ಕಳೆದ ಶುಕ್ರವಾರ ಸಂಜೆ ಮುಂಬೈ ಸಾಹಿತ್ಯೋತ್ಸವದಲ್ಲಿ ಗಿರೀಶ್ ಕಾರ್ನಾಡ್ ಮಾತಾಡಲು ಶುರುಮಾಡಿಯೇ ಬಿಟ್ಟರು. ಮುಂಬೈನ Landumark and literture live ಸಂಸ್ಥೆಗಳು ಜಂಟಿಯಾಗಿ ಸಾಹಿತ್ಯದಲ್ಲಿ ಜೀವಮಾನದ ಸಾಧನೆ ಮಾಡಿದ ವಿ.ಎಸ್. ನೈಪಾಲರಿಗೆ ಗೌರವವನ್ನು ನೀಡಿದ ಕ್ರಮವನ್ನು ಗಿರೀಶ್ ಕಾರ್ನಾಡ್ ಹಿಗ್ಗಾಮುಗ್ಗಾ ಟೀಕಿಸಿದರು. ಅಷ್ಟಕ್ಕೂ ಗಿರೀಶ್ ಕಾರ್ನಾಡರನ್ನು ವೇದಿಕೆಗೆ ಕರೆದಿದ್ದು ತಮ್ಮ ನಾಟಕಗಳ ಬಗ್ಗೆ ಭಾಷಣ ಮಾಡಲು. ಆದರೆ ಸಭಿಕರಿಗೂ ಸಂಘಟಕರಿಗೂ ಮುಜುಗರವಾಗುವಂತೆ ಕಾರ್ನಾಡ್ ನಡೆದುಕೊಂಡರು. ಕೆಲವರನ್ನು ಕೆಲವು ಕಾರ್ಯಕ್ರಮಗಳಿಗೆ ಕರೆಯಲೇಬಾರದು ಎಂಬುದನ್ನು ಕಾರ್ನಾಡ್ ಸಿದ್ಧಮಾಡಿ ತೋರಿಸಿದರು. ಮಾರನೇ ದಿನ ಪತ್ರಿಕೆ ಓದಿದ ಜನ ಇಂಥವರನ್ನು ಕಾಫಿ ತಿಂಡಿ ಕೊಟ್ಟು ಕಳುಹಿಸಿಬಿಡಬೇಕು, ವೇದಿಕೆಗಳಿಗೆಲ್ಲಾ ಕರೆಯಬಾರದು ಎಂದು ಆಡಿಕೊಂಡರು. ಜ್ನಾನಪೀಠವನ್ನೇ ಸಂಶಯಾಸ್ಪದವಾಗಿ ಪಡೆದವರು ನೊಬೆಲ್ ಪಡೆದವರನ್ನು ಹಂಗಿಸಿದರೆ ಜನ ಆಡಿಕೊಳ್ಳದೆ ಇದ್ದಾರೆಯೇ?
"ನೈಪಾಲ್ ಮೂರು ದೊಡ್ಡ ಪುಸ್ತಕಗಳನ್ನು ಬರೆದರೂ ಕೂಡಾ ಅವರಿಗೆ ಭಾರತದ ಬಗ್ಗೆ ಜ್ನಾನ ಇಲ್ಲ", "ಅವರು ಭಾರತೀಯ ಸಂಗೀತದ ಬಗ್ಗೆ ಕಿವುಡರಾಗಿದ್ದಾರೆ", " ನೈಪಾಲರಿಗೆ "ಭಾರತದ ಮುಸಲ್ಮಾನರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅರಿವೇ ಇಲ್ಲ" ಮೊದಲಾದ ಅಣಿಮುತ್ತುಗಳನ್ನು ಕಾರ್ನಾಡ್ ಉದುರಿಸಿದ್ದರು. ಕಾರ್ನಾಡರು ನೈಪಾಲರನ್ನು ನಿಂದಿಸಿದರೆಂದರೆ ನೈಪಾಲ್ ಉತ್ತಮ ಬರಹಗಾರರೇ ಇರಬೇಕು. ನೊಬೆಲ್ಗೆ ತಕ್ಕುದಾದುದೇ ಇರಬೇಕು. ನೊಬೆಲನ್ನು ಅವರು ಖಂಡಿತಾ ಹೊಡಕೊಂಡಿರಲಿಕ್ಕಿಲ್ಲ. ಕಾರ್ನಾಡರ ಜಾಯಮಾನವನ್ನು ಅರಿತವರಿಗೆ ಅದು ವೇದ್ಯವಾಗುತ್ತದೆ. ಏಕೆಂದರೆ ಕಾರ್ನಾಡರು ಯಾವತ್ತೂ ಇತಿಹಾಸವನ್ನು ಅದು ಇದ್ದಂತೆ ಒಪ್ಪಿಕೊಳ್ಳುವುದಿಲ್ಲ. ಆದರೂ ಇತಿಹಾಸ ಪರಿಣತರಂತೆ ಮಾತಾಡುತ್ತಾರೆ. ಸಾಹಿತ್ಯದ ಪ್ರಭಾವಳಿಯಿಂದ ಸತ್ಯವನ್ನು ಮುಚ್ಚಬಹುದು ಎಂದು ಭಾವಿಸುತ್ತಾರೆ. ಇತಿಹಾಸ ಅವರಿಗೆ "ಸೃಜನಶೀಲ" ಸಾಹಿತ್ಯ ಸೃಷ್ಟಿಗೆ ಒಂದು ಸರಕೇ ಹೊರತು ಇತಿಹಾಸದಿಂದ ಆಗಬೇಕಾಗಿರುವುದೇನೂ ಇಲ್ಲವೆಂಬುದು ಅವರ ಧೋರಣೆ. ಹಾಗಾಗಿ ಹುಚ್ಚುದೊರೆ ತುಘಲಕ್ ಕಾರ್ನಾಡ್ ಪ್ರಕಾರ ಕ್ರಿಯೇಟಿವ್, ಸಂದೇಹ ಗ್ರಸ್ಥ, ಗೊಂದಲಯುಕ್ತ,ಮಾನಯ ಮುಖದ ಮನುಷ್ಯ ಮಾತ್ರ. ಅದಕ್ಕಿಂತ ಒಂದಂಗುಲ ಹೆಚ್ಚುಕಡಿಮೆ ತುಘಲಕ್ ನನ್ನು ಅವರು ಚಿಂತಿಸಲು ಹೋಗುವುದಿಲ್ಲ. ಹುಚ್ಚು ದೊರೆ ತುಘಲಕ್ನನ್ನೇ ಹೀಗೆ ಕಾಣುವವರು ಇನ್ನು ಲಾಡೆನ್ನನ್ನೂ ಸದ್ದಾಮನನ್ನು ಹೇಗೆ ಕಾಂಡಾರು ಎಂಬುದು ಪ್ರಶ್ನೆ. ಕಾರ್ನಾಡರಿಗೆ ತುಘಲಕ್ ಕಂಡ ಹಾಗೆ ನೈಪಾಲರಿಗೂ ಕಾಣಬೇಕೆಂದೇನೂ ಇಲ್ಲವಲ್ಲ. ಇತಿಹಾಸವನ್ನು ನೈಪಾಲ್ ಇದ್ದದ್ದನ್ನು ಇದ್ದಂತೆಯೇ ನೋಡಿದರೆ ಕಾರ್ನಾಡರಿಗೇಕೆ ಹೊಟ್ಟೆಉರಿ?ದೇವಸ್ಥಾನಕ್ಕೆ ಹೋದ ಭಕ್ತ, ಕಳ್ಳ ಮತ್ತು ಕಲಾವಿದ ದೇವರ ವಿಗ್ರಹವನ್ನು ವಿಭಿನ್ನವಾಗಿ ನೋಡುತ್ತಾರೆ. ಭಕ್ತನ ದೃಷ್ಟಿ ಇಲ್ಲಿ ನೇರವಾದುದು ಮತ್ತು ಪ್ರಾಮಾಣಿಕವಾದುದು. ಅದರಲ್ಲಿ ಗೊಂದಲಗಳಿಲ್ಲ. ಕಲಾವಿದನ ದೃಷ್ಟಿಯಲ್ಲಿಯೂ ಅಪ್ರಾಮಾಣಿಕತೆಯಿಲ್ಲ. ಅವರಲ್ಲಿ ಗೊಂದಲಗಳಿಲ್ಲ. ಆದರೆ ಕಳ್ಳನ ದೃಷ್ಟಿ ಹಾಗಲ್ಲ. ಕಾರ್ನಾಡ್ ಮತ್ತು ನೈಪಾಲ್ ಇತಿಹಾಸವನ್ನು ನೋಡುವ ದೃಷ್ಟಿಯ ವ್ಯತ್ಯಾಸ ಇಷ್ಟೇ. ನೈಪಾಲ್ ವಿಗ್ರಹವನ್ನು ಭಕ್ತನ ದೃಷ್ಟಿಯಲ್ಲಿ , ಕಲಾವಿದನ ದೃಷ್ಟಿಯಲ್ಲಿ ನೋಡಿದರೆ ಕಾರ್ನಾಡ್ "ಇದರ ರೇಟೆಷ್ಟಿರಬಹುದು?" "ಎಷ್ಟು ತೂಗಬಹುದು?" ಎಂಬಂತೆ ನೋಡುತ್ತಾರೆ. ಇತಿಹಾಸದ ಪ್ರತಿಮೆಗಳನ್ನು ಬಳಸಿ ಸಾಹಿತ್ಯ ಸೃಷ್ಟಿಸಲು ಘನ ವಿದ್ವತ್ತು ಮತ್ತು ಭಾರೀ ಸಂಶೋಧನೆಗಳ ಆವಶ್ಯಕತೆಯೇನೂ ಬೇಕಾಗಿಲ್ಲ. ಹೆಚ್ಚೆಂದರೆ ಅದು ಅನಂತಮೂರ್ತಿ ಹೇಳಿದಂತೆ "ರೂಪಕ ಚೋರತನ" ಅಷ್ಟೇ. ಆದರೆ ಸಮಾಜದ ಮನೋಧರ್ಮವನ್ನು ಅಳೆಯಲು ಇತಿಹಾಸದ ಅಧ್ಯಯನದ ಅಗತ್ಯವಿದೆ. ಅದನ್ನು ನೈಪಾಲ್ ಮಾಡಿದರು. ಅದನ್ನು ಮಾಡದ ಕಾರ್ನಾಡ್ ರೂಪಕ ಚೋರರಾದರು. ಹಾಗಾಗಿ ಕಾರ್ನಾಡ್ "ತುಘಲಕ್"ಬರೆಯುತ್ತಾರೆ. ನೈಪಾಲ್" ಗಾಯಗೊಂಡ ನಾಗರಿಕತೆ" ಬರೆಯುತ್ತಾರೆ. ಇತಿಹಾಸವನ್ನು ಕೇವಲ ರಂಜಕ ಪದಗಳಲ್ಲಿ ಬಂಸಿಡುವ, ಅರ್ಥಪಲ್ಲಟಗೊಳಿಸುವ ಕಾರ್ನಾಡ್ ನೈಪಾಲರನ್ನು "ಮುಸ್ಲಿಂ ದ್ವೇಷಿ"ಎಂದರೆ ನೈಪಾಲ್ ಇತಿಹಾಸದ ಕಿಂಡಿಯಿಂದ ಸತ್ಯವನ್ನು ಅರಸುವ ದೊಡ್ಡವರಾಗಿ ಕಾಣುತ್ತಾರೆ. ಸತ್ಯವನ್ನು ಅರಸಿ ಪ್ರತಿಪಾಸುವ ನೈಪಾಲ್ ಮುಸ್ಲಿಂ ವಿರೋ ಆಗುವುದಾದರೆ ಇತಿಹಾಸವನ್ನೇ ಪಲ್ಲಟಗೊಳಿಸುವ ಕಾರ್ನಾಡ್ ಮಾನವ ವಿರೋ ಆಗಲಾರರೇ? ಭಾರತದ ಸಂಗೀತದ ಬಗ್ಗೆ ನೈಪಾಲ್ ಕಿವುಡರು ಎಂದು ಕಾರ್ನಾಡ್ ಜರೆದರು. ಹಾಗಾದರೆ ಕಾರ್ನಾಡ್ ಹಿಂದೂ ಸಂಗತಿಗಳ ಬಗ್ಗೆ ದಿವ್ಯ ದೃಷ್ಟಿಯುಳ್ಳವರಾಗಿ ಏಕಿಲ್ಲ ಎಂದು ಯಾರೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ತಸ್ಲೀಮಾ ನಸ್ರಿನ್ ಗೂ ಕೋಪ ಬರುವುದು. ಗಿರೀಶ್ ಕಾರ್ನಾಡ್ ಅಣಿಮುತ್ತು ಉದುರಿಸಿದ ಎರಡು ದಿನಗಳ ತರುವಾಯ ನಸ್ರಿನ್ ಕೂಡಾ " ಕಾರ್ನಾಡರು ಸರಿಯಾಗಿಯೇ ಹೇಳಿದ್ದಾರೆ. ನೈಪಾಲ್ ತಮ್ಮ ದೊಡ್ಡ ಪುಸ್ತಕದಲ್ಲಿ ಎಲ್ಲಿಯೂ ಭಾರತೀಯ ಸಂಗೀತದ ಬಗ್ಗೆ ಏನೇನೂ ಬರೆದಿಲ್ಲ. ನೈಪಾಲ್ ಎಂದರೆ ilsamophobia writer ಎಂದು ಹೇಳಿಕೆ ಕೊಟ್ಟರು. ದೇಶಭ್ರಷ್ಟರಾಗಿ ತಿರುಗಿದವರಿಗೆ ಒಮ್ಮೆಲೆ ಹೊಟ್ಟೆ ತುಂಬಿದರೆ ಇಂಥ ಹೇಳಿಕೆಗಳು ಬರುತ್ತವೇನೋ.
ವಿ.ಎಸ್. ನೈಪಾಲ್ ಟ್ರೆನಿಡಾಡ್ ಮೂಲದ , ಯೂರೋಪಿನಲ್ಲಿ ಬೆಳೆದ ಭಾರತೀಯ ಸಂಜಾತರು. ಸಹಜವಾಗಿಯೇ ಅವರಿಗೆ ಭಾರತೀಯತರ ಮತ್ತು ಹಿಂದುತ್ವದ ಕುರಿತಾದ ತುಡಿತವಿರುತ್ತದೆ. ಅದು ಕಾಡುವ ಗುಣ. ಹಾಗಾಗಿ ಅವರ ಭಾರತದ ಕುರಿತಾದ ಪುಸ್ತಕಗಳಲ್ಲಿ ಇತಿಹಾಸದಿಂದ ಕಲಿಯಬೇಕಾಗಿರುವ ಪಾಠ ಮತ್ತು ಇತಿಹಾಸದ ಭಾರದಿಂದ ನಲುಗಿರುವ ಭಾರತದ ಚಿತ್ರಣವಿರುತ್ತದೆ. ಕಾರ್ನಾಡರಿಗಾದರೋ ಅದಿಲ್ಲ. ಅವರಿಗೆ ಭಾರತ ಕಾಡುವುದಿಲ್ಲ. ಅವರ ಸಾಹಿತ್ಯದಲ್ಲಿ ಭಾರತೀಯತೆಯಿಲ್ಲ. ಅದಕ್ಕೇನು ಮಾಡಲಾಗುತ್ತದೆ? ನೈಪಾಲ್ ಮುಸಲ್ಮಾನರ ಕೊಡುಗೆಯನ್ನು ಬರೆದಿಲ್ಲ ಎಂದು ಗೋಳಾಡುವ ಕಾರ್ನಾಡ್ ದೇಶಕ್ಕೆ ಹಿಂದೂ ಪರಂಪರೆಯ ಕೊಡುಗೆಗಳೆಷ್ಟು ಎಂದು ಬರೆದಿದ್ದಾರೆಯೇ? ಅದೂ ಬಿಡಿ ಪ್ರಸ್ತುತ ಸಮಸ್ಯೆಗಳ ಬಗ್ಗೆ ಕಾರ್ನಾಡರು ಎಷ್ಟು ಬರೆದಿದ್ದಾರೆ? ಮಾತಾಡಿದ್ದಾರೆ? " ತುಘಲಕ್ ಎಂಬ ಅರಸನ ಕಾಲದಲ್ಲಿ ಪಾಕಿಸ್ಥಾನದ ರಾಜಧಾನಿ ದೆಹಲಿಯಿಂದ ದಕ್ಷಿಣದ ದೇವಗಿರಿಗೆ ಸ್ಥಳಾಂತರಗೊಂಡಿತ್ತು" , "ಔರಂಗಜೇಬ್ ಸಾಹಿಬ್ನ ಆಳ್ವಿಕೆಯಲ್ಲಿ ಪಾಕಿಸ್ಥಾನ ದಕ್ಖನ್ ಪ್ರಸ್ಥಭೂಮಿಯನ್ನೂ ದಾಟಿತ್ತು" ಎಂಬುದಾಗಿ ಪಾಕಿಸ್ಥಾನದ ಪಠ್ಯಪುಸ್ತಗಳು ಹೇಳುತ್ತವೆ. ಆ ಬಗ್ಗೆ ಕಾರ್ನಾಡರು ಕುರುಡರು. ಇವರ ತುಘಲಕ್ ಪಾಕಿಸ್ಥಾನಿಯಾದರೂ ಇವರಿಗೆ ಚಿಂತೆ ಇಲ್ಲ. ಕಾಶ್ಮೀರ ದೇಶದಿಂದ ಬಿಟ್ಟು ಹೋದರೂ ಅವರಿಗೇನೂ ಅನಿಸಲಿಕ್ಕಿಲ್ಲ. ಕೋಟಿಕೋಟಿ ಬಾಂಗ್ಲಾದವರು ದೇಶದೊಳಗೆ ಸೇರಿಕೊಂಡರೂ ಕಾರ್ನಾಡರಿಗೆ ಅದು ಮುಸಲ್ಮಾನರ ಕೊಡುಗೆ ಎಂದೇ ಅನಿಸುವುದೋ ಏನೋ? ಇನ್ನು ಪಾಕಿಸ್ಥಾನದ ಹಿಂದುಗಳ ದುಸ್ಥಿತಿ, ಚೀನಾದ ಗಡಿ ತಂಟೆ ವೊದಲಾದವುಗಳ ಬಗ್ಗೆ ಅವರು ಮಾತಾಡಿದ್ದನ್ನು ನಾವಾರೂ ಕೇಳಿಲ್ಲ. ಓರ್ವ ಸಾಹಿತಿ ಇವುಗಳ ಬಗ್ಗೆ ಮಾತಾಡಲೇಬೇಕೆಂದೇನೂ ಇಲ್ಲ. ಆದರೆ "ಗಾಯಗೊಂಡ ನಾಗರಿಕತೆ ಅಲ್ಲ" ಎನ್ನುವವರು ಇಂಥವುಗಳ ಬಗ್ಗೆ ಕಡ್ಡಾಯವಾಗಿ ಮಾತಾಡಲೇ ಬೇಕು. ಇವೆಲ್ಲವನ್ನೂ ನೋಡಿದಾಗ ವೊನ್ನೆ ನೈಪಾಲರ ಜೊತೆಗೆ ಕಾರ್ನಾಡರನ್ನೂ ಕೂರಿಸಿ ಸಣ್ಣದೋ ಪುಟ್ಟದೋ ಏನೋ ಒಂದು ಸನ್ಮಾನವನ್ನು ಮಾಡಿಬಿಟ್ಟಿದ್ದರೆ ತಣಿಯುತ್ತಿದ್ದರೇನೋ ಅನಿಸುತ್ತದೆ.
ಕನ್ನಡಿಗರಿಗೇನೂ ಕಾರ್ನಾಡ್ ಹೇಳಿಕೆ ಹೊಸದೇನೂ ಅನಿಸುವುದಿಲ್ಲ. ನೈಪಾಲರಿಗಿಂತ ಸಾಕಷ್ಟು ವೊದಲೇ ಇಲ್ಲಿ ಭೈರಪ್ಪನವರನ್ನು ಹಿಗ್ಗಾಮುಗ್ಗಾ ಜರೆದು ಅದೇ ಹಳಸಲು ಪದಗಳನ್ನು ಇದೀಗ ಮುಂಬೈಯಲ್ಲಿ ಹರಿಯಬಿಟ್ಟಿದ್ದಾರಷ್ಟೇ. ಸಾಹಿತ್ಯದಲ್ಲಿ ದೇಶೀತನವನ್ನು ಸದಾ ವಿರೋಧಿಸುವ ಕಾರ್ನಾಡರು ಮುಸಲ್ಮಾನ ಓಲೈಕೆಯನ್ನು, ಪ್ರಭುತ್ವದ ಪಾದಪೂಜೆಯನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಎಲ್ಲವೂ ಮುಸಲ್ಮಾನರು ಬೆನ್ನ ಮೇಲೆ ಗುದ್ದಿಯಾರೆಂಬ ಭಯ. ಹಿಂದುಗಳಿಗೆ ಬಯ್ದರೂ ಗುದ್ದಲಾರರೆಂಬ ಧೈರ್ಯ ಕಾರ್ನಾಡರದ್ದು. ಹೀಗೆ ಗುಲಾಮ ಸುಖವನ್ನು ಅನುಭವಿಸಿ ಸಂವೇದನೆಯ ಹೆಸರಿಟ್ಟುಕೊಳ್ಳುವ ಬುದ್ಧಿ ಹಲವರಿಗಿದೆ. ಕಾರ್ನಾಡ್ ಅವರೆಲ್ಲರಿಗೂ ಗುರುಸಮಾನರು. ಸಾಹಿತ್ಯಕ್ಕೆ ಸಾಹಿತ್ಯವೂ ಆಯಿತು. ಸೆಕ್ಯುಲರಿಸಮ್ಮಿಗೆ ಸೆಕ್ಯುಲರಿಸಮ್ಮೂ ಆಯಿತು. ಪ್ರಶಸ್ತಿಗೆ ಪ್ರಶಸ್ತಿಯೂ ಆಯಿತು ಎಂಬ ತಂಡದ ನಾಯಕ ಈ ತುಘಲಕ. ಸಾಹಿತಿಯಾದವನು ಪ್ರಭುತ್ವದ ಹಂಗಿಲ್ಲದವನು. ಅಪ್ಪಟ ಸಾಹಿತಿ ರಾಜಕಾರಣದ ಮೈಲುಗಲ್ಲುಗಳನ್ನು ವಿಶ್ಲೇಷಿಸಬಲ್ಲ ಅಥವಾ ಆ ದಾರಿಯನ್ನು ದೂರ ನಿಂತು ನೋಡಬಲ್ಲ. ಆದರೆ ಕಾರ್ನಾಡರು ಆ ದಾರಿಯಲ್ಲೇ ಸಾಗಲು ಮುಜುಗರವನ್ನು ಪಡಲಾರರು. "ಹೇಮಾಮಾಲಿನಿ ಕರ್ನಾಟಕದವರಲ್ಲ. ಆಕೆ ರಾಜ್ಯ ಸಭೆಗೆ ಇಲ್ಲಿಂದ ಅಭ್ಯರ್ಥಿಯಾಗಬಾರದು" ಎನ್ನುವಷ್ಟು ಅವರು ಸಕ್ರೀಯರು ಮತ್ತು ರಾಜಕೀಯ ಆಸಕ್ತರು. ಈ ಮಾತನ್ನು ಅವರು ಮುಂಬೈಯಲ್ಲಿ ಕೂತೇ ಹೇಳಬಲ್ಲರು. ಸಾಹಿತಿಗೇಕೆ ಈ ಉಸಾಬರಿ? ಪ್ರಭುತ್ವದ ಬಗೆಗೆ ಈ ಆಸಕ್ತಿಯೇಕೆ? ನೈಪಾಲ್ ಎಂದಾದರೂ ಇಂಥ ಮಾತನ್ನು ಆಡಿದ್ದುಂಟೇ? ಭಾರತ ಗಾಯಗೊಂಡ ನಾಗರಿಕತೆಯಲ್ಲ ಎಂಬುವವರು ಅದನ್ನು ಪ್ರಮಾಣೀಕರಿಸಿ ತೋರಿಸದೆ ಎಲ್ಲೆಲ್ಲಿಗೋ ಹತ್ತಿ ಭಾಷಣ ಮಾಡಿಬಿಡುವರೇಕೆ?
ಏಕೆಂದರೆ ಕಾರ್ನಾಡ್ ಸಾಹಿತ್ಯವನ್ನು ವಿಭಿನ್ನವಾಗಿ ಕಟ್ಟಿಕೊಡಲು ಮಾತ್ರ ಯೋಚಿಸುತ್ತಾರೆ. ಅದರ ಮಾರ್ಗಗಳು ಅವರಿಗೆ ಮುಖ್ಯವಾಗುವಿದಿಲ್ಲ. ಸಮಾಜದ ಆಳವನ್ನು ಅರಿಯುವ ಗೊಡವೆಗೆ ಅವರು ಹೋಗುವುದಿಲ್ಲ. ಆದರೆ ನೈಪಾಲ್ ಒಂದು ಸಮಾಜವನ್ನು ಅರ್ಥೈಸಿಕೊಳ್ಳಲು ಭೌಗೋಳಿಕ ನೆಲೆ, ವ್ಯಾಪ್ತಿ- ವಿಸ್ತಾರದ ಜೊತೆಗೆ ಇತಿಹಾಸವೂ ಪ್ರಮುಖವೆಂದು ಭಾವಿಸುತ್ತಾರೆ. ಹಾಗಾಗಿ ನೈಪಾಲ್ "ವೂಂಡೆಡ್ ಸಿವಿಲೈಸೇಶನ್ ನಲ್ಲಿ "ವಿಜಯನಗರದ ಲೂಟಿಯಿಂದ ಮೊದಲುಗೊಂಡು ಗಾಂಧಿ- ವಿನೋಭಾವರೆಗಿನ ಭಾರತವನ್ನು ಮುಂದಿಟ್ಟುಕೊಂಡು ದೇಶವನ್ನು ಶೋಧಿಸುತ್ತಾರೆ. ಭಾರತ ಕಥನವನ್ನು ಮಾಡುತ್ತಾರೆ. ನೈಪಾಲರು ತಮ್ಮ "ಗಾಯಗೊಂಡ ನಾಗರಿಕತೆ"ಯಲ್ಲಿ ಹೀಗೆ ಬರೆಯುತ್ತಾರೆ. ಸ್ವಾತಂತ್ರ್ಯಾನಂತರ ಭಾರತ ಹಲವು ಸವಾಲುಗಳನ್ನು ಎದುರಿಸುತ್ತಿವೆ. ವಿಶ್ವದಲ್ಲಿ ಸ್ವಾತಂತ್ರ್ಯಾನಂತರವೂ ಶಿಥಿಲವಾಗಿರುವ ದೇಶವಾಗಿರುವುದು ಭಾರತದ ದುಸ್ಥಿತಿ. ಇಲ್ಲಿ ಸಾವಿರಾರು ವರ್ಷಗಳ ನಿರಂತರ ಹೋರಾಟದಿಂದ ಸಂವೇದನೆಯೊಂದು ಸತ್ತುಹೋಗಿದೆ. ಭಾಷೆ-ಪ್ರಾಂತ-ಜಾತಿಗಳ ನಡುವೆ ಹೊಂದಾಣಿಕೆಯಿಲ್ಲದೆ ಎಲ್ಲೆಲ್ಲೂ ಘಾಸಿಗೊಂಡ ಮನಸು ನಿರ್ಮಾಣವಾಗಿವೆ. ಸವಾಲುಗಳನ್ನು ಎದುರಿಸುವಲ್ಲಿ ದೌರ್ಬಲ್ಯ ಬಂದಿದೆ."
ಇದು ದೇಶದ ತತ್ತ್ವ ಶಾಸ್ತ್ರವಲ್ಲವೇನು? ಇಂದಿನ ಸ್ಥಿತಿಗೆ ಇತಿಹಾಸದ ಭಾರವೇ ಕಾರಣವಲ್ಲದೆ ಬೇರೇನು ಕಾರಣವಿದ್ದೀತು? ವೊಗಲರನ್ನು ತಿಳಿಯದೆ, ದೇಶವಿಭಜನೆಯನ್ನು ತಿಳಿಯದೆ ದೇಶದ ಒಳತಿರುಳನ್ನು ತಿಳಿಯಲಾಗದು. ವಾಸ್ತವದ ಭಾರತದಲ್ಲಿ ಇತಿಹಾಸದ ಕರಾಳ ಛಾಯೆ ಇದೆ. ನೈಪಾಲರಂಥವರಿಗೆ ಅದು ಅರ್ಥವಾಗುತ್ತದೆಯೇ ಹೊರತು ಅದನ್ನು ತಿಳಿದವರು ಕೇವಲ ಆರೆಸ್ಸೆಸ್ಸಿನರೇ ಎಂದೇನೂ ಅಲ್ಲ.
ಕೆಲವರಿರುತ್ತಾರೆ. ಅವರು ಕೆಲವರನ್ನು ಅನುಸರಿಸಿಯೋ, ಆರಾಧಿಸಿಯೋ ಅವರಂತೆಯೇ ಆಗಿಹೋಗಿರುತ್ತಾರೆ. ಕಾರ್ನಾಡರೂ ಹಾಗೆ ಆಗಿಹೋದವರೇನೋ ಎಂದು ಧಿಗಿಲಾಗುತ್ತದೆ. ಅವರ ತುಘಲಕ್ ನಾಟಕದಲ್ಲಿ ಒಂದು ದಿನ ಅರಸ ನಿದ್ರೆ ಬಾರದೆ ಒದ್ದಾಡುತ್ತಾನೆ. ಅಪರಾತ್ರಿಯಲ್ಲಿ ಕೋಣೆಯಿಂದ ಹೊರಗೆ ಬರುತ್ತಾನೆ. ನರಿಗಳು ಊಳಿಡುತ್ತಿರುತ್ತವೆ. ಸುಯ್ಯೆಂದು ಗಾಳಿ ಬೀಸುತ್ತಿರುತ್ತವೆ. ಕೋಟೆ ಬರುಜಿನ ಬಳಿ ಅಡ್ಡಾಡುತ್ತಾನೆ. ಕಾವಲುಗಾರನೊಡನೆ ಮಾತಿಗೆ ಕೂರುತ್ತಾನೆ. ಏನೇನೋ ಆಲಾಪಿಸುತ್ತಾನೆ. ಸದಾ ಗೊಂದಲದ, ವಿಪರೀತ ಸಂಶಯದ ,ಯದ್ವಾತದ್ವಾ ನಿಲುವಿನ ಕಾರ್ನಾಡರ ತುಘಲಕ್ ಲೇಖಕನದ್ದೇ ಮನಸಿನ ಪ್ರತಿಬಿಂಬವೇನೋ ಎಂದು ಈಗ ಭಾಸವಾಗುತ್ತದೆ.
ಕಾರ್ನಾಡ್ ನಿಂದಿಸಿರುವುದರಿಂದ ನೈಪಾಲರೇನೂ ನಾಯಿಪಾಡು ಪಡುವಂತಿಲ್ಲ. ಕಾರ್ನಾಡರೇ ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಜನ ಕಾರ್ನಾಡರಿಗೆ ನೊಬೆಲ್ ಆಸೆ ಹುಟ್ಟಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
"ನೈಪಾಲ್ ಮೂರು ದೊಡ್ಡ ಪುಸ್ತಕಗಳನ್ನು ಬರೆದರೂ ಕೂಡಾ ಅವರಿಗೆ ಭಾರತದ ಬಗ್ಗೆ ಜ್ನಾನ ಇಲ್ಲ", "ಅವರು ಭಾರತೀಯ ಸಂಗೀತದ ಬಗ್ಗೆ ಕಿವುಡರಾಗಿದ್ದಾರೆ", " ನೈಪಾಲರಿಗೆ "ಭಾರತದ ಮುಸಲ್ಮಾನರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅರಿವೇ ಇಲ್ಲ" ಮೊದಲಾದ ಅಣಿಮುತ್ತುಗಳನ್ನು ಕಾರ್ನಾಡ್ ಉದುರಿಸಿದ್ದರು. ಕಾರ್ನಾಡರು ನೈಪಾಲರನ್ನು ನಿಂದಿಸಿದರೆಂದರೆ ನೈಪಾಲ್ ಉತ್ತಮ ಬರಹಗಾರರೇ ಇರಬೇಕು. ನೊಬೆಲ್ಗೆ ತಕ್ಕುದಾದುದೇ ಇರಬೇಕು. ನೊಬೆಲನ್ನು ಅವರು ಖಂಡಿತಾ ಹೊಡಕೊಂಡಿರಲಿಕ್ಕಿಲ್ಲ. ಕಾರ್ನಾಡರ ಜಾಯಮಾನವನ್ನು ಅರಿತವರಿಗೆ ಅದು ವೇದ್ಯವಾಗುತ್ತದೆ. ಏಕೆಂದರೆ ಕಾರ್ನಾಡರು ಯಾವತ್ತೂ ಇತಿಹಾಸವನ್ನು ಅದು ಇದ್ದಂತೆ ಒಪ್ಪಿಕೊಳ್ಳುವುದಿಲ್ಲ. ಆದರೂ ಇತಿಹಾಸ ಪರಿಣತರಂತೆ ಮಾತಾಡುತ್ತಾರೆ. ಸಾಹಿತ್ಯದ ಪ್ರಭಾವಳಿಯಿಂದ ಸತ್ಯವನ್ನು ಮುಚ್ಚಬಹುದು ಎಂದು ಭಾವಿಸುತ್ತಾರೆ. ಇತಿಹಾಸ ಅವರಿಗೆ "ಸೃಜನಶೀಲ" ಸಾಹಿತ್ಯ ಸೃಷ್ಟಿಗೆ ಒಂದು ಸರಕೇ ಹೊರತು ಇತಿಹಾಸದಿಂದ ಆಗಬೇಕಾಗಿರುವುದೇನೂ ಇಲ್ಲವೆಂಬುದು ಅವರ ಧೋರಣೆ. ಹಾಗಾಗಿ ಹುಚ್ಚುದೊರೆ ತುಘಲಕ್ ಕಾರ್ನಾಡ್ ಪ್ರಕಾರ ಕ್ರಿಯೇಟಿವ್, ಸಂದೇಹ ಗ್ರಸ್ಥ, ಗೊಂದಲಯುಕ್ತ,ಮಾನಯ ಮುಖದ ಮನುಷ್ಯ ಮಾತ್ರ. ಅದಕ್ಕಿಂತ ಒಂದಂಗುಲ ಹೆಚ್ಚುಕಡಿಮೆ ತುಘಲಕ್ ನನ್ನು ಅವರು ಚಿಂತಿಸಲು ಹೋಗುವುದಿಲ್ಲ. ಹುಚ್ಚು ದೊರೆ ತುಘಲಕ್ನನ್ನೇ ಹೀಗೆ ಕಾಣುವವರು ಇನ್ನು ಲಾಡೆನ್ನನ್ನೂ ಸದ್ದಾಮನನ್ನು ಹೇಗೆ ಕಾಂಡಾರು ಎಂಬುದು ಪ್ರಶ್ನೆ. ಕಾರ್ನಾಡರಿಗೆ ತುಘಲಕ್ ಕಂಡ ಹಾಗೆ ನೈಪಾಲರಿಗೂ ಕಾಣಬೇಕೆಂದೇನೂ ಇಲ್ಲವಲ್ಲ. ಇತಿಹಾಸವನ್ನು ನೈಪಾಲ್ ಇದ್ದದ್ದನ್ನು ಇದ್ದಂತೆಯೇ ನೋಡಿದರೆ ಕಾರ್ನಾಡರಿಗೇಕೆ ಹೊಟ್ಟೆಉರಿ?ದೇವಸ್ಥಾನಕ್ಕೆ ಹೋದ ಭಕ್ತ, ಕಳ್ಳ ಮತ್ತು ಕಲಾವಿದ ದೇವರ ವಿಗ್ರಹವನ್ನು ವಿಭಿನ್ನವಾಗಿ ನೋಡುತ್ತಾರೆ. ಭಕ್ತನ ದೃಷ್ಟಿ ಇಲ್ಲಿ ನೇರವಾದುದು ಮತ್ತು ಪ್ರಾಮಾಣಿಕವಾದುದು. ಅದರಲ್ಲಿ ಗೊಂದಲಗಳಿಲ್ಲ. ಕಲಾವಿದನ ದೃಷ್ಟಿಯಲ್ಲಿಯೂ ಅಪ್ರಾಮಾಣಿಕತೆಯಿಲ್ಲ. ಅವರಲ್ಲಿ ಗೊಂದಲಗಳಿಲ್ಲ. ಆದರೆ ಕಳ್ಳನ ದೃಷ್ಟಿ ಹಾಗಲ್ಲ. ಕಾರ್ನಾಡ್ ಮತ್ತು ನೈಪಾಲ್ ಇತಿಹಾಸವನ್ನು ನೋಡುವ ದೃಷ್ಟಿಯ ವ್ಯತ್ಯಾಸ ಇಷ್ಟೇ. ನೈಪಾಲ್ ವಿಗ್ರಹವನ್ನು ಭಕ್ತನ ದೃಷ್ಟಿಯಲ್ಲಿ , ಕಲಾವಿದನ ದೃಷ್ಟಿಯಲ್ಲಿ ನೋಡಿದರೆ ಕಾರ್ನಾಡ್ "ಇದರ ರೇಟೆಷ್ಟಿರಬಹುದು?" "ಎಷ್ಟು ತೂಗಬಹುದು?" ಎಂಬಂತೆ ನೋಡುತ್ತಾರೆ. ಇತಿಹಾಸದ ಪ್ರತಿಮೆಗಳನ್ನು ಬಳಸಿ ಸಾಹಿತ್ಯ ಸೃಷ್ಟಿಸಲು ಘನ ವಿದ್ವತ್ತು ಮತ್ತು ಭಾರೀ ಸಂಶೋಧನೆಗಳ ಆವಶ್ಯಕತೆಯೇನೂ ಬೇಕಾಗಿಲ್ಲ. ಹೆಚ್ಚೆಂದರೆ ಅದು ಅನಂತಮೂರ್ತಿ ಹೇಳಿದಂತೆ "ರೂಪಕ ಚೋರತನ" ಅಷ್ಟೇ. ಆದರೆ ಸಮಾಜದ ಮನೋಧರ್ಮವನ್ನು ಅಳೆಯಲು ಇತಿಹಾಸದ ಅಧ್ಯಯನದ ಅಗತ್ಯವಿದೆ. ಅದನ್ನು ನೈಪಾಲ್ ಮಾಡಿದರು. ಅದನ್ನು ಮಾಡದ ಕಾರ್ನಾಡ್ ರೂಪಕ ಚೋರರಾದರು. ಹಾಗಾಗಿ ಕಾರ್ನಾಡ್ "ತುಘಲಕ್"ಬರೆಯುತ್ತಾರೆ. ನೈಪಾಲ್" ಗಾಯಗೊಂಡ ನಾಗರಿಕತೆ" ಬರೆಯುತ್ತಾರೆ. ಇತಿಹಾಸವನ್ನು ಕೇವಲ ರಂಜಕ ಪದಗಳಲ್ಲಿ ಬಂಸಿಡುವ, ಅರ್ಥಪಲ್ಲಟಗೊಳಿಸುವ ಕಾರ್ನಾಡ್ ನೈಪಾಲರನ್ನು "ಮುಸ್ಲಿಂ ದ್ವೇಷಿ"ಎಂದರೆ ನೈಪಾಲ್ ಇತಿಹಾಸದ ಕಿಂಡಿಯಿಂದ ಸತ್ಯವನ್ನು ಅರಸುವ ದೊಡ್ಡವರಾಗಿ ಕಾಣುತ್ತಾರೆ. ಸತ್ಯವನ್ನು ಅರಸಿ ಪ್ರತಿಪಾಸುವ ನೈಪಾಲ್ ಮುಸ್ಲಿಂ ವಿರೋ ಆಗುವುದಾದರೆ ಇತಿಹಾಸವನ್ನೇ ಪಲ್ಲಟಗೊಳಿಸುವ ಕಾರ್ನಾಡ್ ಮಾನವ ವಿರೋ ಆಗಲಾರರೇ? ಭಾರತದ ಸಂಗೀತದ ಬಗ್ಗೆ ನೈಪಾಲ್ ಕಿವುಡರು ಎಂದು ಕಾರ್ನಾಡ್ ಜರೆದರು. ಹಾಗಾದರೆ ಕಾರ್ನಾಡ್ ಹಿಂದೂ ಸಂಗತಿಗಳ ಬಗ್ಗೆ ದಿವ್ಯ ದೃಷ್ಟಿಯುಳ್ಳವರಾಗಿ ಏಕಿಲ್ಲ ಎಂದು ಯಾರೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ತಸ್ಲೀಮಾ ನಸ್ರಿನ್ ಗೂ ಕೋಪ ಬರುವುದು. ಗಿರೀಶ್ ಕಾರ್ನಾಡ್ ಅಣಿಮುತ್ತು ಉದುರಿಸಿದ ಎರಡು ದಿನಗಳ ತರುವಾಯ ನಸ್ರಿನ್ ಕೂಡಾ " ಕಾರ್ನಾಡರು ಸರಿಯಾಗಿಯೇ ಹೇಳಿದ್ದಾರೆ. ನೈಪಾಲ್ ತಮ್ಮ ದೊಡ್ಡ ಪುಸ್ತಕದಲ್ಲಿ ಎಲ್ಲಿಯೂ ಭಾರತೀಯ ಸಂಗೀತದ ಬಗ್ಗೆ ಏನೇನೂ ಬರೆದಿಲ್ಲ. ನೈಪಾಲ್ ಎಂದರೆ ilsamophobia writer ಎಂದು ಹೇಳಿಕೆ ಕೊಟ್ಟರು. ದೇಶಭ್ರಷ್ಟರಾಗಿ ತಿರುಗಿದವರಿಗೆ ಒಮ್ಮೆಲೆ ಹೊಟ್ಟೆ ತುಂಬಿದರೆ ಇಂಥ ಹೇಳಿಕೆಗಳು ಬರುತ್ತವೇನೋ.
ವಿ.ಎಸ್. ನೈಪಾಲ್ ಟ್ರೆನಿಡಾಡ್ ಮೂಲದ , ಯೂರೋಪಿನಲ್ಲಿ ಬೆಳೆದ ಭಾರತೀಯ ಸಂಜಾತರು. ಸಹಜವಾಗಿಯೇ ಅವರಿಗೆ ಭಾರತೀಯತರ ಮತ್ತು ಹಿಂದುತ್ವದ ಕುರಿತಾದ ತುಡಿತವಿರುತ್ತದೆ. ಅದು ಕಾಡುವ ಗುಣ. ಹಾಗಾಗಿ ಅವರ ಭಾರತದ ಕುರಿತಾದ ಪುಸ್ತಕಗಳಲ್ಲಿ ಇತಿಹಾಸದಿಂದ ಕಲಿಯಬೇಕಾಗಿರುವ ಪಾಠ ಮತ್ತು ಇತಿಹಾಸದ ಭಾರದಿಂದ ನಲುಗಿರುವ ಭಾರತದ ಚಿತ್ರಣವಿರುತ್ತದೆ. ಕಾರ್ನಾಡರಿಗಾದರೋ ಅದಿಲ್ಲ. ಅವರಿಗೆ ಭಾರತ ಕಾಡುವುದಿಲ್ಲ. ಅವರ ಸಾಹಿತ್ಯದಲ್ಲಿ ಭಾರತೀಯತೆಯಿಲ್ಲ. ಅದಕ್ಕೇನು ಮಾಡಲಾಗುತ್ತದೆ? ನೈಪಾಲ್ ಮುಸಲ್ಮಾನರ ಕೊಡುಗೆಯನ್ನು ಬರೆದಿಲ್ಲ ಎಂದು ಗೋಳಾಡುವ ಕಾರ್ನಾಡ್ ದೇಶಕ್ಕೆ ಹಿಂದೂ ಪರಂಪರೆಯ ಕೊಡುಗೆಗಳೆಷ್ಟು ಎಂದು ಬರೆದಿದ್ದಾರೆಯೇ? ಅದೂ ಬಿಡಿ ಪ್ರಸ್ತುತ ಸಮಸ್ಯೆಗಳ ಬಗ್ಗೆ ಕಾರ್ನಾಡರು ಎಷ್ಟು ಬರೆದಿದ್ದಾರೆ? ಮಾತಾಡಿದ್ದಾರೆ? " ತುಘಲಕ್ ಎಂಬ ಅರಸನ ಕಾಲದಲ್ಲಿ ಪಾಕಿಸ್ಥಾನದ ರಾಜಧಾನಿ ದೆಹಲಿಯಿಂದ ದಕ್ಷಿಣದ ದೇವಗಿರಿಗೆ ಸ್ಥಳಾಂತರಗೊಂಡಿತ್ತು" , "ಔರಂಗಜೇಬ್ ಸಾಹಿಬ್ನ ಆಳ್ವಿಕೆಯಲ್ಲಿ ಪಾಕಿಸ್ಥಾನ ದಕ್ಖನ್ ಪ್ರಸ್ಥಭೂಮಿಯನ್ನೂ ದಾಟಿತ್ತು" ಎಂಬುದಾಗಿ ಪಾಕಿಸ್ಥಾನದ ಪಠ್ಯಪುಸ್ತಗಳು ಹೇಳುತ್ತವೆ. ಆ ಬಗ್ಗೆ ಕಾರ್ನಾಡರು ಕುರುಡರು. ಇವರ ತುಘಲಕ್ ಪಾಕಿಸ್ಥಾನಿಯಾದರೂ ಇವರಿಗೆ ಚಿಂತೆ ಇಲ್ಲ. ಕಾಶ್ಮೀರ ದೇಶದಿಂದ ಬಿಟ್ಟು ಹೋದರೂ ಅವರಿಗೇನೂ ಅನಿಸಲಿಕ್ಕಿಲ್ಲ. ಕೋಟಿಕೋಟಿ ಬಾಂಗ್ಲಾದವರು ದೇಶದೊಳಗೆ ಸೇರಿಕೊಂಡರೂ ಕಾರ್ನಾಡರಿಗೆ ಅದು ಮುಸಲ್ಮಾನರ ಕೊಡುಗೆ ಎಂದೇ ಅನಿಸುವುದೋ ಏನೋ? ಇನ್ನು ಪಾಕಿಸ್ಥಾನದ ಹಿಂದುಗಳ ದುಸ್ಥಿತಿ, ಚೀನಾದ ಗಡಿ ತಂಟೆ ವೊದಲಾದವುಗಳ ಬಗ್ಗೆ ಅವರು ಮಾತಾಡಿದ್ದನ್ನು ನಾವಾರೂ ಕೇಳಿಲ್ಲ. ಓರ್ವ ಸಾಹಿತಿ ಇವುಗಳ ಬಗ್ಗೆ ಮಾತಾಡಲೇಬೇಕೆಂದೇನೂ ಇಲ್ಲ. ಆದರೆ "ಗಾಯಗೊಂಡ ನಾಗರಿಕತೆ ಅಲ್ಲ" ಎನ್ನುವವರು ಇಂಥವುಗಳ ಬಗ್ಗೆ ಕಡ್ಡಾಯವಾಗಿ ಮಾತಾಡಲೇ ಬೇಕು. ಇವೆಲ್ಲವನ್ನೂ ನೋಡಿದಾಗ ವೊನ್ನೆ ನೈಪಾಲರ ಜೊತೆಗೆ ಕಾರ್ನಾಡರನ್ನೂ ಕೂರಿಸಿ ಸಣ್ಣದೋ ಪುಟ್ಟದೋ ಏನೋ ಒಂದು ಸನ್ಮಾನವನ್ನು ಮಾಡಿಬಿಟ್ಟಿದ್ದರೆ ತಣಿಯುತ್ತಿದ್ದರೇನೋ ಅನಿಸುತ್ತದೆ.
ಕನ್ನಡಿಗರಿಗೇನೂ ಕಾರ್ನಾಡ್ ಹೇಳಿಕೆ ಹೊಸದೇನೂ ಅನಿಸುವುದಿಲ್ಲ. ನೈಪಾಲರಿಗಿಂತ ಸಾಕಷ್ಟು ವೊದಲೇ ಇಲ್ಲಿ ಭೈರಪ್ಪನವರನ್ನು ಹಿಗ್ಗಾಮುಗ್ಗಾ ಜರೆದು ಅದೇ ಹಳಸಲು ಪದಗಳನ್ನು ಇದೀಗ ಮುಂಬೈಯಲ್ಲಿ ಹರಿಯಬಿಟ್ಟಿದ್ದಾರಷ್ಟೇ. ಸಾಹಿತ್ಯದಲ್ಲಿ ದೇಶೀತನವನ್ನು ಸದಾ ವಿರೋಧಿಸುವ ಕಾರ್ನಾಡರು ಮುಸಲ್ಮಾನ ಓಲೈಕೆಯನ್ನು, ಪ್ರಭುತ್ವದ ಪಾದಪೂಜೆಯನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಎಲ್ಲವೂ ಮುಸಲ್ಮಾನರು ಬೆನ್ನ ಮೇಲೆ ಗುದ್ದಿಯಾರೆಂಬ ಭಯ. ಹಿಂದುಗಳಿಗೆ ಬಯ್ದರೂ ಗುದ್ದಲಾರರೆಂಬ ಧೈರ್ಯ ಕಾರ್ನಾಡರದ್ದು. ಹೀಗೆ ಗುಲಾಮ ಸುಖವನ್ನು ಅನುಭವಿಸಿ ಸಂವೇದನೆಯ ಹೆಸರಿಟ್ಟುಕೊಳ್ಳುವ ಬುದ್ಧಿ ಹಲವರಿಗಿದೆ. ಕಾರ್ನಾಡ್ ಅವರೆಲ್ಲರಿಗೂ ಗುರುಸಮಾನರು. ಸಾಹಿತ್ಯಕ್ಕೆ ಸಾಹಿತ್ಯವೂ ಆಯಿತು. ಸೆಕ್ಯುಲರಿಸಮ್ಮಿಗೆ ಸೆಕ್ಯುಲರಿಸಮ್ಮೂ ಆಯಿತು. ಪ್ರಶಸ್ತಿಗೆ ಪ್ರಶಸ್ತಿಯೂ ಆಯಿತು ಎಂಬ ತಂಡದ ನಾಯಕ ಈ ತುಘಲಕ. ಸಾಹಿತಿಯಾದವನು ಪ್ರಭುತ್ವದ ಹಂಗಿಲ್ಲದವನು. ಅಪ್ಪಟ ಸಾಹಿತಿ ರಾಜಕಾರಣದ ಮೈಲುಗಲ್ಲುಗಳನ್ನು ವಿಶ್ಲೇಷಿಸಬಲ್ಲ ಅಥವಾ ಆ ದಾರಿಯನ್ನು ದೂರ ನಿಂತು ನೋಡಬಲ್ಲ. ಆದರೆ ಕಾರ್ನಾಡರು ಆ ದಾರಿಯಲ್ಲೇ ಸಾಗಲು ಮುಜುಗರವನ್ನು ಪಡಲಾರರು. "ಹೇಮಾಮಾಲಿನಿ ಕರ್ನಾಟಕದವರಲ್ಲ. ಆಕೆ ರಾಜ್ಯ ಸಭೆಗೆ ಇಲ್ಲಿಂದ ಅಭ್ಯರ್ಥಿಯಾಗಬಾರದು" ಎನ್ನುವಷ್ಟು ಅವರು ಸಕ್ರೀಯರು ಮತ್ತು ರಾಜಕೀಯ ಆಸಕ್ತರು. ಈ ಮಾತನ್ನು ಅವರು ಮುಂಬೈಯಲ್ಲಿ ಕೂತೇ ಹೇಳಬಲ್ಲರು. ಸಾಹಿತಿಗೇಕೆ ಈ ಉಸಾಬರಿ? ಪ್ರಭುತ್ವದ ಬಗೆಗೆ ಈ ಆಸಕ್ತಿಯೇಕೆ? ನೈಪಾಲ್ ಎಂದಾದರೂ ಇಂಥ ಮಾತನ್ನು ಆಡಿದ್ದುಂಟೇ? ಭಾರತ ಗಾಯಗೊಂಡ ನಾಗರಿಕತೆಯಲ್ಲ ಎಂಬುವವರು ಅದನ್ನು ಪ್ರಮಾಣೀಕರಿಸಿ ತೋರಿಸದೆ ಎಲ್ಲೆಲ್ಲಿಗೋ ಹತ್ತಿ ಭಾಷಣ ಮಾಡಿಬಿಡುವರೇಕೆ?
ಏಕೆಂದರೆ ಕಾರ್ನಾಡ್ ಸಾಹಿತ್ಯವನ್ನು ವಿಭಿನ್ನವಾಗಿ ಕಟ್ಟಿಕೊಡಲು ಮಾತ್ರ ಯೋಚಿಸುತ್ತಾರೆ. ಅದರ ಮಾರ್ಗಗಳು ಅವರಿಗೆ ಮುಖ್ಯವಾಗುವಿದಿಲ್ಲ. ಸಮಾಜದ ಆಳವನ್ನು ಅರಿಯುವ ಗೊಡವೆಗೆ ಅವರು ಹೋಗುವುದಿಲ್ಲ. ಆದರೆ ನೈಪಾಲ್ ಒಂದು ಸಮಾಜವನ್ನು ಅರ್ಥೈಸಿಕೊಳ್ಳಲು ಭೌಗೋಳಿಕ ನೆಲೆ, ವ್ಯಾಪ್ತಿ- ವಿಸ್ತಾರದ ಜೊತೆಗೆ ಇತಿಹಾಸವೂ ಪ್ರಮುಖವೆಂದು ಭಾವಿಸುತ್ತಾರೆ. ಹಾಗಾಗಿ ನೈಪಾಲ್ "ವೂಂಡೆಡ್ ಸಿವಿಲೈಸೇಶನ್ ನಲ್ಲಿ "ವಿಜಯನಗರದ ಲೂಟಿಯಿಂದ ಮೊದಲುಗೊಂಡು ಗಾಂಧಿ- ವಿನೋಭಾವರೆಗಿನ ಭಾರತವನ್ನು ಮುಂದಿಟ್ಟುಕೊಂಡು ದೇಶವನ್ನು ಶೋಧಿಸುತ್ತಾರೆ. ಭಾರತ ಕಥನವನ್ನು ಮಾಡುತ್ತಾರೆ. ನೈಪಾಲರು ತಮ್ಮ "ಗಾಯಗೊಂಡ ನಾಗರಿಕತೆ"ಯಲ್ಲಿ ಹೀಗೆ ಬರೆಯುತ್ತಾರೆ. ಸ್ವಾತಂತ್ರ್ಯಾನಂತರ ಭಾರತ ಹಲವು ಸವಾಲುಗಳನ್ನು ಎದುರಿಸುತ್ತಿವೆ. ವಿಶ್ವದಲ್ಲಿ ಸ್ವಾತಂತ್ರ್ಯಾನಂತರವೂ ಶಿಥಿಲವಾಗಿರುವ ದೇಶವಾಗಿರುವುದು ಭಾರತದ ದುಸ್ಥಿತಿ. ಇಲ್ಲಿ ಸಾವಿರಾರು ವರ್ಷಗಳ ನಿರಂತರ ಹೋರಾಟದಿಂದ ಸಂವೇದನೆಯೊಂದು ಸತ್ತುಹೋಗಿದೆ. ಭಾಷೆ-ಪ್ರಾಂತ-ಜಾತಿಗಳ ನಡುವೆ ಹೊಂದಾಣಿಕೆಯಿಲ್ಲದೆ ಎಲ್ಲೆಲ್ಲೂ ಘಾಸಿಗೊಂಡ ಮನಸು ನಿರ್ಮಾಣವಾಗಿವೆ. ಸವಾಲುಗಳನ್ನು ಎದುರಿಸುವಲ್ಲಿ ದೌರ್ಬಲ್ಯ ಬಂದಿದೆ."
ಇದು ದೇಶದ ತತ್ತ್ವ ಶಾಸ್ತ್ರವಲ್ಲವೇನು? ಇಂದಿನ ಸ್ಥಿತಿಗೆ ಇತಿಹಾಸದ ಭಾರವೇ ಕಾರಣವಲ್ಲದೆ ಬೇರೇನು ಕಾರಣವಿದ್ದೀತು? ವೊಗಲರನ್ನು ತಿಳಿಯದೆ, ದೇಶವಿಭಜನೆಯನ್ನು ತಿಳಿಯದೆ ದೇಶದ ಒಳತಿರುಳನ್ನು ತಿಳಿಯಲಾಗದು. ವಾಸ್ತವದ ಭಾರತದಲ್ಲಿ ಇತಿಹಾಸದ ಕರಾಳ ಛಾಯೆ ಇದೆ. ನೈಪಾಲರಂಥವರಿಗೆ ಅದು ಅರ್ಥವಾಗುತ್ತದೆಯೇ ಹೊರತು ಅದನ್ನು ತಿಳಿದವರು ಕೇವಲ ಆರೆಸ್ಸೆಸ್ಸಿನರೇ ಎಂದೇನೂ ಅಲ್ಲ.
ಕೆಲವರಿರುತ್ತಾರೆ. ಅವರು ಕೆಲವರನ್ನು ಅನುಸರಿಸಿಯೋ, ಆರಾಧಿಸಿಯೋ ಅವರಂತೆಯೇ ಆಗಿಹೋಗಿರುತ್ತಾರೆ. ಕಾರ್ನಾಡರೂ ಹಾಗೆ ಆಗಿಹೋದವರೇನೋ ಎಂದು ಧಿಗಿಲಾಗುತ್ತದೆ. ಅವರ ತುಘಲಕ್ ನಾಟಕದಲ್ಲಿ ಒಂದು ದಿನ ಅರಸ ನಿದ್ರೆ ಬಾರದೆ ಒದ್ದಾಡುತ್ತಾನೆ. ಅಪರಾತ್ರಿಯಲ್ಲಿ ಕೋಣೆಯಿಂದ ಹೊರಗೆ ಬರುತ್ತಾನೆ. ನರಿಗಳು ಊಳಿಡುತ್ತಿರುತ್ತವೆ. ಸುಯ್ಯೆಂದು ಗಾಳಿ ಬೀಸುತ್ತಿರುತ್ತವೆ. ಕೋಟೆ ಬರುಜಿನ ಬಳಿ ಅಡ್ಡಾಡುತ್ತಾನೆ. ಕಾವಲುಗಾರನೊಡನೆ ಮಾತಿಗೆ ಕೂರುತ್ತಾನೆ. ಏನೇನೋ ಆಲಾಪಿಸುತ್ತಾನೆ. ಸದಾ ಗೊಂದಲದ, ವಿಪರೀತ ಸಂಶಯದ ,ಯದ್ವಾತದ್ವಾ ನಿಲುವಿನ ಕಾರ್ನಾಡರ ತುಘಲಕ್ ಲೇಖಕನದ್ದೇ ಮನಸಿನ ಪ್ರತಿಬಿಂಬವೇನೋ ಎಂದು ಈಗ ಭಾಸವಾಗುತ್ತದೆ.
ಕಾರ್ನಾಡ್ ನಿಂದಿಸಿರುವುದರಿಂದ ನೈಪಾಲರೇನೂ ನಾಯಿಪಾಡು ಪಡುವಂತಿಲ್ಲ. ಕಾರ್ನಾಡರೇ ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಜನ ಕಾರ್ನಾಡರಿಗೆ ನೊಬೆಲ್ ಆಸೆ ಹುಟ್ಟಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.





