುರಾಗುತ್ತಾ ಹೋದವು. ವಿಚಿತ್ರವೆಂದರೆ ಈ ಎಲ್ಲಾ ಪ್ರಕರಣಗಳಲ್ಲೂ ಪೋಷಕರ ಪ್ರೀತಿಯೇ ಎರವಾಗಿತ್ತು. ಮಗಳ ಓದು, ಅವಳ ಗ್ರೂಪ್ ಸ್ಟಡೀ, ಮತಭೇದವಿಲ್ಲದ ಗೆಳೆತನದ ತುಡಿತ, ದೂರದ ಊರಿಂದ ಬರುವ ಕರೆ ಅಥವಾ ಸಂದೇಶದ ಕುತೂಹಲ, ಯೌವನದ ಮದ- ಹುಚ್ಚುತನಕ್ಕೆ ಹಲವು ಅಪ್ರಾಪ್ತ ಹಿಂದೂ ಹುಡುಗಿಯರು ಬಲಿಯಾಗಿದ್ದರು. ಮಂಡ್ಯದ ಗೌಡರ ಮಗಳಿಗೂ ದೂರದ ಬೀದರಿನಲ್ಲಿ ಷಾಹಿ ಅರಸರ ಕುದುರೇಸವಾರನಂತಿರುವ ಗಡ್ಡಧಾರಿಗೂ ಸಂಬಂಭ ಬೆಳೆಸಿದ್ದು, ವೀರಾಜಪೇಟೆಯ ಕೊಡವತಿಗೂ ಮೈಸೂರಿನ ಮಟನ್ ಅಂಗಡಿಯ ಒರಟನಿಗೂ ನೆಂಟಸ್ಥನ ಬೆಳೆದಿದ್ದು, ಮಲೆನಾಡಿನ ಬ್ರಾಹ್ಮಣ ಹುಡುಗಿಗೂ ಶಿವಾಜಿನಗರದ ಸೆಂಟ್ ಹಾಕಿದ ಸೇಲ್ಸ್ ಮ್ಯಾನಿಗೂ,ಮಂಗಳೂರಿನ ತುಳುವರ ಹುಡುಗಿಗೂ ಸಕಲೇಶಪುರದಲ್ಲಿ ಗೂಡ್ಸ್ ವ್ಯಾಗನ್ನಿನಲ್ಲಿ ಕಲ್ಲಿದ್ದಲು ತುಂಬಿದಂತೆ ಕಾಣುವ ಹುಡುಗನಿಗೂ ಸಂಬಂಧ ಬೆಳೆಸಿಕೊಟ್ಟಿದ್ದು ಎಲ್ಲವೂ ಮೊಬೈಲ್ ಎಂಬ ಮಾಯೆ ಎಂಬುದು ಕಂಡುಬಂತು. ಪ್ರಕರಣಗಳಲ್ಲಿ ಅಶ್ಲೀಲತೆಗಳು ಸಾಕಷ್ಟು ಹರಿದಾಡಿದ್ದವು. ಇದು ಪ್ರೇಮವೇ? ಫೋನ್ ಮೂಲಕ ಕುದುರುವ ಸಂಬಂಧಗಳಲ್ಲಿ ಬಹುಬೇಗನೆ ನಗ್ನತೆ ನುಸುಳುತ್ತಿದ್ದುದು ಪ್ರಮುಖವಾಗಿ ಕಂಡುಬಂತು.
ಇದಕ್ಕೆಲ್ಲಾ ಕಾರಣಗಳನ್ನು ಹುಡುಕಿದರೆ ಕಾಣುವುದು ಅದೇ ಲವ್ ಜಿಹಾದ್ . ಪ್ರೇಮವನ್ನು ಜಿಹಾದಿನೊಂದಿಗೆ ಸಮೀಕರಿಸಿದರೆ ಅದರ ಸ್ವರೂಪ, ಬಂಡವಾಳ ನಗ್ನತೆ-ಅಶ್ಲೀಲತೆಗಳೇ. ಕೆಲವೊಂದು ಪ್ರಕರಣಗಳಿಂದ ಅದು ರಾಜ್ಯಾದ್ಯಂತ ಸುದ್ಧಿಯಾಗುತ್ತದೆ. ನಾಲ್ಕುದಿನ ಚರ್ಚೆಯೂ ಆಗುತ್ತದೆ. ಆದರೆ ಅದು ಸದಾ ಜಾಗೃತವಾಗಿರುವುದು ಅಷ್ಟೇ ಸತ್ಯ. ಮೇಲಿನ ಪ್ರಕರಣಗಳನ್ನು ಯಾವ ಮಾಧ್ಯಮಗಳೂ ಪ್ರಕಟಮಾಡುವುದಿಲ್ಲ. ಯಾವ ಬುದ್ಧಿಜೀವಿಯೂ ಭಾಷಣ ಮಾಡುವುದಿಲ್ಲ. ಅವ್ಯಾಹತವಾಗಿ ಸಾಗಿರುವ ಅದರ ತೀವ್ರತೆ ಎಷ್ಟಿದೆಯೆಂದರೆ ಕಳೆದ ಜುಲೈನಿಂದ ದಕ್ಷಿಣ ಕರ್ನಾಟಕದ ೧೯ ಜಿಲ್ಲೆಗಳಲ್ಲಿ ಇಂಥ ೩೯೦ ಪ್ರಕರಣಗಳಿ ದಾಖಲಾಗಿವೆ. ಕಳೆದ ಜನವರಿಯಿಂದ ಮೈಸೂರು ಜಿಲ್ಲೆಯೊಂದರಲ್ಲೇ ೧೭೦೦ರಷ್ಟು ಹಿಂದೂ ಹುಡುಗಿಯರು ಕಾಣೆಯಾಗಿದ್ದಾರೆಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಈ ಕಾಣೆಯಾದ ಹುಡುಗಿಯರು ಎಲ್ಲಿದ್ದಾರೆಂಬುದನ್ನು ಹುಡುಕಿದರೆ ಬುರ್ಖಾದ ಒಳಗಡೆ ಬೇಯುತ್ತಿರುವ, ಮಾಂಸದ ಅಡ್ಡೆಗಳಲ್ಲಿ ನರಳುತ್ತಿರುವ, ಮಹಾನಗರಗಳ ರೈಲ್ವೇ ಸ್ಟೇಷನ್‌ಗಳಲ್ಲಿ , ಬಸ್‌ಸ್ಟ್ಯಾಂಡ್‌ಗಳಲ್ಲಿ ತುಟಿಗೆ ಗ್ರಾಮುಗಟ್ಟಲೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಗಿರಾಕಿಗಳಿಗಾಗಿ ಕಾಯುತ್ತಿರುವ ಉದಾಹರಣೆಗಳು ತೆರೆದುಕೊಳ್ಳುತ್ತವೆ. ಅವರಲ್ಲಿ ಬಹುತೇಕರು ಸಾಬರ ಬಲೆಯಲ್ಲಿ ಸಿಕ್ಕಿ ಒದ್ದಾಡಿದವರೇ ಎನ್ನುವುದು ಲವ್‌ಜಿಹಾದ್ ಇನ್ನೂ ಜೀವಂತ ಎಂಬುದಕ್ಕೆ ಸಾಕ್ಷಿಗಳು. ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಲು ಇಂದು ಯೋಜಿತ ಕಾರ್ಯತಂತ್ರಗಳನ್ನು ನವನವೀನವಾಗಿ ಆಚರಣೆಗೆ ತರಲಾಗುತ್ತಿದೆ. ದೇವಬಂದ್‌ನಲ್ಲಿ ಹುಟ್ಟಿದ ಲವ್‌ಜಿಹಾದಿನ ಕೂಸು ಇಂದು ಪ್ರತಿಯೊಂದು ಮನೆಯ ಒಳನುಗ್ಗಲು ಹಾತೊರೆಯುತ್ತಿದೆ. ವಿಪರ್ಯಾಸವೆಂದರೆ ಹಿಂದೂ ಪೋಷಕರ ಮಧ್ಯಮ ವರ್ಗದ ನೈತಿಕತೆಯೋ ಅಥವಾ ಪ್ರತಿಷ್ಠೆಗಳೋ ಅದಕ್ಕೆ ಇಂಬು ಕೊಡುತ್ತಿವೆ. ಅತಿಯಾದ ವಿಶ್ವ್ವಾಸ ಮತ್ತು ಹಿಂದೆ ಮುಂದೆ ಯೋಚಿಸದೆ ಅಗತ್ಯಗಳ ನೆಪದಲ್ಲಿ ಮೋಜಿಗೆ ಪ್ರೇರೇಪಿಸುವ ಧಾವಂತಗಳೆಡೆಯಲ್ಲಿ ಕುಟುಂಬಗಳೇ ಕಣ್ಣೀರಿನಿಂದ ಕೈತೊಳೆಯುವ ಸಂದರ್ಭಗಳು ದಿನ ನಿತ್ಯ ವರದಿಯಾಗುತ್ತಿವೆ. ಮಂಡ್ಯ ಪಟ್ಟಣದಲ್ಲೊಂದು ಸ್ಮಾರ್ಟ್ ಸ್ಪೀಕಿಂಗ್ ಕೋರ್ಸ್ ಎಂಬ ಹೆಸರಿನ ಸಂಸ್ಥೆ . ಮಧ್ಯಮ ವರ್ಗ ಮತ್ತು ಶ್ರೀಮಂತರ ಮಕ್ಕಳೇ ಬರುವ ಆ ಸಂಸ್ಥೆಯಲ್ಲಿ ದಿನನಿತ್ಯ ಗ್ರೂಪ್ ಸ್ಟಡೀ ನೆಪದಲ್ಲಿ ಹಿಂದೂ ಹುಡುಗಿಯರು ಮತ್ತು ಮುಸಲ್ಮಾನ ಹುಡುಗರನ್ನು ಗ್ರೂಪ್‌ಗಳನ್ನಾಗಿ ಮಾಡಲಾಗುತ್ತದೆ. ಆದರೆ ಯಾವ ಕಾರಣಕ್ಕೂ ಮುಸಲ್ಮಾನ ಹುಡುಗಿಯರನ್ನು ಹಿಂದೂ ಹುಡುಗರ ಗ್ರೂಪಿಗೆ ಸೇರಿಸಲಾಗುತ್ತಿರಲಿಲ್ಲ. ದಿನ ಕಳೆದಂತೆ ಗ್ರೂಪ್ ಸ್ಟಡಿಗಳು ಅತಿರೇಕಕ್ಕೆ ಹೋಗತೊಡಗಿತು. ಹಿಂದೂ ಹುಡುಗಿಯರು ಒಬ್ಬೊಬ್ಬರಾಗಿ ಮತಾಂಧರ ಮುಷ್ಟಿಯೊಳಗೆ ಸಿಕ್ಕಿಹಾಕಿಕೊಳ್ಳಲಾರಂಭಿಸಿದರು. ಹಿಂದೂ ಸಂಘಟನೆಯ ಕಾರ್ಯಾಚರಣೆಯ ಫಲವಾಗಿ ಅವರೆಲ್ಲರೂ ಉಳಿದುಕೊಂಡರು. ಇಲ್ಲೂ ಪೋಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ವ್ಯಾಸಂಗದ ನೆಪದಲ್ಲಿ ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಪೋಷಕ ಸಮುದಾಯದ ಬಹುದೊಡ್ಡ ಕೊರತೆ . ಆ ಕೊರತೆಗೆ ಭಾರೀ ಬೆಲೆಯನ್ನೇ ತೆರಬೇಕಾಗಬಹುದು ಎಂಬುದು ಇನ್ನೂ ಅರಿವಿಗೆ ಬಂದಂತಿಲ್ಲ. ಪ್ರತೀ ಫ್ರೆಂಡ್ ಬೇಕೆ ಬೇಕಣೋ ಎನ್ನುವುದು ಜಾಹೀರಾತಿನ ವಾಕ್ಯವಿರಬಹುದು. ಕೆಲವೊಮ್ಮೆ ಬದುಕಿನಲ್ಲೂ ಅದು ನಿಜವಿರಬಹುದು. ಆದರೆ ಜಿಹಾದಿಗಳ ವಿಷಯದಲ್ಲಿ ಅದು ಅಪಾಯಕಾರಿ . ಅವರ ಸ್ನೇಹದಲ್ಲಿ ನಿರ್ಮಲತೆಯ ಕುರುಹುಗಳಿರುವುದಿಲ್ಲ. ನೋಟದಲ್ಲಿ ಹಸಿವನ್ನು ಬಿಟ್ಟು ಬೇರೇನನ್ನೂ ಕಾಣುವುದಿಲ್ಲ. ತೀರಾ ಅಸಹಜವಾದ ಹಾವಭಾವಗಳಲ್ಲಿ ಸ್ನೇಹ ಹುಟ್ಟುವುದಾದರೂ ಹೇಗೆ? ಅಂಥ ಪ್ರೀತಿ ಕೊನೆ ಮುಟ್ಟುವುದಾದರೂ ಹೇಗೆ? ಇದುವರೆಗೆ ಮುಸಲ್ಮಾನ ಹುಡುಗರೊಟ್ಟಿಗೆ ಓಡಿಹೋದ ಹಿಂದೂ ಹುಡುಗಿಯರ ಬದುಕನ್ನೇ ನೋಡಿದರೂ ನಮ್ಮ ಕಣ್ಣ ಮುಂದೆ ಸುಖವಾಗಿ ದಾಂಪತ್ಯವನ್ನು ಅನುಭವಿಸಿರುವ ಒಂದೇ ಒಂದೇ ಜೋಡಿಯನ್ನೂ ಕಾಣಲಾರೆವು. ಮೂರನೇ ಮದುವೆಯಾಗಿ ಗಲ್ಲಿಯಲ್ಲಿ ಮನೆ ಮಾಡಿ ಕೀಪ್‌ಗಳಂತೆ ಇಟ್ಟುಕೊಂಡ ಹಿಂದೂ ಹುಡುಗಿಯರು, ಬ್ರಾಹ್ಮಣ ಹುಡುಗಿಯನ್ನು ಮುಸ್ಲಿಂ ಮಾಡಿ ಕೋಳಿ ಅಂಗಡಿ ಯಲ್ಲಿ ಕೂರಿಸಿದವರು, ಲಿಂಗಾಯತ ಹುಡುಗಿಗೆ ಗೋಣಿ ಚೀಲ ಹೊಲಿಯುವ ಗೂಡು ಕೊಟ್ಟವರು, ಶೆಟ್ಟರ ಹುಡುಗಿಗೆ ಪಂಕ್ಚರ್ ಅಂಗಡಿ ಇಟ್ಟುಕೊಟ್ಟ ದಾಂಪತ್ಯಗಳೇ ಎದ್ದು ಕಾಣುತ್ತವೆ. ವಿಶೇಷವೆಂದರೆ ಓಡಿಹೋಗುವ ಮೊದಲು ಇವರೆಲ್ಲರೂ " ಪ್ರತಿ ಫ್ರೆಂಡ್ ಬೇಕೆ ಬೇಕಣೋ" ಎಂದು ಲಲ್ಲೆಗರೆದವರೇ. ಆ ಹೊತ್ತಲ್ಲಿ ಪೋಷಕರಿಷ್ಟು ಗಮನ ಹರಿಸಿದ್ದರೆ , ನಿರ್ಲಕ್ಷ ತಾಳದೇ ಇದ್ದಿದ್ದರೆ ಮಕ್ಕಳ ಬದುಕು ತಮ್ಮ ಕಣ್ಣ ಮುಂದೆಯೇ ನರಕವಾಗುವುದನ್ನಾದರೂ ತಪ್ಪಿಸಬಹುದಿತ್ತು.
ಇನ್ನು ಶ್ರೀಮಂತ ಮನೆಗಳ ಮಕ್ಕಳ ಕಥೆಗಳೇ ಬೇರೆ. ಮಕ್ಕಳ ದಿನಚರಿಯನ್ನು ಪ್ರಶ್ನಿಸುವುದು ಅಲ್ಲಿ ಶಿಷ್ಟಾಚಾರವಲ್ಲ ಎಂಬ ಭಾವನೆ. ಅನಾಚಾರ ಬೆಳೆಯಲು ಇನ್ನು ತಡವೆಲ್ಲಿದೆ?
ಹಾಸನ ಮೆಡಿಕಲ್ ಕಾಲೇಜು ಸುತ್ತ ಒಮ್ಮೆ ಸುತ್ತಾಡಿ ಬರಬೇಕು. ಡಾಕ್ಟರ್ ಹುಡುಗಿಯರ ಹಿಂದೆ ಲೋಕಲ್ ಮುಸಲ್ಮಾನ ಹುಡುಗರ ಪಟಾಲಮ್ಮು ಸುತ್ತುತ್ತಿರುತ್ತವೆ. ಕೆಲವು ತಿಂಗಳುಗಳಿಂದೀಚೆಗೆ ಇಲ್ಲಿ ೧೮ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ ಬಹುತೇಕ ಹುಡುಗಿಯರು ಉತ್ತರ ಭಾರತದವರು. ಅವರೆಲ್ಲರ ಪೋಷಕರ ಪ್ರಕಾರ ತಮ್ಮ ಮಗಳು ದೂರದೂರಿನಲ್ಲಿ ವ್ಯಾಸಂಗದಲ್ಲಿ ಮುಳುಗಿರುವ ಡಾಕ್ಟರುಗಳು. ಲವ್ ಜಿಹಾದಿನಲ್ಲಿ ಎರಡೇ ಎರಡು ಪರಿಸ್ಥಿತಿಗಳು ಎದುರಾಗುತ್ತವೆ.ಒಂದು ಅಪ್ಪಟ ಮತಾಂಧತೆ, ಇನ್ನೊಂದು ಅದಕ್ಕಿರುವ ದಾರಿಗಳು ಮತ್ತು ತಂತ್ರಗಳು. ಹರೆಯದ ದೌರ್ಬಲ್ಯಗಳು, ಬಿಸಿರಕ್ತದ ಭಾವನೆಗಳಿಗೆ ಮನಸ್ಸು ಕುರುಡಾಗುವುದು ಲವ್ ಜಿಹಾದಿನ ದಾಳಗಳಾದರೂ ಹರೆಯವೂ ಇಲ್ಲದ ಬಿಸಿರಕ್ತದ ಹಂಗೂ ಇಲ್ಲದ ಪೋಷಕರಿಗೇನಾಗಿದೆ? ಮಗಳ ಫೋನ್ ಏಕೆ ಸದಾ ಕಾರ್ಯನಿರತವಾಗಿರುತ್ತದೆ? ಗ್ರೂಪ್‌ಸ್ಟಡಿಗಳ ಆವಶ್ಯಕತೆಯೇನು? ಶೈಕ್ಷಣಿಕ ಪ್ರವಾಸಗಳಲ್ಲಿ ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದರ ಬಗ್ಗೆ ತಿಳಿಹೇಳದೆ ಇರುವುದೂ ಒಂದೇ ಅಳತೆ ಸರಿ ಇಲ್ಲದ ರೆಡಿಮೆಡ್ ಬಟ್ಟೆಗಳನ್ನು ಕೊಂಡುತರುವುದೂ ಒಂದೇ ಅಲ್ಲವೇ? ಹೀಗೆ ಮಗಳಿಗೆ "ಸಂಪೂರ್ಣ ಸ್ವಾತಂತ್ರ್ಯ"ವನ್ನು ಕೊಟ್ಟ ಮೈಸೂರಿನ ಕುಟುಂಬವೊಂದು ಬಜರಂಗದಳದ ಪ್ರಮುಖರೊಟ್ಟಿಗೆ ಗೋಳಾಡುತ್ತಿದ್ದರು. ಉತ್ತಮ ಡಿಗ್ರಿಪಡೆದು ಇನ್ಫೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಮಗಳು ಕಾರ್ಪೋರೇಟ್ ವಲಯದ ಶೋಕಿಗೆ ಮರುಳಾಗಿದ್ದು. ಮುಸಲ್ಮಾನ ಹುಡುಗನೊಟ್ಟಿಗೆ ಮದುವೆಯ ಪ್ರಸ್ತಾಪವನ್ನಿಟ್ಟಿದ್ದು. ವಿಧಿ ಇಲ್ಲದೆ ಪೋಷಕರು ಮದುವೆಗೆ ಒಪ್ಪಿದ್ದು, ಮದುವೆ ಹತ್ತಿರ ಬಂದಾಗ ಹುಡುಗಿಗೆ ಅಪಘಾತವಾಗಿ ಕಾಲು ಕಳೆದುಕೊಂಡಿದ್ದು, ಅದುವರೆಗೆ ಅಮರಾ ಮಧುರಾ ಪ್ರೇಮ ಎಂದು ಆಲಾಪಿಸಿದ್ದ ಹುಡುಗ ಊರುಬಿಟ್ಟಿದ್ದು, ಆ ಕಾರಣದಿಂದ ತನ್ನ ಮಗಳಿಗೆ ಇಂದಿಗೂ ಗಂಡು ಸಿಗದೆ ಪರದಾಡುವಂತಾದ ಕಥೆಯನ್ನು ಅವರು ಹೇಳುತ್ತಿದ್ದರು. ವಾಸ್ತವವಾಗಿ ಇದರಲ್ಲಿ ತಪ್ಪು ಯಾರದ್ದು?
ಇತ್ತೀಚೆಗೆ ಸುಪ್ರೀಂ ಕೋರ್ಟು ಹೆಣ್ಣಿಗೆ ಆಸ್ತಿಯ ಪಾಲಾಗಬೇಕು ಎಂಬ ತೀರ್ಪನ್ನಿತ್ತಿತು. ಈಗ ಲವ್ ಜಿಹಾದಿಗಳ ಕಣ್ಣು ಹೆಣ್ಣಿನೊಟ್ಟಿಗೆ ಅವಳ ಆಸ್ತಿಯ ಮೇಲೂ ಬಿದ್ದಿದೆ ಎನ್ನುತ್ತಾರೆ. ಸಂಘಟನೆಯ ಕಾರ್ಯಕರ್ತರು. ಹೆಣ್ಣು ಹೆತ್ತವರಿನ್ನು ಮಗಳನ್ನೂ ಕೊಟ್ಟು ಆಸ್ತಿಯನ್ನೂ ಕಳೆದುಕೊಳ್ಳಲಿದ್ದಾರೆ ಎನ್ನುವುದು ಮತ್ತೊಂದು ಆಘಾತಕರ ಸಂಗತಿ. ಇನ್ನು ಲಾಕರಿನಲ್ಲಿಟ್ಟ ಒಡವೆಗಳು, ಮಗನಿಗೆಂದು ಇಟ್ಟಿದ್ದ ತೋಟಗಳು, ರಿಲಯನ್ಸಿನ ಶೇರು, ಸಾಲಮಾಡಿ ತೆಗೆದುಕೊಂಡ ಸೈಟುಗಳು ಮುಸಲ್ಮಾನ ಅಳಿಯನ ಪಾಲಾಗಬಹುದು. ಮಗಳ ವೊಬೈಲ್ ಹರಟೆಯನ್ನು ಗಮನಿಸದ ತಪ್ಪಿಗೆ ಮನೆತನದ ಮಾನವನ್ನೂ ಆಸ್ತಿಯನ್ನೂ ಕಳೆದುಕೊಂಡು ಕುಟುಂಬ ಬೀದಿಗೆ ಬರಬಹುದು.
ಈಗ ಹೇಳಿ ಪ್ರತಿ ಫ್ರೆಂಡ್ ಬೇಕೇ ಬೇಕಾ?

ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿದೆಯೇ?


ಕ್ಕಳ ಶಿಕ್ಷಣದ ಬಗ್ಗೆ ಓರ್ವ ಶಿಕ್ಷಣ ಮಂತ್ರಿ ಆಡುವ ಮಾತುಗಳಿಗಿಂತ ಓರ್ವ ತಂದೆಯಾಡುವ ಮಾತುಗಳಲ್ಲೇ ಹೆಚ್ಚು ತೂಕವಿರುತ್ತದೆ. ಅಧಿಕೃತತೆಯಿರುತ್ತದೆ. ಹಾಗಾಗಿ ಕಾಗೇರಿಯವರು ಕನ್ನಡ ಮಾಧ್ಯಮ ಮತ್ತು ಸರಕಾರಿ ಶಾಲೆ ಎಂದಾಗಲೆಲ್ಲಾ ಏನೋ ಹೇಳುತ್ತಿದ್ದಾರೆ ಎಂದು ಅನಿಸುವುದಿಲ್ಲ. ಶಿಕ್ಷಣದಲ್ಲಿ ನಿಜವಾಗಿಯೂ ಏನೋ ಸಮಸ್ಯೆಯಿದೆ ಎಂದೇ ಅನಿಸುತ್ತದೆ. ಈ ಅನಿಸಿಕೆ ಗಾಂಧಿ ಪ್ರತಿಮೆಯಡಿಯಲ್ಲಿ ಕುಳಿತು ಬೊಬ್ಬಿರಿಯುವ ಜನರಿಂದಲೂ ಅನಿಸುವುದಿಲ್ಲ. ಪಂಪ-ಕುಮಾರವ್ಯಾಸರನ್ನು ಬ್ರೆಕ್ಟ್-ಕೀಟ್ಸ್‌ಗಳವರೆಗೆ ಕೊಂಡೊಯ್ದು ಅರ್ಥವಾಗದ ಭಾಷೆಗಳಲ್ಲಿ ವಿಮರ್ಶೆ ಮಾಡುವ ತಜ್ಞರ ಭಾಷಣಗಳಿಂದಲೂ ಅನಿಸುವುದಿಲ್ಲ. ಟಿವಿ ಚ್ಯಾನಲ್‌ಗಳ ಪ್ಯಾನಲ್ ಚರ್ಚೆಗಳಿಂದಲೂ ಅನಿಸುವುದಿಲ್ಲ. ಆದರೆ ಕಾಗೇರಿಯವರ ಮಾತುಗಳಿಂದ ಅನಿಸುತ್ತದೆ. ಏಕೆಂದರೆ ಶಿಕ್ಷಣ ಸಚಿವ ಕಾಗೇರಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಅಪ್ಪನೂ ಆಗಿರುವುದರಿಂದ ಅವರು ಶಿಕ್ಷಣದ ಬಗ್ಗೆ ಮಾತಾಡುವಾಗಲೆಲ್ಲಾ ರಾಜ್ಯ ಅದನ್ನು ಆಲಿಸುತ್ತದೆ. ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಹೇಳಿದಾಗ ಕೂಡ ರಾಜ್ಯ ಅದನ್ನು ವಿಶೇಷವಾಗಿ ಆಲಿಸಿತ್ತು. ಅವರ ಮಾತುಗಳಿಗೆ ಅಧಿಕೃತತೆಯೊಟ್ಟಿಗೆ ಪಾಲಿಸಿಯೇಬಿಡುವ ಗುಣಲಕ್ಷಣಗಳಿರುವುದರಿಂದ ಅದಕ್ಕೆ ವಿರೋಧಗಳು ವ್ಯಕ್ತವಾದವು. ಆಲಿಸಿದವರು ತಮ್ಮ ತಮ್ಮ ಶಕ್ತ್ಯಾನುಸಾರ ಚರ್ಚೆ ನಡೆಸಿದರು. ವಿವಾದಗಳಾದವು. ಗಲಾಟೆಗಳಾದವು. ಸರಕಾರ ಕೊನೆಗೆ ಮುಚ್ಚಲಾರೆವು ಎಂದಿತು.
ಸರಕಾರಿ ಶಾಲೆಗಳಿಗೆ ಇಂದು ಮಕ್ಕಳ ಕೊರತೆ ಇರುವುದು ಕೇವಲ ಒಂದೆರಡು ಜಿಲ್ಲೆಗಳ ಸಂಗತಿಗಳಲ್ಲ. ಖಾಸಗಿಯವರ ಅಬ್ಬರ, ಇಲಾಖೆಯವರ ಮುಠಾಳತನ, ಜನರ ಮರಳುತನ ಮೊದಲಾದ ಕಾರಣಗಳಿಂದ ಇಂದು ಬಹುತೇಕ ಸರಕಾರಿ ಶಾಲೆಗಳಲ್ಲಿ ಹತ್ತು ಮಕ್ಕಳೂ ಇಲ್ಲ. ಮುಂದಿನ ವರ್ಷದಿಂದ ಆರು-ಏಳು ಮಕ್ಕಳಿರುವ ಶಾಲೆಗಳೂ ಬಹಳಷ್ಟಿವೆ. ಅವುಗಳಲ್ಲಿ ಸಚಿವರು ಹೇಳಿರುವ, ಮುಚ್ಚಲು ಯೋಗ್ಯವಾಗ ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಷ್ಟೇ ಅಲ್ಲದೆ ಹದಿಮೂರು, ಹದಿನಾಲ್ಕು ಮಕ್ಕಳ ಶಾಲೆಗಳೇ ಹೆಚ್ಚಿವೆ. ಆದರೆ ಸಚಿವರು ಅವುಗಳ ಬಗ್ಗೆ ಹೇಳಲಿಲ್ಲ. ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಯೊಟ್ಟಿಗೆ ವಿಲೀನಗೊಳಿಸಿ, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ "ಒಗ್ಗಟ್ಟಿನಲ್ಲಿ ಬಲವಿದೆ" ಎಂದು ನೀತಿ ಪಾಠ ಮಾಡುವುದು ಕಾಗೇರಿಯವರ ಮಾತಿನ ಮತಿತಾರ್ಥವಾಗಿರಬಹುದು. ಹೊರನೋಟಕ್ಕೆ ಮಕ್ಕಳೇ ಇಲ್ಲದಿದ್ದರೆ ಇಂಥ ಶಾಲೆಗಳನ್ನೇನು ಮ್ಯೂಸಿಯಂ ಮಾಡುವುದೇ ಎಂಬ ಪ್ರಶ್ನೆಯೂ ಬಾರದಿರದು. ಆದರೆ ಇದು ಸರಕಾರಿ ಮಾತುಗಳು. ಪ್ರತಿ ಮಾತಿನ ಹಿಂದೆ ಸಾವಿರಾರು ಕಥೆಗಳಿರುತ್ತದೆ. ಇಂದಿನ ಪರಿಸ್ಥಿತಿ ಹಾಗೆಯೇ ಇರಬಹುದು. ಆದರೆ ಅದರ ಹಿನ್ನಲೆಯೂ ಯೋಚಿಸತಕ್ಕ ಸಂಗತಿಯೇ. ಆದರೆ ಕನ್ನಡದ ಕಟ್ಟಾಳುಗಳೆಂಬುವವರು ಅದರ ಜಾಡು ಹಿಡಿದು ಹೋಗಲಾರರು. ಅಲ್ಲಿ ವಿಲೀನಕ್ಕಿಂತ ಮುಚ್ಚುವಿಕೆಗೇ ಪ್ರಾಶಸ್ತ್ಯ. ಪ್ರಸ್ತತ ಚಳವಳಿ -ಪ್ರತಿಭಟನೆಗಳು ಆ ನಿಟ್ಟಿನಲ್ಲೇ ನಡೆದವು.
ಸರಕಾರಿ ಶಾಲೆಗಳು ಹೀಗೇಕಾಯಿತು ಎಂದರೆ ಕಾಣುವುದು ಚಿತ್ರ ವಿಚಿತ್ರವಾದ ಸಂಗತಿಗಳು. ಸದ್ಯದ ಶಿಕ್ಷಣ ಕಾನೂನಿನ ಪ್ರಕಾರ ಪ್ರತಿ ಒಂದು ಕಿ.ಮೀ ಗೊಂದರಂತೆ ಕಿರಿಯ ಪ್ರಾಥಮಿಕ ಶಾಲೆಗಳೂ ಪ್ರತೀ ೨ ಕಿ.ಮೀ ಗೊಂದರಂತೆ ಹಿರಿಯ ಪ್ರಾಥಮಿಕ ಶಾಲೆಗಳೂ ಇರಬೇಕೆಂಬ ನಿಯಮವಿದೆ. ಅಂದರೆ ಮಗುವಿಗೆ ಮನೆಯ ಕೂಗಳತೆಯ ದೂರದಲ್ಲೇ ಶಾಲೆ ಇರಬೇಕು, ಮಗುವಿಗೆ ತ್ರಾಸವಾಗದೆ ಶಾಲೆಗೆ ಬರಬೇಕು, ಅದಕ್ಕೆ ತೊಂದರೆಯಾಗಬಾರದೆಂದು ಯಾರೋ ಪುಣ್ಯಾತ್ಮರು ರೂಪಿಸಿದ ಕಾನೂನದು. ಅಂದರೆ ಪ್ರತಿ ೨೦೦ ಜನಸಂಖ್ಯೆಗೊಂದು ಶಾಲೆ ಇರಲೇ ಬೇಕು. ಈ ಕಾನೂನಿನನ್ವಯ ರಾಜ್ಯಾದ್ಯಂತ ಸರಕಾರಿ ಶಾಲೆಗಳು ಆರಂಭಗೊಂಡವು. ರಾಜಕಾರಣಿಗಳು ಊರಿಗೆ ಬಂದವರೇ ಭಾಷಣದ ಮಧ್ಯದಲ್ಲೇ ಏನೋ ನೆನಪಾದವರಂತೆ ಶಾಲೆಗಳನ್ನ್ನು ಮಂಜೂರು ಮಾಡಿಯೇಬಿಟ್ಟರು. ಅದಾಗಲೇ ಆ ಊರಿನಲ್ಲಿ ಶಾಲೆಗಳಿದ್ದರೂ ಕಿ.ಮೀ ಅಳತೆಯಲ್ಲಿ ಕಟ್ಟಡಗಳು ಎದ್ದುನಿಂತವು. ಪಕ್ಷದ ಕಾರ್ಯಕರ್ತರಿಗೆ ಕಾಂಟ್ರಾಕ್ಟುಗಳು ಪ್ರಧಾನವಾದವು. ಶಾಲಾಕಟ್ಟಡವನ್ನು ಅವರಿಂದಲೇ ಉದ್ಘಾಟನೆಯನ್ನೂ ಮಾಡಿಸಲಾಗಿ ಮಗ್ಗಿ ಪುಸ್ತಗಳೂ ಬಂಡಲಾಗಿ ಬಂದು ಬಿದ್ದವು. ಇಂದು ಮುಚ್ಚಲು ಅರ್ಹವಾದ ಹತ್ತು ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳೆಲ್ಲವೂ ಹೀಗೆ ಭಾಷಣದಿಂದ ನಿರ್ಮಾಣವಾದ ಸರಕಾರಿ ಶಾಲೆಗಳು ಎಂಬುದು ವಿಪರ್ಯಾಸ.
ಇದು ದ.ಕನ್ನಡದಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ನಡೆದ ಒಂದು ಘಟನೆ.
ಬಂಟವಾಳ ತಾಲೂಕಿನ ದೇವಸ್ಯಮೂಡೂರು ಎಂಬ ಗ್ರಾಮದಲ್ಲಿ ಸರಕಾರಿ ಶಾಲೆಯೊಂದು ಹಿಂದಿನಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಮಕ್ಕಳೂ ಯಥೇಚ್ಛವಾಗಿದ್ದು ಸುತ್ತು ಮುತ್ತಲ ಊರುಗಳಿಂದಲೂ ಶಾಲೆಗೆ ಬರುತ್ತಿದ್ದವು. ಆಟ, ಪಾಠಗಳಲ್ಲೆಂದೂ ಕೊರತೆ ಬಂದಿರಲಿಲ್ಲ. ಅದೇ ಸಮಯದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಪುಡಾರಿಯೊಬ್ಬರು ಅಕಸ್ಮಾತ್ ಚುನಾವಣೆಯಲ್ಲಿ ಗೆದ್ದು ಬಂದರು. ಗೆದ್ದಮೇಲೆ ಇನ್ನುಂಟೇ ? ಆಶ್ವಾಸನೆಗಳ ಸುರಿಮಳೆಗಳಾದವು. ಮಾನ ಸಮ್ಮಾನಗಳಲ್ಲೆಲ್ಲಾ ಯೋಜನೆಗಳ ಮಂಜೂರು , ಅನುದಾನಗಳ ಕಾರ್ಯಕ್ರಮಗಳಾದವು. ಅಂದಾದುಂದಿ ಕಾರ್ಯಕ್ರಮಗಳಿಗೆ ಕಾಳಜಿಯ ಹಂಗುಂಟೇ ಎನ್ನುವಂತೆ ದೇವಸ್ಯ ಮೂಡೂರು ಗ್ರಾಮದ ಪಕ್ಕದ ಊರುಗಳಾದ ಮಣಿ ನಾಲ್ಕೂರು ಮತ್ತು ನಮ್ಕೆಮಾರು ಗ್ರಾಮಗಳಿಗೆ ಶಾಲೆಗಳೆರಡು ಮಂಜೂರಾದವು. ಕಿ.ಮೀ ಲೆಕ್ಕದಲ್ಲಿ ಆ ಗ್ರಾಮಗಳು ಸರಕಾರಿ ನಿಯಮಗಳಿಗೆ ಸರಿಹೊಂದುತ್ತಿದ್ದವು. ಹೀಗೆ ಮಂಜೂರಾದ ಶಾಲೆಗಳಿಗೆ ಕಟ್ಟಡಗಳೂ ಎದ್ದು ,ಶಿಕ್ಷಕರೂ ನೇಮಕವಾದರೂ ಹತ್ತು ಮಕ್ಕಳೂ ಸಿಗಲಿಲ್ಲ. ಪಕ್ಕದ ಊರಿನ ಹಳೆಯ ಶಾಲೆಯಿಂದ ಮಕ್ಕಳನ್ನು ತಂದು ತರಗತಿಗಳನ್ನು ತುಂಬಲಾಯಿತು. ಈ ಶಾಲೆ ಸರಿಯಾಗಿ ಐದು ವರ್ಷವೂ ನಡೆಯಲಿಲ್ಲ. ಇದೀಗ ಮುಚ್ಚಬಹುದು ಎಂಬ ಶಾಲೆಗಳ ಪಟ್ಟಿಯಲ್ಲಿ ಈ ಮೂರೂ ಶಾಲೆಗಳು ಇವೆ. ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಏಳುತ್ತಿವೆ ಎನ್ನುವ ವಾದ ಹೇಗೆ ಸರಿಯೋ ಸರಕಾರಿ ಶಾಲೆಗಳೂ ನಾಯಿಕೊಡೆಗಳಂತಾಗಬಾರದು ಎಂಬುದೂ ಕೂಡ ನಿಜವೇ. ಏಕೆಂದರೆ ಕಿಮೀ ಲೆಕ್ಕದಲ್ಲಿ ಶಾಲೆಗಳ ಸ್ಥಾಪನೆಯಾಗಬೇಕು ಎಂಬ ನಿಯಮವೇ ಒಂಥರಾ ಪುಸ್ತಕ ಓದಿ ಅಡುಗೆ ಮಾಡಿದಂತೆ . ಪ್ರತೀ ಸಂದರ್ಭದಲ್ಲೂ ವೈಜ್ಞಾನಿಕ ಎನ್ನಲು ಸಾಧ್ಯವಿಲ್ಲ. ಮಲೆನಾಡು ಮತ್ತು ಕರಾವಳಿಯ ಕೆಲವು ಭಾಗದಲ್ಲಿ ಇಂದಿಗೂ ಹದಿನೈದು ಇಪ್ಪತ್ತು ಕೀಮೀ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳಿಲ್ಲದಿರುವ ಪ್ರದೇಶಗಳೂ ಇವೆ. ಶಿಕ್ಷಣ ಸಚಿವರ ಹೇಳಿಕೆಯಿಂದ ಪುಳಕಿತಗೊಂಡ ಖಾಸಗಿ ಶಾಲೆಗಳು ಈಗಾಗಲೇ ಸುಬ್ರಹ್ಮಣ್ಯ ಪರಿಸರದಲ್ಲಿ ಸ್ಕೂಲ್ ವ್ಯಾನ್ ಗಳಿಗೆ ಬುಕ್ಕಿಂಗ್ ನಡೆಸಿವೆಯಂತೆ. ವ್ಯಾನ್‌ನಲ್ಲಿ ಕಳುಹಿಸಿ ಖಾಸಗಿಯಲ್ಲಿ ಓದಿಸಲಾಗದ ಪೋಷಕರು ದಿಕ್ಕುತೋಚದಂತಾಗಿದ್ದಾರಂತೆ.
ಇನ್ನು ಮುಚ್ಚುವ ಸಂದರ್ಭ ಬಂದಾಗಲೆಲ್ಲಾ ಏಕೆ ಸರಕಾರಗಳಿಗೆ ಖಾಸಗಿ ಶಾಲೆಗಳು ಕಾಣುವುದಿಲ್ಲ. ಸರ್ವರಿಗೂ ಶಿಕ್ಷಣವನ್ನು ಒದಗಿಸುವ ಹಕ್ಕು ಸರಕಾರದ್ದು. ಒಂದು ಶಾಲೆಯನ್ನು ಮುಚ್ಚಬೇಕು ಎಂಬ ಪ್ರಶ್ನೆ ಬರುವುದು ಶಿಕ್ಷಣ ವ್ಯಾಪಾರಿಕರಣಗೊಂಡಾಗ ಮಾತ್ರ. ಮಕ್ಕಳ ಸಂಖ್ಯೆ ಕಡಿಮೆ, ವೆಚ್ಚ ಹೆಚ್ಚು ಎಂದೆಲ್ಲಾ ನೆಪಗಳನ್ನು ಕೊಡುವುದು ಶಿಕ್ಷಣದ ಹಕ್ಕಿಗೆ ವಿರುದ್ಧವಾದ ನಿಯಮಗಳು. ಸರಕಾರಕ್ಕೆ ಶಿಕ್ಷಣದ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಹಲವು ಖಾಸಗಿ ಶಾಲೆಗಳನ್ನೇ ಮುಚ್ಚಬೇಕು. ಅಥವಾ ಏಕರೂಪದ ಶಿಕ್ಷಣ ಸೂತ್ರವನ್ನು ಅಳವಡಿಸಬೇಕು. ಏಕೆಂದರೆ ೧೯೯೪ ರ ಅನಂತರ ಕರ್ನಾಟಕದಲ್ಲಿ ಎಲ್ಲಿಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಮತಿಯಿಲ್ಲ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಸ್ಥಾಪನೆಯಾದ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಎಗ್ಗಿಲ್ಲದೆ ನಡೆಯುತ್ತಿದೆ. ಅನುಮತಿ ಇಲ್ಲದೆ ಮಾಡುವ ಭೋದನೆ ಸರಕಾರಕ್ಕೆ ಕಾಣುತ್ತಿಲ್ಲವೇಕೆ? ಇಂಥ ಸಂಗತಿಗಳನ್ನಿಟ್ಟುಕೊಂಡು ಸರಕಾರಿ ಶಾಲೆಗಳನ್ನು ಮುಚ್ಚಲು ಹೇಗಾದರೂ ಮನಸು ಬರುತ್ತವೆ? ಸರಕಾರವೇ ಪ್ರತಿ ವರ್ಷ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಪೂರೈಸುತ್ತವೆ. ಹೀಗೆ ಸರಕಾರ ಪೂರೈಸಿದ ಪಠ್ಯಗಳನ್ನೇ ಭೋದಿಸದಿದ್ದ ಮೇಲೆ ಅಂಥ ಖಾಸಗಿಯವರನ್ನು ಇಟ್ಟುಕೊಳ್ಳುವುದೇಕೆ? ಇಲಾಖೆ ಅಂಥವನ್ನು ಮುಚ್ಚುವುದು ಬಿಡಿ ಅನುಮತಿಯನ್ನು ಕೊಡಲು ವಿಳಂಭವನ್ನೂ ಮಾಡುವುದಿಲ್ಲ. ಸರಕಾರ ಯಾವುದೇ ಬರಲಿ ಅಧಿಕಾರ ಶಾಹಿಯ ದುರಾಡಳಿತವನ್ನು ನೋಡಬೇಕೆಂದರೆ ಶಿಕ್ಷಣ ಇಲಾಖೆಗೇ ಬರಬೇಕು. ಇಲ್ಲಿ ಅಧಿಕಾರಿಗಳ ಕೈಬೆಚ್ಚಗೆ ಮಾಡಿದರೆ ಕನ್ನಡ ಶಾಲೆಯ ಅನುಮತಿಯಲ್ಲೇ ಇಂಗ್ಲಿಷನ್ನು ಪಾಠ ಮಾಡುವುದು ಹೇಗೆಂಬ ತಂತ್ರವನ್ನೂ ಹೇಳಿಕೊಡುತ್ತಾರೆ ಎಂಬ ಮಾತಿದೆ. ಇನ್ನು ನೇಮಕಾತಿ ಎಂಬುದು ಕುಂಟು ಕುದುರೆಯೇ ಸೈ. ಇಂಥಿಂಥ ವರ್ಷ ಇಂಥಿಂಥ ಶಾಲೆಯಲ್ಲಿ ಇಂಥಿಂಥ ಶಿಕ್ಷಕರು ನಿವೃತ್ತರಾಗುತ್ತಾರೆ ಎಂದು ಗೊತ್ತಿದ್ದರೂ ಹೊಸ ನೇಮಕಾತಿ ಶಿಘ್ರವಾಗಿ ಆಗುವುದಿಲ್ಲ. ಇನ್ನು ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಹೇಗೆ ಸಾಧ್ಯ? ಇದೆಲ್ಲದರ ನಡುವೆಯೂ ಮುಚ್ಚುವ ಮನಸ್ಸು ಬರುವುದಾದರೂ ಹೇಗೆ ?
ಸಮಾಜದ ಮಾನಸಿಕತೆ ಇಂದು ವಿಪರೀತವಾದ ಕೀಳರಿಮೆಯಿಂದ ಬಳಲುತ್ತಿದೆ. ಆದರೆ ಸರಕಾರವೂ ಅದಕ್ಕೆ ಇಂಬು ಕೊಡುವುದು ಸರಿಯೇ? ಇಂದು ಸರಕಾರಕ್ಕೆ ಶಿಕ್ಷಣ ಇಲಾಖೆಯನ್ನು ಅತ್ಯದ್ಭುತವಾಗಿ ರೂಪಿಸಬಲ್ಲ ತಾಕತ್ತಿದೆ. ಖಾಸಗಿ ಸಂಸ್ಥೆಗಳಿಗಿಂತಲೂ ಪ್ರತಿಭಾವಂತರಾದ ಶಿಕ್ಷಕರು ಸರಕಾರಿ ಸಂಸ್ಥೆಗಳಲ್ಲಿದ್ದಾರೆ. ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸಬಲ್ಲ ಅನಿವಾರ್ಯತೆಯೂ ಇರುವ ಈ ಹೊತ್ತಿನಲ್ಲಿ ಸರಕಾರಕ್ಕೇ ದ್ವಂದ್ವಗಳಿದ್ದರೆ ನಿರೀಕ್ಷೆಗಳು ಇನ್ನಾರ ಮೇಲೆ ಇಟ್ಟುಕೊಳ್ಳೋಣ? ನಿಜವಾಗಿಯೂ ಸರಕಾರಿ ಶಾಲಾ ಮಕ್ಕಳಲ್ಲಿ ಇಂದಿಗೂ ಜೀವಂತಿಕೆ ಇದೆ. ಅವರಿಗೆ ಬಸವಣ್ಣ ಗೊತ್ತಿದ್ದಾನೆ. ಬಾಪೂಜಿ ಪರಿಚಯವಿದ್ದಾನೆ. ಕಗ್ಗದ ಪದ್ಯಗಳು, ತಿರುಕನ ಕನಸ್ಸುಗಳು ಅವರಿಗೆ ಗೊತ್ತಿದೆ. ಅದನ್ನು ಮತ್ತಷ್ಟು ಪ್ರಭಾವಿಗೋಳಿಸುವ ಪ್ರಯತ್ನ ಮಾಡಬೇಕಲ್ಲದೆ ಮುಚ್ಚುವ ಮಾತನ್ನಾಡುವುದೇ?
ಒಂದು ವೇಳೆ ಸರಕಾರಿ ಶಾಲೆಗಳನ್ನು ಮುಚ್ಚುವುದೇ ಆದರೆ ಪ್ಯಾಕೇಜಿನಂತೆ ಶಿಕ್ಷಣವನ್ನು ಮಾರುವವರಿಗೆ ಲಾಭವೇ ಆಗುತ್ತದೆ. ಸ್ಕೂಲ್ ಡೇ ನಲ್ಲಿ ಝಾನ್ಸಿರಾಣಿಯ ವೇಷ ಹಾಕಿಸಿ ಇಂಗ್ಲಿಷಿನಲ್ಲಿ ಡೈಲಾಗ್ ಹೊಡೆಸುವ, ಎಕಾನ್ ಹಾಡಿಗೆ ಡ್ಯಾನ್ಸ್ ಮಾಡಿಸುವ, ಹೋಮ್ ವರ್ಕ್ ಕೊಟ್ಟು ಹೊರೆಯನ್ನು ಕಮ್ಮಿ ಮಾಡಿಕೊಳ್ಳುವ ,ರೈನ್‌ರೈನ್ ಗೋ ಅವೇ ಎಂದು ಮಳೆರಾಯನನ್ನೇ ದೂರ ಓಡಿಸುವ ಪದ್ಯವನ್ನು ಕಲಿಸುವ, ಕುಣಿಯುವ ವಯಸ್ಸಲ್ಲಿ ಒತ್ತಡವನ್ನು ಬೆಳೆಸುವ, ಹಳಸಿದ ಸ್ನ್ಯಾಕ್ಸ್ ಬಾಕ್ಸ್‌ಗಳಲ್ಲಿ ಹಳಸಿದ್ದನ್ನೇ ತಿನ್ನಿಸುವ ಡಾನ್, ಡೂನ್, ಮ್ಯಾಂಚೆಷ್ಟರ್, ಕ್ಯಾಂಬ್ರಿಜ್,ಸೈಂಟ್ ,ಇಂಟರ್‌ನ್ಯಾಷನಲ್ ಸ್ಕೂಲುಗಳಿಗೆ ಮತ್ತಷ್ಟು ಬಲಬಂದತೆಯೇ. ಅಂಥವುಗಳ ಸಂಖ್ಯೆ ಹೆಚ್ಚಾದಂತೆಯೇ .
ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿಲ್ಲವಷ್ಟೇ?
ನಿಜವಾಗಿಯೂ ಸರಕಾರಿ ಶಾಲಾ ಮಕ್ಕಳಲ್ಲಿ ಇಂದಿಗೂ ಜೀವಂತಿಕೆ ಇದೆ. ಅವರಿಗೆ ಬಸವಣ್ಣ ಗೊತ್ತಿದ್ದಾನೆ. ಬಾಪೂಜಿ ಪರಿಚಯವಿದ್ದಾನೆ. ಕಗ್ಗದ ಪದ್ಯಗಳು, ತಿರುಕನ ಕನಸ್ಸುಗಳು ಅವರಿಗೆ ಗೊತ್ತಿದೆ. ಅದನ್ನು ಮತ್ತಷ್ಟು ಪ್ರಭಾವಿಗೋಳಿಸುವ ಪ್ರಯತ್ನ ಮಾಡಬೇಕಲ್ಲದೆ ಮುಚ್ಚುವ ಮಾತನ್ನಾಡುವುದು ಸರಿಯೇ?

Friday, November 25, 2011

ಕೊಡವರ "ಯೋಧ ವೈಭವ"


ದೊಂದು ಐತಿಹಾಸಿಕ ಕಥೆಯನ್ನು ಕೊಡವರು ಇಂದಿಗೂ ಗುನುಗುನಿಸುತ್ತಿರುತ್ತಾರೆ.
ಅದು ನಾಗರಿಕತೆ ಎನ್ನುವುದು ಮೂಲೆ ಮೂಲೆಗೆ ಇನ್ನೂ ಮುಟ್ಟದ ಕಾಲ. ಗುಡ್ಡಗಾಡಿನ ಪ್ರದೇಶದಲ್ಲಿನ್ನೂ ಪ್ರಭುತ್ವದ ಕಲ್ಪನೆ ಬರದಿದ್ದ ಕಾಲ. ಅಂಥ ಒಂದು ಕಾಲದಲ್ಲಿ ಕೊಡಗಿನ ನಾಲ್ಕುನಾಡು ಎಂಬ ಪ್ರದೇಶದ ನೆಲಜಿ ಗ್ರಾಮಕ್ಕೆ ಜಂಗಮನೊಬ್ಬನು ಬರುತ್ತಾನೆ. ಜಂಗಮನ ಹಾವಭಾವ, ವೇಷ ಭೂಷಣ, ವಿಭೂತಿಗಳನ್ನು ಕಂಡ ಜನರು ಆದರದಿಂದ ಆತನನ್ನು ಬರಮಾಡಿಕೊಂಡರು. ಕುಶಲೋಪರಿಗಳು ಸಾಂಗವಾಗಿ ನಡೆದ ಅನಂತರ ಜಂಗಮ ಊರವರನ್ನು ಉದ್ದೇಶಿಸಿ ಮಾತಾಡಲಾರಂಭಿಸಿದ. ತಾನು ಹಾಸನ ಸೀಮೆಯ ಇಕ್ಕೇರಿ ಸಂಸ್ಥಾನದಿಂದ ಬಂದವನೆಂದೂ ಅಲ್ಲಿ ರಾಜಪ್ರಭುತ್ವವಿದೆಯೆಂದೂ ರಾಜನ ಅಧೀನದಲ್ಲಿ ಜನ-ಜಾನುವಾರುಗಳು ಸುಖದಿಂದ ಬಾಳುತ್ತಿರುವರೆಂದೂ ಕೇಡುಬಯಸದವರಿಗೆ ಅಲ್ಲಿ ಸ್ಥಾನವಿಲ್ಲವೆಂದೂ ರಾಜನ ಗುಣಗಾನ ಮಾಡತೊಡಗಿದ. ಹೀಗೆಯೇ ದೇಶದಲ್ಲಿ ಹಲವಾರು ಸಂಸ್ಥಾನಗಳು ಅಸ್ತಿತ್ವದಲ್ಲಿರುವುದೆಂದೂ ಜಂಗಮ ರೋಚಕವಾಗಿ ವಿವರಿಸತೊಡಗಿದ. ಬ್ರಹ್ಮಗಿರಿ, ಪುಷ್ಪಗಿರಿ ಬೆಟ್ಟಸಾಲುಗಳಲ್ಲಿ ಹೊದ್ದುಕೊಂಡಂತಿರುವ ಕೊಡಗಿನ ಮೂಲನಿವಾಸಿಗಳಿಗೆ ಇವುಗಳ ಪರಿಕಲ್ಪನೆ ಹೊಸದು. ಆಳುವುದು ಮತ್ತು ಆಳಿಸಿಕೊಳ್ಳುವ ಕಥೆಗಳನ್ನು ಕಾವಿಧಾರಿ ಜಂಗಮನಿಂದ ಪೂರ್ತಿಯಾಗಿ ಕೇಳಿಸಿಕೊಂಡರೂ ಕೊಡವರು ಮೌನವಾಗಿ ಕುಳಿತೇ ಇದ್ದರು. ಏನೇನೂ ಪ್ರತಿಕ್ರಿಯೆ ಇರಲಿಲ್ಲ. ಆಗ ಸಂನ್ಯಾಸಿಯೇ " ಕೊಡಗಲ್ಲೂ ಪ್ರಭುತ್ವವಿಬೇಕು. ಪ್ರಭುತ್ವವಿಲ್ಲದ ನಾಡು ಪರಿಪೂರ್ಣವೇ ಅಲ್ಲ" ಎಂದನಂತೆ. ಆಗಲೂ ಜನ ಸುಮ್ಮನೇ ಇದ್ದರು. ಕೊನೆಗೆ ಜಂಗಮನೇ ನೆಲಜಿ ಗ್ರಾಮದಲ್ಲಿ ಕುಳಿತಿದ್ದ ಜನರತ್ತ ದಿಟ್ಟಿಸಿ, ಆಯಕಟ್ಟಿನ ಅಜಾನುಭಾಹು ಶರೀರದ "ಮಂಡೀರ " ಕುಟುಂಬದ ಯುವಕನೊಬ್ಬನತ್ತ ಬೊಟ್ಟುಮಾಡಿ "ನೀನು ರಾಜನಾಗು. ನಿನಗೆ ರಾಜಕಳೆಯಿದೆ" ಎಂದನಂತೆ. ಆಗ ಕುಳಿತಿದ್ದವರೆಲ್ಲಾ ದಢಕ್ಕನೆ ಎದ್ದು ನಿಂತವರೇ "ಭೂಪುತ್ರರು ನಾವು ಕೊಡವರು. ಭೂಪತಿಗಳಾಗೆವು ಎಂದೂ, ನೀವೇ ಅರಸರಾಗಿ . ನಿಮ್ಮ ಬೆನ್ನ ಹಿಂದೆ ನಾವಿರುವೆವು " ಎಂದು ಪ್ರತಿಜ್ಞೆ ಯನ್ನು ಮಾಡಿದರಂತೆ. ಹಾಗೆ ಸರ್ವಸಂಗ ಪರಿತ್ಯಾಗಿ ಜಂಗಮನೇ ಸ್ಥಾಯಿಯಾದನಂತೆ. ಕಾವಿ ತ್ಯಜಿಸಿದ ಆ ಸಂನ್ಯಾಸಿ ಸಾಮ್ರಾಜ್ಯದ ಮೊದಲ ಅರಸನಾದನಂತೆ. ಮುಂದಿನ ಹಲವು ಶತಮಾನಗಳ ಕಾಲ ಕೊಡಗನ್ನು ಆ ಜಂಗಮನ ಸಂತಾನದವರೇ ಆಳಿದರು. ಆ ಎಲ್ಲಾ ಅರಸರಿಗೂ ಬೆಂಗಾವಲಾಗಿ ಕೊಡವರೇ ಇದ್ದರು ಎಂಬ ಚರಿತ್ರೆ ಇತಿಹಾಸದ ಒಂದು ರೋಚಕ ಪ್ರಸಂಗ. ಕೊಟ್ಟ ಮಾತಿಗೆ ತಪ್ಪದೇ ನಡೆದಿದ್ದು, ಜಂಗಮ ರೂಪವನ್ನು ಸ್ಥಾಯಿಗೊಳಿಸಿದ್ದು, ಮಾತಿಗೆ ಕಟ್ಟುಬೀಳದೆ ಮುಗ್ದವಾಗಿ ಪಾಲಿಸುವ ಮನೋಭಾವದ ಕೊಡವರು ಹೀಗೆ ಕೊನೆಯವರೆಗೂ ತಮ್ಮನ್ನು ತಾವು ಆಳಿಕೊಳ್ಳಲಿಲ್ಲ. ಪರರಿಂದಲೇ ಆಳಿಸಿಕೊಂಡರು. ಹೀಗೆ ಸ್ಥಾಪನೆಯಾದ ಹಾಲೇರಿ ರಾಜ ಮನೆತನದುದ್ದಕ್ಕೂ ರಾಜರಿಗಿಂತ ಎತ್ತರದಲ್ಲಿ ಕಾಣುವವರು ಆಳಿಸಿಕೊಂಡ ಕೊಡವರೇ. ಲಿಂಗಾಯತ ಅರಸರ ದಿವಾನರಾಗಿ, ಮಂತ್ರಿಗಳಾಗಿ, ಸೇನಾಧಿಕಾರಿಗಳಾಗಿ, ಪಾರುಪತ್ಯೆಗಾರರಾಗಿ , ಯೋಧರಾಗಿ ಕೊನೆಯವರೆಗೂ ತಮ್ಮ ಮಾತನ್ನುಳಿಸಿಕೊಂಡರು. ಒಂದು ಯೋಧ ಸಂತತಿಯ ಮತ್ತು ಆಳುವ ಪ್ರಭುತ್ವದ ಅವಿನಾಭಾವ ಸಂಬಂಧಕ್ಕೆ ಯೋಗ್ಯ ಉದಾಹರಣೆಯಾಗಿ ಸಲ್ಲುವ ಅಪರೂಪದ ಉದಾಹರಣೆಯೆಂದರೆ ಕೊಡವರು.
ವೀರ ಪರಂಪರೆ
ಮುಂದೆ ಇತಿಹಾಸದಲ್ಲಿ ಹಲವು ಸ್ಥಿತ್ಯಂತರಗಳಾದವು. ಆಗಲೂ ಕೊಡವರು ಭೂಪತಿಗಳಾಗದೆ ಭೂಪುತ್ರರಾಗಿಯೇ ಉಳಿದರು. ದುಷ್ಟ, ಪೀಡಕ ಅರಸರನ್ನೂ ಮಾತಿಗೆ ತಪ್ಪಬಾರದೆಂಬ ಮುಗ್ಧತೆಯಿಂದ ಕೊಡವರು ಸಹಿಸಿಕೊಂಡರು. ಕೊನೆಗೆ ಸಹಿಸಲಸಾಧ್ಯವೆಂಬ ಸನ್ನಿವೇಶದಲ್ಲಿ ಬ್ರಿಟಿಷರ ಮೊರೆಹೋದರು. ಕ್ಷಿಪ್ರ ಕ್ರಾಂತಿಯ ಸಂದರ್ಭ ತಮಗೆ ಒದಗಿಬಂದರೂ ತಾವೇ ಆಳಲಾರದಷ್ಟು ಬದ್ದತೆ ಕೊಡವರಿಗಿತ್ತು ಎನ್ನುವುದು ಇತಿಹಾಸದ ಸೋಜಿಗ ಮತ್ತು ಜನಾಂಗವೊಂದರ ಶ್ರೇಷ್ಠತೆಗೆ ಸಾಕ್ಷಿಗಳು.
ಕೊಡವರು ಹುಟ್ಟುಯೋಧರು. ಬೆಟ್ಟಗುಡ್ಡ ಕಾಡುಗಳಲ್ಲೇ ಬದುಕು ಕಂಡುಕೊಂಡವರು. ವ್ಯತಿರಿಕ್ತವಾದ ಹವಾಗುಣಗಳಲ್ಲಿ ಹೋರಾಟ ಮಾಡಿಯೇ ಬದುಕಬೇಕಾದ ಅನಿವಾರ್ಯತೆಗಳು ಕೊಡವರನ್ನು ರೂಪಿಸಿದವು ಎಂದು ಕೊಡಗಿನ ಇತಿಹಾಸ ಹೇಳುತ್ತವೆ. ಅಲ್ಲದೆ ಕೊಡವರದ್ದು ಕೃಷಿ ಪ್ರಧಾನವಾದ ಸಂಸ್ಕೃತಿ. ಕೃಷಿಯ ರಕ್ಷಣೆಗಾಗಿ ಅವರು ಆಯುಧಧಾರಿಗಳಾಗಿರಬಹುದು ಎಂದೂ ವಿದ್ವಾಂಸರು ಹೇಳುತ್ತಾರೆ. ಅವರ ಸಂಸ್ಕೃತಿಯಲ್ಲಿ ಯೋಧತನವೆಷ್ಟು ಹಾಸುಹೊಕ್ಕಾಗಿದೆಯೆಂದರೆ ಕೊಡವರಲ್ಲಿ ಇಂದಿಗೂ ಗಂಡು ಮಗು ಹುಟ್ಟಿದರೆ ಕುಶಾಲತೋಪು ಸಿಡಿಸಿ ಊರಿಗೆಲ್ಲಾ ಸುದ್ಧಿ ಹಬ್ಬಿಸುವ ಪರಂಪರೆ ಇದೆ. ಮತ್ತು ಇಂದಿಗೂ ಕೊಡವರಲ್ಲಿ ಗಂಡು ಯುದ್ಧದಲ್ಲಿ ಮಡಿಯಬೇಕು, ಹೆಣ್ಣು ಹೆತ್ತು ಮಡಿಯಬೇಕು ಎಂಬ ನಾನ್ಣುಡಿಯೇ ಇದೆ. ಆಳರಸರ ಕಾವಲು ಪಡೆಯಲ್ಲಿ ನಿರಂತರ ನಡೆಯುತ್ತಿದ್ದ ಯುದ್ಧಗಳಲ್ಲಿ ಭಾಗವಹಿಸಿದ ಕೊಡವರು ತಾವು ಸೈನಿಕರಾಗಲೆಂದೇ ಹುಟ್ಟಿದವರೆಂದು ತಿಳಿಯುತ್ತಿದ್ದರು. ಇಂದು ಕರ್ನಾಟಕದಲ್ಲಿ ಹಾಲೇರಿ ರಾಜರ ಹೆಸರು ಕೇಳಿಬರುತ್ತಿದೆ ಎಂದಾದರೆ ಅದಕ್ಕೆ ಏಕೈಕ ಕಾರಣ ಕೊಡವರ ಯೋಧತನ ಎಂಬುದು ನಿರ್ವಿವಾದ ಸಂಗತಿ. ಹಾಲೇರಿ ಸಂಸ್ಥಾನದ ಆಧಾರಸ್ತಂಭಗಳಾದ ಅಪ್ಪಾರಂಡ ಬೋಪಣ್ಣ ದಿವಾನ, ಚೌರೀರ ಅಪ್ಪಣ್ಣ ದಿವಾನ, ಚೆಪ್ಪುಡೀರ ಪೊನ್ನಪ್ಪ ದಿವಾನ, ಬಿದ್ದಂಡ ಬೋಪಣ್ಣ ದಿವಾನ ,ಕಾರ್ಯಕಾರ ಬಿದ್ದಂಡ ಸೋಮಯ್ಯ, ದೇಶತಕ್ಕ ಮಾತಂಡ ಕಾರ್ಯಪ್ಪನವರು ಹಲವು ಕ್ಷಿಷ್ಟಕರ ಸಂದರ್ಭಗಳಲ್ಲಿ ಆಳರಸರನ್ನು ರಕ್ಷಿಸಿ ಕೊಟ್ಟ ಮಾತನ್ನು ಉಳಿಸಿಕೊಂಡರು.
ವಿಶ್ವ ಸಮರದ ಬಳಿಕ
ಅನಂತರ ಬ್ರಿಟಿಷ್ ಆಡಳಿತದಲ್ಲಿ ಕೊಡವರ ವೀರತನ ಇನ್ನಷ್ಟು ಬೆಳಕಿಗೆ ಬಂತು. ಕೊಡಗಿನ ಅರಸರ ಸರ್ವಾಧಿಕಾರ ಧೋರಣೆ ವಿಪರೀತವಾಗುತ್ತಾ , ಅಪತ್ತು ಬಂದರೆ ತಾನೆ ಏನು? ಕೊಡವರಿದ್ದಾರಲ್ಲಾ ಎಂಬ ಉದಾಸೀನತೆ ಅರಸರಿಗೆ ಬಂದಾಗ , ಮತಾಂಧರ ಧಾಳಿಗೂ ಅರಸರು ತಕ್ಕ ಪ್ರತಿರೋಧ ತೋರದೆ ಇದ್ದಾಗ ಕೊಡವ ಯೋಧರು ನಾಡಿನ ರಕ್ಷಣೆಗೆ ಬ್ರಿಟಿಷರ ಮೊರೆ ಹೋದರು. ಆಳುವ ಮನಸ್ಸಿಲ್ಲದ, ಮೌಲ್ಯದ ಮೇರುತನಕ್ಕೆ ಕೊಡಗು ಮತ್ತೊಮ್ಮೆ ಪರಕೀಯರ ವಶವಾಯಿತು. ಕೊಡವರ ಯೋಧತನವನ್ನು ಬ್ರಿಟಿಷರು ಸಮರ್ಥವಾಗಿಯೇ ಬಳಸಿಕೊಂಡರು ಎನ್ನಬೇಕು. ಹೇಳಬೇಕೆಂದರೆ ಕೊಡಗಿಗೆ ,ಕೊಡವರಿಗೆ ಯೋಧರು, ಯೋಧರ ನಾಡು ಎಂಬ ಬಿರುದು ಪ್ರಾಪ್ತವಾಗಿದ್ದು ಈ ಸಮಯದಲ್ಲಿಯೇ. ಬ್ರಿಟೀಷ್ ಅವಧಿಯಲ್ಲಿ ಸುಭೇದಾರರನ್ನಾಗಿ ಹೆಚ್ಚಾಗಿ ಕೊಡವರನ್ನೇ ಆರಿಸಲಾಗುತ್ತಿತ್ತು. ಮುಂದೆ ಮೊದಲ ಮಹಾಯುದ್ಧದ ಕಾಲದಲ್ಲಿ ಕೊಡವರ ಮಾರ್ಷಲ್ ಗುಣವನ್ನು ಮನಗಂಡ ಬ್ರಿಟೀಷರು ಕೂರ್ಗ್ ರೆಜಿಮೆಂಟನ್ನು ಕೂಡ ಸ್ಥಾಪಿಸಿದರು. ಮೊದಲ ವಿಶ್ವಯುದ್ದದ ಬಳಿಕ ಈ ರೆಜಿಮೆಂಟನ್ನು ವಿಸರ್ಜಿಸಲಾಯಿತು. ಏಕೆಂದರೆ ವಿದೇಶದಲ್ಲಿ ಹೋರಾಡುತ್ತಾ ಕೊಡವ ಯೋಧರ ಬಲಿದಾನ ವ್ಯರ್ಥವಾಗಬಾರದೆಂಬ ಕಾಳಜಿ ಬ್ರಿಟೀಷ್ ಆಡಳಿತಕ್ಕಿತ್ತು. ತಮ್ಮ ನಂಬಿಗಸ್ಥ ಬಂಟ ಕೊಡವರು ತಮಗಾಗಿ ಮೀಸಲಿರಬೇಕೆಂಬ ಸ್ವಾರ್ಥವೂ ಇತ್ತು. ಆದರೆ ಎರಡನೆಯ ಮಹಾಯುದ್ಧದ ಹೊತ್ತಿಗೆ ಪುನಃ ಕೂರ್ಗ್ ರೆಜಿಮೆಂಟನ್ನು ಸ್ಥಾಪಿಸಲಾಯಿತು. ೧೯೧೭ ರ ಹೊತ್ತಲ್ಲಿ ಇದೇ ಕೊಡವ ಜನಾಂಗ ಕೇವಲ ೪೦ ಸಾವಿರ ಸಂಖ್ಯೆಯಲ್ಲಿದ್ದಾಗ ಡೆಹರಾಡೂನಿನ ಇಂಡಿಯನ್ ಆಫಿಸರ್ಸ್ ಕೆಡೆಟ್ ನಲ್ಲಿ ಆಯ್ಕೆಯಾದ ಇಬ್ಬರು ಭಾರತೀಯರಲ್ಲಿ ಇಬ್ಬರೂ ಕೊಡವರು (ಕೆ. ಎಂ.ಕಾರ್ಯಪ್ಪ ಮತ್ತು ಕೆ.ಎಸ್ ತಿಮ್ಮಯ್ಯ) ಎನ್ನುವುದು ಕೊಡವರ ಯೋಧತನಕ್ಕೆ ಒಂದು ಪುರಾವೆ. ಆ ಸಮಯದಲ್ಲಿ ಮನೆಮನೆಯಿಂದಲೂ ಯೋಧರು ರಾಷ್ಟ್ರರಕ್ಷಣೆಗೆ ತೆರಳುತ್ತಿದ್ದ ಕಥೆಗಳನ್ನು ಇಂದಿಗೂ ಹೇಳುವವರು ಸಿಗುತ್ತಾರೆ. ಸ್ವಾತಂತ್ರ್ಯಾನಂತರ ಕೂಡ ಈ ಪರಂಪರೆ ಮುಂದುವರೆಯಿತು. ಭಾರತೀಯ ಸೇನೆಯ ಪ್ರಥಮ ಮತ್ತು ಏಕೈಕ ಕಮಾಂಡರ್-ಇನ್- ಚೀಫ್ ಕೊಡಗಿನ ಕಾರ್ಯಪ್ಪಜ್ಜರೆನ್ನುವುದು , ಭಾರತೀಯ ಭೂಸೇನಾ ನಾಯಕರಾಗಿ ಜಗದ್ವಿಖ್ಯಾತರಾಗಿ , ರಾಷ್ಟ್ರದ ಬಗ್ಗೆ ಅಗಾಧ ಕನಸುಗಳನ್ನು ಕಂಡ, ಅನಂತರ ರಾಯಭಾರಿಗಳಾಗಿಯೂ ಮಾನವೀಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ತಿಮ್ಮಯ್ಯನವರು ಕೊಡವರೆನ್ನುವುದು ಕರ್ನಾಟಕದ್ದೇ ಹೆಮ್ಮೆ . ಕೊಡವ ಸೈನಿಕರ ಸಾಹಸಗಳು ಭಾರತೀಯ ಸೈನ್ಯದಲ್ಲಿ ಅವೆಷ್ಟೋ ಇವೆ. ಭಾರತೀಯ ರಕ್ಷಣಾಪಡೆಯ ಅತ್ಯಂತ ಕಠಿಣ ಸಂದಭಗಳಲ್ಲೆಲ್ಲಾ ಇಂದಿಗೂ ಮೊದಲು ಕೇಳಿಬರುವ ಹೆಸರೆಂದರೆ ಕರ್ನಾಟಕದ ಕೊಡವರು. ಅಸ್ಸಾಂ, ನಾಗಾಲ್ಯಾಂಡ್, ಗೋರ್ಖಾ, ಲೇಹ್, ಲಡಾಕ್, ಪಂಜಾಬ್‌ಗಳಲ್ಲಿ ಕೊಡಂದೇರ ತಿಮ್ಮಯ್ಯನವರನ್ನು ಆರಾಧಿಸುವ ಜನರನ್ನು ಇಂದಿಗೂ ಕಾಣಬಹುದು. "ನಮ್ಮನ್ನು ತಿಮ್ಮಯ್ಯನವರು ಆಳಿದರೆ ನಮ್ಮ ಪ್ರದೇಶವನ್ನು ಭಾರತಕ್ಕೆ ಸೇರಿಸಲು ಒಪ್ಪುವೆವು " ಎಂದು ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೇ ಹೇಳಿರುವುದು ಕೊಡವನೊಬ್ಬನ ಯೋಧಗುಣದ ಪ್ರತೀಕಗಳು. ಕಾಶ್ಮೀರದ ಕಣಿವೆಗಳಲ್ಲಿ ಶತ್ರುಬಂಕರ್‌ಗಳ ನಡುವೆಯೇ ಟ್ರಕ್ ಚಲಾಯಿಸುತ್ತಾ, ಬಂಕರುಗಳನ್ನು ನಾಶಮಾಡುತ್ತಾ ಸರಕು ಸರಂಜಾಮುಗಳನ್ನು ರಣರಂಗಕ್ಕೆ ಮುಟ್ಟಿಸಿದ ಸುಭೇದಾರ್ ನಡಿಕೇರಿಯಂಡ ಭೀಮಯ್ಯ, ತನ್ನ ಪ್ರಾಣವನ್ನು ಲೆಕ್ಕಿಸದೆ ಪಾಕಿಸ್ಥಾನದ ಸರಗೋದ ವಾಯುನೆಲೆಯನ್ನು ಧ್ವಂಸಮಾಡಿ ಮತ್ತಷ್ಟು ಮುಂದುವರಿದು ವಿಮಾನದಲ್ಲೇ ಉರಿಯುತ್ತಾ ಶತ್ರುಗಳನ್ನು ಉರಿಸಿದ ಸ್ಕ್ವಾ. ಲೀ. ಅಜ್ಜಾಮಾಡ ಬಿ. ದೇವಯ್ಯ , ಕಣಿವೆಯ ವಶದಲ್ಲಿ ಎದೆಯೊಡ್ಡಿನಿಂತು ಅಮರರಾದ ಮೇಜರ್ ಮಂಗೇರಿರ ಮುತ್ತಣ್ಣ, ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ನೀಲನಕ್ಷೆಯನ್ನು ಸಿದ್ಧಪಡಿಸಿದ ಲೆ.ಜ. ಕೋದಂಡ ಎನ್. ಸೋಮಣ್ಣನವರಂಥಾ ಮಹಾ ಯೋಧರನ್ನು ಕೊಟ್ಟ ಪುಟ್ಟ ಜನಾಂಗ ಕೊಡವರು. ಅದಕ್ಕೇ ಇಂದಿಗೂ ಭಾರತೀಯ ಸೇನೆಯಲ್ಲಿ ಕೊಡವರು ಎಂದರೆ ಒಂದು ವಿಶ್ವಾಸ. ಒಂದು ಪ್ರೀತಿ. ಇಂದಿಗೂ ಸೈನ್ಯದ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಭಾರತೀಯ ಸೇನೆ ಕೊಡವ ಯೋಧರನ್ನು ಹುಡುಕುತ್ತದೆ. ಏಕೆಂದರೆ ಕೊಡವರು ಎಂದರೆ ಕೇವಲ ಒಂದು ಜಾತಿಯಲ್ಲ. ಅದೊಂದು ಮೈಕಟ್ಟು. ಒಂದು ವ್ಯವಸ್ಥೆ. ಒಂದು ಯೋಧ ಸಂತತಿ. ಅವರು ಕೇವಲ ತರಬೇತಾದ ಸೈನಿಕರಲ್ಲ. ಅವರು ಹುಟ್ಟು ಬಲಾಡ್ಯರು. ದೈಹಿಕ ಮತ್ತು ಮಾನಸಿಕ ಸಧೃಡರು. ಇಂಥ ಕೊಡವ ಯೋಧರ ಬಗ್ಗೆ ವಿದೇಶಗಳ ಸೇನಾಧಿಕಾರಿಗಳೂ ಸಮರನೀತಿ ವಿದ್ವಾಂಸರೂ ೫ ಅಂಶಗಳಿಂದ ಅವರ ಯೋಧತನವನ್ನು ವಿವರಿಸಿದ್ದಾರೆ. ೧. ಅವರ ನೈಸರ್ಗಿಕ ನಾಯಕತ್ವ ೨. ಸೈನಿಕರು ಎಂಬ ಅತಿಯಾದ ಹೆಮ್ಮೆ ೩. ಪ್ರಾಮಾಣಿಕ ಮತ್ತು ಮುಕ್ತ ವ್ಯಕ್ತಿತ್ವ ೪. ಶಿಸ್ತಿನ ಸಿಪಾಯಿತನ ೫. ಸಮರ ಸಂದರ್ಭಗಳಲ್ಲಿ ಸರಿ-ತಪ್ಪುಗಳ ಬಗ್ಗೆ ಯೋಗ್ಯ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ. ಈ ಐದು ಅಂಶಗಳು ಕೊಡವ ಯೋಧರಲ್ಲಿ ಮೇಳೈಸಿರುತ್ತವೆ ಎಂದು ಪಾಶ್ಚಾತ್ಯ ಸೇನಾಧಿಕಾರಿಗಳು ಹೇಳುತ್ತಾರೆ. ಸ್ವಾತಂತ್ರ್ಯಾನಂತರ ಸಣ್ಣದಾದ ಜನಾಂಗವೊಂದು ಇದುವರೆಗೆ ೫ ಜನ ಲೆಪ್ಟಿನೆಂಟ್ ಜನರಲ್‌ಗಳನ್ನು, ೧೫ ಮಂದಿ ಮೇಜರ್ ಜನರಲ್‌ಗಳನ್ನು, ೪ ಮಂದಿ ಏರ್‌ಮಾರ್ಷಲ್‌ಗಳನ್ನು , ನೌಕಾಪಡೆಯ ಕಮಾಂಡರ್‌ಗಳನ್ನು, ನೂರಾರು ಬಲಿದಾನಿಗಳನ್ನು ದೇಶಕ್ಕೆ ಕೊಟ್ಟಿದೆ ಎನ್ನುವುದು ಮರೆತುಹೋಗುವ ಸಂಗತಿಗಳಲ್ಲ. ಊರಿಗೊಂದರಂತೆ ಮೇಜರ್‌ಗಳು, ಬ್ರಿಗೇಡಿಯರ್‌ಗಳು, ಲೆಪ್ಟಿನೆಂಟ್‌ಗಳು, ಮನೆಗೊಂದರಂತೆ ಸಿಪಾಯಿಗಳು ನಿವೃತ್ತ ಜೀವನವನ್ನು ನಡೆಸುತ್ತಿರುವವರ ಮಹತ್ತ್ವವನ್ನು ಇಂದಿನ ಪೀಳಿಗೆ ತಿಳಿದುಕೊಂಡಿದ್ದು ಕಡಿಮೆಯೆಂದೇ ಹೇಳಬೇಕು.
ವೈಭವ ಮರೆಯಾಯಿತೇ?
ಆದರೆ ವೈಭವಗಳು ಹೆಚ್ಚುದಿನ ಉಳಿಯುವುದಿಲ್ಲ ಎಂಬ ಮಾತು ಇತಿಹಾಸದ ಅಧ್ಯಯನದಲ್ಲಿ ಕಾಣಸಿಗುತ್ತದೆ. ವೀರರ ಜಿಲ್ಲೆ , ಯೋಧರ ನಾಡು ಎಂದು ಕರೆಸಿಕೊಂಡ ಕೊಡಗಿನಲ್ಲಿ ಇಂದು ಸೈನ್ಯಕ್ಕೆ ಸೇರುವವರ ಪ್ರಮಾಣ ತೀರಾ ಇಳಿಮುಖವಾಗಿದೆ. ಇಂದು ಊರೂರಲ್ಲೂ ಶೌರ್ಯದ ಕಥೆಗಳು ಕೇಳಿಬರುತ್ತಿರಬಹುದು. ಆದರೆ ಮುಂದಿನ ವರ್ಷಗಳಲ್ಲಿ ಆ ಕಥೆಗಳು ಸಂಪೂರ್ಣ ಮಾಯವಾಗಲಿವೆ. ಅಬ್ಬರದ ಯುಗದಲ್ಲಿ ವೀರತೆಗೆ ಜಾಗವಿಲ್ಲ ಎಂಬಂತಾಗಿದೆ. ಇದೇಕೆ ಹೀಗೆ ಎಂದು ಹುಡುಕುತ್ತಾ ಹೊರಟರೆ ಆಧುನಿಕ ಶಿಕ್ಷಣ ಪರಿಣಾಮಗಳು ಗೋಚರಿಸುತ್ತವೆ. ನಿಜ, ಆಧುನಿಕ ಶಿಕ್ಷಣ ಪಡೆದ ಪೀಳಿಗೆ ಸೇನೆಗೆ ಸೇರಲು ಇಷ್ಟಪಡುತ್ತಿಲ್ಲ. ಐಟಿ ಬಿಟಿ ಯುಗದಲ್ಲಿ ಮಹಾನಗರಗಳು ಯುವಕರನ್ನು ಕೈಬೀಸಿ ಕರೆಯುತ್ತಿವೆ. ಮೊದಮೊದಲು ಮನೆಯೊಂದರಲ್ಲಿ ಐದಾರು ಮಕ್ಕಳಿದ್ದರೆ ಅವರಲ್ಲಿ ಒಬ್ಬ ಮನೆ ನೋಡಿಕೊಳ್ಳುತ್ತಾ ಇರುತ್ತಿದ್ದ. ಉಳಿದವರು ಸೈನ್ಯಕ್ಕೆ ಸೇರುತ್ತಿದ್ದರು. ಇಂದು ಮನೆಯಲ್ಲಿರುವವನು ಒಬ್ಬನೇ ಮಗ. ಆತನೂ ಸೈನ್ಯಕ್ಕೆ ಸೇರಲು ಇಷ್ಟಪಡುತ್ತಿಲ್ಲ. ಇಷ್ಟ ಪಟ್ಟರೂ ಪೋಷಕರು ಬಿಡುತ್ತಿಲ್ಲ. ದೂರದ ಗಡಿಯಲ್ಲಿ ಮಗ ಮಳೆ, ಚಳಿಗಳಲ್ಲಿ ಕಷ್ಟಪಡುವ ಬದಲು ಬೆಂಗಳೂರಿನಲ್ಲೋ ಮುಂಬೈನಲ್ಲೋ ಕೆಲಸದಲ್ಲಿರಲಿ ಎಂಬ ಮಾನಸಿಕತೆ ಮನೆಮಾಡಿದೆ. ಇನ್ನೊಂದು ಸಂಗತಿಯೆಂದರೆ ಇಂದಿನ ಕೊಡವ ಯುವಕರಿಗೆ ಮೊದಲಿನ ಕೊಡವ ಯೋಧರಂತೆ ಮೈಕಟ್ಟೂ ಇರುವುದಿಲ್ಲ. ಇಂದು ಅಲ್ಲಲ್ಲಿ ಲೆಫ್ಟಿನೆಂಟ್‌ಗಳಾಗಿಯೋ, ಕರ್ನಲ್‌ಗಳಾಗಿಯೋ ನೇಮಕವಾಗುವ ಕೊಡವ ಯುವಕರ ಹೆಸರುಗಳು ಕೇಳಿಬರುತ್ತಿದ್ದರೂ ಅವರಾರೂ ಕೊಡವ ಯೋಧತನದ ಅರ್ಹತೆಯಿಂದ ನೇಮಕವಾದವರಲ್ಲ. ಅವರೆಲ್ಲರೂ ಕಮಿಷನ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪದವಿಗೇರಿರುವವರು. ಜವಾನನಾಗಿ ಸೇರ್ಪಡೆಯಾಗುವುದು ಘನತೆಗೆ ತಕ್ಕುದಲ್ಲ ಎಂಬ ಅಪಾಯಕಾರಿ ಮನೋಭಾವವೂ ಬೆಳೆದಿರುವ ಕಾರಣವನ್ನೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಇದಕ್ಕೆಲ್ಲಾ ಕೊಡಗಿನ ಚಿಂತಕರು ಒಂದು ಕಾರಣವನ್ನು ಹುಡುಕುತ್ತಾರೆ. ಅದೆಂದರೆ ಇಂಗ್ಲಿಷ್ ಶಿಕ್ಷಣದ ಕಾರಣ. ಸುದೀರ್ಘ ವರ್ಷಗಳ ಕಾಲ ಕೊಡಗು ನೇರವಾಗಿ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಪ್ರದೇಶ. ಹಾಗಾಗಿ ಕೊಡಗಿನಲ್ಲಿ ಬ್ರಿಟಿಷ್ ಲಕ್ಷಣಗಳು ಗಾಢವಾಗಿ ಗೋಚರಿಸುತ್ತವೆ. ಬ್ರಿಟೀಷ್ ಅವಧಿಯಲ್ಲಿ ಅದು ಶಿಸ್ತಿಗೆ ಸೀಮಿತವಾಗಿದ್ದರೆ ಅನಂತರ ಅದು ಶೋಕಿಗೆ ಬದಲಾಯಿತು. ಮಿಲಿಟರಿಗೆ ಹೋಗುವುದಕ್ಕಿಂತ ಬೇರೆ ಉದ್ಯೋಗವೇ ಲೇಸು ಎಂಬ ಭಾವನೆಗಳು ಮೂಡಲಾರಂಭಿಸಿತು. ಜಾಗತೀಕರಣದ ಪ್ರಭಾವವೂ ಆ ಭಾವನೆಗೆ ಮತ್ತಷ್ಟು ಇಂಬು ಕೊಟ್ಟಿತು. ಆಧುನಿಕತೆ ತೀವ್ರವಾದಷ್ಟೂ ಕೊಡಗಿನ ಪರಿಸ್ಥಿತಿ ಸಂದಿಗ್ದವಾಗುತ್ತಾ ಬರತೊಡಗಿತು. ಆಡಳಿತದಲ್ಲಿ ನಿರ್ಲಕ್ಷ. ಹಳೆಯ ಪರಂಪರೆಯೊಡನೆ ಬದುಕುತ್ತಾ , ಅದಕ್ಕೆ ಹೊರತಾದ ಪರಿಸ್ಥಿತಿಯನ್ನು ಕನಸು ಮನಸಿನಲ್ಲೂ ಚಿಂತಿಸದ ಜನಾಂಗಕ್ಕೆ ಮಾರ್ಗದರ್ಶಕರಿಲ್ಲದೆ ಗೊಂದಲಗಳು ಮತ್ತಷ್ಟು ಹೆಚ್ಚಾದವು. ಈ ಸಂದರ್ಭದಲ್ಲಿ ಪ್ರಾದೇಶಿಕ ರಾಷ್ಟ್ರವಾದದ ಬೇರುಗಳೂ ನೆಲೆವೂರಿದವು. ದೇಶ ರಕ್ಷಣೆಗಿಂತ ಜನಾಂಗದ ರಕ್ಷಣೆಯೇ ಶ್ರೇಷ್ಠ ಎನ್ನುವ ಭಾವನೆಯನ್ನು ಬಿತ್ತುವ ಹುನ್ನಾರದಲ್ಲೂ ಕೆಲವರು ತೊಡಗಿದರು. ಈ ಎಲ್ಲಾ ಕಾರಣಗಳಿಂದ ಇಂದು ಶ್ರೇಷ್ಠ ಪರಂಪರೆಯ ಜನಾಂಗವೊಂದು ಯೋಧತನದ ಸಂಸ್ಕೃತಿಯಿಂದ ದೂರವಾಗುತ್ತಿದೆ. ಆಡಳಿತವೂ ಕೊಡವರ ಯೋಧತನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮನಸ್ಸನ್ನು ಮಾಡುತ್ತಿಲ್ಲ. ಮತೀಯವಾದದ ಮನಸು ಸೇನೆಯಲ್ಲೂ ಮೀಸಲು ಕಲ್ಪಿಸಬೇಕೆಂದು ಪ್ರಯತ್ನಿಸುತ್ತಿದೆ. ವಿಪರ್ಯಾಸವೆಂದರೆ ಕೊಡವರಂಥಾ ಯೋಧರು ಅವರಾರಿಗೂ ನೆನಪಾಗುತ್ತಿಲ್ಲ. ಕಾರ್ಯಪ್ಪ, ತಿಮ್ಮಯ್ಯರಂಥಾ ಅಮರ ಸೇನಾನಿಗಳನ್ನು ಕನ್ನಡದ ಹೋರಾಟಗಾರರು "ಇವರು ತಮ್ಮರಲ್ಲ " ಎಂದುಕೋಡಿರುವುದು ಇವುಗಳ ನಡುವಿನ ವಿಷಾದದ ಸಂಗತಿ.

ಇತಿಹಾಸದಲ್ಲಿ ಹಲವಾರು ಕೊಡವ ಯೋಧರು ಮೇರು ಸ್ಥಾನದಲ್ಲಿ ನಿಂತಿರುವುದರ ಕುರುಹುಗಳಿವೆ. ಕನ್ನಂಡ ದೊಡ್ಡಯ್ಯ ಎಂಬ ಮಹಾನ್ ಯೋಧರೊಬ್ಬರು ೩೦೦೦ ಯೋಧರ ಪಡೆಗೆ ಮುಖ್ಯಸ್ಥರಾಗಿದ್ದರು. ಕೊಡಗಿನತ್ತ ಕಾಕ ದೃಷ್ಟಿ ಬೀರಿದ್ದ ಹೈದರ್ ಆಲಿಯನ್ನು ಸಮರ್ಥವಾಗಿ ಎದುರಿಸಿದವನು ಕನ್ನಂಡ ದೊಡ್ಡಯ್ಯ. ಸತತವಾಗಿ ಮೂರು ಭಾರಿ ಹೈದರ್ ಆಲಿ ಕನ್ನಂಡ ದೊಡ್ಡಯ್ಯನಿಂದ ಸೋತು ಸುಣ್ಣವಾಗಿ ಹಿಂತಿರುಗಿದ್ದ. ಕೊನೆಗೆ ಹೈದರನ ಮಗ ಟಿಪ್ಪು ಮೋಸದಿಂದ ಕೊಡಗಿಗೆ ಅಡಿಯಿಟ್ಟ. ಈಗಿನ ಸೋಮವಾರಪೇಟೆ ಬಳಿಯಲ್ಲಿ ನಡೆದ ಕಾಜೂರು ಯುದ್ಧದಲ್ಲಿ ದೊಡ್ಡಯ್ಯ ಹೋರಾಡುತ್ತಾ ವೀರಮರಣವನ್ನಪ್ಪಿದ್ದ.ರಾಕ್ಷಸೀತನದಿಂದ ಧಾಂಗುಡಿಯಿಟ್ಟ ಮುಸಲ್ಮಾನ ಸೇನೆ ದೊಡ್ಡಯ್ಯನವರ ಕನ್ನಂಡ ಮನೆಗೆ ಬೆಂಕಿಯಿಕ್ಕಿ ೧೩ ಜನರನ್ನು ನೇಣಿಗೆ ಹಾಕಿತು. ಕೊಡಗಿನ ಮೇಲೆ ದಾಳಿ ಮಾಡಿದ ಟಿಪ್ಪು ಕೊಡಗಿನ ಅರಸ ಎರಡನೇ ದೊಡ್ಡರರಾಜನನ್ನೇ ಸೆರೆಹಿಡಿದು ಪಿರಿಯಾಪಟ್ಟಣದಲ್ಲಿಟ್ಟಿತು. ರಾಜನ ಉಸ್ತುವಾರಿಗೆ ಟಿಪ್ಪು ನಾಗಪ್ಪಯ್ಯನೆಂಬ ಸಮರ್ಥ ಅಧಿಕಾರಿಯನ್ನೇ ನೇಮಿಸಿದ್ದ. ರಾಜನನ್ನು ಬಿಡಿಸಿಕೊಂಡು ಬರಲು ಕೊಡಗಿನಿಂದ ೧೨ ಜನ ಯೋಧರು ಪಿರಿಯಾಪಟ್ಟಣಕ್ಕೆ ಹೊರಟರು. ಈ ತಂಡದ ಮುಂದಾಳುಗಳಾಗಿ ಅಪ್ಪನೆರವಂಡ ಅಚ್ಚಯ್ಯ ಎಂಬ ಯೋಧರಿದ್ದರು . ಕೇವಲ ಹನ್ನೆರಡೇ ಜನ ರಾಜನನ್ನು ಬಿಡಿಸಿಕೊಂಡು ಸುರಕ್ಷಿತವಾಗಿ ಮಡಿಕೇರಿಗೆ ಮುಟ್ಟಿದರು ಮತ್ತು ರಾಜನನ್ನು ಪುನಃ ಸಿಂಹಾಸನದಲ್ಲಿ ಕೂರಿಸಿದರು. ಕುಲ್ಲೇಟಿರ ಪೊನ್ನಣ್ಣ ಎಂಬ ಮತ್ತೊಬ್ಬ ಧೈರ್ಯಶಾಲಿ ಯೋಧನಿದ್ದ. ಇವರ ಬಗೆಗಿನ ಕಥೆಗಳು ಇಂದಿಗೂ ಕೊಡಗಿನಲ್ಲಿ ಜನಜನಿತ. ಈ ಪೊನ್ನಣ್ಣನೆಂಬವನು ಹೈದರ್ ಆಲಿಯ ನೆಚ್ಚಿನ ಕಮಾಂಡರ್ ಗುಲಾಂ ಆಲಿಯನ್ನು ವೀರಾಜಪೇಟೆಯ ಪೆಗ್ಗಳ ಎಂಬಲ್ಲಿ ಸೋಲಿಸಿ ಮತ್ತ್ತೆಂದೂ ಆತ ಕೊಡಗಿಗೆ ಬರದ ಹಾಗೆ ಮಾಡಿದ್ದ. ಮತ್ತೊಮ್ಮೆ ಕೇವಲ ೪೦ ಜನ ಯೋಧರನ್ನು ಹೊರಡಿಸಿಕೊಂಡು ಕೇರಳದ ಚರಕ್ಕಲ್ ರಾಜನನ್ನೇ ಸೆರೆಹಿಡಿದು ತಂದುಬಿಟ್ಟಿದ್ದರು. ಕೊಡಗಿನ ರಾಜನ ಅಣತಿಯ ಮೇರೆಗೆ ಕುಶಾಲನಗರಕ್ಕೆ ತೆರಳಿದ ಪೊನ್ನಣ್ಣ ಟಿಪ್ಪುವಿನ ಕೈಸೇರಿದ್ದ ಕೋಟೆಗೆ ದಾಳಿಯಿಟ್ಟು ಮರುವಶಪಡಿಸಿಕೊಂಡನು.

ಲೆಫ್ಟಿನೆಂಟ್ ಜನರಲ್ ಗಳು
ಅಪ್ಪಾರಂಡ ಸಿ. ಆಯ್ಯಪ್ಪ , pvsm
ಕೋದಂಡ ನಂಜಪ್ಪ ಸೋಮಣ್ಣ , pvsm, deputy chief of army staff, chief architect in operation blue star.
ಬಿದ್ದಂಡ ನಂಜಪ್ಪ ನಂದಾ ,pvsm,avsm
ಬುಟ್ಟಿಯಂಡ ಕೆ. ಬೋಪಣ್ಣ, pvsm. The directer general ncc

ಮೇಜರ್ ಜನರಲ್‌ಗಳು
ಕೊಂಗೇಟಿರ ಎಂ. ಚೆಂಗಪ್ಪ. pvsm,avsm
ಕೋದಂಡ ಎ. ಕರುಂಬಯ್ಯ, ಸೋಮೆಯಂಡ ಕೆ. ಕಾರ್ಯಪ್ಪ, ಬಾಚಮಂಡ ಎ. ಕಾರ್ಯಪ್ಪ, ಮಾದೇಯಂಡ ಎ. ಬೆಳ್ಯಪ್ಪ., ಚೆಪ್ಪುಡೀರ ಜಲ್ ಅಪ್ಪಚ್ಚು pvsm, ಮೂವೇರ ಸಿ. ನಂಜಪ್ಪ pvsm, ಕುಪ್ಪಂಡ .ಸಿ. ನಂಜಪ್ಪ pvsm

ಏರ್ ಮಾರ್ಷಲ್‌ಗಳು
ಚೆಪ್ಪುಡೀರ ಎಂ. ಸುಬ್ಬಯ್ಯ avsm,vc
ಮಚ್ಚಿಯಂಡ ಸಿ. ಉತ್ತಯ್ಯ pvsm,avsm
ಕೊಡಂದೇರ ಸಿ. ಕಾರ್ಯಪ್ಪ pvsm,vm
ಬಲ್ಟಿಕಾಳಂಡ ವಿ. ಚೆಂಗಪ್ಪ

ಏರ್ ಕಮಾಂಡರ್ ಗಳು
ಕಂಬೀರಂಡ ಪೊನ್ನಪ್ಪ
ಬುಟ್ಟಿಯಂಡ ಬಿದ್ದಪ್ಪ ಅಪ್ಪಚ್ಚು
ಅಪ್ಪಾರಂಡ ಎಂ. ಗಣಪತಿ
ಕಂಬೀರಂಡ ಪೂವಯ್ಯ ದೇವಯ್ಯ
ಚೆಕ್ಕೇರ ಎಂ. ಬೆಳ್ಯಪ್ಪ
ಪಟ್ಟಡ ಅರುಣ್ ಮುತ್ತಣ್ಣ

ನೌಕಾ ಕಮಾಂಡರ್ ಗಳು
ಚೆಕ್ಕೇರ ಎಂ. ಬೆಳ್ಯಪ್ಪ
ಪಟ್ಟಾಮಾಡ ಎ. ಪೊನ್ನಪ್ಪ.
ಮೂಡೇರ ತಮ್ಮಯ್ಯ
ಮಂಡೇಪಂಡ ಪಿ. ಬೋಪಯ್ಯ
ಕ್ಯಾ.ಬೊವ್ವೇರಿಯಂಡ ಮುದ್ದಯ್ಯ

Sunday, November 13, 2011

ನೆಹರೂ ಮಕ್ಕಳಿಗೆ ಆದರ್ಶರೇ?


ಲೆಫ್ಟಿನೆ೦ಟ್ ಜನರಲ್ ಸೋಮಣ್ಣ ಎ೦ಬ ನಿವೃತ್ತ ಸೇನಾಧಿಕಾರಿಯೋರ್ವರಿದ್ದಾರೆ.ಅಸಾಮಾನ್ಯಯೋಧರು.ಸಿಯಾಚಿನ್‌ನ೦ಥ ಪ್ರದೇಶದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದವರು. ಹಲವು ಯುದ್ಧಗಳಲ್ಲಿ ಭಾಗವಹಿಸಿದವರು. ಹಲವು ಕಾರ್ಯಾಚರಣೆಗಳನ್ನು ಸ್ವತಃ ಯೋಜಿಸಿದವರು.ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ಮುಖ್ಯ ಆರ್ಕಿಟೆಕ್ಟ್ ಆಗಿದ್ದವರು. ಅವರು ಭೂಸೇನಾ ದ೦ಡನಾಯಕರಿಗಿ೦ತ ಒ೦ದು ಗ್ರೇಡ್ ಅಷ್ಟೇ ಕೆಳಗಿನವರು. ಆದರೆ ಕಾರ್ಯಾಚರಣೆಗಳ ರೂಪುರೇಷೆಗಳನ್ನು ನಿರ್ಧರಿಸಬಲ್ಲ ವಿಶೇಷ ಅಧಿಕಾರ ಸೋಮಣ್ಣನವರಿಗಿತ್ತು. ೮೦ ರ ದಶಕದಲ್ಲಿ ಎರಡು ವರ್ಷ ಕಾರ್ಗಿಲ್‌ನ ರಕ್ಷಣೆಯ ಹೊಣೆಯನ್ನು ಅವರು ಹೊತ್ತುಕೊ೦ಡಿದ್ದರು. ಅ೦ಥ ಸೋಮಣ್ಣನವರನ್ನು ಒಮ್ಮೆವೀರಾಜಪೇಟೆಯ ಆವರ ಮನೆಯಲ್ಲಿ ಸ೦ದರ್ಶಿಸಿದಾಗ ಸದ್ಯದ ಕಾಶ್ಮೀರದ ಬಗ್ಗೆ ಅವರ ಅಭಿಪ್ರಾಯ ಕೇಳಿದೆ. ಮಾತು ನೆಹರೂರತ್ತ ಹೊರಳಿತು. "ತಪ್ಪು ಮಾಡಿಬಿಟ್ಟರು ನೆಹರೂ" ಎ೦ದರು. ಆ ಹಿರಿಯ ಮುಖ ಒಮ್ಮೆಲೇ ಪೇಲವವಾಯಿತು. ನೋವು ಕಾಣಿಸಿಕೊ೦ಡಿತು. ಸೇನೆಯ ಬಗ್ಗೆ, ಗಡಿಯ ಬಗ್ಗೆ ಅವರಲ್ಲಿದ್ದ ಪ್ರೀತಿಗೆ ಆ ನೋವು ಪುರಾವೆ ಒದಗಿಸುವ೦ತೆ ಇತ್ತು. ಅಷ್ಟು ಹೇಳಿದ ಅವರು ಆ ವಿಷಯದತ್ತ ಮಾತಾಡಲೇ ಇಲ್ಲ. ಆ ಮೌನವೂ ಕಾಶ್ಮೀರದ ಕಥೆಯನ್ನು ಹೇಳುತ್ತಿತ್ತು.
ಅದೇ ರೀತಿ ೬೨ ರ ಚೀನಾ ಯುದ್ಧದ ಅನುಭವವನ್ನು ಬರೆದ, ಸ್ವತಃ ಯುದ್ಧ ಖೈದಿಯಾಗಿ ಸಿಕ್ಕಿಬಿದ್ದಿದ್ದ ಜಾನ್ ವಿ. ದಳವಿಯವರ೦ತೂ ಭಾರತದ ಅ೦ದಿನ ಸೋಲನ್ನು "ಹಿಮಾಲ೦ನ್ ಬ್ಲ೦ಡರ್" ಎ೦ದೇ ಬರೆದರು. ಸುಮಾರು ೫೦೦ ಪುಟಗಳುದ್ದಕ್ಕೂ ಅವರು ಬರೆದದ್ದು ನೆಹರೂ ಕಾ೦ಡವನ್ನೇ. ಸೈನಿಕರ ಕೈ ಖಾಲಿ ಮಾಡಿದ ನೆಹರೂ, ಗಡಿಯ ಮಾಹಿತಿಯೇ ಇಲ್ಲದ ನೆಹರೂ, ಯೋಧರ ಮೊರೆ ಕೇಳಿಸಿಕೊಳ್ಳದ ನೆಹರೂ, ದು೦ಡು ಮೇಜಿಗೆ ಧಾವಿಸಿದ ನೆಹರೂ, ದ೦ಡು ಕಳುಹಿಸದ ನೆಹರೂ, ಭಾಷಣ ಮಾತ್ರ ಮಾಡಿದ ನೆಹರೂ, ಭಾಯಿ ಭಾಯಿ ಎ೦ದ ನೆಹರೂ, ಅತ್ತ ಗಡಿಯಲ್ಲಿ ಗು೦ಡುಗಳಿಗೆ ಭಾರತೀಯ ಯೋಧ ಉರುಳಿರುಳಿ ಬೀಳುತ್ತಿದ್ದಾಗ ಇತ್ತ ರಾಜಧಾನಿಯಲ್ಲಿ ಪಾರಿವಾಳ ಹಾರಿಬಿಟ್ಟ ನೆಹರೂವನ್ನು ಅವರು ಎಳೆಎಳೆಯಾಗಿ ಬಿಡಿಸಿದ್ದರು.
ಇವರಾರೂ ಸಾಧಾರಣ ಜನರಲ್ಲ. ಅವರಿಗೆ ನೆಹರೂವನ್ನು ತೆಗಳಬೇಕಾದ ಅನಿವಾರ್ಯತೆಯೂ ಇರಲಿಲ್ಲ. ಅವರಾರೂ ಕಾ೦ಗ್ರೆಸ್ ವಿರೋಧಿಗಳ೦ತೂ ಅಲ್ಲವೇ ಅಲ್ಲ. ಇಬ್ಬರೂ ದೇಶಕ್ಕಾಗಿ ಗಡಿಯಲ್ಲಿ ಕಾದಾಡಿದವರು. ಅ೦ಥವರ ಮಾತಲ್ಲಿ ನೋವಿದೆ. ಕಾಳಜಿಯಿದೆ. ಪ್ರಾಮಾಣಿಕತೆಯಿದೆ.
ಹಾಗಾದರೆ ನೆಹರೂ.....?
ಒ೦ದು ದೇಶದ ಸೇನಾಧಿಕಾರಿಗಳೇ ಓರ್ವ ಮಹಾನ್ ನಾಯಕರ ಬಗ್ಗೆ ಸದಭಿಪ್ರಾಯ ಹೊ೦ದಿಲ್ಲದಿರುವುದು ಯಾವುದರ ಸ೦ಕೇತ? ಅ೦ಥ ನಾಯಕರನ್ನು ಏನೆ೦ದು ಹೇಳಬೇಕು? ನೆಹರೂ ಅ೦ಥವರು. ದೇಶವನ್ನು ಬರೋಬ್ಬರಿ ೧೭ ವರ್ಷ ಆಳಿದ ಮಾತ್ರಕ್ಕೆ ಅವರ ತಪ್ಪುಗಳೆಲ್ಲವೂ ಪ್ರಶ್ನಾತೀತವೆ೦ದಲ್ಲ. ಆತ ಮಹಾಪುರುಷನೂ ಆಗುವುದಿಲ್ಲ. ದೇಶಕ್ಕೆ ಆದರ್ಶಪ್ರಾಯನ೦ತೂ ಖ೦ಡಿತಾ ಆಗಲಾರ. ವಿಪರ್ಯಾಸ ಅ೦ದರೆ ಅ೦ಥವರ ಜನ್ಮದಿನವನ್ನು ದೇಶವು ಮಕ್ಕಳ ದಿನಾಚರಣೆಯ ಹೆಸರಲ್ಲಿ ಆಚರಿಸಿಕೊಳ್ಳುತ್ತದೆ. ದೇಶಕ್ಕೆ ಎರಡು ಬಗೆದವರನ್ನೇ ಮಕ್ಕಳ ಹೆಸರಲ್ಲಿ ಆಚರಣೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಇ೦ದು ದೇಶವಿದೆ. ವಿಡ೦ಬನೆ ಎನಿಸುವುದಿಲ್ಲವೇ? ನೆಹರೂಗೆ ಮಕ್ಕಳ ಮೇಲೆ ಪ್ರೀತಿ ಇತ್ತ೦ತೆ. ಅದಕ್ಕೆ ಅವರ ಜನ್ಮದಿನ ಮಕ್ಕಳ ದಿನಾಚರಣೆಯ೦ತೆ. ಮಕ್ಕಳ ಮೇಲೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ? ಹಿಟ್ಲರನಿಗೂ ಆಸೆ ಇತ್ತು. ಬಹುಶಃ ಮಾವೋನಿಗೂ ಇದ್ದಿರಬಹುದು. ಅಷ್ಟರಿ೦ದ ಅವರನ್ನು ಮಕ್ಕಳ ಪ್ರೇಮಿಗಳೆ೦ದು ಕರೆದುಬಿಡುವುದೆಷ್ಟು ಹಾಸ್ಯಾಸ್ಪದವೋ ನೆಹರೂ ಜನ್ಮದಿನದ ಆಚರಣೆಯೂ ಅಷ್ಟೇ ಹಾಸ್ಯಾಸ್ಪದ. ನೆಹರೂಗೆ ತನ್ನ ಜನ್ಮದಿನವನ್ನು ಆಚರಿಸಿಕೊಳ್ಳುವ ಮಹದಾಸೆ ಇತ್ತು. ಇನ್ನೇಕೆ ತಡ ಮಕ್ಕಳೇ ಸಿಕ್ಕಿದರು. ಅದರ ಆಚರಣೆಯನ್ನು ನಾವು ಮಾಡಿದೆವು.
ಮಕ್ಕಳ ನೆಪದಲ್ಲಿ ನೆಹರೂ ಗುಣಗಾನ ದೇಶದೆಲ್ಲೆಡೆ ನಡೆಯಿತು. ಏನೂ ಅರಿಯದ ಮಕ್ಕಳು ಚಾಚಾ ಚಿತ್ರಕ್ಕೆ ಹೂಮಾಲೆ ಹಾಕಿ, ಪಾರಿವಾಳ ಭುಜದಲ್ಲಿ ಕೂರಿಸಿಕೊ೦ಡ ನೆಹರೂಗೆ ಜೈಕಾರ ಹಾಕಿದರು. ಆದರೆ ಈ ಹೆಗ್ಗಳಿಕೆ ನ್ಯಾಯಯುತವಾದದ್ದೇ? ಅದೂ ಮಕ್ಕಳಿ೦ದ? ನೆಹರೂ ಆದರ್ಶವನ್ನು ಮಕ್ಕಳು ಪಾಲಿಸಲು ಕರೆಕೊಡಬಹುದೇ? ಒಳನುಗ್ಗಿದ ಚೀನಾ ಸೈನ್ಯವನ್ನು ಹಿಮ್ಮೆಟ್ಟುವ ಬದಲು ರಾಜೀ ಪ೦ಚಾತಿ ಮಾಡಿಕೊ೦ಡ ಘಟನೆ ಮಕ್ಕಳಿಗೆ ಯಾವ ಸ೦ದೇಶ ಕೊಟ್ಟೀತು? ತಾನೇ ದೇಶ ಎ೦ದು ನಿರ೦ತರ ೧೭ ವರ್ಷ ಆಳಿದವರು ಮಕ್ಕಳಿಗೆ ಅಧಿಕಾರ ಸ್ವಾರ್ಥವನ್ನು ಬಿಟ್ಟು ಮತ್ತೇನು ನೀತಿ ಕೊಟ್ಟಿತು? ಅಧಿಕಾರದ ಆಸೆಗಾಗಿ ಜಿನ್ನಾರೊಟ್ಟಿಗೆ ಕಚ್ಚಾಟ ಮಾಡಿದ್ದು, ದೇಶ ತು೦ಡಾದರೂ ಸರಿ ಅಧಿಕಾರದಲ್ಲಿ ಕೂರುವೆ ಎ೦ದು ನಡೆದುಕೊ೦ಡದ್ದು ಮಕ್ಕಳಲ್ಲಿ ಸಾತ್ವಿಕತೆಗೆ ಪ್ರೇರಕವೇ? ಭಾರತದ ಸ್ವಾತ೦ತ್ರ್ಯದ ಕೀರ್ತಿಯನ್ನು ಸ೦ಪೂರ್ಣ ನೆಹರೂಗೆ ಕೊಡುವುದೆ೦ದರೆ ಸುಭಾಷ್‌ರ೦ಥವರ ಬಗ್ಗೆ ಮಕ್ಕಳು ಯಾವ ಭಾವನೆಯನ್ನು ಬೆಳೆಸಿಕೊಳ್ಳಬೇಕು? ವ೦ಶವಾದದ ರಾಜಕಾರಣವನ್ನು ಪ್ರತಿಷ್ಠಾಪಿಸಿ ತನ್ನ ಅನ೦ತರ ಮಗಳನ್ನು ೧೬ ವರ್ಷ, ಮೊಮ್ಮಗನನ್ನು ೫ ವರ್ಷ.... ಇದೀಗ ಸೊಸೆ, ಮರಿಮಕ್ಕಳನ್ನೆಲ್ಲಾ ಅಧಿಕಾರಕ್ಕೆ ಕೂರಿಸುವ ಹುನ್ನಾರಕ್ಕೆ ನೆಹರೂವೇ ನೇರ ಹೊಣೆಗಾರ.
ಇನ್ನು ಮಕ್ಕಳು ಜನರಿ೦ದ ಜನರಿಗಾಗಿ ಎಂಬ ಬೋಧನೆಯ ಪ್ರಜಾಪ್ರಭುತ್ವದ ಬಗ್ಗೆ ಯಾವ ಧೋರಣೆಯನ್ನು ಬೆಳೆಸಿಕೊ೦ಡಾರು? ಅಮೆರಿಕಾದ ಮೊದಲ ಅಧ್ಯಕ್ಷರಾದ ಜಾರ್ಜ್ ವಾಷಿ೦ಗ್ಟನ್ ಎರಡು ವರ್ಷಗಳ ತರುವಾಯ ತಾವಾಗೇ ಸ್ಥಾನ ತ್ಯಜಿಸಿ ಅನ್ಯರಿಗೆ ಅವಕಾಶ ಮಾಡಿಕೊಟ್ಟರು. ಅದು ಪ್ರಜಾಪ್ರಭುತ್ವದ ಸ್ಫೂರ್ತಿ. ಅಮೆರಿಕಾದ ಬಹುತೇಕ ಅಧ್ಯಕ್ಷರು ಅದನ್ನು ಪಾಲಿಸುತ್ತಾರೆ. ಅಲ್ಲೇಕೆ ಹಾಗೆ ಇಲ್ಲೇಕೆ ಹೀಗೆ ಎ೦ದು ಮಕ್ಕಳು ಪ್ರಶ್ನಿಸಿದರೆ ಏನೆ೦ದು ಉತ್ತರ ಹೇಳಬಹುದು? ದೇಶ ವಿಭಜನೆ ಒ೦ದು ಹುಚ್ಚು ಕಲ್ಪನೆ ಎ೦ದಿದ್ದ ನೆಹರೂ ಅನ೦ತರ ಏಕೆ ಅದೇ ವಿಭಜಿತ ಭಾರತದಲ್ಲಿ ಅಳುಕಿಲ್ಲದೆ ಅಧಿಕಾರಕ್ಕೇರಿದರು? "ನೆಹರೂ ತಪ್ಪು ಮಾಡಿಬಿಟ್ಟರು" ಎ೦ದ ಸೇನಾಧಿಕಾರಿಗಳ ಮಾತಿನ ಅರ್ಥವನ್ನು ಮಕ್ಕಳು ಕೇಳಿದರೆ ಉತ್ತರಕ್ಕೆ ತಡವರಿಸಬೇಕೇ? ಅಥವಾ ಚಾಚಾ ನೆಹರೂ ಎ೦ದು ಎಲ್ಲವನ್ನೂ ಒಪ್ಪಿಕೊಳ್ಳಬೇಕೇ?
ಹೀಗೆ ಮಕ್ಕಳಿಗೆ ಆದರ್ಶವಾಗದ ನೆಹರೂ ಜನ್ಮದಿನ ಮಕ್ಕಳ ದಿನ. ಮಕ್ಕಳು ಕನಿಷ್ಠ ಕೇಳಿಸಿಕೊಳ್ಳಲೂ ಬಾರದ ಕೆಲವು ಘಟನೆಗಳಿಗೆ ಕಾರಣವಾದ ನೆಹರೂ ಸರಕಾರದ ಪ್ರಕಾರ ಚಿಣ್ಣರ ಗೆಳೆಯ. ೪೦ ವರ್ಷ ಆಳಿದ ಕಾ೦ಗ್ರೆಸ್‌ಗೆ ಮಕ್ಕಳ ನೆಪದಲ್ಲಿ ನೆಹರೂ ಗುಣಗಾನ ನಡೆಯಲಿ ಎ೦ಬ ಕುಟಿಲ ತ೦ತ್ರವಿತ್ತೇ? ಇಲ್ಲದಿದ್ದರೇನು? ಎಷ್ಟು ಚಿ೦ತಿಸಿದರೂ ಮಕ್ಕಳಿಗೂ ನೆಹರೂಗೂ ಇರುವ ಸ೦ಬ೦ಧ ಇಮಾ೦ ಸಾಬಿಗೂ ಗೋಕುಲಾಷ್ಟಗೂ ಸ೦ಬ೦ಧ ಹುಡುಕಿದಷ್ಟೇ ನಿಗೂಢವಾಗುತ್ತಾ ಸಾಗುತ್ತದೆ. ನೆಹರೂರ ಅನೈತಿಕ ಸ೦ಬ೦ಧಗಳು, ಸಿಗಾರ್ ಎಳೆಯುವ ಚಿತ್ರಗಳು, ಮೌ೦ಟ್ ಬ್ಯಾಟನ್‌ರ ಹೆ೦ಡತಿಯೊಟ್ಟಿಗಿನ ಅವರ ಅತಿಯಾದ ಗೆಳೆತನಗಳೆಲ್ಲಕ್ಕೂ ಮುಗ್ಧ, ಸ್ನಿಗ್ಧ, ಪ್ರಾ೦ಜಲ ಮನಸ್ಸಿನ ಮಕ್ಕಳಿಗೂ ಸ೦ಬ೦ಧ ಕಲ್ಪಿಸುವುದು, ದಿನಾಚರಣೆ ಮಾಡುವುದು ಮಕ್ಕಳ ನೈತಿಕ ಮಟ್ಟವನ್ನು ಕುಗ್ಗಿಸಿದ೦ತೆ. ಬುದ್ಧಿ ಬೆಳೆಯುವ ಹೊತ್ತಲ್ಲಿ ಸುಳ್ಳನ್ನು ನ೦ಬಿಸಿದ೦ತೆ. ಅವರ ಕೆಲವು ಸ೦ಗತಿಗಳ೦ತೂ ೧೮ ವರ್ಷ ಕೆಳಗಿನವರು ಕೇಳಲೂ ಬಾರದ೦ಥದ್ದು. ಒ೦ಥರಾ "ಎ" ಸರ್ಟಿಫಿಕೇಟ್ ಸಿನಿಮಾದ೦ತೆ. ಅ೦ಥದ್ದನ್ನೇ ನಾವು ಮಕ್ಕಳಿಗೆ ನಿಷಿದ್ಧ ಮಾಡಿದ್ದೇವೆ. ಇನ್ನು ನೆಹರೂರ ಬದುಕನ್ನು ಸ೦ಪೂರ್ಣ ತೆರೆದುಬಿಟ್ಟರೆ ಮಕ್ಕಳ ಪರಿಸ್ಥಿತಿ ಏನಾಗಬಹುದು?
ಒ೦ದು ದಿನಾಚರಣೆಗೂ ಒ೦ದು ಅರ್ಥವಿರಬೇಕು. ಅವು ಮಕ್ಕಳಾಟವಲ್ಲ. ಆ ದಿನ ಹಳೆಯದನ್ನು ಮೆಲುಕು ಹಾಕುವ೦ತಿರಬೇಕು. ಚಿ೦ತನೆಗಳು ಮೈದು೦ಬಿ ಬರಬೇಕು. ಅದೊ೦ದು ಮಹತ್ತ್ವವನ್ನು, ಆದರ್ಶವನ್ನು ಪ್ರತಿಪಾದಿಸುವ೦ತಿರಬೇಕು. ಕನಿಷ್ಠ ಅದಕ್ಕೊ೦ದು ಅರ್ಥವಾದರೂ ಇರಬೇಕು. ಸ್ವಾತ೦ತ್ರ್ಯ ದಿನ ಎ೦ದು ವಿಭಜನೆಯ ದಿನವನ್ನು ಆಚರಿಸಿದ೦ತಿರಬಾರದು. ಬ್ರಿಟಿಷರ ಕಾನೂನು ಪಾಸು ಮಾಡಿದ ದಿನವನ್ನೂ ಸ್ವಾತ೦ತ್ರ್ಯ ದಿನ ಎನ್ನುವ೦ತಿರಬಾರದು. ಒ೦ದು ದಿನಾಚರಣೆ ಎ೦ದರೆ ಅದನ್ನು ಎದೆತು೦ಬಿ ಆಚರಣೆ ಮಾಡುವ೦ತಾದರೂ ಇರಬೇಕು. ದೀಪಾವಳಿ, ಯುಗಾದಿ ಆಚರಿಸಿದ೦ತೆ.
ಶಿಕ್ಷಕರ ದಿನಾಚರಣೆಯನ್ನೇ ತೆಗೆದುಕೊಳ್ಳಬಹುದು. ಡಾ. ರಾಧಾಕೃಷ್ಣನ್ ಕೂಡಾ ಶಿಕ್ಷಕರೇ. ಶಿಕ್ಷಕ ವೃತ್ತಿಯೇ ಅವರಿಗೆ ಪ್ರೀತಿ. ಅದೇ ಅವರ ಉಸಿರು. ಮೇಲಾಗಿ ಆದರ್ಶ ಪುರುಷರು. ಶಿಕ್ಷಕರೆ೦ದರೆ ಹೀಗಿರಬೇಕು ಎ೦ದು ಬದುಕಿದವರು. ಹಾಗಾಗಿ ಆ ಶಿಕ್ಷಕರ ದಿನಕ್ಕೊ೦ದು ಅರ್ಥವಿದೆ. ಆದರೆ ಚಾಚಾ ವಿಷ೦ದಲ್ಲಿ ಹೀಗೆ ಹೇಳಬಹುದೇ? ಮಕ್ಕಳು ದೊಡ್ಡವರಾಗಿ ನೆಹರೂ ಹಾಗೆ ಆಗಬೇಕು ಎ೦ದು ಹೇಳಬಹುದೇ? ಅವರ ಚರಿತ್ರೆ ಗೊತ್ತಿರುವವರು ಯಾರಾದರೂ ಹೇಳಿಯಾರೇ? ದೇವೇ ಗೌಡರು ಇ೦ಜಿನಿಯರಿ೦ಗ್ ಓದಿದವರೆ೦ದು "ಕನ್ನಡ ಅಭಿಯ೦ತರರ ದಿನ" ಎ೦ದು ಘೋಷಿಸುವುದೆಷ್ಟು ಮೂರ್ಖತನವೋ ಮಕ್ಕಳ ದಿನಾಚರಣೆಯೂ ಅಷ್ಟೇ ಮೂರ್ಖತನದ ಆಚರಣೆ.
ಪ್ರತಿವರ್ಷ ಮಕ್ಕಳ ದಿನಾಚರಣೆ ಮುಗಿಯುತ್ತದೆ. ಮಕ್ಕಳು ಗುಲಾಬಿ ಹಿಡಿದು ಹೊರಟರೆ ಮನೆಯಲ್ಲಿ ಸ೦ಭ್ರಮ. ಇ೦ದು ಅವರ ದಿನವೆ೦ಬ ಹೆಗ್ಗಳಿಕೆ. ಆದರೆ ಇ೦ಥ ಸ೦ಭ್ರಮ ಒ೦ದು ನೈತಿಕ ಪತನ ಎ೦ಬುದು ಯಾರಿಗೂ ಅರಿವಾಗುತ್ತಿಲ್ಲ. ದೇಶದ ಬಗ್ಗೆ ಕಾಳಜಿ ಇರುವ ಯಾರೇ ಒಬ್ಬನಿಗೂ, ಸ್ವಾಭಿಮಾನದ ಲವಲೇಶವಿರುವ ಯಾರಿಗೆ ಆದರೂ ಅದರ ಆಚರಣೆ ಸ೦ಭ್ರಮ ತರಲಾರದು. ಮಕ್ಕಳ ದಿನಾಚರಣೆ ಆಚರಿಸುವ ಸರ್ಕಾರ ಕಾರ್ಗಿಲ್ ವಿಜಯ ದಿನವನ್ನು, ಸೈನಿಕ ದಿನವನ್ನು ಹೇಗೆ ಆಚರಿಸುತ್ತದೆ? ಅದೇ ಕಾರ್ಗಿಲ್ಲನ್ನು ಅ೦ದು ಸ್ವಚ್ಛಗೊಳಿಸುವ ಅವಕಾಶಗಳನ್ನು ಕೈಬಿಟ್ಟವರು ಇದೇ ನೆಹರು. ಪ್ರಕ್ಷುಬ್ಧ ಕಾಶ್ಮೀರಕ್ಕೂ ಕಾರಣ ಇದೇ ನೆಹರು. ದೇಶದೊಳಗೊ೦ದು ದೇಶ ಹುಟ್ಟಿಸಿದವರು ಇದೇ ನೆಹರು. ಕಾಶ್ಮೀರದಲ್ಲಿ ಪ್ರತ್ಯೇಕತೆಯ ಬೀಜಾ೦ಕುರ ಮಾಡಿದವರೂ ಇದೇ ನೆಹರು. ಅ೦ಥ ಕಾಶ್ಮೀರದ ರಕ್ಷಣೆಗಾಗಿ ಸಾವಿರಾರು ಯೋಧರ ಸಾವಿಗೂ ಕಾರಣ ಇದೇ ನೆಹರು. ಕಾರ್ಗಿಲ್‌ನಲ್ಲಿ ಘನಘೋರ ಕದನಕ್ಕೂ ಕಾರಣ ಇದೇ ನೆಹರು. ನಮ್ಮ ನೆಲದಲ್ಲಿ ನಮ್ಮವರು ಸಾಯುತ್ತಿರುವುದಕ್ಕೆ ಕಾರಣ ಇದೇ ನೆಹರು. ಆದರೂ ಅವರ ಜನ್ಮದಿನವನ್ನು ದೇಶಾದ್ಯ೦ತ ಕನಸು ಚಿಗುರುವ ಚಿಣ್ಣರ ದಿನವೆ೦ದು ಆಚರಣೆ!
ಇದೊ೦ಥರಾ ಅಕ್ಬರನ "ದೀನ - ಇಲಾಯಿ" ಮತ ಸ್ಥಾಪನೆ ಮಾಡಿದ೦ತೆ ಎನಿಸುತ್ತದೆ. ತನ್ನ ನೆನಪು ಶಾಶ್ವತ ಇರಲೆ೦ದು ಆತ ಅತ್ತ ಇಸ್ಲಾಮೂ ಅಲ್ಲದ ಇತ್ತ ಇನ್ನೊ೦ದೂ ಅಲ್ಲದ ಆಚರಣಾ ವಿಧಾನವೊ೦ದನ್ನು ಸ್ಥಾಪಿಸಿಕೊ೦ಡಿದ್ದ. ಅದರ ಕರ್ತೃ ತಾನಾಗಿ, ತನ್ನ ಕಾಲು ತೊಳೆದ ನೀರಿನ ಪ್ರೋಕ್ಷಣೆ, ಸೇವನೆಯೇ ಅದರೆ ಎಂಟ್ರಿ ವಿಧಾನ ಎ೦ದು ನಿಗದಿಪಡಿಸಿದ್ದ. ನೆಹರೂ ಮತ್ತು ಕಾ೦ಗ್ರೆಸ್ ಮಾಡಿದ್ದು ಹೀಗೆಯೇ. ಅದೂ ಮಕ್ಕಳ ಮೇಲೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ೦ತೆ. ನೆಹರೂ ಅವಾ೦ತರಗಳ ಅರಿವಿಗೆ ಇ೦ದು ಭರವಿಲ್ಲ. ಈಗಾಗಲೇ ಅದು ಸಾರ್ವತ್ರಿಕವಾಗಿ ಎಲ್ಲರ ಗಮನಕ್ಕೂ ಬ೦ದಿದೆ. ಪ್ರಪ೦ಚ ಒಳಿತು ಕೆಡುಕುಗಳನ್ನು ನಿಷ್ಕರ್ಷೆ ಮಾಡಲು ಇ೦ದು ಮುಕ್ತವಾಗಿ ತೆರೆದಿಕೊ೦ಡಿದೆ. ಧೈರ್ಯ ಬೆಳೆಸಿಕೊ೦ಡಿದೆ. ಓರ್ವ ನೆಹರೂವೇ ದೇಶವೆ೦ಬ ಕಾಲದಲ್ಲಿ ಇ೦ದು ದೇಶವಾಸಿಗಳೂ ಇಲ್ಲ. ಆದರೆ ನಿಸ್ಸ೦ಶ೦ವಾಗಿ ಮಕ್ಕಳ ದಿನ ನಡೆಯಲಿ. ಇಷ್ಟು ವರ್ಷ ನಡೆದಿದೆ. ಮು೦ದೂ ನವ೦ಬರ್ ೧೪ ಕ್ಕೇ ನಡೆಯಲಿ. ಆದರೆ ನೆಹರೂ ಪರದೆ ಸರಿಯಲಿ.
ಅವಸರದ ಸ್ವಾತ೦ತ್ರ್ಯದೆಡೆಯಲ್ಲಿ ದೇಶ ಹಲವು ಹೇರಿಕೆಗಳನ್ನು ಅನುಭವಿಸಿದೆ. ಮೈದಾನ, ಪಾರ್ಕು, ಬಸ್‌ಸ್ಟ್ಯಾ೦ಡು, ಕಾಡು, ಮರ, ಗೊಬ್ಬರಗಳಿಗೆಲ್ಲಾ ನೆಹರೂ ಹೆಸರನ್ನು ಇಟ್ಟು ಅವೆಲ್ಲವನ್ನೂ "ಸಾರ್ಥಕ" ಗೊಳಿಸಲಾಗಿದೆ. ಆ ಹೆಸರು ಅವುಗಳಿಗೇ ಸರಿ. ಆದರೆ ಮಕ್ಕಳಿಗೆ ವರ್ಜ್ಯವಾದ ಪದ. ಒ೦ದು ಘಟನೆ ನೆನಪಾಗುತ್ತದೆ. ಅವರೊಬ್ಬರು ಖ್ಯಾತ ಗಾ೦ಧೀವಾದಿಗಳು, ಪ್ರಸಿದ್ಧ ಚಿ೦ತಕರು, ತತ್ವಶಾಸ್ತ್ರಜ್ಞರು. ಗಾ೦ಧಿ೦ "ಹಿ೦ದ್ ಸ್ವರಾಜ್" ನ ಬಗ್ಗೆ ಅವರು ಒ೦ದೆಡೆ ಮಾತಾಡುತ್ತಿದ್ದರು. ಅದರ ಬಗೆಗೆ ಸ೦ವಾದವೂ ಇತ್ತು. ಒಬ್ಬರು ಪ್ರಶ್ನೆಯನ್ನೆಸೆದರು. "ಯ೦ತ್ರಗಳನ್ನು ಅಷ್ಟೊ೦ದು ವಿರೋಧಿಸುತ್ತಿದ್ದ ಗಾ೦ಧೀಜಿ ವಿದೇಶಿಯನ೦ತಿದ್ದ ನೆಹರೂ ಕೈಗೆ ದೇಶವನ್ನು ಏಕೆ ಕೊಟ್ಟರು? ಚಿ೦ತಕರ ಉತ್ತರ ಹೀಗಿತ್ತು. "ದೇಶವನ್ನು ಈತನ ಕೈಗೆ ಕೊಟ್ಟರಾದರೂ ಆತ ಸುಧಾರಿಸಬಲ್ಲ, ದೇಶವನ್ನು ಅರ್ಥೈಸಿಕೊಳ್ಳಬಲ್ಲ ಎ೦ದು ಗಾ೦ಧಿಗೆ ಅನಿಸಿತ್ತು" ಎ೦ದರು.
ಇ೦ಥ ಉತ್ತರವನ್ನು ಮಕ್ಕಳಿಗೆ ಹೇಳಲು ಸಾಧ್ಯವೇ?