Wednesday, August 22, 2012

ನುಸುಳುಕೋರರಲ್ಲ:ದಾಳಿಕೋರರು

ಕೆಲವರ್ಷಗಳ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಅಸ್ಸಾಂ ಚಲೋ ಚಳವಳಿಯನ್ನು ಸಂಘಟಿಸಿದ್ದರು. ಅಸ್ಸಾಂನಲ್ಲಿ ತೀವ್ರಗೊಂಡಿರುವ ಬಾಂಗ್ಲಾ  ವಲಸಿಗರ ನುಸುಳುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರಾದ್ಯಂತ ಕಾರ್ಯಕರ್ತರು ಚಿಕನ್ ನೆಕ್ ಪ್ರದೇಶದಲ್ಲಿ ರಾಲಿ ನಡೆಸಿದ್ದರು. ಕರ್ನಾಟಕದಿಂದಲೂ ಅಸ್ಸಾಂಗೆ ಕಾರ್ಯಕರ್ತರು ತೆರಳಿದ್ದರು.  ಅಸ್ಸಾಂ-ಬಾಂಗ್ಲಾ ಗಡಿಯ ಚಿತ್ರಗಳನ್ನು ಅವರು ಸೆರೆಹಿಡಿದು ತಂದಿದ್ದರು. 
 ಚಿತ್ರಗಳನ್ನು ನೋಡಿದಾಗ ವ್ಯವಸ್ಥೆಯ ಕ್ರೋಧವೂ, ಅಸಹಾಯಕತೆಯೂ, ಭಯವೂ, ಅಪಾಯದ ಮುನ್ಸೂಚನೆಗಳೆಲ್ಲವೂ ಏಕಕಾಲಕ್ಕೆ ಉಂಟಾಗುತ್ತಿದ್ದವು.  ಹಲವೆಡೆ ಬೃಹತ್ತಾದ  ಮುಳ್ಳಿನ ಬೇಲಿಗಳು. ಆದರೆ ಅಲ್ಲಲ್ಲಿ ಮನುಷ್ಯರು ಸಲೀಸಾಗಿ ಹೋಗಬಲ್ಲಷ್ಟು  ನಿರಾಯಾಸದ ದಾರಿಗಳು. ಇನ್ನು ಹಲವೆಡೆಗಳಲ್ಲಿ ಒಂದು ಕಾಲು ದಾರಿಯೇ ಅಂತಾರಾಷ್ಟ್ರೀಯ ಗಡಿ ರೇಖೆ. ಇನ್ನೊಂದೆಡೆ ಪುಟ್ಟ ನದಿ. ಸಲೀಸಾಗಿ ದೋಣಿಯಲ್ಲಿ ಸಾಗಿದರೆ ವಿದೇಶ ಮುಟ್ಟಬಹುದಿತ್ತು. ಇನ್ನು ಹಲವೆಡೆಯಂತೂ ಸರಿಯಾಗಿ ಗಡಿರೇಖೆಯ ಮಧ್ಯದಲ್ಲೇ ಮನೆಯೊಂದಿತ್ತು. ಅಡುಗೆ ಮನೆ ಭಾರತದಲ್ಲಿದ್ದರೆ, ಬಚ್ಚಲು ಮನೆ ಬಾಂಗ್ಲಾದಲ್ಲಿತ್ತು. ಆದರೂ ಇವರು ಬಾಂಗ್ಲಾವಾಸಿಗಳು. ಇನ್ನೊಂದು ಚಿತ್ರದಲ್ಲಿ ದಿಡ್ಡಿ ಬಾಗಿಲಿನಂತೆ ದೊಡ್ಡದೊಂದು ಬಾಗಿಲು. ಅದಾಗಲೇ ಆ ಬಾಗಿಲಿನಲ್ಲಿ ಒಂದನ್ನು ಮುರಿದು ಸೈಕಲ್‌ಗಳಲ್ಲಿ ನುಸುಳುತ್ತಿರುವ ಬಾಂಗ್ಲ್ಲಾವಾಸಿಗಳು. ಇನ್ನೊಂದು ಚಿತ್ರದಲ್ಲಿ ನೆಪಮಾತ್ರಕ್ಕೆ ಒಂದು ಚೆಕ್‌ಪೋಸ್ಟ್. ಅಲ್ಲಿ ಸೋಮಾರಿಯಂತೆ ಕುಳಿತಿರುವ ಒಬ್ಬ ಗಡಿಭದ್ರತಾಪಡೆಯ ಸಿಬ್ಬಂದಿ. ಅವನ ಸುತ್ತಲೂ ಆಚೆಗೂ ಈಚೆಗೂ ಸರಂಜಾಮುಗಳನ್ನು ಹೊತ್ತು ಗಡಿ ದಾಟುತ್ತಿರುವ ಜನರು.
ಆ ಚಿತ್ರಗಳು ಸ್ವತಂತ್ರ, ಸಾರ್ವಭೌಮ ಭಾರತದ ಮತ್ತೊಂದು ಮುಖವನ್ನು ತೋರಿಸುತ್ತಿದ್ದವು.  ನಮ್ಮ ಪ್ರಜಾಪ್ರಭುತ್ವ ತನ್ನ ಗಡಿಗೆ ಕೊಟ್ಟಿರುವ ಮಹತ್ತ್ವವನ್ನು ಅವು ಮೂಕವಾಗಿ ಹೇಳುತ್ತಿದ್ದವು.
ಹಾಗಾಗಿ ಬಾಂಗ್ಲಾ ವಲಸಿಗರನ್ನು  ದಾಳಿಕೋರರು ಎಂದು ಕರೆಯುವುದೇ ಲೇಸು ಎನಿಸುತ್ತದೆ. ಅವರಾರೂ ಅಂತಾರಾಷ್ಟ್ರೀಯ ಗಡಿಯನ್ನು  ನುಸುಳಿ, ಹಾರಿ, ವ್ಯವಸ್ಥೆಗೆ ಮಣ್ಣೆರಚಿ ಬಂದವರಲ್ಲ. ಒಂದು ದಾಪುಗಾಲು ಹಾಕಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಪರ ರಾಷ್ಟ್ರದಲ್ಲಿ ಸ್ವರಾಷ್ಟ್ರಕ್ಕಿಂತಲೂ ವೈಭವದ, ನೆಮ್ಮದಿಯ ಬದುಕು ಬದುಕುತ್ತಿರುವವರು.
ಬಾಂಗ್ಲಾದಿಂದ ಬಂದ ಈ ಒರಟು ಜನರ ಮುಖ್ಯ ಕಸುಬು ಕಳ್ಳಸಾಗಾಣಿಕೆ. ಮುಖ್ಯವಾಗಿ ಗಾಂಜಾ ಕೃಷಿ ಮತ್ತು ಸರಬರಾಜು. ಬ್ರಹ್ಮಪುತ್ರಾ ಮುಖಜ ಭೂಮಿಯಲ್ಲಿ ಗಾಂಜಾ ಕ್ರಷಿ ನಡೆಸುವವರು ಬಾಂಗ್ಲಾದಿಂದ ಬಂದು ಭಾರತದ ಆಯಕಟ್ಟಿನ ಜಾಗದಲ್ಲಿ ನೆಲೆಸಿರುವವರು. ಹೀಗೆ ಬೆಳೆದ ಗಾಂಜಾವನ್ನು ಬಾಂಗ್ಲಾಕ್ಕೆ , ಅನಂತರ ಬರ್ಮಾಕ್ಕೆ, ಅಲ್ಲಿಂದ ಥಾಯ್ಲಾಂಡ್, ಸಿಂಗಾಪುರ ಮೊದಲಾದೆಡೆ ಸಾಗಿಸಲು ಮತ್ತು ಸಮಸ್ತ ಭಾರತಕ್ಕೆ ಸಾಗಿಸಲು ವ್ಯವಸ್ಥಿತ ತಂಡವೇ ಕಾರ್ಯಚರಿಸುತ್ತಿದೆ. ಹಾಗಾದರೆ ಭಾರತ ಇಂತಹ ಘಾತಕರಿಗಿರುವ ಧರ್ಮಛತ್ರವೇ?ಇದೇ ರೀತಿ ಭಾರತದಿಂದ ನಾಣ್ಯಗಳ ಸಂಗ್ರಹ ಮತ್ತು ಖರೀದಿ ಬಾಂಗ್ಲಾ ಮುಸ್ಲಿಮರ ಮತ್ತೊಂದು ದಂಧೆ. ಭಾರತದಲ್ಲಿ ಇಂದು ನಾಣ್ಯಗಳ ಅಭಾವ ತಲೆದೋರಿರುವುದಕ್ಕೆ ಈ ಮುಸ್ಲಿಮರು ಕಾರಣರೇ ಹೊರತು ಖಂಡಿತಾ ಆರ್.ಬಿ.ಐ ಅಲ್ಲ. ಈ ನಾಣ್ಯಗಳನ್ನು ಬಾಂಗ್ಲಾಕ್ಕೆ ಕಳುಹಿಸಿ, ಕರಗಿಸಿ ಶೇವಿಂಗ್ ಬ್ಲೇಡುಗಳನ್ನು ತಯಾರಿಸುವುದು ಒಂದು ಉದ್ಯಮ.  ಮಾರುಕಟ್ಟೆ ಭಾರತ. ಭಾರತ ಬಾಂಗ್ಲಾ ದೇಶಿಯರ ಪಾಲಿಗೆ ಪುಕ್ಕಟೆ ಮಾರುಕಟ್ಟೆಯಾಗಬೇಕೆ?  ಹೀಗೆಯೇ  ಬಾಂಗ್ಲಾ ಗಡಿಯಲ್ಲಿ  ಭಾರತದ ವಿವಿಧ ಜಾತಿಗಳ ಗೋತಳಿಗಳು ಮೇಯುತ್ತಾ ಮೇಯುತ್ತಾ ಬಾಂಗ್ಲಾದ ಕಸಾಯಿಖಾನೆಗೆ ಸೇರುತ್ತವೆ. ಬಾಂಗ್ಲಾ ಗೋಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತದೆ. ಭಾರತವನ್ನು ಕದ್ದು ಬದುಕುವ ಬಾಂಗ್ಲಾ ಮುಸ್ಲಿಮರು ನುಸುಳುಕೋರರೇ? ದಾಳಿಕೋರರೇ?
ಸದ್ಯದ ವಿದ್ಯಮಾನಗಳು ಏಕಾ ಏಕಿ ನಡೆದುದಲ್ಲ ಎಂಬುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ. ಭಾರತದಲ್ಲೂ ಇವರ ‘ಸಹೋದರರು’ ಬಹಿರಂಗವಾದದ್ದು ಮಾತ್ರ ಹೊಸ ಬೆಳವಣಿಗೆ.

ದೇಶಕ್ಕೆ ವಲಸಿಗರ ಚಿಂತೆ: ಪ್ಲಾಂಟರುಗಳಿಗೆ ಆಳಿನ ಚಿಂತೆ

ದೇನು ತುಂಬಾ ಹಳೆಯ ಸಂಗತಿಯಲ್ಲ. ಅಸ್ಸಾಂನಲ್ಲಿ ನೆಲೆಸಿದ್ದ ಬಾಂಗ್ಲಾ ಮುಸಲ್ಮಾನನೊಬ್ಬ ಯಾವುದೋ ಕ್ರಿಮಿನಲ್  ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಆತ ಅಸ್ಸಾಂ ಬಿಟ್ಟಿದ್ದ . ಹೀಗೆ ಊರು ಬಿಟ್ಟಿದ್ದ ಅಸ್ಮತ್  ಅಲಿ ಎಂಬಾತನನ್ನು ಹುಡುಕಲು  ಅಸ್ಸಾಮಿ
ನಿಂದ ಗುಪ್ತಚರ ಇಲಾಖೆಯ ಸಿಬ್ಬಂದಿಗಳು ಜಾಡು ಹಿಡಿದು ನೇರವಾಗಿ ಕರ್ನಾಟಕದ ಕೊಡಗಿಗೆ ಬಂದರು.  ಕೊಡಗಿನ  ದೊಡ್ಡ ಪ್ಲಾಂಟರುಗಳ ತೋಟವನ್ನೆಲ್ಲಾ  ಜಾಲಾಡಿದರು. ಎಂಥಾ ಕ್ರಿಮಿನಲನೋ? ಎಲ್ಲಿಂದೆಲ್ಲಿಯ ಸಂಬಂಧವೋ ಎನ್ನುವುದು ತಿಳಿಯಲಿಲ್ಲ. ಆದರೆ ಕೊಡಗಿನ ಕಾಫಿ ತೋಟಕ್ಕೂ ಬಾಂಗ್ಲಾ ವಲಸಿಗ ಅಸ್ಸಾಂ ಮುಸ್ಲಿಮರಿಗೂ ನೇರಾನೇರ ಸಂಪರ್ಕವಿದೆ ಎಂಬ ಸಂಗತಿ ಒಳಗೊಳಗೇ ಇದ್ದಿದ್ದು ಮಾತ್ರ ಬಹಿರಂಗವಾಗಿತ್ತು.
ಇತ್ತೀಚೆಗೆ ಕೊಡಗಿನ ಅಮ್ಮತ್ತಿ-ಹೊಸೂರು ಪ್ರದೇಶದ ದೊಡ್ಡ ಪ್ಲಾಂಟರ್ ಒಬ್ಬರು ಆಳುಗಳಿಗೆ  ಸಂಬಳ ಕೊಡಲು ಎರಡು ದಿನ ತಡವಾಯಿತು.  ಇದರಿಂದ  ಸಿಟ್ಟಿಗೆದ್ದ ಆಳುಗಳು ತೋಟದ ಗೇಟನ್ನೇ ಸ್ಪೋಟಿಸಿದರು! ಕಾಫಿ ತೋಟದ  ಆಳುಗಳು ಸ್ಪೋಟವನ್ನೂ  ನಡೆಸುತ್ತಾರೆ. ಆಗಲೂ ಜನರು ಬಾಂಗ್ಲಾ ವಲಸೆಯ ಬಗ್ಗೆ ಮಾತಾಡಿಕೊಂಡರು.  ಇನ್ನೊಮ್ಮೆ ನಾಪೋಕ್ಲು  ಪರಿಸರದ  ಮಸೀದಿಯಲ್ಲಿ ಹಬ್ಬದ ಉಡುಗೊರೆಯಾಗಿ ಕಾಫಿ ತೋಟದ ಮುಸಲ್ಮಾನರಿಗೆ  ಸ್ಥಳೀಯ ಮುಸಲ್ಮಾನರು ಟೋಪಿ ಮತ್ತು ಬುರ್ಖಾಗಳನ್ನು ವಿತರಿಸಿದರು. ಎಲ್ಲಿಂದಲೋ ಬಂದ ಆಳುಗಳಿಗೆ ಇನ್ನೆಲ್ಲಿನದೋ ಊರಿನ ಮಸೀದಿಯಿಂದ ಟೋಪಿ ವಿತರಣೆ! ಆಗಲೂ ಜನ ‘ಇವರೆಲ್ಲಾ ದೇಶ ಇಡುವುದುಂಟಾ?’ ಎಂದು ಮಾತಾಡಿಕೊಂಡಿದ್ದರು.  ಕಳೆದ ವರ್ಷ ತಲಕಾವೇರಿ, ಭಾಗಮಂಡಲಕ್ಕೆ ಹೋಗುವ ದಾರಿಯಲ್ಲಿ ಸಿಗುವ ಚೇರಂಬಾಣೆ ಎಂಬ ಸಣ್ಣ ಊರೊಂದಕ್ಕೆ ೮೦ ಜನ   ಅಸ್ಸಾಂ ಮೂಲ ಎಂದು ಹೇಳಿಕೊಂಡು ಒಂದು ವರ್ಷವಿದ್ದು ಹೋದರು ಎಂಬುದನ್ನು ಕೆಲವರು ಇಂದಿಗೂ ಭೀತಿಯಿಂದ ಮಾತಾಡಿಕೊಳ್ಳುತ್ತಿದ್ದಾರೆ. ಉರಿಯುತ್ತಿರುವ ಅಸ್ಸಾಂ, ಅದರ ಕಿಡಿಗಳು  ದೇಶಾದ್ಯಂತ ಹೊತ್ತಿಕೊಳ್ಳುತ್ತಿರುವ ಸಂದರ್ಭದಲ್ಲಿ  ಪ್ರಜ್ಞಾವಂತರು ಈ ಎಲ್ಲಾ ಘಟನೆಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಬೆಚ್ಚಿ ಬೀಳುತ್ತಿದ್ದಾರೆ.
ಅವರ ಭೀತಿಗೂ ನ್ಯಾಯಯುತವಾದ ಕಾರಣವಿದೆ. ಗುಪ್ತಚರ ಇಲಾಖೆಯ ಪ್ರಕಾರ ಕೊಡಗಿನಲ್ಲಿ ೧೦ರಿಂದ ೧೪ ಸಾವಿರದಷ್ಟು ಬಾಂಗ್ಲಾ ವಲಸಿಗರಿದ್ದಾರೆ. ಎಲ್ಲರೂ ಕೊಡಗಿನ ಕಾಫಿ ತೋಟಗಳಲ್ಲಿ ,ಕಟ್ಟಡ  ಗುತ್ತಿಗೆದಾರರ ಬಳಿ  ಕೂಲಿಗಳಾಗಿದ್ದಾರೆ ಎಂಬುದನ್ನು ಗುಪ್ತಚರ ಇಲಾಖೆ ತಿಳಿಸಿತು. ಕಳೆದ ೫ ವರ್ಷಗಳಿಂದ ಇದರ ಸೇರ್ಪಡೆಯಾಗುತ್ತಿದ್ದರೂ ಈಗಿನ ೨ ವರ್ಷಗಳಿಂದ ಇದು ಬಹಿರಂಗವಾಗುತ್ತಿದೆ ಎಂಬುದು ಗಮನಾರ್ಹ ಅಂಶ.  ಮಡಿಕೇರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು “ಅಸ್ಸಾಂ, ಬಿಹಾರ ಎಂದು ಹೇಳಿಕೊಂಡು ಬರುವ ಎಲ್ಲಾ  ತೋಟದ ಕೂಲಿಗಳ ಬಳಿ ಸ್ಥಳೀಯ ಆಡಳಿತ ಕೊಟ್ಟಿದೆ ಎನ್ನಲಾದ ಪರಿಚಯ ಪತ್ರವೊಂದಿರುತ್ತದೆ. ಬಹುತೇಕ ಪರಿಚಯ ಪತ್ರಗಳ ಮೂಲ ಅಸ್ಸಾಮಿನ ಶಿಲ್ಲಾಂಗ್ ಎಂದಿರುತ್ತದೆ ” ಎನ್ನುತ್ತಾರೆ. ಆ ಗುರುತಿನ ಪತ್ರವೂ  ಒಂದು ಸೋಜಿಗ.
ಒಂದು ಪರಿಚಯ ಪತ್ರ ಹೀಗಿದೆ.
 ಆರಂ‘ದಲ್ಲಿ ‘ರತ ಸರಕಾರದ ಲಾಂಛನ. ಅದರ ಕೆಳಗೆ Govt. of GAONBURHA  ಎಂಬ ಬರಹ. ಭಾರತ ಸರಕಾರದ ಲಾಂಛನದ ಕೆಳಗೆ ಹೆಸರು ಕೇಳಿಲ್ಲದ ದೇಶವೋ, ಊರೋ, ಪಂಚಾಯತಿಯೋ ಏನೂ ತಿಳಿಯದು. ದೇಶದ ಎಲ್ಲಾ  ರಾಜ್ಯಗಳಿಗೂ ಅವುಗಳದ್ದೇ ಆದ ಲಾಂಛನಗಳಿರುತ್ತವೆ. ಆದರೆ ಇಲ್ಲಿ ಮಾತ್ರ ಅದಿಲ್ಲ. GAONBURHA  ಎಂಬುದೇ  ಒಂದು ದೇಶ. ಅದರ ಕೆಳಗೆ ಹೀಗೊಂದು ವಿಳಾಸ.
MD. ABDUL REHMAN
VILL CHENIBARI
PO RANI PUKURI
MOUZA - SH AYANABARI
P.S.DHULA
Dist. DARRANG (ASSAM)
ಈ ವಿಳಾಸದ ವ್ಯಕ್ತಿಯನ್ನು  ಪರಿಚಯ ಮಾಡಿ ಈತನ ವರ್ತನೆ ಉತ್ತಮ ಎಂದು ಬರೆದು ಕಳಿಸಿದವನು M.D HABIBAR REHMAN, S/O ABDUL JALIL  ಎಂಬ ಪಂಚಾಯತಿ ಸದಸ್ಯ ಇಂಥ ಕ್ಯಾರೆಕ್ಟರ್ ಸರ್ಟಿಫಿಕೇಟ್ ಪಡೆದವರೆಲ್ಲರೂ ಸಮೀವುಲ್ಲಾ , ಜಾಫರ್, ಅತಾವುಲ್ಲಾಖಾನ್, ಮುಜಾಫರ್ , ಶರೀಫ್ ಹೆಸರಿನವರು. ಇವರೆಲ್ಲರೂ ಕೊಡಗಿನ ದೊಡ್ಡ ಧಣಿಗಳ ತೋಟದಲ್ಲಿ ಕೆಲಸಕ್ಕೆ ಸೇರುತ್ತಾರೆ. ಕಳೆದುಹೋಗುತ್ತಾರೆ. ಸ್ಥಳೀಯ ಮಸೀದಿಗಳು ಇಂದು  ಟೋಪಿ, ಬುರ್ಖಾ ಕೊಟ್ಟವರು ನಾಳೆ ಮನೆಕಟ್ಟಿ ಕೊಡಲಾರರು ಎಂದೇನೂ ಹೇಳದಿರಲಾಗುವುದಿಲ್ಲ.
ಮಡಿಕೇರಿಯ ನಾಗರಿಕರು ಇನ್ನಷ್ಟು ಹೇಳುತ್ತಾ ಹೋದರು. ಕೆಲವು ದಾಖಲೆಗಳನ್ನು ತೋರಿಸಿದರು. ವಿಪರ್ಯಾಸವೆಂದರೆ  ಅದೇ ಚೇರಂಬಾಣೆ  ಎಂಬ ಸಣ್ಣ ಊರಿನ ಬ್ಯಾಂಕೊಂದರಿಂದ  ದೊಡ್ಡ ಮೊತ್ತದ ಹಣ ಅಸ್ಸಾಮಿನ ಜಾಕೀರ್  ಹುಸೇನ್ ಎಂಬ  ವೈದ್ಯನೊಬ್ಬನಿಗೆ ಸಂದಾಯವಾಗುತ್ತಿದೆ. ಈತ ಕಾಫಿ ತೋಟಕ್ಕೆ ಕೂಲಿಯಾಳುಗಳನ್ನು ಕಳುಹಿಸುವ  ದಂಧೆ ನಡೆಸುವವನು. ಒಬ್ಬ ಆಳಿಗೆ ತಲಾ ಎರಡೂವರೆ ಸಾವಿರ ರೂಪಾಯಿ ಸಂದಾಯ ಮಾಡಿದರೆ  ಒಬ್ಬನನ್ನು ಮುಂಗಡ ಕಾಯ್ದಿರಿಸಿದಂತೆ. ಇಂಥ  ಆಳುಗಳನ್ನು ಅಸ್ಸಾಂನಿಂದ ಕಳುಹಿಸುವ  ಏರ್ಪಾಡು ಆತನದ್ದು. ರೈಲು ನಿಲ್ದಾಣದಿಂದ  ಕರೆತರುವ  ವ್ಯವಸ್ಥೆ  ಸ್ಥಳೀಯ ದಲ್ಲಾಳಿಗಳದ್ದು. ಕೇವಲ ೧೦೦ರಿಂದ ೧೫೦ ರೂ.ಗೆ ದಿನಗೂಲಿಗೆ ಸಿಕ್ಕುವ ಈ ಕೂಲಿಯಾಳುಗಳಿಗೆ  ಕೊಡಗಿನಲ್ಲಿ  ಬೇಡಿಕೆ ಹೆಚ್ಚು. ದೊಡ್ಡ ಪ್ಲಾಂಟರುಗಳಿಗೆ ಉಳಿದೆಲ್ಲವೂ ಗೌಣ. ಆಳೊಂದೇ ಪ್ರಧಾನವಾದ್ದರಿಂದ   ಸಮಸ್ಯೆಗಳು ಮತ್ತೊಂದು  ಮಗ್ಗುಲಿಗೆ  ಹರಡಿಕೊಂಡಿದೆ. ಹಾಗಾಗಿ ಕೊಡಗಿನ  ದೊಡ್ಡ ಪ್ಲಾಂಟೇಶನ್‌ಗಳಿರುವೆಡೆಯಲ್ಲೆಲ್ಲಾ  ಬಾಂಗ್ಲಾ ವಲಸಿಗರು  ತುಂಬಿದ್ದಾರೆ. ಸಿದ್ದಾಪುರ  ಮತ್ತು   ಪಾಲಿಬೆಟ್ಟ  ಸುತ್ತಮುತ್ತ, ಸುಂಟಿಕೊಪ್ಪ, ಬೆಟ್ಟಗೇರಿ, ದ.ಕೊಡಗಿನ  ಕುಟ್ಟಾ, ಭಾಗಮಂಡಲದ ಸುತ್ತಮುತ್ತಲೆಲ್ಲಾ  ತೋಟದ ಕೆಲಸಗಾರರು ಎಂದರೆ   ಒರಟೊರಟಾಗಿ ಕಾಣುವ ಬಾಂಗ್ಲಾ ಮುಸಲ್ಮಾನರೇ.
ಇದೇಕೆ ಹೀಗೆ? ಬಾಂಗ್ಲಾ ಆಳುಗಳೇಕೆ ಇಲ್ಲಿನ ತೋಟಗಳಿಗೆ ಬರುತ್ತಾರೆ ಎಂಬುದಕ್ಕೆ ಪೂರ್ವರಂಗವನ್ನು ಗಮನಿಸಲೇ ಬೇಕು.
ಶತಮಾನಗಳ ಹಿಂದೆ ಕೊಡಗಿನಲ್ಲಿ ಬ್ರಿಟಿಷರು  ಕಾಫಿ ಪ್ಲಾಂಟೇಶನ್‌ಗಳನ್ನು ಪ್ರಾರಂಭಿಸುವಾಗ ನಂಬಿಕೊಂಡಿದ್ದು ಕೊಡಗಿನ  ಬುಡಕಟ್ಟು ಜನಾಂಗಗಳಾದ ಕುರುಬರು  ಮತ್ತು ಎರವರನ್ನು. ಇದು ಇತ್ತೀಚಿನ ೨೦ ವರ್ಷಗಳ ಹಿಂದಿನವರೆಗೂ ನಡೆದುಕೊಂಡು ಬಂದಿತ್ತು.
ಹಾಗಾಗಿ  ದೊಡ್ಡಪ್ಲಾಂಟರುಗಳ ತೋಟದಲ್ಲೆಲ್ಲಾ  ಸಾಲುಸಾಲು ಲೈನ್ ಮನೆಗಳು,  ಬಾವಿಗಳಿವೆ ಮತ್ತು ಹಾಡಿಗಳಿಗೆ  ಸಮೀಪವಿರುವ ಪ್ರದೇಶಗಳಲ್ಲೇ ದೊಡ್ಡ ದೊಡ್ಡ ಪ್ಲಾಂಟೇಶನ್‌ಗಳಿವೆ. ಯಾವಾಗ ಪುನರ್ವಸತಿ ಹೆಸರಿನಲ್ಲಿ ಈ ಬುಡಕಟ್ಟುಗಳನ್ನು  ಕಾಡಿನಿಂದ ಒಕ್ಕಲೆಬ್ಬಿಸುವ ಕೆಲಸ ಆರಂಭವಾಯಿತೋ ಆಗಿನಿಂದ ಈ ತೋಟಗಳಿಗೆ ಕೂಲಿಯಾಳುಗಳ ಸಮಸ್ಯೆ ಕಾಡಲಾರಂಭಿಸಿತು.  ಜೊತೆಗೆ ಲೈನ್‌ಮನೆಗಳಲ್ಲಿದ್ದ ಆಳುಗಳು  ತೋಟದ ಕೆಲಸವನ್ನು ಬಿಟ್ಟು ಪೇಟೆ ಸೇರಲಾರಂಭಿಸಿದರು. ಹೀಗೆ ನೋಡನೋಡುತ್ತಲೇ ಕಾಫಿ ತೋಟದ ಶ್ರಮದಾಯಕ ಕೆಲಸಕ್ಕೆ ಕೂಲಿ ವಿಪರೀತ ಹೆಚ್ಚಿತು. ಪೇಟೆಯ ಕಾಲೋನಿಗಳ ಕಾರ್ಮಿಕರನ್ನು ಮುಸಲ್ಮಾನ್ ದಳ್ಳಾಳಿಗಳು ಜೀಪುಗಳಲ್ಲಿ ಬೇರೆ  ಊರುಗಳಿಗೆ ಕಳುಹಿಸಿ ಕಾರ್ಮಿಕರ ಅಸಮತೋಲನ ಸೃಷ್ಟಿಸುವ ಕೆಲಸವನ್ನೂ ಆರಂಭಿಸಿದರು. ಇದರಿಂದ  ದೊಡ್ಡ ತೋಟದಲ್ಲಿ ಅರೇಬಿಕಾ  ಕಾಫಿ ಬೆಳೆಸುವ, ವರ್ಷಪೂರ್ತಿ ಕೆಲಸವನ್ನು ಅಪೇಕ್ಷಿಸುವ ತೋಟಗಳಿಗೆ ಕೆಲಸಗಾರರ ಅಭಾವ ತೀವ್ರವಾಗಿ ಬಾಧಿಸಿತು. ಆಗ ಅದರ ಲಾಭವನ್ನು  ಪಡೆದುಕೊಂಡಿದ್ದೇ ಮುಸಲ್ಮಾನ ದಲ್ಲಾಳಿಗಳು. ಆದರೆ ಸ್ಥಳೀಯ ದಲ್ಲಾಳಿಗಳಿಗೆ ದೂರದ ಅಸ್ಸಾಂನ ದಲ್ಲಾಳಿಗಳ ಪರಿಚಯವಾಗಿದ್ದು ಹೇಗೆ?  ಇವರೆಲ್ಲರೂ ಸೋದರರೇ? ಎಂದು ಕೇಳಿದರೆ ಕೋಮುವಾದದ  ಪ್ರಶ್ನೆಗಳಾಗಿಬಿಡುತ್ತವೆ.
ರಾಯರ್ ಫ್ಯಾಮಿಲಿಗಳ ದೊಡ್ಡ ಪ್ಲಾಂಟರುಗಳಿಗಂತೂ ಇದಾವುದರ ಪರಿವೆ ಇರುವುದಿಲ್ಲ. ತನ್ನ ತೋಟದ ಕೆಲಸ ಆಗಬೇಕಷ್ಟೇ ಎಂಬ ಭಾವನೆ. ಹಾಗಾದರೆ ದೇಶದ ಸ್ಥಿತಿ! ವಿಚಿತ್ರವೆಂದರೆ ಈ ರಾಯಲ್ ಫ್ಯಾಮಿಲಿಗಳಿಗೆ  ಕಾರ್ಯಪ್ಪ, ತಿಮ್ಮಯ್ಯರುಗಳೆಂದರೆ ವಿಪರೀತ ಹೆಮ್ಮೆ. ಅವರು ಯಾರ ವಿರುದ್ಧ ಹೋರಾಡಿ ದೇಶ ಬಿಟ್ಟು ಓಡಿಸಿದರೋ ಅವರನ್ನೇ ಈ ಪ್ಲಾಂಟರಗಳು ತಮ್ಮ ತೋಟಗಳಿಗೆ ಬಿಟ್ಟುಕೊಂಡಿದ್ದಾರೆ. ಇದು ಘೋರ ಅಣಕವಷ್ಟೇ ಅಲ್ಲ. ಮಹಾವಿಕೃತಿ.
ಬ್ರಿಟಿಷರ ಕಾಲ ನೆನಪಾಗುತ್ತದೆ. ೧೯ನೇ ಶತಮಾನದ ಆರಂಭದಲ್ಲಿ ಅಸ್ಸಾಮಿನ ಚಹಾತೋಟಗಳಲ್ಲಿ ಕೆಲಸ ಮಾಡಲು ಇಂದಿನ ಕೊಡಗಿನಂತೆ ಅಂದೂ  ಬಂಗಾಳಿ ಮಾತಾಡುವ ಮುಸಲ್ಮಾನರನ್ನು ತಂದು ಕೂರಿಸಿದ್ದರು. ಇಂದು ಅದೇ ಮುಸಲ್ಮಾನರು ಸ್ಥಳೀಯರಾಗಿ ಬಾಂಗ್ಲಾ ವಲಸಿಗರಿಗೆ ಸಹಕಾರ ನೀಡುತ್ತಿದ್ದಾರೆ. ಅಂದು ಬ್ರಿಟಿಷರು  ಮಾಡಿದ್ದನ್ನೇ ಇಂದು ಕೊಡಗಿನ ಪ್ಲಾಂಟರುಗಳು ಮಾಡುತ್ತಿದ್ದಾರೆ.  ಈಗಾಗಲೇ ಸಣ್ಣ ಜಿಲ್ಲ್ಲೆಯಲ್ಲಿ ಹದಿನಾಲ್ಕು  ಸಾವಿರ ಬಾಂಗ್ಲಾದೇಶಿಯರು ಇದ್ದಾರೆ ಎಂದರೆ ಮುಂದಿನ ದಿನಗಳಲ್ಲಿ  ಪರಿಸ್ಥಿತಿ ಏನಾಗಲಿದೆ? ವಿಪರ್ಯಾಸವೆಂದರೆ ಕೊಡಗಿನಲ್ಲಿ  ಪ್ರಬಲ ಮೂಲ ನಿವಾಸಿಗಳೆಂದು ಕರೆಯಲ್ಪಡುವ  ಕೊಡವರ ಸಂಖ್ಯೆ ೧ ಲಕ್ಷವೂ ಇಲ್ಲ. ದಿನೇ ದಿನೇ ಅವರ ಸಂಖ್ಯೆ ಕುಸಿಯುತ್ತಿದೆ. ಆದರೆ ಕೇವಲ ನಾಲ್ಕೈದು ವರ್ಷದಲ್ಲಿ ಬಾಂಗ್ಲಾದವರ ಸಂಖ್ಯೆಯೆ ಹದಿನಾಲ್ಕು ಸಾವಿರ! ಅಲ್ಲದೆ ಕೊಡಗಿನ  ಇತರ ಮೂಲ ನಿವಾಸಿಗಳಾದ ಅಮ್ಮಕೊಡವ, ಮಲಯ, ಮೇದ, ಹೆಗ್ಗಡೆ, ಪಣಿಕರ ಸಂಖ್ಯೆಗಿಂತಲೂ ಇವರ ಸಂಖ್ಯೆಯೇ ಹೆಚ್ಚು! ಎಲ್ಲವೂ ದೊಡ್ಡ ಪ್ಲಾಂಟರುಗಳ ಮಹಿಮೆ. ಅಂದು ಬ್ರಿಟಿಷರ ಜೊತೆ ಪಾರ್ಟಿ ಮಾಡುತ್ತಾ ಮೋಜು  ಮಾಡಿ ಇಂದು ರಾಯಲ್ ಕುಳಗಳಾಗಿರುವ ಇವರು ಇಂದೂ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಜಮ್ಮಾ ಆಸ್ತಿ ಮತ್ತು ವಿಶೇಷ ಶಸ್ತ್ರ  ಕಾಯಿದೆಯ ಅಹಂಕಾರದಿಂದ ಬೀಗುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ. ೨೧ರಷ್ಟು  ಮುಸಲ್ಮಾನರು ತುಂಬಿದ್ದಾರೆ. ಕುಸಿಯುತ್ತಿರುವ  ಸ್ಥಳೀಯರು, ಏರುತ್ತಿರುವ ವಿದೇಶಿ ಪೀಳಿಗೆಯವರ ಪ್ರವಾಹ ಇದೇ ರೀತಿ ಏರಿದರೆ  ಅವರನ್ನು ರಕ್ಷಿಸಲು ಜಮ್ಮಾ ಹಕ್ಕು ಇರುವುದಿಲ್ಲ. ಗೋಡೆಯಲ್ಲಿ  ತೂಗು ಹಾಕಿದ ಕೋವಿಯೂ ಇರುವುದಿಲ್ಲ.  ತೋಟವೂ  ಇರುವುದಿಲ್ಲ ಎಂಬ ಸಂಗತಿಯನ್ನು ಅರಿತುಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ.  ಏಕೆಂದರೆ ಯಾವ ಪ್ಲಾಂಟರನೂ ಇದುವರೆಗೆ ಎಚ್ಚೆತ್ತುಕೊಂಡಿಲ್ಲ. ಪೊಲೀಸರಿಗೆ ಸುದ್ದಿ ಮುಟ್ಟಿಸಿಲ್ಲ. ಇನ್ನು ಒಂದು ದಿಗ್ಭ್ರಮೆ  ಹುಟ್ಟಿಸುವ ಸಂಗತಿ ಎಂದರೆ ಟಾಟಾದವರ ತೋಟಗಳಲ್ಲೂ ಇವರು ನುಸುಳಿದ್ದಾರೆ ಎನ್ನುವುದು.  ದೊಡ್ಡವರಿಗೆ ತೋಟದ ಚಿಂತೆ, ಉಳಿದವರಿಗೆ  ದೇಶದ ಚಿಂತೆ. ದೇಶ  ಕೊಳ್ಳೆ ಹೊಡೆದರೆ ಇವರ ತೋಟ ಉಳಿದೀತೇ? “ಕತ್ತಿ-ಕೋವಿಯನ್ನಿಟ್ಟು ಸುಮ್ಮನೆ  ನಾವು ಪೂಜಿಸುತ್ತಿಲ್ಲವೇ?” ಎಂಬುದು ಕೇವಲ ಹಾಡು ಅಲ್ಲ.  ಅದು ಕೊಡಗಿನ ಪ್ಲಾಂಟರುಗಳ  ಮನಸ್ಥಿತಿ ಎಂಬುದು ಇದೀಗ ಅರಿವಾಗುತ್ತಿದೆ.
ಇವೆಲ್ಲವೂ ಮುಂಬರುವ ಅಪಾಯದ   ಪೂರ್ವಸೂಚನೆಯನ್ನು  ತರುತ್ತಿದೆ. ಅತ್ತ ಬೆಂಗಳೂರಿನಲ್ಲಿ ಸಾವಿರಾರು ಅಸ್ಸಾಮೀಯರು ಊರು ಬಿಟ್ಟರು. ಆದರೆ ಬಾಂಗ್ಲಾ ದೇಶಿಯರು?  ಬಾಂಗ್ಲಾ ವಲಸಿಗರಿಗಾಗಿ ಮಂಗಳೂರಿನಲ್ಲಿ ಹಣ ಸಂಗ್ರಹವಾಗುತ್ತದೆ. ಮುಂಬೈ, ಉತ್ತರ ಪ್ರದೇಶಗಳಲ್ಲಿ ದಂಗೆಗಳು ನಡೆಯುತ್ತದೆ. ಬೆಂಗಳೂರಿನ  ಶಾಂತಿ ಸಭೆಯಲ್ಲಿ ಸೇರಿದಾಗಲೂ ಮುಸ್ಲಿಂ ಮುಖಂಡರಿಗೆ ‘ಹೊಸದಿಗಂತ’ದ ಬಗ್ಗೆ ವಿಪರೀತ ಕೋಪ ಬರುತ್ತದೆ. ಬಾಂಗ್ಲಾ ವಲಸೆಯ ಬಗ್ಗೆ ಚರ್ಚಿಸುವಾಗಲೂ ಅಲ್ಲಿ ಪುಂಡರಸನೊಬ್ಬನ ಪ್ರಸ್ತಾಪವಾಗುತ್ತದೆ. ಆದರೆ ನಮ್ಮ ಪ್ಲಾಂಟರ್ ಗಳು? ಮನೆಯಲ್ಲೂ ಇಂಗ್ಲಿಷ್ ಮಾತಾಡುತ್ತಾರೆ. ಲೇಬರ್ ಪ್ರಾಬ್ಲಂ ಎನ್ನುತ್ತಾರೆ. ಕಾಫಿಯ ರೇಟಿನ ಬಗ್ಗೆ  ಚರ್ಚಿಸುತ್ತಾರೆ. ಸಂಜೆ ಕ್ಲಬ್‌ಗಳಿಗೆ ಹೋಗುತ್ತಾರೆ.  ಜೀವನಪೂರ್ತಿ ಅಹಂಕಾರ ಪಡುತ್ತಲೇ ಒಂದು ದಿನ ಸತ್ತು ಹೋಗುತ್ತಾರೆ.
ತೋಟ ಕೆಲಸಕ್ಕೆ ಬಂದ ಬಾಂಗ್ಲಾದವರ ಈ ಪ್ರಮಾಣ ಮತ್ತು ಅವರಿಗೆ ಟೋಪಿ ಮತ್ತು ಬುರ್ಖಾ ಕೊಟ್ಟ ಸ್ಥಳೀಯರ ಉತ್ಸಾಹಗಳನ್ನು ನೋಡಿದರೆ ದೊಡ್ಡ ಪ್ಲಾಂಟರುಗಳಿಗೂ, ಸಣ್ಣ ಪ್ಲಾಂಟರುಗಳಿಗೂ, ಪ್ಲಾಂಟರುಗಳಲ್ಲದವರೆಲ್ಲರಿಗೂ ಕೂಡ ಇನ್ನು ನೆಮ್ಮದಿಯ  ಸಾವೂ ಕೂಡ ಇಲ್ಲವೆಂದೇ ಯಾಕೋ ಅನಿಸುತ್ತಿದೆ. ಅಪಶಕುನ ಅನಿಸುತ್ತಿದೆ. ಶಿಲಾಯುಗದ ಜನರು ನೆನಪಾಗುತ್ತಿದ್ದಾರೆ.

Tuesday, August 14, 2012

ಮಾಲೆಗೆ ಮುತ್ತೊಂದಾಯಿತು ಇನ್ನೇಕೆ ಅಪಸ್ವರದ ಆಲಾಪ?

ಕೊಡಗು. ಅದಕ್ಕೆ ನಾನಾ ಹೆಸರುಗಳು. ವಿವಿಧ ಬಿರುದಾವಳಿಗಲು. ಕ್ರೋಢ ದೇಶ, ಮತ್ಸ ದೇಶ, ಗಂಧರ್ವ ಲೋಕ, ಕರ್ನಾಟಕದ ಸ್ವಿಜರ್ ಲ್ಯಾಂಡ್, ದಕ್ಷಿಣದ ಕಾಶ್ಮೀರ... ಇನ್ನೂ ಎಷ್ಟೆಷ್ಟೋ. ಕಂಡು ಹೊಗಳಿದವರು ಇಟ್ಟ ಹೆಸರುಗಳು, ಬಂದವರು ಹೊಳೆದಾಗ ಕರೆದ ನಾಮಗಳೆಲ್ಲವೂ ಇದಕ್ಕೆ ಅನ್ವರ್ಥವಾದವು. ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಕೊಡಗು ಎಂದರೆ ಒಂದು " ದೇಶ" ವೇ. ಇದು ಸಣ್ಣ ಪ್ರದೇಶವೊಂದಕ್ಕೆ ಸಿಕ್ಕಬಹುದಾದ ಅತ್ಯಚ್ಛ ಗೌರವ.  ದೇಶದೊಳಗಿದ್ದೂ ದೇಶವಾಗುವ  ತಾದ್ಯಾತ್ಮ. ಒಂದರೊಳಗೆ ಎರಡಾಗದೆ ಒಂದೇ ಆಗಿರುವ ತತ್ತ್ವಶಾಸ್ತ್ರ.  ವಿಚಿತ್ರ ಎಂದರೆ ಇಂದಿಗೂ ಹಳಬರು ಮೈಸೂರನ್ನು ರಾಜ್ಯ ಎಂದು ಕರೆದರೆ ಕೊಡಗನ್ನು ದೇಶ ಎಂದೇ ಸಂಭೋಧಿಸುತ್ತಾರೆ.  ಹೀಗೆ ಕೊಡಗು ರಾಜ್ಯವಾಗಿದ್ದರೂ ರಾಜ್ಯವಾಗದೇ ದೇಶದ ಪುಟ್ಟ- ಸುಂದರ ಕೂಸಿನಂತೆ ಜನಮನದಲ್ಲಿ ನಿಂತಿದೆ.
ಲಿಂಗಾಯತ ಅರಸರ ಕಾಲದಲ್ಲಿ ಕೂಡ ಕೊಡಗು ದಕ್ಷಿಣ ಕನ್ನಡದ ಸುಳ್ಯದವರೆಗೆ ವ್ಯಾಪಿಸಿದ್ದ ಸಂಸ್ಥಾನವೇ. ಅನಂತರ ಬ್ರಿಟಿಷರ ತೆಕ್ಕೆಗೆ ಬಂದಾಗಲೂ ಕೊಡಗನ್ನು ಅವರು ವಿಶೇಷ ಆಸ್ಥೆಯಿಂದ ಸಲಹಿದ್ದರು. ಟೈನಿ ಮಾಡಲ್ ಸ್ಟೇಟ್ ಎಂದು ಪ್ರೀತಿಯಿಂದ ಕರೆದರು. ಅನಂತರದ ಸ್ವತಂತ್ರ ಭಾರತವಾದಾಗ "ಸೀ" ಸಂಸ್ಥಾನವಾಗಿತ್ತು ಮತ್ತು ಅನಂತರ ಭಾಷಾವಾರು ಪ್ರಾಂತ ರಚನೆಯ ಹೊತ್ತಲ್ಲಿ  ಅಂದರೆ ೧೯೫೬ ರಲ್ಲಿ  ಯಾವ ಕಾರಣ ದಿಂದಲೂ ಕೊಡಗು ಪ್ರತ್ಯೇಕ ರಾಜ್ಯವಾಗುವ ಲಕ್ಷಣಗಳಿಲ್ಲವೆಂದೋ ಅಥವಾ ಕರ್ನಾಟಕ ಮಾತೆಯ ಕೊರಳ ಮಾಲೆಗೆ ಮುತ್ತೊಂದು ಇಲ್ಲದೆ ಸರವಾಗದು ಎಂಬ ಕಾರಣಕ್ಕೋ ಕೊಡಗು ಕರ್ನಾಟಕದಲ್ಲಿ ವಿಲೀನವಾಯಿತು. ಏನೇ ಆದರೂ ವಿಲೀನ ಸಂಪೂರ್ಣವಾಗಿ ಭಾರತದ ಏಕತೆ, ಸಾರ್ವಭೌಮತೆ, ಅಖಂಡತೆಯ ತಳಹದಿಯಲ್ಲಿ ನಡೆಯಿತು. ಮತ್ತು ಎಲ್ಲವೂ ಸುಸೂತ್ರವಾಗಿಯೇ ನಡೆಯಿತು. ಒಂದು ವೇಳೆ ವಿಲೀನಕ್ಕೆ ಅಡ್ಡಿಪಡಿಸಿದ್ದರೆ  ಸೈನಿಕ ಬಲದ ಮೂಲಕವಾದರೂ ಕೊಡಗು ಮೈಸೂರು ಸಂಸ್ಥಾನಕ್ಕೆ ಸೇರಲೇ ಬೇಕಿತ್ತು. ಏಕೆಂದರೆ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆ.
 ಹೀಗೆ ಕೊಡಗು ಮೈಸೂರು ಪ್ರಾಂತಕ್ಕೆ ಸೇರಿ, ಮುಂದೆ ಮೈಸೂರು ಕರ್ನಾಟಕವಾಗಿ, ಕರ್ನಾಟಕದಲ್ಲಿ ರಾಜಕಾರಣಗಳು ಶುರುವಾಗಿ, ಆ ರಾಜಕಾರಣಕ್ಕೆ ಮೂರು ಅಸೆಂಬ್ಲಿ ಸೀಟುಗಳು ಸಿಕ್ಕಿ . ಲಕ್ಷಾಂತರ ಕೊಡಗಿನವರು ಇದರಿಂದ ಕರ್ನಾಟಕದಲ್ಲಿ ಸೇರಿ , ಎಲ್ಲವೂ ಸರಿಯಾಗಿ ಅನಂತರವೂ ಕೊಡಗನ್ನು ಜನ " ದೇಶ" ಎಂದೇ ಕರೆಯುತ್ತಿದ್ದ ಹೊತ್ತಿನಲ್ಲೇ ಅಪಸ್ವರವೊಂದು ಕೇಳಿಬರತೊಡಗಿತು.  ಅದೇ ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ.
 ಎಲ್ಲವೂ ಮುಗಿದಿತ್ತು. ಇತಿಹಾಸದ ಭಾರಗಳಾವುವೂ ಇರಲಿಲ್ಲ. ಯಾವ ಬಂಧನವೂ ಇರಲಿಲ್ಲ. ಅಸಲು ಜನರಿಗೆ ಯಾರ ಆಡಳಿತದಲ್ಲೂ ವ್ಯತ್ಯಾಸವೂ ಕಾಣುತ್ತಿರಲಿಲ್ಲ. ಅಲ್ಲದೆ ನ್ಯಾಯವಾಗಿ ರಾಜ್ಯವನ್ನು ಕೇಳುವಂಥ ಯಾವ ತಾರ್ಕಿಕ  ಸಂಗತಿಗಳೂ ಇರಲಿಲ್ಲ. ಒಂದು ಹುಂಬತನ , ಪ್ರತ್ಯೇಕ ಅಸ್ತಿತ್ವದ ವಿತಂಡವಾದಗಳು, ಭಾವನೆಗಳನ್ನು  ಬಲವಂತವಾಗಿ ಕೆರಳಿಸುವ ಈ ಬೇಡಿಕೆಯಲ್ಲಿ ವಿಶೇಷವಾದ ಸಂವೇದನೆಯೊಂದರ ಸೆಲೆಯಿತ್ತೇ ಎಂದರೆ ಅದೂ ಇಲ್ಲ. ವಿಲೀನದ ಅನಂತರ ಕೊಡಗಿನ ಜನರಿಗಾದರೋ " ಈ ಕರ್ನಾಟಕದಲ್ಲಿ ಬದುಕುವುದು ದುಸ್ತರ" ಎಂಬ ವೇದನೆ ಇತ್ತೇ ಎಂದರೆ ಅದೂ ಕೂಡಾ ಇಲ್ಲವೇ ಇಲ್ಲ. ವಿಶಾಲ ಕರ್ನಾಟಕದಲ್ಲಿ ಪುಟ್ಟ ಕೊಡಗು ವಿಲೀನವಾದ ಅನಂತರ ಕೊಡಗಿಗೆ ಪ್ರಯೋಜನಗಳೇ ಕಂಡುಬಂದವು. ಮೀಸಲಾತಿಯ ಬಂಧವಿಲ್ಲದೆ ಹಲವಾರು ಜನರು ಕರ್ನಾಟಕದಲ್ಲಿ ಉದ್ಯೋಗಗಳನ್ನು ಕಂಡುಕೊಂಡರು. ಕೊಡಗಿನ ದನಿ ವಿಶಾಲ ಕರ್ನಾಟಕದಲ್ಲಿ  ಪ್ರತಿದನಿಸಿತು. ಅದುವರೆಗೆ ರಾಜಮನೆತನಗಳ ಸರ್ವಾಕಾರಿ ಧೋರಣೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಮತಾಂಧತೆ ಮತ್ತು ಬ್ರಿಟೀಷ್ ಕಲೆಕ್ಟರ್‌ಗಳ ನಾಜೂಕುತನಗಳ ನಡುವೆ ಬದುಕಬೇಕಾಗಿದ್ದ ಅನಿವಾರ್ಯತೆಗಳು, ಮಾನಸಿಕ ಗುಲಾಮಗಿರಿ, ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿದ್ದ ನಾಯಕರು- ಪಾಳೇಗಾರರು ವೊದಲಾದವರಿಂದ ಜನ ನಿರಾಳತೆಯನ್ನು ಅನುಭವಿಸಿದ್ದು  ಈ ಕರ್ನಾಟಕದಿಂದಲೇ. ಸ್ವತಂತ್ರ ಭಾರತದಲ್ಲಿ ಬ್ರಿಟೀಷ್ ಆಳರಸರ ಮೋಜಿನ ತಾಣವಾಗಿದ್ದ ಕೊಡಗನ್ನು ದೇಸೀತನಕ್ಕೆ ತರಬೇಕಿದ್ದರೆ ಅದನ್ನು ಮೈಸೂರಿಗೇ ಸೇರಿಸಬೇಕಿತ್ತು ಮತ್ತು ಹಾಗೆ ಪ್ರತ್ಯೇಕವಾಗಿಡುವುದು ಮತ್ತಷ್ಟು ಅಪಾಯಕಾರಿಯಾಗುತ್ತಿತ್ತು. ಹೀಗೆ ವಿಲೀನದ ತರುವಾಯ ಕೊಡಗು ಪ್ರಬಲ ಕರ್ನಾಟಕದ ಶಕ್ತಿಯನ್ನು ತಾನೂ ಗಳಿಸಿಕೊಂಡು ಪ್ರಬಲ ಜಿಲ್ಲೆಯಾಗಿ ಬೆಳೆಯಿತು. ಇದರಲ್ಲಿ ಕೊಡಗು ಕಳೆದುಕೊಂಡುದೇನೂ ಇರಲಿಲ್ಲ.
ಕೊಡಗಿನ ಪ್ರತ್ಯೇಕತೆಯ ಅಧ್ಯಯನ ಮಾಡಿದ ಯಾರಿಗೇ ಆದರೂ "ಪ್ರತ್ಯೇಕ ರಾಜ್ಯ" ದ ಕೂಗಿನ ಹಿಂದಿನ ಅವೈಜ್ನಾನಿಕತೆಯ ಅರಿವಾಗುತ್ತದೆ. ಏಕೆಂದರೆ ಇಲ್ಲಿ ಕೊಡವ ಭಾಷೆಯ ಮಾತಾಡುವ ಕೊಡವ, ಅಮ್ಮ ಕೊಡವ, ಹೆಗ್ಗಡೆ, ಐರಿ, ಮಡಿವಾಳ, ನಾಯಂದ, ಕೊಯವ, ಕುಡಿಯ, ಮೇದ, ಕೆಂಬಟ್ಟಿ ಎಂಬ ದಲಿತ ಪಂಗಡಕ್ಕೆ ಸೇರಿದ ಜನಾಂಗದವರಿದ್ದಾರೆ. ಆದರೆ ಪ್ರತ್ಯೇಕತೆಯ ಹಿಂದಿನ ಭಾವದಲ್ಲಿ ಇವರೆಲ್ಲರೂ ಸೇರಿಲ್ಲ.  ಅಂದರೆ ಜಾತಿ ಆಧಾರಿತವಾದ ರಾಜ್ಯದ ಕಲ್ಪನೆ.  ಭಾರತ ಪ್ರಜಾಪ್ರಭುತ್ವವಾಗಿದ್ದು, ದಿಲ್ಲಿಯಲ್ಲಿ ರಾಜರು ಅಳಿದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಜಾರಿಗೊಂಡಿದ್ದು ಇರುವಾಗಲೇ ಇಲ್ಲಿ ಜಾತಿಯ ಹೆಸರಲ್ಲಿ ರಾಜ್ಯದ ಕಲ್ಪನೆ!  ಇದನ್ನು ವಿಚಿತ್ರವೆನ್ನಬೇಕೋ ವಿಪರ್ಯಾಸವೆನ್ನಬೇಕೋ?  ಅಂಥವರನ್ನು ನಗಾಡಿ  ಬಿಟ್ಟುಬಿಡಬೇಕೋ ಅಥವಾ ಈಗಲೇ ಬಾಲ ಸುಟ್ಟು ತುಂಡರಿಸಬೇಕೋ ಎನ್ನುವುದೇ ಗೊಂದಲವಾಗುತ್ತದೆ. ಇವೇ ಅಲ್ಲದೆ ಕೊಡಗಿನ ಜೀವ ತುಂಬಿದ , ದೇಶದಲ್ಲೇ ಕೊಡಗು ಗುರುತಿಸುವಂತೆ ಮಾಡಿದ ಕೊಡವೇತರ ಜನಾಂಗಗಳೂ ಇವೆ. ಆದ್ದರಿಂದ ಅರಸೊತ್ತಿಗೆಯ ಕಾಲದಿಂದಲೇ ಇಲ್ಲಿ ಸಂಸ್ಕೃತಿ ಮತ್ತು ಸಮಾಜದ ಹೊಸ ರೂಪವೊಂದು ಕೊಡಗಿನಲ್ಲಿ ಜನ್ಮ ತಾಳುತ್ತಾ ಬಂದಿತ್ತು. ಬ್ರಿಟೀಷ್ ಆಳ್ವಿಕೆಯಲ್ಲಿ ಅಲ್ಲಲ್ಲಿ ವ್ಯಾಪಕಗೊಂಡ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ನರು, ಶಿವಾಚಾರದ ಲಿಂಗಾಯತರು, ಅರೆ ಭಾಷೆಯ ಗೌಡರು, ಪಾಲೆಯರು, ಮಲೆಯರು, ಕುರುಬರು, ಅನಾದಿಯಿಂದಲೂ ಕೊಡವರ ಹಿಂಭಾಲಕರಾಗಿ , ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಭಾಳಿ ಬದುಕಿ ಇಂದು ಅವನತಿಯ ಅಂಚಿನಲ್ಲಿರುವ ಎರವರು  ಎಲ್ಲರೂ ಕೊಡಗಿನ ಅವಿಭಾಜ್ಯ ಅಂಗಗಳೇ. ಎಲ್ಲರೂ ಕೊಡಗಿನ ಜನರೇ. ಬಹುಭಾಷೆ, ಬಹುಸಂಸ್ಕೃತಿಯ ಮೇಳೈಕೆಯ ಸಂಸ್ಕೃತಿಯ ಅಪರೂಪದ ಕೊಡಗಿನಲ್ಲಿ ಈ ಎಲ್ಲಾ ಜನಾಂಗಗಳಿಗೆ ತನ್ನದೇ ಆದ ಐತಿಹಾಸಿಕ ಹಿನ್ನಲೆಗಳಿವೆ. ಈ ಎಲ್ಲಾ ಸಂಸ್ಕೃತಿಗಳು ಬ್ರಿಟೀಷರ ಕಾಲದಿಂದಲೂ , ಅರಸರ ಕಾಲದಿಂದಲೂ ಅನಂತರ " ಸೀ" ಸಂಸ್ಥಾನದ ಕಾಲದಿಂದಲೂ ಸಾಮರಸ್ಯದಿಂದಲೇ ಇದ್ದವರು. ಆದರೆ ಕೊಡಗು ಕರ್ನಾಟಕಕ್ಕೆ ಸೇರಿದ ಮೇಲೆ ಈ ಕೊಡವೇತರರೆಲ್ಲರೂ ಕೊಡವರನ್ನು ದಬ್ಬಾಳಿಕೆ ಮಾಡುವವರು ಎಂದೇಕಾಯಿತು? ಕರ್ನಾಟಕಕ್ಕೆ ಸೇರಿದ ಮೇಲೆ ಕೊಡವರ ಸಂಸ್ಕೃತಿ ಕೆಟ್ಟುಹೋಯಿತಂತೆ ಎಂದು ಭಾಷಣ ಮಾಡುವವರು ಇಂದಿಗೂ ಸಿಗುತ್ತಾರೆ.  ಹೀಗೆ ಭಾಷಣ ಮಾಡುವವರು ವರ್ಷಕ್ಕೊಮ್ಮೆ ಜನಾಂಗದ ಒಗ್ಗಟ್ಟಿನ ನೆಪದಲ್ಲಿ  ಇಸ್ಪ್ಪೇಟಾಟದ ಜೂಜು ಏರ್ಪಡಿಸುತ್ತಾರೆ.  ಇಂಥ ಶೋಕಿಗಳು ಸಂಸ್ಕೃತಿಗೆ ಮಾರಕ ಎನ್ನುವ ಮಾತನ್ನು ಯಾರೂ ಆಡುತ್ತಿಲ್ಲ.
 ತಮ್ಮ ಸಂಸ್ಕೃತಿಯ ಪತನವಾಯಿತು ಎಂದು ಅರಚುವ ಮಂದಿ ಕೊಡಗಿನ ಸಂವೇದನೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಜನಾಂಗವೊಂದಕ್ಕೆ ಪ್ರತ್ಯೇಕ ರಾಜ್ಯ ಬೇಕು ಎನ್ನುವುದಾದರೆ  ಉಳಿದ ಜನಾಂಗಕ್ಕೂ ಅವರವರ ಆಚಾರ ವಿಚಾರಗಳು , ಸಂಸ್ಕೃತಿಗಳು ಇದ್ದೇ ಇರುತ್ತವಲ್ಲ. ಹಾಗಾದರೆ ಅವರ ಹೆಸರಲ್ಲೂ ರಾಜ್ಯಗಳ ಬೇಡಿಕೆ ಇಡಬಹುದೇ?
ಜಾತಿಗಾಗಿ ರಾಜ್ಯ. ಆ ಜಾತಿ ಎಂದರೆ ಕೇವಲ ಜಾತಿಯಲ್ಲ. ಅದು ಧರ್ಮ. ಅದು ಖಂಡಿತಾ ಹಿಂದೂ ಧರ್ಮವಲ್ಲ  ಎಂದು ವಾದಿಸುವ ವಿಚಿತ್ರ ಜನರು ಇನ್ನೂ ಇದ್ದಾರೆ. ಕೊಡವರಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲ ಎಂಬ ಕೂಗು ಬೇರೆ. ರಾಜಕೀಯ ಪ್ರಾತಿನಿಧ್ಯವನ್ನು ಜಾತಿ ಲೆಕ್ಕಾಚಾರದಲ್ಲಿ ಸಂವಿಧಾನ ಮಾಡಿಲ್ಲ, ಅಂಥದ್ದರ ಬಗ್ಗೆ ಮಾತಾಡಲೂ ಬಾರದು ಎಂಬ ನಾಚಿಕೆಯೇ ಇಲ್ಲದೆ  ಕೆಲವರು  ಗಂಟಲು ಹರಿಯಬಿಡುವುದು ಇಂದೂ ನಿಂತಿಲ್ಲ. ಕೇಳಿದವರಿಗೇ ನಾಚಿಕೆಯೆನಿಸಬೇಕು ಎಂಬಷ್ಟು  ಕಠೋರತೆಗಳು.  ಇವೆಲ್ಲಕ್ಕೂ ಅವರಲ್ಲಿ ಚಿಲ್ಲರೆಚಿಲ್ಲರೆಯಾದ ಉತ್ತರಗಳು ಸಿದ್ಧವಿರುತ್ತವೆ. " ಕೊಡವ ಎಂದರೆ ಹಿಂದೂ ಧರ್ಮದ ಪವಿತ್ರ ಶಾಖೆಯಲ್ಲವೇ?" ಎಂದರೆ "ಯಾರೆಂದರು ಹಾಗೆಂದು ? ನಾವು ವಿದೇಶದಿಂದ ಬಂದವರು. ದ್ರಾವಿಡರಲ್ಲ ಆರ್ಯರು" ಎಂಬ ಕುಸಿದುಹೋದ ವಾದವನ್ನು ಮಂಡಿಸುತ್ತಾರೆ. "ದಬ್ಬಾಳಿಕೆ ಯಾರು ಮಾಡುತ್ತಿದ್ದಾರೆ? " ಎಂದರೆ "ಕರ್ನಾಟಕದವರು" ಎಂದು ಅಬ್ಬರಿಸುತ್ತಾರೆ.
  ಇಂದು ಪ್ರತ್ಯೇಕ ರಾಜ್ಯದ ಅಬ್ಬರದಲ್ಲಿ ಮುಳುಗಿದ್ದ ಹಲವರಿಗೆ ಜ್ನಾನೋದಯವಾಗಿದೆ. ಆದರೆ ಸಂಪೂರ್ಣ ದನಿ ಹೂತುಹೋಗಿಲ್ಲ.  ಏಕೆಂದರೆ ಭಾವನೆಗಳನ್ನು ಅರಳಿಸುವ ಕೆಲಸವನ್ನು ಮಾಡುವವರು ತೆಪ್ಪಗಿದ್ದಾರೆ. ಮತ್ತು ಕಲ್ಯಾಣ ಮಂಟಪಗಳನ್ನು ಕಟ್ಟಿಸುತ್ತಿದ್ದಾರೆ. ಆದ್ದರಿಂದ ಭಾವನೆಗಳನ್ನು ಕೆರಳಿಸುವವರು ಯುವ ಪೀಳಿಗೆಯನ್ನು ಕೆರಳಿಸುತ್ತಿದ್ದಾರೆ. ಇದು ಮುಂದೊಂದು ದಿನಕ್ಕೆ ಅಪಾಯ ಕಟ್ಟಿಟ್ಟದ್ದು ಎನ್ನುವುದರಲ್ಲಿ ಸಂದೇಹವಿಲ್ಲ. ಕೊಡಗಿನಲ್ಲಿ  ಎಲ್ಲರೂ ಪ್ರತ್ಯೇಕ ರಾಜ್ಯವನ್ನಾಗಲೀ ಅಥವಾ ಸ್ವಾಯತ್ತೆಯನ್ನಾಗಲೀ ಬೆಂಬಲಿಸುವವರಿಲ್ಲ. ಕೊಡವರಲ್ಲೂ ಎಲ್ಲರೂ ಪ್ರತ್ಯೇಕತಾವಾದಿಗಳಲ್ಲ. ಚಿಂತಕರು, ಸಮಾಜದ ಬಗ್ಗೆ ಕನಸ್ಸು ಕಂಡವರಿಗೆ ಹೃದಯ ವೈಶಾಲ್ಯವಿದೆ. ವೈಚಾರಿಕ ಜಾಗೃತಿಯಿದೆ. ಅವೆಲ್ಲವೂ ಇಲ್ಲದವರು ಅವೆಲ್ಲವೂ ಅರ್ಥವಾಗದವರು ಅಸಹನೆ ಬೆಳೆಸಿಕೊಂಡಿದ್ದಾರೆ.
ತನ್ನದಲ್ಲದರ ಬಗೆಗಿನ ಅಸಹನೆಗಳು ಕೂಡಾ ತೀವ್ರವಾದ ಅಪಾಯವನ್ನು ಹೊತ್ತಿರುತ್ತವೆ.  ಇಂದಿನ ರಾಜಕಾರಣದ ಹೊಲಸುತನ, ಸಿಕ್ಕವರಿಗೆ ಸಿಕ್ಕ ಸೀರುಂಡೆ, ಸಿಗದವರ ನಾಲಗೆಯಲ್ಲಿ ಬುಳುಬುಳನೆ ಬರುವ ಆಸೆಯ ನೀರುಗಳಿಗೆ ಭಾವನೆಗಳೂ ಸಿದ್ಧಾಂತಗಳಂತೆ ಕಂಡುಬಿಡುವ ವಾತಾವರಣವನ್ನು ಸೃಷ್ಟಿಸುತ್ತದೆ. ಹಾಗಾಗಿ ಇಂದು ಕೊಡಗಿನಲ್ಲಿ ಪರಿಸರ ರಕ್ಷಿಸಲು ಯುನೆಸ್ಕೋ ಬಂದಾಗ " ನೀವಾರು ಬರಲು"ಎಂದು ಅಬ್ಬರಿಸುತ್ತಾರೆ. ಅಕ್ರಮ ಮರಳು ದಂದೆಯಲ್ಲೂ "ನಮ್ಮವರು ತಾನೇ" ಎಂಬ ಸಮಜಾಯಿಷಿ ಹುಟ್ಟಿಕೊಳ್ಳುತ್ತವೆ. ಜನಾಂಗದಲ್ಲಿ ವೈಚಾರಿಕ ಕೊರತೆಯಿದೆಯಲ್ಲವೇ ಎಂಬುದೂ ಅರಿವಿಗೆ ಬಾರದೇ ಹೋಗುತ್ತಿದೆ. ಜನಾಂಗದ ಒಗ್ಗಟ್ಟಿನ ಹೆಸರಲ್ಲಿ ಇಸ್ಪೇಟಾಟವೂ ನಡೆದರೆ ತಪ್ಪೇನು ಎನ್ನಿಸಲಾರಂಭಿಸುತ್ತದೆ.
ವಿಚಿತ್ರ ಎನಿಸುತ್ತದೆ. ಇಂಥ ತೀವ್ರತರವಾದ ಭಾವನೆಗಳವರು ಕೇಳುತ್ತಿರುವುದು  ರಾಷ್ಟ್ರವನ್ನಲ್ಲವಲ್ಲ, ರಾಜ್ಯವನ್ನು ತಾನೇ ಎಂದುಕೊಳ್ಳುವಂತೆಯೂ ಇಲ್ಲ. ಏಕೆಂದರೆ ತನ್ನದಲ್ಲದರ ಬಗೆಗೆ ತೀವ್ರವಾದ ಅಸಹನೆಯನ್ನು ಹೊಂದಿರುವ ಯಾವ ಬೇಡಿಕೆಯೂ ಈಡೇರಬಾರದು. ರಾಜ್ಯವಷ್ಟೇ ಅಲ್ಲ ಒಂದು ಗರಿಕೆಯನ್ನೂ ಹಾಗೆ ಯಾರೂ ಪಡೆದುಕೊಳ್ಳಲು ಸಾಧ್ಯವಾಗಬಾರದು.
 ಪತ್ರಕರ್ತ ಪಿ.ಟಿ. ಬೋಪಣ್ಣನವರ " ಕೊಡಗು ರಾಜ್ಯದ ಉದಯ- ಪತನ " ಪುಸ್ತಕವನ್ನೋದುವಾಗ ಈ ಸಂಗತಿಗಳೆಲ್ಲವೂ ಉಲ್ಲೇಖವಾಗಲಿಲ್ಲವಲ್ಲ ಎನಿಸಿತ್ತು.

ಟೂರು ಹೋದವರಿಂದ ಯಾರೂ ವರದಿಯನ್ನು ಬರೆಸಿಬಿಡಬಾರದು ರಿ.


  "ನೆಹರೂ ನಿವೃತ್ತರಾಗುವುದಿಲ್ಲ" ಎಂಬ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ ಕವನವೊಂದಿದೆ. ಎಷ್ಟೇ ವರ್ಷ  ಪ್ರಧಾನಿಯಾದರೂ ಇನ್ನೂ ಅಧಿಕಾರವನ್ನು ಬಿಟ್ಟುಕೊಡದ ನೆಹರೂ ನಿಲುವನ್ನು  ಆ ಕವನದಲ್ಲಿ ವ್ಯಂಗ್ಯ ಮಾಡಲಾಗಿತ್ತ್ತು. ಆ ಪರಿಸ್ಥಿತಿಯೂ ಹಾಗೆಯೇ ಇತ್ತು. ಏಕೆಂದರೆ ಕಾಂಗ್ರೆಸಿನಲ್ಲಿ ಎಲ್ಲರೂ ಸೊಂಟ ಬಿದ್ದುಹೋದವರೂ ಕಣ್ಣು ಮಂಜಾದವರೂ ಕೈ ನಡುಗುವವರೂ ಹೆಚ್ಚಾಗುತ್ತಲೇ ಇದ್ದರು. ಸ್ವಾತಂತ್ರ್ಯ ಹೋರಾಟದ ಪ್ರಭಾವಳಿಯಿಂದ  ಯಾರೂ ಕೂಡ ನಿವೃತ್ತರಾಗುವ ಯೋಚನೆಯನ್ನೇ ಬಿಟ್ಟುಬಿಟ್ಟಿದರು. ಪ್ರಮುಖವಾಗಿ ನೆಹರೂಗೇ ಆ ಯೋಚನೆ ಇರಲಿಲ್ಲ.
ಕಾಂಗ್ರೆಸ್ ಎಂದರೆ ಹಾಗೆಯೇ.
ಅಲ್ಲಿ ಇಂದಿಗೂ ಯಾರೂ ಬೇಗನೆ ನಿವೃತ್ತರಾಗುವುದಿಲ್ಲ.  ಆದರೆ ಬೇಗನೆ ನಾಯಕರುಗಳು  ಹುಟ್ಟಿ ಬಿಡುತ್ತಾರೆ. ರಾತ್ರೋರಾತ್ರಿ ಯುವನಾಯಕರು ಉದಿಸಿಬಂದುಬಿಡುತ್ತಾರೆ. ಕಾಂಗ್ರೆಸಿನ ಮತ್ತೊಂದು ಗುಣವೆಂದರೆ ಅದರ ಕೃಪಾಕಟಾಕ್ಷವಿದ್ದರೆ ಯಾರೂ ಕೂಡ ನಿವೃತ್ತರಾಗುವುದಿಲ್ಲ. ಕಾಂಗ್ರೆಸಿನಲ್ಲಿ ಅವರೆಲ್ಲರಿಗೂ ಒಂದಲ್ಲಾ ಒಂದು ಸ್ಥಾನವಿದೆ. ಮುದುಕ ರಾಜೇಂದ್ರ ಸಾಚಾರ್ ನ್ಯಾಯಮೂರ್ತಿಯಾಗಿ ನಿವೃತ್ತರಾದರೂ ಕಾಂಗ್ರೆಸಿನ ಪ್ರಕಾರ ನಿವೃತ್ತರಾಗಲಿಲ್ಲ, ೮೦ ವರ್ಷದ ಎನ್.ಡಿ.ತಿವಾರಿ ಸಕ್ರೀಯ ರಾಜಕಾರಣದಿಂದ ನಿವೃತ್ತರಾದರೂ ರಾಜಭವನದೊಳಗೆ ಸೇರಿ ಮಾಡಬಾರದ್ದನ್ನು ಮಾಡಿದರು.ಇದೀಗ ಇನ್ನೊಬ್ಬರಿದ್ದಾರೆ. ದಿಲೀಪ್ ಪಡಗಾಂವ್‌ಕರ್. ದೇಶದ ಖ್ಯಾತ ಪತ್ರಕರ್ತರು ಎಂದುಕೊಂಡವರು. ಅವರು ಇಂದು ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದಾರೆ. ಆದರೆ  ಕಾಂಗ್ರೆಸಿನಿಂದ ನಿವೃತ್ತರಾಗಿಲ್ಲ. ಏಕೆಂದರೆ ಸರಕಾರ ಅವರ ನೇತೃತ್ವದಲ್ಲಿ ತ್ರಿಸದಸ್ಯ ತಂಡವೊಂದನ್ನು ರಚಿಸಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ  ವರದಿಯೊಂದನ್ನು  ಕೇಳಿತ್ತು. ೨೦೧೦ರ ಅಕ್ಟೋಬರ್ ನಲ್ಲಿ ರಚನೆಯಾದ ಈ ಸಂವಾದಕಾರರ ತಂಡದಲ್ಲಿ   ದಿಲೀಪ್ ಪಡಗಾಂವ್‌ಕರ್, ರಾಧಾಕುಮಾರ್ ಮತ್ತು ಎಂ.ಎಂ. ಅನ್ಸಾರಿ ಎಂಬ ಮೂವರು ಸದಸ್ಯರಿದ್ದರು. ಈ ತ್ರಿಸದಸ್ಯರ ತಂಡ ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ಕೇಂದ್ರ ಸರಕಾರ  ಸಂಸತ್ ಅಧಿವೇಶನದ ಅವಧಿಯನ್ನು ತಪ್ಪಿಸಿ ಚರ್ಚೆಯಿಂದ ತಪ್ಪಿಸಿಕೊಂಡಿತು. ಏಕೆಂದರೆ ವರದಿಯಲ್ಲಿ ಉಲ್ಲೇಖಿತ  ಅಂಶಗಳು ಮತ್ತು ಬೇಡಿಕೆಗಳು  ಯಾವ ಸಾಚಾರ್ ವರದಿಗಿಂತಲೂ, ಯಾವ ಹುರಿಯತ್ ನ  ಅಶಯಕ್ಕಿಂತಲೂ ಭಿನ್ನವಾಗಿರಲಿಲ್ಲ. ೧೮೦ ಪುಟಗಳ ಆ ವರದಿಯ ಯಾವ ಭಾಗವನ್ನು ನೋಡಿದರೂ  ಅಭಾರತೀಕರಣವೇ ಕಾಣುತ್ತದೆ. ಅಂದರೆ ತ್ರಿಸದಸ್ಯರ ತಂಡಕ್ಕೆ ಕಾಶ್ಮೀರ ಇನ್ನೂ ಅರ್ಥ ಆಗಿಯೇ ಇಲ್ಲ ಎಂಬ ಸಂಗತಿ ಎದ್ದು ಕಾಣುತ್ತದೆ. ಏಕೆಂದರೆ,
 ಜಮ್ಮು ಮತ್ತು ಕಾಶ್ಮೀರವನ್ನು ದಕ್ಷಿಣ ಏಷ್ಯಾದ ಹೆಬ್ಬಾಗಿಲು ಎಂಬ ಅರ್ಥದಲ್ಲೇ ಇಡೀ ವರದಿ ಸಾಗುತ್ತದೆ.
ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಭಾರತದಿಂದ ಸಂಪೂರ್ಣ ಹೊರಗಿರುವ ಅಂಗ ಎಂಬ ಭಾವನೆಯಲ್ಲೇ ಎಲ್ಲಾ ಚರ್ಚೆ, ಮಾತುಕತೆ, ಅಧ್ಯಯನ, ಶೋಧ ನಡೆದಿದೆ.

  • ಭಯೋತ್ಪಾದಕರ ಕುಟುಂಬಗಳಿಗೆ ಮರುಗಿದಷ್ಟು ಈ ತಂಡ ಕಾಶ್ಮೀರಿ ಪಂಡಿತರ ಬಗ್ಗೆ ಮರುಗಿಲ್ಲ. ಇತರ ಆಯೋಗ , ಸಮಿತಿಗಳು ಹೇಳಿರುವಂತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಆಶಯವನ್ನು ಇದು ವ್ಯಕ್ತಪಡಿಸಿದೆ.
  • ತ ೧೯೯೪ರ ಭಾರತದ ಪಾರ್ಲಿಮೆಂಟು ಪಾಸು ಮಾಡಿದ ನಿರ್ಣಯವನ್ನು  ಈ ವರದಿ ಮರೆತುಹೋಗಿದೆ.
  • ಶಿಯಾಗಳ ಸಂಖ್ಯೆ ಹೆಚ್ಚಿರುವ ಕಣಿವೆ ಭಾಗದತ್ತಲೇ ಎಲ್ಲಾ ಅನುಕಂಪಗಳು ಹರಿದು ಬಂದಿವೆ. ಬೌದ್ಧರು ಹೆಚ್ಚಿರುವ ಲೇಹ್ ಮತ್ತ್ತು ಲಡಾಕ್ ಪ್ರದೇಶಗಳ ಮೇಲೆ ಹೆಚ್ಚು ಒತ್ತು ನೀಡಿಲ್ಲ.
  •  ತಂಡ ಸಮಾಜದ ವಿವಿಧ ಸ್ತರಗಳ ಜನರನ್ನು ಭೇಟಿ ಮಾಡಿರಬಹುದು. ಆದರೆ ಜಮ್ಮು ಮತ್ತು ಕಾಶ್ಮೀರದ ಇತಿಹಾಸವನ್ನೇ ತಿಳಿದಿಲ್ಲ. ಏಕೆಂದರೆ ವರದಿಯಲ್ಲಿ ಒಂದು ಕಡೆ "ನೆಲದ ಮೇಲಿನ ಭಾವುಕತೆ" ಎಂಬ ಪದಪ್ರಯೋಗ ನಡೆದಿವೆ. ಇದು ಇತಿಹಾಸದ ಅರಿವಿಲ್ಲದವರ ಮಾತುಗಳೆಂಬುದು ಸ್ಪಷ್ಟ.
  • ಸಂವಿಧಾನದ ೩೭೦ನೇ ವಿಧಿಯಲ್ಲಿರುವ ತಾತ್ಕಾಲಿಕ ಪದವನ್ನು ಕಿತ್ತೊಗೆಯಬೇಕು ಎಂಬ ವಿಚಿತ್ರವಾದ ಸಲಹೆಯನ್ನು ಮಾಡಿದೆ. ಸಂಪೂರ್ಣ ದೇಶವೇ ಸಂವಿಧಾನದಲ್ಲಿ ೩೭೦ ಎಂಬ ವಿಧಿಯೇ ಬೇಡ ಎಂದು ಕಿರುಚುತ್ತಿರುವಾಗ ಈ ಮೂವರು ಮಾತ್ರ  ೩೭೦ರ ವಿಧಿಯನ್ನು ಶಾಶ್ವತಗೊಳಿಸಬೇಕು ಎಂದಿದೆ.
  •  ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಿರುವ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹುದ್ದೆಗಳನ್ನು ಬಿಟ್ಟು  ಎಲ್ಲಾ  ಹುದ್ದೆಗಳನ್ನು  ಉರ್ದು ಭಾಷೆಯಲ್ಲಿ ಹೆಸರಿಸಬೇಕು  ಎಂದು ವರದಿ ಹೇಳುತ್ತದೆ.
  •  ಪಾರ್ಲಿಮೆಂಟ್ ಜಮ್ಮು-ಕಾಶ್ಮೀರಕ್ಕೆ ಇನ್ನ್ನೂ ಹೆಚ್ಚಿನ ವಿಶೇಷ ಸ್ಥಾನಮಾನವನ್ನು ನೀಡತಕ್ಕದ್ದು  ಎನ್ನುವ ಹಂಬಲ  ಈ  ವರದಿಯದ್ದು.
  •  ಸದ್ಯ ಎಲ್ ಓ ಸಿ  ಎಂದು ಕರೆಯಲಾಗುವ  ರೇಖೆಯಲ್ಲಿ  ಮುಕ್ತ ವ್ಯಾಪಾರ, ಮುಕ್ತ ಸಂಚಾರಕ್ಕೆ  ಅನುವು ಮಾಡುವುದರ  ಮೂಲಕ ಸೌಹಾರ್ದದ ವಾತಾವರಣವನ್ನು ಸೃಷ್ಟಿಸಬಹುದು ಎಂದು ವರದಿ ಹೇಳುತ್ತದೆ ಮತ್ತು ಎಲ್ ಓ ಸಿ  ಯ ಬಗೆಗಿನ ವಿವಾದಗಳ ಬಗೆ ಹೇಳಲು ಹೋಗಿಲ್ಲ.
  •  ಭಾರತದ ನೆಲವೇ ಆಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ಥಾನ್ ಭಾಗಗಳು ನೆಹರೂ ನೀತಿಯಿಂದ  ಮತ್ತು  ಪಾಕ್‌ನ ಆಕ್ರಮಣಕಾರಿ ನೀತಿಯಿಂದ "ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ" ಆಗಿರುವುದು  ದೊಡ್ಡ ಪ್ರಮಾದ. ಆದರೆ ವರದಿಯಲ್ಲಿ  "ಪಾಕ್ ಆಕ್ರಮಿತ" ಎನ್ನುವಲ್ಲೆಲ್ಲಾ "ಪಾಕ್ ಆಡಳಿತದ ಕಾಶ್ಮೀರ" ಎಂದು ಉಲ್ಲೇಖಿಸಿದೆ.  ಸಂವಾದಕಾರರ ತಂಡಕ್ಕೆ ಈ ಅಧಿಕಾರ ಕೊಟ್ಟವರಾರು?
  •  ಜಮ್ಮು ಮತ್ತು ಕಾಶ್ಮೀರ  ದಕ್ಷಿಣ ಮತ್ತು ಮಧ್ಯ ಏಷ್ಯಾದ ನಡುವಿನ ಸೇತುವೆ ಎನ್ನುವ ಸಂವಾದಕಾರರ ತಂಡ, ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು  ಮರೆಯಲು ಕಾರಣವೇನು?
ಹೀಗೆ ಹುಚ್ಚುಚ್ಚಾಗಿ ಸಾಗುವ ವರದಿಯನ್ನು ನೋಡಿದರೆ ಮತ್ತು ಈ ಮೂವರು ಸಂವಾದಕಾರರ ಮುಖವನ್ನು  ನೋಡಿದರೆ ಇವರು ಮೂರುನಾಲ್ಕು  ವರ್ಷಗಳ ಕಾಲ ಭರ್ಜರಿ ಗಮ್ಮತ್ತಿನ ಜೀವನವನ್ನು ನಡೆಸಿದ್ದರೆಂಬುದು ಸ್ಪಷ್ಟವಾಗುತ್ತದೆ. ಈ ಮೂವರು ಸದಸ್ಯರ ತಂಡ ಒಂದು ಪೀಠವೂ ಅಲ್ಲ, ಆಯೋಗವೂ ಅಲ್ಲ. ಒಂದು ಸಂವಾದಕಾರರ ತಂಡ ಮಾತ್ರ . ಪ್ರವಾಸ ಮಾಡಿ, ಮಾತನಾಡಿ   ಕೊಟ್ಟ ವರದಿ. ಅಂದರೆ ಇದು ಸಂವಿಧಾನಾತ್ಮಕ  ಚೌಕಟ್ಟಿನಲ್ಲಿ ರಚನೆಯಾದದ್ದಲ್ಲ. ಆದರೆ ಸಂವಿಧಾನದ  ಬೇರುಗಳನ್ನೇ ಈ ಮೂವರು ಅಲ್ಲಾಡಿಸಿದ್ದಾರೆ. ಏಕೆಂದರೆ ವರದಿಯ  ಪ್ರತೀ ಪದದಲ್ಲೂ ಭಾರತದ ಸಂವಿಧಾನ, ಸಾರ್ವಭೌಮತೆಯನ್ನು , ಘನತೆಯನ್ನು ದಿಕ್ಕರಿಸಿದ  ವಾಸನೆಗಳಿವೆ. ಉದಾಹರಣೆಗೆ  ಭಾರತದ  ಸಂವಿಧಾನ ಯಾವ ರಾಜ್ಯಗಳಿಗೂ ಪರಮಾಧಿಕಾರವನ್ನು ಕೊಟ್ಟಿಲ್ಲ.  ಆದರೆ ವರದಿಯ ಸಲಹೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಪರಮಾಧಿಕಾರ ಕೊಡುವ ಅರ್ಥದ ಸಲಹೆಗಳಿವೆ. ೧೯೯೪ರ  ಫೆಬ್ರವರಿ  ೨೨ರಂದು  ಭಾರತೀಯ ಸಂಸತ್ತು ಒಕ್ಕೊರಲಿನಿಂದ 
  • ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ  ಭಾರತದ ಅವಿಭಾಜ್ಯ  ಅಂಗವಾಗಿದೆ. ಈ ಭಾಗದ ಮೇಲೆ ನಡೆಯುವ ಯಾವುದೇ ಅತಿಕ್ರಮಣ, ಭಾರತ ವಿರೋಧಿಯಾಗಿದ್ದು, ಭಾರತ ಅದನ್ನು ವಿರೋಧಿಸುತ್ತದೆ.ಭಾರತ ತನ್ನ ಸಾರ್ವಭೌಮತೆ, ಸಮಗ್ರತೆಗಳನ್ನು ರಕ್ಷಿಸಿಕೊಳ್ಳಲು ಎಲ್ಲಾ ಕ್ರಮಗಳನ್ನ್ನು ಕೈಗೊಳ್ಳುತ್ತದೆ.
  •  ಪಾಕಿಸ್ಥಾನ ತಕ್ಷಣವೇ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಚಟುವಟಿಕೆಗಳನ್ನು ನಿಲ್ಲಿಸುವುದು.
  •   ತನ್ನ ಆಂತರಿಕ ಆಡಳಿತದ ಮೇಲೆ ಹಸ್ತಕ್ಷೇಪ ಮಾಡುವ  ಯಾವುದೇ ಶಕ್ತಿಗಳನ್ನು  ಭಾರತ ಸಹಿಸುವುದಿಲ್ಲ.
ಎಂಬ ನಿರ್ಣಯವನ್ನು ಪಾಸು ಮಾಡಿತು. ಭಾರತದ ಇತಿಹಾಸದಲ್ಲಿ ಇದೊಂದು ಮಹತ್ತ್ವದ ಸಂದರ್ಭ. ಈ ನಿರ್ಣಯದ ಮೂಲಕ ಉತ್ತರಭಾಗದ "ಪಾಕ್ ಆಕ್ರಮಿತ ಕಾಶ್ಮೀರ" ಎಂಬುದನ್ನೇ ಭಾರತ ಅಲ್ಲಗಳೆಯಿತು. ಆದರೆ ಈ ಮೂವರು ಅದನ್ನು "ಪಾಕ್ ಆಡಳಿತದ ಕಾಶ್ಮೀರ" ಎಂದರು. ಸಂವಿಧಾನವಿರೋಧಿಯಲ್ಲವೇ? ಅಂಥ ವರದಿಯನ್ನು ಸಂವಾದಕಾರರ ತಂಡ ಕೇಂದ್ರ ಸರ್ಕಾರಕ್ಕೇ ಕೊಡುವ ಧೈರ್ಯ ಹೇಗೆ ಮಾಡಿತು? ಕೊಟ್ಟರೂ ಕೇಂದ್ರ ಸರಕಾರಕ್ಕೇನೂ ಅದರಿಂದ ಆಘಾತವಾಗಿಲ್ಲವೇಕೆ? ನಿವೃತ್ತರಿಗೆ ಕೆಲಸ ವಹಿಸಿದಾಗಲೇ ಕೇಂದ್ರದ ಬಳಿ ವರದಿಯ ಕರಡು ಪ್ರತಿಗಳಿದ್ದವೋ ಏನೋ. ಇನ್ನು ೩೭೦ ನೇ ವಿಧಿಯಲ್ಲಿ "ತಾತ್ಕಾಲಿಕ" ಎಂದು ಇರುವ ಪದವನ್ನು ತೆಗೆಯಬೇಕು ಎನ್ನುವವರನ್ನು ಭಾರತೀಯರು ಎಂದು ಹೇಳಲೇಬೇಕೆನಿಸುವುದಿಲ್ಲ. ಏಕೆಂದರೆ ಅಲ್ಲೆಲ್ಲೋ ಪಾಕಿಸ್ಥಾನದ ಆಡಳಿತಗಾರನೂ ಹೇಳುವುದೂ ಅದನ್ನೇ. ಕಣಿವೆಯಲ್ಲಿ ಕಲ್ಲೆಸೆಯುವವನು ಹೇಳುವುದೂ ಅದನ್ನೇ. ಅದನ್ನೇ ಈ ಮೂವರು ಹೇಳಿದರೆ ಅವರನ್ನು  ಭಾರತೀಯರು ಎಂದು ಕರೆಯಬೇಕೆನಿಸುವುದಿಲ್ಲ. ೩೭೦ರ ವಿಚಿತ್ರವಾದ ವಿಧಿಯಿಂದ ಭಾರತ ಅನುಭವಿಸಿದೆಷ್ಟಿದೆ? ಒಮ್ಮೆ ಜಮ್ಮು ಮತ್ತು ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಭಕ್ಷಿ ಗುಲಾಮ್ ಮಹಮ್ಮದ್ ಅವರು ಪಂಜಾಬಿನ ಅಮೃತಸರದಿಂದ ವಾಲ್ಮೀಕಿ ಸಮುದಾಯದ ೭೫ ಕುಟುಂಬಗಳನ್ನು ಜಮ್ಮುವಿಗೆ ಕರೆಸಿಕೊಂಡರು. ನಗರದ ಸ್ವಚ್ಛತೆಗಾಗಿ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಇಂದು ಆ ಕುಟುಂಬದ  ಮೂರನೇ ಪೀಳಿಗೆ ಕಣ್ಣು ತೆರೆದಿದೆ. ವಿದ್ಯಾವಂತರಾಗಿದ್ದಾರೆ. ಯುವಕರು ವೈದ್ಯಕೀಯ, ಇಂಜಿನಿಯರಿಂಗ್, ಸಿ.ಎ ಮಾಡಿಕೊಂಡಿದ್ದಾರೆ. ಆದರೆ ಅವರಾರಿಗೂ  ರಾಜ್ಯದಲ್ಲಿ ಸರಕಾರಿ ಕೆಲಸ ಸಿಗುವಂತಿಲ್ಲ. ಏಕೆಂದರೆ ೩೭೦ರ ವಿಧಿಯ ಪ್ರಕಾರ ಅವರು ಅಲ್ಲಿನ ನಾಗರಿಕರಲ್ಲ. ಅವರು ಭಾರತೀಯರಾದರೂ ಜೆ ಆಂಡ್ ಕೆ ಯವರಲ್ಲ. ೩೭೦ರ ವಿಧಿಯ ಪ್ರಕಾರ ಆ ಯುವಕರು ಸರಕಾರದ ಅಡಿಯಲ್ಲಿ ಕಸಗುಡಿಸಬಹುದಷ್ಟೇ. ಪಡಗಾಂವ್‌ಕರರ ತಂಡಕ್ಕೆ ಇದಾವುದೂ ಗೊತ್ತೇ ಆಗಲಿಲ್ಲ. ಅಲ್ಲದೆ ಕಳೆದ ೨೦೦೨ರಲ್ಲಿ ನಡೆದ ಮತದಾರ ಕ್ಷೇತ್ರಗಳ ವಿಂಗಡಣೆಯಲ್ಲಿ ದೇಶಾದ್ಯಂತ ಬದಲಾವಣೆಯಾದರೂ ಜಮ್ಮು ಮತ್ತು  ಕಾಶ್ಮೀರದಲ್ಲಿ ವಿಂಗಡಣೆ ನಡೆಯಲಿಲ್ಲ. ಏಕೆಂದರೆ ಆರ್ಟಿಕಲ್ ನಂಬರ್ ೩೭೦! ಚುನಾವಣೆಗಳ ಸಂದರ್ಭದಲ್ಲಿ ಅಭಿಮನ್ಯುವಿನಂತೆ ವರ್ತಿಸುವ ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಮಾತ್ರ ನರಸತ್ತ ವೀರ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಮೋಚ್ಛ ರಾಜ್ಯಪಾಲರನ್ನು ನೇಮಿಸುವ "ವಿಪರೀತ" ದ ಸಲಹೆಯನ್ನೂ  ಈ ವರದಿ ಮಾಡಿದೆ. ಹೀಗಿರುವ ಜಮ್ಮು ಮತ್ತು ಕಾಶ್ಮೀರವು single unit ಆಗಿರಬೇಕು ಎಂದು ಪುಕ್ಕಟೆ ಸಲಹೆಯನ್ನು ಅದು ಮಾಡುತ್ತದೆ. ವರದಿಯಲ್ಲಿ ಇರುವುದೆಲ್ಲವೂ ಇಂಥ ಪುಕ್ಕಟೆ ಸಲಹೆಗಳೇ.ಸಂಪೂರ್ಣ ವರದಿ ಸಲಹೆಗಳಿಂದ ತುಂಬಿಹೋಗಿದೆ. ಹೆದರಿಕೆಯಾಗುವುದು ಇಂಥ ಪುಕ್ಕಟೆ ಸಲಹೆಗಳಿಂದಲ್ಲ. ಅದನ್ನು ಚಾಚೂ ತಪ್ಪದೆ ಪಾಲಿಸಿಬಿಡುವ ತುಘಲಕ್ ಮಂಡೆಯ ಸರಕಾರಗಳಿಂದ.
ಸ್ವತಂತ್ರವಾಗಿ ಅಲೋಚನೆ ಮಾಡುವ ಯಾರಿಗೇ ಆದರೂ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಅರಿವಾಗುತ್ತದೆ. ಸಮಸ್ಯೆ ಯಾರಿಂದ ಮತ್ತು ಎಲ್ಲೆಲ್ಲಿದೆ ಎಂಬುದು ನಿಚ್ಚಳವಾಗುತ್ತವೆ. ಆದರೆ ಸರಕಾರಗಳಿಗೆ ಮಾತ್ರ ಇನ್ನೂ ವರದಿಯನ್ನು ತರಿಸಿ, ಅನುಷ್ಠಾನದ ಹೆಸರಿನಲ್ಲಿ ಕಲ್ಲೆಸೆಯುವವರನ್ನು ಬಾಂಬ್ ಎಸೆಯುವಂತೆ ಮಾಡುವ ಬಯಕೆ. ಜಮ್ಮು ಮತ್ತು ಕಾಶ್ಮೀರವನ್ನು ಮತ್ತಷ್ಟು ದೂರ ಮಾಡುವ ಹುನ್ನಾರ. ಅದಕ್ಕೆ ನಿವೃತ್ತರ ಸಹಾಯ ಬೇರೆ.
ಈ ನಿವೃತ್ತರಾದರೂ ಎಂಥವರು?
ಈ ಪಡಗಾಂವ್‌ಕರ್ ೨೦೦೫ರಲ್ಲಿ  ಅಮೆರಿಕಾದಲ್ಲಿ ನಡೆದ ಎರಡು ದಿನಗಳ ಸಮ್ಮೇಳನವೊಂದರಲ್ಲಿ  ಭಾಗವಹಿದ್ದವರು. ಆ ಸಮ್ಮೇಳನದ ರೂವಾರಿ ಮೊನ್ನೆ ತಾನೇ ಬಂಧಿತನಾದ ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ಐ.ಎಸ್.ಐ. ಏಜೆಂಟ್ ಗುಲಾಮ್ ನಬಿ ಫಾಯಿ. ಈ ಫಾಯಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಗತಿ ಕಾಣಿಸುವ ಅಗತ್ಯವಿದೆ. ಆದರೆ ಪಡಗಾಂವಕರನಿಗೆ? ಸಂವಾದಕ್ಕೆ ಕಳುಹಿಸಿದ ಸರಕಾರಕ್ಕೆ?
ಅಷ್ಟಕ್ಕೂ ಈ ಸಂವಾದಕಾರರೆಂದರೆ ಏನು ಎಂಬುದೇ ಅರ್ಥವಾಗುವುದಿಲ್ಲ. ನಮಗೆಲ್ಲರಿಗೂ ಪೀಠಗಳು, ಆಯೋಗಗಳು ಗೊತ್ತಿವೆ. ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮವೂ ಮಹತ್ತ್ವವೂ ಆದ ಸಂಗತಿಗೆ ಸಂವಾದಕಾರರು! ಈ ವರದಿಯನ್ನು ನೋಡಿದರೆ ಇವರು ತಿರುಗಾಡಲು ಹೋದ ಪ್ರವಾಸಿಗರು ಎಂದೇ ಅನಿಸುತ್ತದೆ. ಈ ಮೂವರನ್ನು ನೋಡಿದರೆ ಅವರು ಮೋಜನ್ನೂ ಮಾಡಿದರು ಎಂದೂ ಅನಿಸುತ್ತದೆ.
ಟೂರು ಹೋದವರಿಂದ ಯಾರೂ ವರದಿಯನ್ನು ಬರೆಸಿಬಿಡಬಾರದುರಿ.

ಸಮಾಜ ಸುಧಾರಣೆಯೋ? ಸಾಮ್ರಾಜ್ಯ ವಿಸ್ತರಣೆಯೋ?


ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾ ಎಂಬ ಹೆಸರನ್ನು ಕೇಳುವಾಗಲೇ ಎಂಥವರೂ ಒಮ್ಮೆಲೇ ಅಂದಾಜು ತಪ್ಪುತ್ತಾರೆ.  ಅದು ಭಾರತ ಸರಕಾರದ ಜೈಲು ಇಲಾಖೆಯೇನೋ ಎಂಬ ಸಂಶಯ ಬರುತ್ತದೆ. ಆದರೆ ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾದ ಚಹರೆಯೇ ಬೇರೆ. ಅದೊಂದು ಎನ್ ಜಿ ಒ. ಕ್ರಿಶ್ಚಿಯನ್ ಎನ್ ಜಿ ಒ. . ದೇಶಾದ್ಯಂತದ ಎಲ್ಲಾ ಜೈಲುಗಳಿಗೆ ಲಗ್ಗೆ ಇಟ್ಟಿರುವ ಸಂಸ್ಥೆ. ಜೈಲು ಹಕ್ಕಿಗಳ ಮನಪರಿವರ್ತನೆಯ ಹೆಸರಲ್ಲಿ ಮತಪರಿವರ್ತನೆ ಮಾಡುವ ನಾಜೂಕಯ್ಯಗಳ ಸಂಘಟನೆ. ಹೀಗೆ ಕ್ರಿಸ್ತನ ಹೆಸರಿನಲ್ಲಿ ಮಾರಾಟ ಮಳಿಗೆಯನ್ನಿಟ್ಟ  ಈ ಸಂಘಟನೆಯಲ್ಲಿ  ಸಾವಿರಾರು ಕಾರ್ಯಕರ್ತರಿದ್ದಾರೆ. ನನ್‌ಗಳಿದ್ದಾರೆ. ಪಾದ್ರಿಗಳಿದ್ದಾರೆ. ಎಂದಿನಂತೆ ಎಲ್ಲಾ ಎನ್ ಜಿ ಒ.  ಗಳಲ್ಲಿರುವಂತೆ ಶೋಕಿಯ, ಬಾಬ್ ಹ್ಯಾರಿನ , ಕುರುಚಲು ಫ್ರಂಚ್ ಗಡ್ಡದ  ಜನರೂ ಇದ್ದಾರೆ.  ಇವರೆಲ್ಲರೂ ದಿನಂಪ್ರತಿ ಮುಂಜಾನೆಯಾಗುತ್ತಲೇ ಏಸು ದೇವನ ಸಂದೇಶವನ್ನು ಹೊತ್ತು ಜೈಲುಪಾಲಾಗುತ್ತಾರೆ. ಕಳ್ಳರು, ಸುಳ್ಳರು ಎಲ್ಲರನ್ನೂ ಪ್ರಾರ್ಥಿಸುವಂತೆ ಮಾಡುತ್ತಾರೆ. ಜೈಲಿನಲ್ಲಿ ಏಕತಾನತೆ, ಖಿನ್ನತೆ, ಜಡತ್ವ, ಮಾನಸಿಕ ವೇದನೆ ಮೊದಲಾದವನ್ನು ಅನುಭವಿಸುತ್ತಿರುವ ಖೈದಿಗಳನ್ನು ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಅಷ್ಟಕ್ಕೆ ಈ ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾದ ಮೊದಲ ಕಾರ್ಯ ಪೂರ್ಣಗೊಳ್ಳುತ್ತದೆ.  ಮುಂದೆ ಜೈಲಿನಿಂದ ಬಿಡುಗಡೆಯಾಗುವ ಖೈದಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲೂ ಇಲ್ಲಿ ವ್ಯವಸ್ಥೆಗಳಿವೆ. ಬೆಂಗಳೂರಿನಲ್ಲಿ ಒಂದು ಆಶ್ರಮವೇ ಇವರಿಗೋಸ್ಕರ ಇದೆ. ಉಳಿದಂತೆ ಜಿಲ್ಲಾ ಕೇಂದ್ರಗಳಲ್ಲಿ "ಮನಪರಿವರ್ತನೆ"ಯಾಗಿ ಹ್ಯಾರಿ ಆದ ಹರೀಶ ನಂಥವರಿಗೆ ಆಯಾಯ ಜಿಲ್ಲೆಗಳಲ್ಲಿನ ಮಿಷನರಿ, ಚರ್ಚುಗಳನ್ನು ಆರಿಸಿಕೊಳ್ಳಲು ಅವಕಾಶವಿದೆ. 
ಹಾಗಾದರೆ ಜನರ ಒಡನಾಡಿ ಎಂದುಕೊಲ್ಳುವ ಎನ್ ಜಿ ಒ. ಗಳ ಅಸಲು ಸ್ವರೂಪವೇನು? ಸಮಾಜ ಸುಧಾರಣೆಯ ಹೆಸರಿನಲ್ಲಿ ಅವು ಮಾಡುತ್ತಿರುವುದೇನು? ಹಾಗಾದರೆ ಮತಾಂತರಕ್ಕಿರುವ ಹಲವು ತಂತ್ರಗಳಲ್ಲಿ ಎನ್ ಜಿ ಒ.  ಕೂಡಾ ಒಂದು ತಂತ್ರವೇ? ಮತಾಂತರವಲ್ಲದಿದ್ದರೆ ಹೀಗೆ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವುದು ಏಕೆ?  ಅಲ್ಲಿ ಪಾದ್ರಿ, ನನ್, ನಿಲುವಂಗಿ, ಶಿಲುಭೆಗಳೇಕೆ? ಈ ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾ ಎಂಬುದು ಇಂಥ ಕ್ರಿಶ್ಚಿಯನ್ ಎನ್ ಜಿ ಒ.  ಗಳಿಗೆ ಒಂದು ಉದಾಹರಣೆಯೇ ಹೊರತು ಅಂಥದ್ದೇನೂ ಇಂದು ಅಪರೂಪವಲ್ಲ. ಎಲ್ಲೆಲ್ಲಿ ಮತಾಂತರ ಪ್ರತ್ಯಕ್ಷವಾಗಿ ನಡೆಯಲು ಸಾಧ್ಯವಿಲ್ಲವೋ, ಎಲ್ಲೆಲ್ಲಿ  ಮಿಷನರಿಗಳಿಗೆ ನೇರ ಪ್ರವೇಶ ಪಡೆಯಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಅವು ಪ್ರವೇಶಿಸುವುದು ಎನ್ ಜಿ ಒ.  ಎಂಬ ಮುಖವಾಡವನ್ನು ಹೊತ್ತುಕೊಂಡೇ. ಹೀಗೆ ಸಾವಿರಾರು ಎನ್ ಜಿ ಒ.  ಗಳು ಭಾರತದ ದಲಿತ ಕೇರಿಗಳಿಗೆ ನುಗ್ಗಿವೆ. ಹೆಚ್‌ಐವಿ ಎಂದು ಕೂಗಿವೆ. ಲೈಂಗಿಕ ಕಾರ್ಯಕರ್ತೆಯರಿಗೆ ಆಪ್ತವಾಗಿವೆ. ಅಂಗವೈಕಲ್ಯವಿರುವ ಮಕ್ಕಳತ್ತ ಸಾಗಿವೆ.  ವಿಚಿತ್ರ ಎಂದರೆ ಮಿಷನರಿ ಅಥವಾ ಮತೀಯ ಮುಖವನ್ನು ಹೊತ್ತಾಗ ನಡೆಯದ ಕೆಲಸ ಎನ್ ಜಿ ಒ.  ಗಳಿಂದ ಸಾಧಿತವಾಗುತ್ತಿದೆ. ಎನ್ ಜಿ ಒ.  ಗಳದ್ದು ಸಾಮಾಜಿಕ ಸುಧಾರಣೆಯ ಕೆಲಸ. ಆದರೆ ಈ ಎನ್ ಜಿ ಒ. ಗಳದ್ದು ಮಾತ್ರ ಮತಪರಿವರ್ತನೆಯ ಜೊತೆಗೆ ಇನ್ನಿತರ ಉಪವೃತ್ತಿಗಳು.  ಭಾರತದಲ್ಲಿ ಅಪಾರವಾದ ಕೀಳರಿಮೆಯಿಂದ ಬಳಲುತ್ತಿರುವ ಮಧ್ಯಮ ವರ್ಗ ಎಂಬ ಭ್ರಹತ್ ಪಂಗಡ ಇಂಥ ಎನ್ ಜಿ ಒ.  ಗಳನ್ನು ಸುಲಭವಾಗಿ ನಂಬಿಬಿಡುತ್ತದೆ. ಒಂದು ವೆಬ್ ಸೈಟಲ್ಲಿ ಬರೆದಿರುವುದೇ  ಅಂತಿಮವೂ ಪ್ರಶ್ನಾತೀತವೂ ಎಂದುಕೊಳ್ಳುವ ಈ ವರ್ಗ ಯಾವಾಗ ಹೆಚ್ಚಿತೋ ಅಂದಿನಿಂದಲೇ  ಇಂಥ ಎನ್ ಜಿ ಒ. ಗಳೂ ಹೆಚ್ಚತೊಡಗಿದವು. 
 ದೆಹಲಿ ಮೂಲದ India policy foundation ಎಂಬ ಸಂಸ್ಥೆ ಈ ಬಗೆ ಅಧ್ಯಯನವೊಂದನ್ನು ಮಾಡಿದೆ.  ೨೦೦ದಿಂದೀಚೆಗೆ ಭಾರತದಲ್ಲಿ ಹೆಚ್ಚುತ್ತಿರುವ ಕ್ರಿಶ್ಚಿಯನ್ ಚಟುವಟಿಕೆಗಳನ್ನು ಅದು ತಿಳಿಸುತ್ತದೆ. ಮತ್ತು ಹಲವು ಗಂಭೀರ ಪ್ರಶ್ನೆಗಳನ್ನೂ ಭವಿಷ್ಯದ ಬಗೆಗಿನ ಚಿಂತೆಯನ್ನೂ ಈ ಅಧ್ಯಯನ ವರದಿ ಉಂಟುಮಾಡುತ್ತದೆ. ವಿವಿಧ ಸರಕಾರಿ ವೆಬ್‌ಸೈಟುಗಳು, ಸರಕಾರದ ಹೇಳಿಕೆ ಮತ್ತು ಸುತ್ತೋಲೆಗಳು, ಕ್ರಿಶ್ಚಿಯನ್ ಸಂಘಟನೆಗಳ ಪ್ರಕಟಣೆ ಮತ್ತು ಅವುಗಳ ಅಧಿಕೃತ ವೆಬ್‌ಸೈಟುಗಳು, ಮಾಧ್ಯಮಗಳ ವರದಿಗಳು, ತಜ್ನರ ಅಧ್ಯಯನ ಮತ್ತು ಸಂಶೋಧನಾ ವರದಿಗಳು , ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ತಯಾರಿಸಿರುವ ಈ ವರದಿ ಭಾರತದಲ್ಲಿ ಚರ್ಚುಗಳ ಕಾರ್ಯವೈಖರಿ ಮತ್ತು ಎನ್ ಜಿ ಒ. ಗಳ ನಡುವಿನ ನಿಗೂಢ ಸಂಬಂಧವನ್ನು ಸವಿವರವಾಗಿ ತಿಳಿಸುತ್ತವೆ. 
ಈ ಅಂಕಿ ಅಂಶಗಳನ್ನೇ ಗಮನಿಸಿ.
 
  • ಭಾರತದಲ್ಲಿ ಕ್ಯಾಥೋಲಿಕ್ ಚರ್ಚ್ ಕ್ರಿಶ್ಚಿಯನ್ನರಲ್ಲೇ ಅತ್ಯಂತ ಪ್ರಭಾವಿ ಸಂಘಟನೆ. ಈ ಸಂಘಟನೆ ದೇಶದಲ್ಲಿ ೭೬೫೦ ಪ್ರಾಥಮಿಕ ಶಾಲೆಗಳನ್ನು, ೪೫೬೯ ಪ್ರೌಢ ಶಾಲೆಗಳನ್ನು,೧೪೯೪ ಹೈಯರ್ ಸೆಕೆಂಡರಿ ಶಾಲೆಗಳನ್ನು, ೩೨೧ ಕಾಲೇಜು  ಮತ್ತು ೮೬೫ ವಿವಿಧ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತದೆ. 
  •  The church of south india(CSI) ಕೂಡಾ ೨೦೦೦ ಶಾಲೆಗಳು, ೧೩೦ ಕಾಲೇಜುಗಳು ಮತ್ತು ೧೦೪ ಆಸ್ಪತ್ರೆಗಳು, ೫೦ಕ್ಕೂ ಹೆಚ್ಚಿನ ಗ್ರಾಮೀಣಾಭಿವೃದ್ಧಿ ಯೋಜನಾ ಪ್ರಕಲ್ಪಗಳು , ಅಷ್ಟೇ ಸಂಖ್ಯೆಯ ಯುವ ತರಬೇತಿ ಸಂಸ್ಥೆಗಳು , ೫೦೦ ಹಾಸ್ಟೆಲ್ ಗಳನ್ನು ನಡೆಸುತ್ತಿವೆ.   
  •  The church of north India(CNI) ಮತ್ತೊಂದು ಚರ್ಚ್ ಸಂಘಟನೆ ಅಥವಾ ಒಕ್ಕೂಟ ೯ ನರ್ಸಿಂಗ್ ಶಾಲೆಗಳು, ೨೫೦ಕ್ಕೂ ಅಕ ವಿವಿಧ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು , ೬೫ಕ್ಕೂ ಅಕ ಆಸ್ಪತ್ರೆಗಳನ್ನು ನಡೆಸುತ್ತಿದೆ.   
  •  Seventh day Adventist ಎಂಬ ಇನ್ನೊಂದು ಕ್ರೈಸ್ತ ಒಕ್ಕೂಟ ೨೨೬ ಶಾಲೆಗಳು ಮತ್ತು ೫ ಕಾಲೇಜುಗಳನ್ನು ನಡೆಸುತ್ತಿದೆ.
ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ, ನಮ್ಮ ಸುತ್ತಮುತ್ತಲೂ ಅದರ ಮೂರ್ತ ರೂಪ ಕಂಡಾಗ ನಮ್ಮ ಮಧ್ಯಮವರ್ಗದ ಮಾನಸಿಕತೆ " ಏನೇ ಆಗಲಿ ಅವರ ಕಾಳಜಿಯನ್ನು ಕೊಂಡಾಡಲೇಬೇಕು" ಎಂದು ಪುಳಕಗೊಳ್ಳುತ್ತದೆ. "ನಮ್ಮ ಸಂನ್ಯಾಸಿಗಳು! ಅಬ್ಬಾ ಕಳ್ಳರು" ಎಂಬ "ನಾಗರಿಕ ಪ್ರಜ್ನೆ"ಯೂ  ಜಾಗೃತವಾಗಿಬಿಡುವುದುಂಟು. ಆದರೆ ಅಸಲು ವಿಷಯದ ಬಗ್ಗೆ ಒಂದಂಗುಲವೂ ಮುಂದಕ್ಕೆ ಆಲೋಚನೆಯನ್ನು ಮಾಡಲಾರರು. ವಿಷಯವೇನೆಂದರೆ ಕ್ಯಾಥೋಲಿಕ್ ಚರ್ಚಿನ ಬಿಷಪರನ್ನು ನೇರವಾಗಿ ವ್ಯಾಟಿಕನ್ನಿನ ಪೋಪರೇ ಆಯ್ಕೆ ಮಾಡುತ್ತಾರೆ. ಇನ್ನುಳಿದ ಒಕ್ಕೂಟಗಳ ಬಿಷಪ್‌ಗಳೂ ಕೂಡಾ ವಿದೇಶಿ ಸಲಹೆಗಳ ಮೇರೆಗೇ ನೇಮಕವಾಗುತ್ತಾರೆ. ಹಾಗಾಗಿ  ಬಿಷಪರು ನೇರವಾಗಿ ವಿದೇಶಿ ಪೋಪರಿಗೆ ನಿಷ್ಠರು ಮತ್ತು ಬದ್ದರು.  ಈ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲ್ವಿಚಾರಕರೂ ಕೂಡಾ ಬಿಷಪರೇ . ಹೀಗೆ ವಿದೇಶಿ ಮಂಡೆಯಿಂದ ಸ್ವದೇಶದಲ್ಲಿ ಕೈಗೊಳ್ಳುವ ಕಾರ್ಯವನ್ನು ಸ್ವದೇಶಿ ಕಾರ್ಯ ಎಂದೇ ಕರೆಯಬೇಕೇ ಎನ್ನುವಲ್ಲಿ ಗೊಂದಲಗಳು ಏರ್ಪಡುವುದೇ ಇಲ್ಲ. ಪೋಪ್ ನಿಷ್ಠ ಬಿಷಪರು ಭಾರತ ನಿಷ್ಠ ಕಾರ್ಯವನ್ನು ಮಾಡುವರು ಎಂದು ಹೇಳಲೂ ಆಗಲಾರದು. ಏಕೆಂದರೆ ಅಂದೊಮ್ಮೆ ಇದೇ ಪೋಪರು" ಹುಲುಸಾದ ಕುಯಿಲಿಗೆ ಭಾರತ ಅತ್ಯಂತ ಪ್ರಶಸ್ತ ನೆಲ" ಎಂದವರಲ್ಲವೇ?  ಭಾರತದ ಬಿಷಪರೂ ಭಾರತ ನಿಷ್ಠರೇ, ಅವರೂ ಇಲ್ಲಿನ ನೆಲಕ್ಕೆ ನಿಷ್ಠರಾದವರೇ ಎನ್ನುವಂತೆಯೂ ಇಲ್ಲ. ಏಕೆಂದರೆ ಅಂಥ ನಿಷ್ಠತೆ ಪೋಪ್ ವಿರೋಧಿಯಾಗುವ ಸಂಭವವಿದೆ. ಅಲ್ಲದೆ ಬಿಷಪರೂ " ಹುಲುಸಾದ ಕುಯಿಲಿಗೆ" ತೊಡಗಿಕೊಳ್ಳದಿದ್ದರೆ ಪೋಪರ ಶಿಷ್ಯರಾಗಲು ಹೇಗೆ ತಾನೇ ಸಾಧ್ಯ?
ಹೀಗೆ ಭಾರತದಲ್ಲಿ ಕ್ರೈಸ್ತಮತ ಸಂಘಟನೆಗಳು ಸುಲಭವಾಗಿ ಸಮಾಜ ಸುಧಾರಣೆಯ ಪಟ್ಟವನ್ನು ಹೊತ್ತುಕೊಂಡುಬಿಡುತ್ತವೆ. ಒಂದೊಮ್ಮೆ ಯುರೋಪಿನಲ್ಲಿ ರಾಜ್ಯದೊಳಗಿನ ರಾಜ್ಯವಾಗಿದ್ದ ಚರ್ಚು ಭಾರತದಲ್ಲಿ ಕಳೆದ ೧೦ ವರ್ಷಗಳ ಅನಂತರ ತೀವ್ರವಾಗಿ ವಿವಿಧ ರೂಪಗಳಿಂದ ತನ್ನ ಹಿಡಿತವನ್ನು ಸಾಸುತ್ತಿದೆ.  ತಮಿಳುನಾಡಿನ ಕೂಡಕುಳಂ ಅಣುವಿದ್ಯುತ್ ಸ್ಥಾವರವನ್ನು ವಿರೋಧಿಸುವವರೆಗೆ ಕ್ರಿಶ್ಚಿಯನ್ ಎನ್ ಜಿ ಒ ಗಳು  ಕೋರೆ ಮೂಡಿಸಿಕೊಂಡಿವೆ. ನಾಳೆ ಇವರು ಅಗ್ನಿ ಕ್ಷಿಪಣಿಯನ್ನು, ರಷ್ಯಾ ನಿರ್ಮಿತ ಹಡಗುಗಳನ್ನು, ಹೆಚ್‌ಎಎಲ್ ವಿಮಾನಗಳನ್ನೂ ವಿರೋಧಿಸಲಾರರೆಂದು ಹೇಗೆ ನಂಬಬೇಕು?  ಎನ್ ಜಿ ಒ ಗಳಿಗೆ ಹರಿದುಬರುವ ಕೋಟಿಕೋಟಿ ರೂ.ಗಳು ಹಾಗೆ ಮಾಡುತ್ತವೆ.   ಅಷ್ಟಕ್ಕೂ ಇವುಗಳಿಗೆ ಎಲ್ಲಿಂದ ಹಣ ಹರಿದುಬರುತ್ತದೆ? ಯಾರು ತರಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಈ ಅಧ್ಯಯನ ವರದಿಯಲ್ಲಿ ಧಿಗ್ಭ್ರಮೆ ಹುಟ್ಟಿಸುವ ಮಾಹಿತಿಗಳಿವೆ. ಏಕೆಂದರೆ ಒರ್ವ ಬಿಷಪರೇ ಅಮೆರಿಕಾ ಮತ್ತು ಯುರೋಪಿಯನ್ ಯೂನಿಯನ್‌ಗಳಿಗೆ ಬರೆದ ಪತ್ರದ ಸಾಕ್ಷಿಯನ್ನು ಈ ವರದಿ ಲಗತ್ತಿಸಿದೆ. ಹೀಗೆ ಅಮೆರಿಕಾ ಮತ್ತು ಯುರೋಪಿಯನ್ ಯೂನಿಯನ್ ಗಳ ಹಣದಿಂದ ಬದುಕುವ ಈ ಎನ್ ಜಿ ಒ ಗಳು ಭಾರತದ ನೀತಿನಿಯಮಗಳಿಗೆ ಬದ್ದರಾಗಿ ಬದುಕುತ್ತವೆ ಎಂದು ಬಿಳಿಬಿಳಿಯಾದ ಕುರುಚಲು ಗಡ್ಡದ  ಕೋಟು, ಸೂಟು ಧರಿಸುವ ಶ್ರೀಮಂತ ಆದರೆ ಇನ್ನೂ ಮಧ್ಯಮವರ್ಗದ ಮಾನಸಿಕತೆ ಇರುವ ಜನ ಹೇಳಬಹುದೇ ಹೊರತು ಸಮಾಜದೊಳಗೆ ಮಗುವಾಗಿ ಬದುಕುವ ನರಮನುಷ್ಯನಿಗೆ ನಂಬಲು ಸಾಧ್ಯವಾಗುವುದಿಲ್ಲ.
Gospel for asia ಎಂಬ ವೆಬ್‌ಸೈಟೊಂದಿದೆ. ಭಾರತದಿಂದ ಈ ಜಾಲತಾಣವನ್ನು ನೋಡಿದರೆ ತಾಯಿಯೊಬ್ಬಳು ಮಗುವನ್ನು ಎತ್ತಿಕೊಂಡ ಚಿತ್ರ ಮತ್ತು ಅದರ ಕೆಳಗೆ ಮಕ್ಕಳ ಪೌಷ್ಠಿಕತೆ, ಭವಿಷ್ಯ, ಶಿಶು ಮರಣ ಮೊದಲಾದ ಸಂಗತಿಗಳ ಬಗ್ಗೆ ಪ್ರಸ್ತಾಪವಿದೆ. ಆದರೆ ಅದೇ ವೆಬ್‌ಸೈಟನ್ನು  ವಿದೇಶದಿಂದ ನೋಡಿದರೆ  ಅಲ್ಲಿರುವುದೆಲ್ಲವೂ " ಸುವಾರ್ತೆ"ಗಳು!  ಏಕೆ ಈ ನಾಟಕ? ವಿದೇಶದಿಂದ ಮತಪ್ರಚಾರಕ್ಕಾಗಿ  ಹಣತರುವುದು ಮತ್ತು ಭಾರತದಲ್ಲಿ ಕಾಳಜಿಯ ಮುಖ ಹೊತ್ತು ಅದನ್ನು ಅನುಷ್ಠಾನ ಮಾಡುವುದು.  ಏನೇನು ಪವಾಡಗಳು ನಡೆಯುವುದೋ ಗೊತ್ತಿಲ್ಲ. ಆದರೆ ಈ ವೆಬ್‌ಸೈಟಿನಲ್ಲಂತೂ ಪವಾಡವೋ ಪವಾಡ!
ಮತ್ತೊಂದು ಇಂಗ್ಲೆಂಡ್ ಮೂಲದ action aid ಸಂಘಟನೆ ಭಾರತದ ಮಕ್ಕಳಿಗೆ ಶೌಚಾಲಯವಿಲ್ಲ, ಪೌಷ್ಟಿಕ ಆಹಾರವಿಲ್ಲ ಎಂಬ ನೆಪವೊಡ್ಡಿ ಭಾರತದ ಕ್ರಿಶ್ಚಿಯನ್ ಎನ್ ಜಿ ಒ ಗಳಿಗೆ ಹಣ ಸರಬರಾಜು ಮಾಡುತ್ತದೆ. ಮತಪ್ರಚಾರಕ್ಕೆ ಶೌಚಾಲಯವೂ ಪ್ರಮುಖ ಸರಕು ಎನ್ನುವುದು ಹೇಸಿಗೆಯ ಸಂಗತಿಯಾದರೂ ಇದು ಸತ್ಯ.
ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ ೨೦೦೬೧೧ ರ ಅವಯಲ್ಲಿ  north Karnataka Jesuit educational and charitable socityಎಂಬ ಎನ್ ಜಿ ಒ ರೂ .೨೩೬ ಕೋಟಿ ವಿದೇಶಿ ದೇಣಿಗೆಯನ್ನೂ, children fund inc ಎಂಬ ಎನ್ ಜಿ ಒ  ೧೭೪ ಕೋಟಿ  ರೂಗಳನ್ನೂ, the church council for child and youth care ಕೂಡಾ ೧೭೪ ಕೋಟಿ ವಿದೇಶಿ ದೇಣಿಗೆಯನ್ನು ಪಡೆದಿದೆ ಎಂದು ಈ ವರದಿ ತಿಳಿಸುತ್ತದೆ.ಈ ಅವಧಿಯಲ್ಲಿ ಕರ್ನಾಟಕದ ಒಟ್ಟು ೧೫೦ ವಿವಿಧಕ್ರಿಶ್ಚಿಯನ್ ಎನ್ ಜಿ ಒ ಗಳು ೨೧೮೫   ಕೋಟಿ ರೂ.ಗಳನ್ನು ಪಡೆದಿವೆ. ಈ ಮೊತ್ತ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಸಾವಯವ ಕೃಷಿ, ಬಿತ್ತನೆ ಬೀಜ, ರೈತರಿಗೆ ಪರಿಹಾರಗಳಿಗೆ ಮೀಸಲಿರಿಸಿದ ಮೊತ್ತಕ್ಕಿಂತ ಹೆಚ್ಚು!ಇದೇ ಅವಧಿಯಲ್ಲಿ ಬೆಂಗಳೂರಿನ ೧೦೪ ಎನ್ ಜಿ ಒ ಗಳಿಗೆ ೧೬೨೨ ಕೋಟಿ, ಮಂಗಳೂರಿನ ೯ ಎನ್ ಜಿ ಒ ಗಳಿಗೆ ೬೫ ಕೋಟಿ, ಮೈಸೂರಿನ ೧೦ ಎನ್ ಜಿ ಒ ಗಳಿಗೆ ೫೭ ಕೋಟಿ ರೂ ವಿದೇಶಿ ಹಣ ಹರಿದುಬಂದಿದೆ. ಈ ಕೋಟಿ ಹಣದಿಂದ ಯಾರ ಭಾಳು ಬಂಗಾರವಾಗಿದೆ? ಎಷ್ಟು ಜಾತ್ಯತೀತವಾಗಿ ಬಳಕೆಯಾಗಿದೆ ಎಂದು ಕಾಣುವುದೇ ಇಲ್ಲ.  ಏಕೆಂದರೆ ಆ ಹಣದಲ್ಲಿ ಪಾರದರ್ಶಕತೆಯಿಲ್ಲ. ಮತಾಂತರಗಳು ಹಾಗೆಲ್ಲಾ ನಡೆಯುದೇ ಇಲ್ಲ. ಇಂಥ ಮೊತ್ತದಿಂದ ಕೆಲವು ಚರ್ಚುಗಳು ಮತ್ತು ಎನ್ ಜಿ ಒ ಗಳು ರಿಯಲ್ ಎಸ್ಟೇಟ್ ದಂಧೆಯನ್ನು ನಡೆಸುತ್ತಿರುವುದೇನೂ ಇಂದು ಅಪರೂಪವಲ್ಲ.
 ಈ ಹಣದ ಹಿಂದಿರುವ ಕಪಟ ಉದ್ದೇಶ, ತಣ್ಣಗಿನ ಕ್ರೌರ್ಯ, ಮೆಲ್ಲಮೆಲ್ಲನೆ ತನ್ನ ಬಾಹುಗಳನ್ನು ಚಾಚಿಕೊಳ್ಳುವ ರಕ್ಕಸತನ, ತನ್ನದಲ್ಲದರ ಬಗೆಗಿನ ತೀವ್ರವಾದ ಅಸಹನೆಗಳು ಈ ವಿಷಯವನ್ನು  ಏನಾದರೂ ಮಾಡಿಕೊಂಡು ಸಾಯಲಿ ಎಂದುಬಿಡುವ ಹಾಗಿಲ್ಲ.  ಇಂದು ಕೋಟಿ ಭಾಳುವ ಎನ್ ಜಿ ಒ  ಗಳು ಜೈಲಿಗೆ ನುಗ್ಗಿವೆ. ಈ ಕೋಟಿಯ ಹರಿವು ಮುಂದೆ ಎಲ್ಲೆಲ್ಲಿಗೆ ನುಗ್ಗಿಸುವವೋ? ಹೀಗೆ ಆ ವರದಿಯನ್ನು ನೋಡುತ್ತಾ ಹೋದಂತೆ ಒಂಟಿ ಪಯಣಿಗನನ್ನು ಯಾರೋ ಹಿಂಬಾಲಿಸುತ್ತಿರುವಂತೆ ಭಾಸವಾಗುತ್ತದೆ.  ಇದು ಸಮಾಜ ಸುಧಾರಣೆಯೋ? ಸಾಮ್ರಾಜ್ಯ ವಿಸ್ತರಣೆಯೋ? ಎಂಬ ಗೊಂದಲ ಕಾಡುತ್ತದೆ. 

ಅಧಿಕಾರ ಇವರಿಗಿಲ್ಲ ! ಇದ್ದವರೇನು ಮಾಡುತ್ತಿದ್ದರು?

" ಯತ್ರ ನಾರ್ಯಸ್ತು ಪೂಜ್ಯತೇ ತತ್ರ ದೇವತಾ" ಎಂದು ಭಾರತೀಯ ವೇದ ಪುರಾಣಗಳು ಹೇಳಿವೆ. ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. " ಯತ್ರ ನಾರ್ಯಸ್ತು .." ಅನ್ನೇ ವಿಶ್ಲೇಷಿಸುತ್ತಾ ಸಮಸ್ತ ಸ್ತ್ರೀಸಂಕುಲವನ್ನೇ ವಿಶ್ಲೇಷಿಸಬಹುದು. ಅದು ಹಿಂದೂ ಚಿಂತನೆ  ಸ್ತ್ರೀಯರಿಗೆ ಕೊಟ್ಟ ಸ್ಥಾನ. ಅಂದರೆ ಸ್ತ್ರೀ ನಿಸಂಶಯವಾಗಿ ಪೂಜಾರ್ಹಳು.  ಸೃಷ್ಟಿಯ ಹುಟ್ಟೇ ಸ್ತ್ರೀ ಎಂಬ ಶಕ್ತಿಯಿಂದಾಯಿತು ಎಂಬ ನಂಬಿಕೆ ಹಿಂದುಗಳದ್ದು. ಹಾಗಾಗಿ ವೊನ್ನೆ ಮಂಗಳೂರಿನ ಪಡೀಲಿನಲ್ಲಿ ಹೊಡೆದಿದ್ದು ಸಮ್ಮತವಲ್ಲ ಎಂದೇ ಎಂಥವರಿಗೂ ಅನಿಸುತ್ತದೆ.
 ಯತ್ರ ನಾರ್ಯಸ್ತು ನೆಲೆಯಲ್ಲೇ ಗಮನಿಸಿದರೆ ಅಲ್ಲಿ ಸ್ತ್ರೀಯರಿಗೆ ಹೊಡೆಯಲಿಲ್ಲ , ಪೂಜಿಸಲಾಗಿತ್ತು ಎಂದೇ ಇಟ್ಟುಕೊಳ್ಳೋಣ.  ಅಂಥ ಜಾಗದಲ್ಲಿ ದೇವರು ನೆಲೆಸುತ್ತಿದ್ದನೇ? ಪೂಜಾರ್ಹವಲ್ಲದ  ಜಾಗದಲ್ಲಿದ್ದ ಸ್ತ್ರೀಯರನ್ನು ಪೂಜಿಸಬೇಕೇ? ನೋಡಿದವರಿಗೆ ಭೋಗಾರ್ಹ ಎಂದು ಕಂಡುಬಂದ ಸ್ತ್ರೀಯನ್ನೂ ಪೂಜಿಸಬೇಕೇ? ಎಂಬ ಪ್ರಶ್ನೆಗಳು ತತ್ತ್ವ ಜಿಜ್ನಾಸೆಗೆ ಸಂಬಂಧಿಸಿದವುಗಳು. ಹಾಗಾಗಿ ಸುಲಭವಾಗಿ ಅವು ಅರ್ಥವಾಗವು. ಉತ್ತರವೂ ಹೊಳೆಯಲಾರದು. ಆದ್ದರಿಂದ ಅಂಥ ಸ್ಥಿತಿಯಲ್ಲಿ ತತ್ ಕ್ಷಣದ ಸ್ಪಂದನವೇ ಪ್ರಧಾನವಾಗಿಬಿಡುತ್ತವೆ. ಮೊನ್ನೆ ನಡೆಯಬಾರದ್ದು ನಡೆದಿದ್ದು ಹಾಗೆಯೇ. ಎಲ್ಲರೂ ಹೊಡೆದಿದ್ದು ತಪ್ಪು ಎಂದಿದ್ದಾರೆ.  ಹಾಗಾದರೆ ಈ ಸ್ಥಿತಿಯಲ್ಲಿ ಮತ್ತೇನು ಮಾಡಬಹುದಿತ್ತು ಎನ್ನುವುದರಲ್ಲೇ ಸಮಸ್ಯೆಯ ಎಲ್ಲಾ ಬೇರುಗಳು ನಿಂತಿವೆ. ಪುರುಷನ ತಪ್ಪನ್ನು ನೇರಾನೇರ ಖಂಡಿಸಬಹುದು. ದಂಡಿಸಲೂ ಬಹುದು. ಆದರೆ ಪುರುಷ ಸಮಾನ ಸ್ತ್ರೀಯು ತಪ್ಪನ್ನೇ ಮಾಡಲಾರಳು . ಮಾಡಿದರೂ ಆಕೆ ದಂಡನೆಯಿಂದ ಹೊರತಾದವಳು ಎನ್ನುವುದಾದರೆ ಮಾತ್ರ ಹೋಮ್ ಸ್ಟೇ ಪ್ರಕರಣವನ್ನು ಮಾಧ್ಯಮಗಳ ದಿಕ್ಕಿನಲ್ಲಿ ವಿಶ್ಲೇಷಿಸಬಹುದು.
ಆದರೆ ಸತ್ಯಕ್ಕೆ ಮಾಧ್ಯಮಗಳೇ ಅಂತಿಮ ಪ್ರಮಾಣಗಳಲ್ಲವಲ್ಲ.
ಕೆಲವು ಘಟನೆಗಳನ್ನು ಸಮಾಜ ನೋಡುವ ದೃಷ್ಟಿಯೇ ವಿಚಿತ್ರ. ಅಥವಾ ಸಮಾಜ ಆ ಮಾನಸಿಕತೆಗೆ  ಒಗ್ಗಿಕೊಂಡಿರುವುದೇ  ಹಾಗೆಯೋ ಗೊತ್ತಿಲ್ಲ.  ಅದೇ ಪಕ್ಕದ ಮನೆಯಲ್ಲಿ ಶಿವಾಜಿ ಹುಟ್ಟಬೇಕೆಂಬ ಮಾನಸಿಕತೆ. ಹೋಮ್ ಸ್ಟೇಯಲ್ಲಿ ವಿಚಿತ್ರ ಉಡುಪಿನಲ್ಲಿದ್ದ ಹೆಣ್ಣುಮಕ್ಕಳು ನಮ್ಮ ಮನೆಯವರಲ್ಲವಲ್ಲ ಎಂಬ ಮಾನಸಿಕತೆ. ಯಾವ ಅಣ್ಣ ತಮ್ಮಂದಿರು, ಅಪ್ಪ ಅಮ್ಮಂದಿರು, ಗಂಡಂದಿರು  ಹೋಮ್ ಸ್ಟೇ ಎಂಬ  ಮಲಗುವ ಮನೆಯಲ್ಲಿ  ತಮ್ಮ ಮನೆಯ ಹೆಣ್ಣುಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಎಲ್ಲರೂ ತಮ್ಮ ಮನೆಯ ಹೆಣ್ಣುಗಳು ಆ ಸ್ಥಿತಿಯಲ್ಲಿದ್ದಿದ್ದರೆ ಎರಡು ಭಾರಿಸುವವರೇ.  ಅಲ್ಲಿ ನೈತಿಕತೆ, ಮೌಲ್ಯಗಳು ಲೆಕ್ಕಕ್ಕೆ ಬರಲಾರವು. ಆದರೆ ಅದೇ ಘಟನೆಗೆ , ಅದೇ ಕಾರಣಕ್ಕೆ  ಮತ್ತೊಬ್ಬರು ಭಾರಿಸುವುದನ್ನು ಒಪ್ಪಲಾರರು. ಮೌಲ್ಯಗಳು ಯಾವತ್ತೂ ಕವಲು ದಾರಿಯಲ್ಲಿ ಸಾಗುತ್ತವೆ ಎನ್ನುವುದು ಇದಕ್ಕೇ ಏನೋ.
ಹಿಂದಿನ ಪಬ್ ದಾಳಿಯ ಘಟನೆಯಿರಬಹುದು, ಇಂದಿನ ಹೋಮ್ ಸ್ಟೇ ಘಟನೆಯಿರಬಹುದು. ಮಂಗಳೂರಿನಂತಹ ಬುದ್ಧಿವಂತರ ನೆಲದಲ್ಲಿ ಒಂದು ಪ್ರಶ್ನೆ ಸದಾ ಕಾಡುತ್ತದೆ. ನಿರಂತರ ರಾಜಕೀಯ ಮೇಲಾಟಗಳು, ಚಳವಳಿಗಳನ್ನು ಹುಟ್ಟುಹಾಕಿದ ಈ ನೆಲದಲ್ಲಿ ಭಾಷಣಕ್ಕೆ ಬಂದು ಹೋಗುವವರಿಗೇನೂ ಕಡಿಮೆಯಿಲ್ಲ. ಮಾನವ ಹಕ್ಕುಗಳು, ಮತೀಯ ನಾಯಕರು, ವಿದೇಶಿ ಪ್ರತಿನಿಧಿಗಳು, ಸಮಾಜದ ನೀತಿ ನಿರೂಪಣೆಯ ಗುತ್ತಿಗೆಯನ್ನು ತಾವೇ ಸ್ವತಃ ಹಿಡಿದಿದ್ದೇವೆ ಎಂಬವರೆಲ್ಲರೂ ಇಲ್ಲಿಗೆ ಬಂದು  ತೀವ್ರವಾಗಿ ಮಾತನಾಡಿ ಕರೆನೀಡಿ, ಖಂಡನೆ ಮಾಡಿ ಹೋಗುತ್ತಾರೆ. ಆ ಕರೆ , ಖಂಡನೆ ಗಳಲ್ಲಿ " ಜಾಗೃತ ಸಮಾಜ ನಿರ್ಮಾಣವಾಗಬೇಕು" ಎಂದೂ , "ಮೌಲ್ಯಯುತ ಸಮಾಜ ಕಟ್ಟಬೇಕು"ಎಂದೂ " ಗಾಂಧಿ ಕಂಡ ಕನಸ್ಸುಗಳು ಇಲ್ಲಿ ಸಾಕಾರವಾಗಬೇಕು" ಎಂದೂ ಭರಪೂರ ಉಲ್ಲೇಖಗಳಿರುತ್ತವೆ. ಆದರೆ ಮೊನ್ನೆಯ ಘಟನೆಯ ತರುವಾಯ " ಜಾಗೃತ ಸಮಾಜ ಎಂದರೇನು ?" ಎಂಬ ಬಗ್ಗೆಯೇ ಸಂಶಯವನ್ನು ಹುಟ್ಟಿಸುತ್ತದೆ. ಸಮಾಜದಲ್ಲಿ ಅನೈತಿಕತೆ, ಅನಾಚಾರಗಳು ನಡೆಯಬಾರದು, ನಡೆದರೆ ಅಂಥದ್ದನ್ನು ತಡೆಯಬೇಕು ಎಂದಾದರೆ ಹೋಮ್ ಸ್ಟೇಯಲ್ಲಿ ನಡೆದಿದ್ದನ್ನು ನಡೆದರೆ ತಪ್ಪೇನು? ಕುಸಿಯುತ್ತಿರುವ ಮೌಲ್ಯಗಳು ಕಣ್ಣಮುಂದಿರುವಾಗ ಕೈಕಟ್ಟಿ ಕುಳಿತಿರುವುದು ಜಾಗೃತ ಸಮಾಜದ ಲಕ್ಷಣವೇ? ಹಿಂದೂ ಸಂಸ್ಕಾರ ಹೊಂದಿರುವವರಿಗಂತೂ ನಾಟಕೀಯ ಬದುಕಿನಲ್ಲಿ ತರಬೆತಿಯಿರುವುದಿಲ್ಲ. ಕೆಟ್ಟದ್ದು ಎಲ್ಲಿದ್ದರೂ , ಎಲ್ಲಿ ನಡೆದರೂ ಅದನ್ನು ತಡೆಯಬೇಕು. ಒಳ್ಳೆಯದು ಎಲ್ಲೆಲ್ಲಿಂದಲಾದರೂ ಇಲ್ಲಿಗೆ ಬರಬೇಕು ಎನ್ನುವ ಹಿಂದೂ ಸಂಸ್ಕೃತಿ ಕೆಟ್ಟದ್ದನ್ನು ತಡೆಯದಿರಲು ಸಾಧ್ಯವೇ ಇಲ್ಲ.
ಹದಿಹರೆಯದವರ ಪಾನಗೋಷ್ಠಿ, ಅರೆಬೆತ್ತಲೆ ವಸ್ತ್ರ ಧರಿಸಿ  ಸ್ತ್ರೀಪುರುಷರು ಸಾಮಿಪ್ಯದಿಂದಿರುವುದು ರೇವ್ ಪಾರ್ಟಿಯೇ ಆಗಲಿ, ಬರ್ತ್ ಡೇ ಪಾರ್ಟಿಯೇ ಆಗಲಿ ಒಂದು ಹೊತ್ತು ದೀಪ ಹಚ್ಚುವ ಯಾವ ಮನೆಯವನಿಗೇ ಆಗಲಿ ಸರಿ ಎಂದು ಕಾಣಲಾರದು. ದೈವ-ಭೂತದೆದುರು ಭಯ ಭಕ್ತಿಯಿಂದ ಕೈಮುಗಿದು ನಿಲ್ಲವ ಸಂಸ್ಕೃತಿಯ ಕರಾವಳಿಗನಿಗಂತೂ ಅದು ಸರಿ ಎಂದು ಕಾಣುವುದೇ ಇಲ್ಲ.
ಅಂಥ ಮಂಗಳೂರು ಇಂದು ತನ್ನ ಸಂಸ್ಕೃತಿಯನ್ನು ಬಲಿಕೊಡಲಾರೆ ಎಂದಾಗ, ತನ್ನ ನೆಲವನ್ನು ಅಪವಿತ್ರಗೊಳಿಸಲಾರೆ ಎಂದಾಗ, ಸೊಗಡನ್ನು ಕಳೆದುಕೊಳ್ಳಲಾರೆ ಎಂದಾಗ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಿತ್ತದೆ.  ಮಂಗಳೂರಿನಲ್ಲಿ ಎಲ್ಲಾ ಅನಿಷ್ಠಗಳು ಕಂಡುಬರಲಾರಂಭಿಸಿದ್ದು  ಈಗ್ಗೆ ಒಂದೆರಡು ದಶಕಗಳ ಅನಂತರ. ಖ್ಯಾತ ಶೈಕ್ಷಣಿಕ ಕೇಂದ್ರವಾಗಿ ಬೆಳೆದುನಿಂತ ಮಂಗಳೂರಿಗೆ ವಿದೇಶ ಮತ್ತು ಹೊರ ರಾಜ್ಯಗಳಿಂದ ಶ್ರೀಮಂತ ವಿದ್ಯಾರ್ಥಿಗಳು ಬರಲಾರಂಭಿಸಿದರು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಮಂತರ ಮಕ್ಕಳು ದಾಖಲಾದರು.   ಶ್ರೀಮಂತಿಕೆಯ ಶೋಕಿಗೆ ತಕ್ಕಂತೆ ನಗರ ಬೆಳೆಯಲಾರಂಭಿಸಿತು. ಜೊತೆಗೆ ಮಾಧಕ ವಸ್ತುಗಳ ಜಾಲವೂ  ಪಬ್ ಸಂಸ್ಕೃತಿಯೂ ಬೆಳೆಯುತ್ತಾ ಬಂತು. ಹೀಗೆ ಅನೈತಿಕ ಚಟುವಟಿಕೆಗಳು ಒಂದೊಂದಾಗಿ ಕಾಣಿಸಿಕೊಳ್ಳಲಾರಂಭಿಸಿದವು. ಒಂದೆಡೆ ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಜಾಗೃತ ಸಮಾಜವೊಂದು ಸಮುದ್ರ ಪಾಲಾಗಿರಲಿಲ್ಲ. ಹಾಗಾಗಿ ದೇವ- ದಾನವ ಸಂಘರ್ಷದಂತೆ ಹಲವು ಹೋರಾಟಗಳು ಆಗಾಗ್ಗೆ ನಡೆದವು.  ಅಂಥ ಹೋರಾಟಗಳಿಗೆ ಅನೈತಿಕತೆಯ ಸಮರ್ಥಕರು "ತಾಲೀಬಾನೀಕರಣ"ಎಂಬ ಹೆಸರನ್ನಿಟ್ಟರು.  ನಿಜದ ತಾಲೀಬಾನಿಗಳ ಉಪಟಳವನ್ನು ಮರೆಮಾಚಲು ಇವರಿಗೆ ಹಿಂದುಗಳನ್ನು ತಾಲೀಬಾನಿಗಳೆಂದು ಕರೆಯಬೇಕಾಗಿದ್ದ ಅನಿವಾರ್ಯತೆಯೂ ಇತ್ತು. ಹೋಮ್ ಸ್ಟೇಯ ಘಟನೆ ಅದಕ್ಕೊಂದು ಉದಾಹರಣೆಯೇ ಹೊರತು  ಅದೇನೂ ಮೊದಲಲ್ಲ. 
ಕಥೆ ಇಷ್ಟೆಲ್ಲಾ ಇರುವಾದ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂಬ ವ್ಯವಧಾನ, ಮೂಲ ಪ್ರಜ್ನೆ ಮಾಧ್ಯಮಗಳಿಗೆ ಮತ್ತು ಬುದ್ಧಿಜೀವಿ ವರ್ಗಕ್ಕೆ ಬರದೇ ಹೋದುದು ವಿಪರ್ಯಾಸ. ಗೆಳೆಯರೆಲ್ಲರೂ ಕೂಡಿ ಪ್ರವಾಸ ಹೋಗುವುದಕ್ಕೂ ಕೋಣೆಯೊಳಗೆ ಕೂತು ಕುಡಿಯುವುದಕ್ಕೂ ವ್ಯತ್ಯಾಸವಿಲ್ಲವೇನು?  ಎಲ್ಲವೂ ಬಹಿರಂಗವಾಗುವಂತಹ ಬಟ್ಟೆಯನ್ನು ತೊಟ್ಟು " ನಮ್ಮಲ್ಲಿ ಅಶ್ಲೀಲತೆಯ ಭಾವನೆಗಳಿಲ್ಲ" ಎನ್ನುವುದೂ ಒಂದೇ ಈಚಲು ಮರದಡಿಯಲ್ಲಿ ಕೂತು " ಮಜ್ಜಿಗೆ ಮಾತ್ರ ಕುಡಿದೆ" ಎನ್ನುವುದೂ ಒಂದೇ ಅಲ್ಲವೇ? ದಾಳಿ ಮಾಡಲು ಇವರೆಲ್ಲಾ ಯಾರು ಎಂಬ ಪ್ರಶ್ನೆ ಬಾಣದಂತೆ ತೂರಿ ಬರುತ್ತಿದೆ. ಜಾಗೃತ ಸಮಾಜ ದಾಳಿ ಮಾಡದೆ ಇನ್ನೇನು ಮಾಡಬೇಕು? ದಾಳಿ ಮಾಡುವ ಜನರು ನಿದ್ರಿಸುತ್ತಿದ್ದರೆ ಮತ್ತೇನು ಮಾಡಬೇಕು? ಅಸಲು ಈ ಹೋಮ್ ಸ್ಟೇ ಅನಧಿಕೃತ ಎಂದು ತಿಳಿದುಬಂದಿದೆ. ರಾಜ್ಯಾದ್ಯಂತ ಹೋಮ್ ಸ್ಟೇ ಗಳಿಗೆಂದೇ ರಾಜ್ಯ ಪ್ರವಾಸೋದ್ಯಮ ಇಲಾಖೆ ಕೆಲವು ನೀತಿ ನಿರೂಪಣೆಗಳನ್ನು   ಮಾಡಿದೆ. ಈ ಹೋಮ್ ಸ್ಟೇ  ಆ ನೀತಿನಿರೂಪಣೆಗಳಿಂದ ನುಣುಚಿಕೊಂಡುದುದಾಗಿದೆ. ಕಾನೂನು ಪ್ರಕಾರ ಅಂಥ ಅನಧಿಕೃತ ಹೋಮ್ ಸ್ಟೇಗಳಲ್ಲಿ ನಡೆಯುವ ಚಟುವಟಿಕೆಗಳು ಅನೈತಿಕ ಎನಿಸಿಕೊಳ್ಳುತ್ತವೆ. ಅಲ್ಲದೆ ದಂಪತಿಗಳಲ್ಲದ ಹದಿಹರೆಯದವರು ರೂಮು ಹಿಡಿಯುವುದು ಕೂಡಾ ಅನೈತಿಕ. ಕಳೆದ ಎಷ್ಟೋ ತಿಂಗಳಿಂದ ಇಂಥ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ದಾಳಿ ಮಾಡುವವರು ಮಾಡಲಿಲ್ಲವೇಕೆ? ಹಾಗಾದರೆ ಅವರೂ ಅನೈತಿಕವನ್ನು ಪೋಷಿಸಿದರು ಎಂದು ಅರ್ಥವಲ್ಲವೇ? ಮಂಗಳೂರಿನಲ್ಲಿ ಇನ್ನೂ ಅರುವತ್ತಕ್ಕೂ ಹೆಚ್ಚಿನ ಹೋಮ್ ಸ್ಟೇಗಳಿವೆ. ಅವುಗಳಲ್ಲಿ ಬಹುತೇಕ ನೊಂದಾಯಿತವಲ್ಲದವೇ. ಈ ಮಾಫಿಯಾ ಎಷ್ಟೊಂದು ವ್ಯಾಪಕವಾಗಿದೆಯೆಂದರೆ ರಾಜ್ಯದ ಸಾವಿರಾರು ನೊಂದಾಯಿತ ಹೋಮ್ ಸ್ಟೇಗಳಲ್ಲಿ  ಅಕ್ರಮ ಮದ್ಯ, ವೈಶ್ಯಾವಾಟಿಕೆಗಳು ಭರದಿಂದ ನಡೆಯುತ್ತಿರುವ ಸುದ್ಧಿಗಳು ಕೇಳಿಬರುತ್ತವೆ. ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು ಎರಡು ಸಾವಿರ ಅನಧಿಕೃತ ಹೋಮ್ ಸ್ಟೇ ಗಳಿವೆ. ಆದರೆ ಕಾನೂನು ಬದ್ದವಾಗಿ ಇರುವವು ಕೇವಲ ೧೬೧.  ಅದರ ಬಗೆ ಯಾಕೆ ಖಾಕಿಯ ಖದರಿಲ್ಲ? ಹಾಗಾದರೆ ಪರಿಸ್ಥಿತಿಯ ಭೀಕರತೆ ಎಷ್ಟಿರಬಹುದು? ಕಾನೂನಿನ ಚೌಕಟ್ಟಿನಿಂದ ನುಸುಳುವ ಎಲ್ಲಾ ಕಾರ್ಯಗಳು ಅಕ್ರಮ ಎಂದಾಗುವಾಗ ಅಂಥ ಹೋಮ್ ಸ್ಟೇ ನಲ್ಲಿ ನಡೆಯುವುದು ಸಕ್ರಮ ಹೇಗಾಗುತ್ತದೆ? 
 ಆ ಪಾರ್ಟಿಯಲ್ಲಿ ಕೇವಲ ಬೀರುಗಳು ಮಾತ್ರ ಸಿಕ್ಕವಂತೆ. ಬೀರು ಅಮಲು ಪದಾರ್ಥವಲ್ಲದ ಕಾರಣ ಪಾರ್ಟಿಯಿಂದ ತೊಂದರೆ ಏನಿಲ್ಲವಂತೆ.  ಆದರೆ ಬೀರಿನಲ್ಲಿರುವ ಆಲ್ಕೋಹಾಲಿಕ್ ಅಂಶಗಳ ಪ್ರಮಾಣ ೪ ರಿಂದ ೮ ಶೇಕಡಾ!  ಇಷ್ಟು  ಅಮಲು ಮತ್ತೇನೋ ಒಂದರ ಘಮಲು ಉಂಟುಮಾಡುವುದಕ್ಕೆ ಸಾಕಾಗಬಲ್ಲದು ಎಂದು ವೈದ್ಯಕೀಯ ಹೇಳುತ್ತದೆ.  " ಅಲ್ಲಿ ಕಾಂಡೋಂ ಸಿಗಲಿಲ್ಲವಲ್ಲ " ಎನ್ನುವುದು ಮತ್ತೊಂದು ಹೆಗಲು ಮುಟ್ಟಿ ನೋಡಿಕೊಳ್ಳುವ  ರೀತಿಯೇ ಸರಿ. ಏಕೆಂದರೆ ದಾಳಿ ನಡೆಸಿದವರಾರೂ ಅಲ್ಲಿ ಕಾಂಡೋಂ ನ ಸಂಗತಿಯನ್ನು ಪ್ರಸ್ಥಾಪಿಸಿರಲಿಲ್ಲ. ಆದರೂ ಟಿ.ವಿ ಗಳಲ್ಲಿ ಕಾಂಡೋಂ ವಿಷಯ ಚರ್ಚೆಯಾಗುತ್ತಿತ್ತು.  ಸ್ತ್ರೀವಾದದ ಮುಖವಾಡ ಹೊತ್ತವರು ಇಂಥ  ಅನಗತ್ಯ ಸಂಗತಿಗಳನ್ನು ಉಲ್ಲೇಖಿಸುವ ಉಲ್ಲೇಖವೇನು?  ಒಂದು ವೇಳೆ ಕಾಂಡೋಂ ಅಲ್ಲಿ ಸಿಕ್ಕಿದ್ದರೂ ಕೂಡಾ ಅದು ಅನೈತಿಕ ಲೈಂಗಿಕತೆಯನ್ನು  ನೈತಿಕ ಮಾಡುವ  ಶಕ್ತಿಯನ್ನೇನೂ ಹೊದಿರುತ್ತಿರಲಿಲ್ಲ.
 ಆದರೂ ಟಿವಿಯಲ್ಲಿ  ಎಲ್ಲರೂ ಸರದಿಯಂತೆ ಬಂದುಹೋದರು.  ಮಹಿಳಾವಾದಿಗಳು ಮದ್ದೂರು ಘಟನೆಯನ್ನು ಮರೆತು ಮೇಕಪ್ ಮಾಡಿಕೊಂಡು  ಬಯ್ಯಲು ಬಂದರು. ತಾವೇ ತೀರ್ಪು ಕೊಟ್ಟರು.  ಕಾಂಗ್ರೆಸಿನವರಂತೂ  ಬಿಜೆಪಿಯ ಮೇಲಿನ ದ್ವೇಷಕ್ಕೆ ಸಮಸ್ತ ಹಿಂದೂ ಸಂಘಟನೆಗಳನ್ನೆಲ್ಲಾ  ಜರೆದರು. ಬಬ್ಲಿ ಬಬ್ಲಿಯಾಗಿ ಮಾತಾಡಲು ಹೆಣಗಿ ತಮ್ಮ  ಸ್ವಂತಿಕೆಯನ್ನೇ ಮರೆತುಹೋದಂತಿರುವ ಅನೇಕ ಆಂಕರ್‌ಗಳು ಮಹಾ ವ್ಯಕ್ತಿಗಳೆಂಬಂತೆ ಮುಖಭಾವ ಸೃಷ್ಟಿಸಿಕೊಂಡರು. ಘಟನೆಗೆ ಮತ್ತೊಂದು ಮುಖವೂ ಇದೆಯೆಂಬುದೇ ಇವರಿಗೆ ಗೊತ್ತಾಗಲಿಲ್ಲ. ಇವರಲ್ಲಿ ಬಹುತೇಕರಿಗೆ  ಕಾಶ್ಮೀರ, ಅಸ್ಸಾಂಗಳು ಎಲ್ಲಿವೆಯೆಂಬುದೇ ಗೊತ್ತಿರಲಿಕ್ಕಿಲ್ಲ. ಇನ್ನು ಎಷ್ಟೋ ಸಾವಿರ ವರ್ಷಗಳ ಹಿಂದೂ ಸಂಸ್ಕೃತಿ  ಹೇಗೆ ತಾನೇ ಗೊತ್ತಿರಲು ಸಾಧ್ಯ?   
ದಾಳಿ ಮಾಡಿದವರು ಯಾರೇ ಇರಲಿ  ಅದಕ್ಕೆ ಅವರು ಮಾತ್ರ ಕಾರಣರಲ್ಲ ಎಂಬುದು ಸುಸ್ಪಷ್ಟ.  ಈ ನೆಪದಲ್ಲಿ ಹಿಂದೂ ಸಂಘಟನೆಗಳನ್ನು ತೆಗಳುವುದೇ ಘಟನೆಗೆ ಖಂಡನೆಯ ಮಾರ್ಗವಲ್ಲ.  ಹಿಂದೂ ಜಾಗರಣ ವೇದಿಕೆಯಾಗಲೀ, ಭಜರಂಗದಳವಾಗಲೀ , ಇತರ ಯಾವುದೇ ಹಿಂದೂ ಸಂಘಟನೆಯಾಗಲೀ ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಹೆಮ್ಮಕ್ಕಳ ಮೇಲಿನ ಅತ್ಯಾಚಾರಗಳನ್ನೆಲ್ಲಾ ವಿರೋಧಿಸುತ್ತಾ, ಅದರ ವಿರುದ್ಧ ಟೊಂಕ ಕಟ್ಟಿ ನಿಂತಿರುವ  ಸಂಘಟನೆ. ಅದು  ಜಗತ್ತಿಗೆ ಹೆಚ್ಚು ಗೊತ್ತಿಲ್ಲದಿರುವುದು ಈ ಸಂಘಟನೆಗಳ ತಪ್ಪಲ್ಲ.  ಅದನ್ನು ತಿಳಿದುಕೊಳ್ಳದಿರುವುದು  ಬುದ್ಧಿಜೀವಿಗಳ ಸಮಸ್ಯೆ.
ಮಗಳಿಗೆ ಅರೆಬಟ್ಟೆ ತೊಡಲು ಹೇಳಿ, ಹುಡುಗರೊಂದಿಗೆ ಕುಡಿದು ಅಪರಾತ್ರಿಯಲ್ಲಿ ಮನೆಗೆ ಬಾರಮ್ಮಾ ಎನ್ನುವ ಅಪ್ಪ ಅಮ್ಮಂದಿರು ಯಾರಾದರೂ ಭಾರತದಲ್ಲಿರುವರೇ  ಎಂಬುದೇ ಸದ್ಯ ಕಾಡುವ ಪ್ರಶ್ನೆಯಾಗಿದೆ.  

ಈ ಸ್ವಾತಂತ್ರ್ಯಕ್ಕೆ ಅಸ್ಸಾಮಿನ ಉರಿಯ ಅರಿವುಂಟೇ?

ನೇಪಾಳದ ಹಿಂದೂ ರಾಜನನ್ನು ಪದಚ್ಯುತಗೊಳಿಸಿದಾಗ ಭಾರತದಲ್ಲಿ ಯಾವ ಕಮ್ಯುನಿಷ್ಟ್ ಕಾಮ್ರೆಡನಿಗೂ ಪೆಟ್ಟು ಬಿದ್ದಿರಲಿಲ್ಲ. ಪಾಕಿಸ್ಥಾನದ ರಿಂಕಲ್ ಕುಮಾರಿಯನ್ನು ಮತಾಂಧರು ಮತಾಂತರಿಸಿದಾಗ ಇಲ್ಲಿನ ಯಾವ ಹಿಂದುವೂ ಬೀದಿಗೆ ಇಳಿದಿರಲಿಲ್ಲ. ಅಲ್ಲೆಲ್ಲೋ ಪಾಶ್ಚಾತ್ಯ ದೇಶದಲ್ಲಿ ಗಣಪತಿ, ಲಕ್ಷ್ಮಿ, ಬ್ರಹ್ಮದೇವರನ್ನು ಹೆಂಗಸರ ಚಡ್ಡಿಗಳಲ್ಲಿ ಚಿತ್ರಿಸಿ ರಾಂಪ್‌ವಾಕ್ ಮಾಡಿದಾಗಲೂ ಹಿಂದುಗಳಾರೂ ಬಸ್ಸುಗಳಿಗೆ ಕಲ್ಲು ಬಿಸಾಡಿರಲಿಲ್ಲ. ಅದಾವುದೋ ಕೆರೆಬಿಯನ್ ದೇಶದಲ್ಲಿ ಹಿಂದುವಾದವನು ಅಧ್ಯಕ್ಷನಾಗಬಾರದು ಎಂದಾಗ ಜಗತ್ತಿನಾದ್ಯಂತ ಹಿಂದುಗಳಾರೂ ಖಂಡಿಸಲಿಲ್ಲ. ಅವೆಲ್ಲಾ ಬಿಡಿ. ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದರೂ ಹಿಂದುಗಳಿಗೆ ಪಕ್ಕದ ಪರಮ ಅಸಹ್ಯವಾದ ಕಟ್ಟಡವೊಂದು ಸಾಮರಸ್ಯದ ಪ್ರತೀಕದಂತೆಯೇ ಕಾಣುತ್ತದೆ. ಅಯೋಧ್ಯೆಯ ರಾಮ ಇನ್ನೂ ಟೆಂಟ್ ವಾಸಿಯಾದರೂ ಬಹುತೇಕರಿಗೆ ಅದೇನೂ ಅಂಥ ಕೊರಗಿನಂತೆ ಕಾಣುವುದಿಲ್ಲ. ಯಾವ ಹಿಂದೂ ಸಂನ್ಯಾಸಿಯೂ ಮೌಲ್ವಿಗಳಂತೆ ಅಬ್ಬರಿಸುವುದಿಲ್ಲ. ಒಂದು ವೇಳೆ ಸಂನ್ಯಾಸಿ ಅಬ್ಬರಿಸಿದರೂ ಯಾರಿಗೂ ಹೆದರಿಕೆಯಾಗುವಂತೆ ಕಾಣುವುದೂ ಇಲ್ಲ.
ಅದು ಹಿಂದುವಿನ ಅತಿಯಾದ ಸಾತ್ತ್ವಿಕತೆಯೋ ಅಥವಾ ಭಂಡತನ ಮಿಶ್ರಿತ ಅತಿಯಾದ ಭಯವೋ ಎಂದು ವಿಶ್ಲೇಷಿಸುವುದು ಕಷ್ಟ. ಆದರೆ ಆತನಿಗೆ ಹಿಂದು ಎಂಬ ಕಾರಣಕ್ಕೆ ಸಿಟ್ಟು ಬರದಿರುವುದಂತೂ ಸತ್ಯ. ಮೇಲಿನ ಎಲ್ಲಾ ಸಂದರ್ಭಗಳಲ್ಲಿ ಅದು ಸಾಭೀತಾಗಿದೆ. ಬೀದಿಗಿಳಿಯಲು, ಪ್ರತಿಭಟಿಸಲು ಹಿಂದುವಿಗೆ ದಿನಕ್ಕೊಂದು ಕಾರಣವಾದರೂ ಸಿಗುತ್ತವೆ. ಆದರೆ ಅದು ನಡೆಯುವುದಿಲ್ಲ. ಏಕೆಂದರೆ ಹಿಂದುವಿಗೆ ಸಮಾಜಕ್ಕಾಗಿ ಎಂದಿಗೂ ಸಿಟ್ಟು ಬರುವುದಿಲ್ಲ. 
ಆದರೆ ಮುಸ್ಲಿಮರಿಗೇಕೆ ಅಷ್ಟೊಂದು ಸಿಟ್ಟು ಬರುತ್ತದೆ? ಏಕೆ ಬರಬೇಕು? ಹಿಂದುಗಳಿಗೆ ಸಿಟ್ಟು ಬರಲು ನ್ಯಾಯವಾದ ಕಾರಣವಾದರೂ ಇದೆ. ಆದರೆ ಮುಸ್ಲಿಮರಿಗಾದರೂ ಏನಿದೆ?  ಅವರು ಹಿಂದುಗಳ ದೇವಸ್ಥಾನ ಒಡೆದರು, ಹಿಂದೂ ಸ್ತ್ರೀಯನ್ನು ಕೆಡಿಸಿದರು, ಹಿಂದೂ ಆಸ್ತಿಗಳನ್ನು ಕಬಳಿಸಿದರು, ಹಿಂದೂ ರಾಷ್ಟ್ರವನ್ನು ಒಡೆದರು, ಹಿಂದೂ ನಾಯಕನನ್ನು ತೆಗಳಿದರು, ಭಾರತದಲ್ಲಿ ಅವರು ತಮ್ಮ ನಡೆಯುದ್ದಕ್ಕೂ ಹಿಂದು ಎಂಬುದರ ಮೇಲೆಲ್ಲಾ ದ್ವೇಷ ಬೆಳೆಸಿಕೊಂಡೇ ಬದುಕಿದರು. ಹೆದರಿಸಿದರು, ಭಯವನ್ನು ಹುಟ್ಟಿಸಿದರು. ಆಳಿದರು. ಆದರೂ ಅವರಿಗೆ ಇನ್ನೂ ಸಿಟ್ಟು ಬರುತ್ತದೆ.  ಹಿಂದುವಿನ ಮೇಲೆಯೇ ಸಿಟ್ಟು ಬರುತ್ತದೆ. ಅವರ ಸಿಟ್ಟಿಗೆ ಪದೇ ಪದೇ ಹಿಂದುವೇ ಬಲಿಯಾಗುತ್ತಾನೆ.ಅದು ಹದೀಸ್ ಪ್ರೇರಿತ, ಕಠೋರ, ಹಳೇ ಶಿಲಾಯುಗವನ್ನು ನೆನಪಿಸುವ ಮತಾಂಧತೆ.
ಆ ಮತಾಂಧತೆಗೆ ದೇಶ ಸಾಕಷ್ಟು ಅನುಭವಿಸಿಯಾಗಿದೆ. ಡೆನ್ಮಾರ್ಕಿನ ಪತ್ರಿಕೆಯೊಂದರಲ್ಲಿ ಬಂದ ವ್ಯಂಗ್ಯ ಚಿತ್ರಕ್ಕೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಹಿಂದೂ ಸ್ಟಿಕ್ಕರ್ ಅಂಟಿಸಿದ್ದ ಕಾರುಗಳೇ ಪುಡಿಯಾಗುತ್ತವೆ. ಸದ್ದಾಮನ ಸಾವಿಗೆ ಹೈದರಾಬಾದಿನಲ್ಲಿ ಹೆಣ ಬೀಳುತ್ತದೆ. ಪಾನ್ ಇಸ್ಲಾಂ ಅಥವಾ ಇಸ್ಲಾಂ ಬ್ರದರ್‌ಹುಡ್ ಗೆ ಹಿಂದೂ ಬಲಿಯಾಗುತ್ತಾ ಬಂದಿದ್ದಾನೆ. ಪಾನ್ ಇಸ್ಲಾಮನ್ನು ಪ್ರಕಟಪಡಿಸಲು ಮುಸಲ್ಮಾನ ಜಗತ್ತು ಸದಾ ಕಾಯುತ್ತಿದೆಯೇನೋ ಎಂಬಂತೆ ಘಟನೆಗಳು ನಡೆಯುತ್ತವೆ. ಅಥವಾ ಅಂಥ ಘಟನೆಗಳನ್ನು ಸೃಷ್ಟಿಸಲಾಗುತ್ತದೆ.
 ಅದನ್ನು ಸಾಭೀತು ಪಡಿಸಲು ಇದೀಗ ಅಸ್ಸಾಂ ಮತ್ತು ಬರ್ಮಾದ ಪಾಳಿ.
ಅಸ್ಸಾಂ ಮತ್ತು ಬರ್ಮಾದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯವಾಯಿತೆಂದೂ , ಅದಕ್ಕೆ ಸುನ್ನತ್ ಮಾಡಿದ ಮೃತದೇಹಗಳು ಸಿಕ್ಕಿದ್ದೇ ಸಾಕ್ಷಿಯೆಂದೂ ಮುಸಲ್ಮಾನ ಸಂಘಟನೆಗಳು ಪ್ರಚಾರ ಮಾಡಿದವು. ಅದಕ್ಕಾಗಿ ಅದರದ್ದು ಅದೇ ರಾಗ. ಅದೇ ಪ್ರತಿಭಟನೆ. ಪಾನ್ ಇಸ್ಲಾಮಿನ ಪ್ರಕಟೀಕರಣ. ಆಗಸ್ಟ್ ೧೦ ರಂದು ಮಧ್ಯಾಹ್ನ  ರಾಂಚಿಯಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿದವರೇ ನೇರವಾಗಿ ಬೀದಿಗೆ ಬಂದರು. ರಾಂಚಿಯ ಪ್ರಮುಖ ರಸ್ತೆಗಳನ್ನು ವಶಪಡಿಸಿಕೊಂಡರು. ಸುಮಾರು ೫೦೦ರಷ್ಟಿದ್ದ  ಮುಸಲ್ಮಾನರು ಕಂಡಕಂಡವರನ್ನು ಹೊಡೆದರು. ಬೈಕುಗಳನ್ನು ಸುಟ್ಟರು. ಸುಮಾರು ಒಂದೂವರೆ ಗಂಟೆಗಳ ಕಾಲ ಅಲ್ಲಿ ಪುಂಡ ಮುಸಲ್ಮಾನರು ನಿರಂತರ ದಾಂಧಲೆ ನಡೆಸಿದರು. 
ಅದಾದ ಮಾರನೆ ದಿನ ಆಗಸ್ಟ್ ೧೧ ರಂದು ಮುಂಬೈನಲ್ಲಿ ಸುಮಾರು ೨೦,೦೦೦ ಜನರ ಪ್ರತಿಭಟನೆ. ಅವರ ಪ್ರತಿಭಟನೆ ಎಂದರೆ ಹೆಣ ಬೀಳಬೇಕು, ರಕ್ತ ಹರಿಯಬೇಕು ಎಂಬಂತೆ ಮುಂಬೈನಲ್ಲೂ ಹೆಣ ಬಿತ್ತು. ೬೩ ಜನರು ಗಾಯಗೊಂಡರು. ೪೯ ಬಸ್ಸುಗಳು, ಅವೆಷ್ಟೋ ಬೈಕುಗಳು ಕರಕಲಾದವು. ಮುಸಲ್ಮಾನರ ಉಚ್ಚಿಷ್ಠವನ್ನೂ ಪರಮ ಪವಿತ್ರವೆಂದು ಭಾವಿಸುವ ಮಾಧ್ಯಮಗಳ ವಾಹನಗಳ ಮೇಲೆ ದಾಳಿಯಾಯಿತು. ಮಹಿಳಾ ವರದಿಗಾರರನ್ನು ಎಳೆದಾಡಲಾಯಿತು. ಭಾರತದ ವಾಣಿಜ್ಯ ರಾಜಧಾನಿ ಮುಂಬೈಯಲ್ಲೇ ಇವೆಲ್ಲವೂ ನಡೆದವು. ಈ ಪ್ರತಿಭಟನೆಯನ್ನು ಆಯೋಜಿಸಿದ್ದ ರಜಾ ಅಕಾಡೆಮಿ ಯ ಮುಖ್ಯಸ್ಥ ಫರಾನ್ ಶೇಖ್ ಗಲಭೆಯ ಅನಂತರ " ಇದೊಂದು ಪ್ರಾರ್ಥನಾ ಕೂಟವಾಗಿತ್ತು. ಈ ಪ್ರಾರ್ಥನಾ ಕೂಟದಲ್ಲಿ ಅಸ್ಸಾಂ ಮತ್ತು ಬರ್ಮಾದ ಮುಸ್ಲಿಂ  ಸಹೋದರರ ಸಮಸ್ಯೆಯ ಬಗ್ಗೆ ಚರ್ಚಿಸಲು ವಿವಿಧ ಸಂಘಟನೆಗಳು ಸೇರಿದ್ದೆವು ಅಷ್ಟೇ" ಎಂದು ಪ್ರತಿಕ್ರಿಯೆ ನೀಡಿದ್ದರು.  ಸಮಸ್ಯೆಯ ಬಗ್ಗೆ ಚರ್ಚಿಸಲು ಶುದ್ಧಾನುಶುದ್ಧ ಅನಕ್ಷರಸ್ಥ ಜನರು! ಅದೂ ಹಾಕಿ ಸ್ಟಿಕ್ಕುಗಳು, ಪೆಟ್ರೋಲ್ ಬಾಂಬ್‌ಗಳು, ಮರದ ಹಲಗೆಗಳು, ಕಲ್ಲುಗಳು, ಬೆಂಕಿ ಪೊಟ್ಟಣಗಳು!  ಮುಸಲ್ಮಾನರ ಪ್ರಾರ್ಥನೆಗೆ ಇವೆಲ್ಲವೂ ಅಗತ್ಯವೇ? ಅಮರ್ ಜವಾನ್ ಸ್ಮಾರಕವನ್ನು ಒಡೆಯಲೇ ಬೇಕೇನು? ಅವರ ಪ್ರಾರ್ಥನೆಯೆಂದರೆ ದೊಂಬಿಯ ಸ್ವರೂಪವೇ? ಅಥವಾ ದೊಂಬಿಯೇ ಪ್ರಾರ್ಥನೆಯೇ ಎಂಬ ಸಂಶಯ ಫರಾನ್ ಶೇಖ್ ಮಾತಿನಿಂದ ಬಾರದೇ ಇರದು. ಸಮಸ್ಯೆಯ ಬಗ್ಗೆ ಚರ್ಚಿಸುವುದು ಪ್ರಜ್ನಾವಂತರು ಒಂದೆಡೆ ಸೇರಿ ವಿಷಯವನ್ನು ಸ್ಪಷ್ಟಪಡಿಸಿಕೊಂಡ ಬಳಿಕ. ಆದರೆ ಅಜಾದ್ ಮೈದಾನದಲ್ಲಿ ಎಲ್ಲರೂ ಎಲ್ಲದಕ್ಕೂ ಸಿದ್ಧವಾಗಿಯೇ ಬಂದಿದ್ದರು. ಕಣ್ಣಲ್ಲಿ ರಕ್ಕಸತನ, ಮನದಲ್ಲಿ ಘೋರ ತಾಮಸ, ಹಳೇ ಶಿಲಾಯುಗವನ್ನು ಹೊತ್ತಂತಹ ಮುಖಗಳು. ಇವರೇ ಹೀಗಿಬೇಕಾದರೆ ಇನ್ನು ಅಸ್ಸಾಂ ಮತ್ತು ಬರ್ಮಾದಲ್ಲಿರುವ ಇವರ " ಸಹೋದರರು" ಇನ್ನು ಹೇಗಿರಬಹುದು?
ಅಸ್ಸಾಂ.
ಮುಸಲ್ಮಾನರ ಸಂಖ್ಯೆ ಹೆಚ್ಚುವ ಮೊದಲು ಅದು ಚೆನ್ನಾಗಿಯೇ ಇತ್ತು. ಬೋಡೋ. ಕಚರಿ, ದಿಮ್ಸ ವೊದಲಾದವರು ಬೆಟ್ಟದ ಮೇಲೊಂದು ಮನೆ ಮಾಡಿಕೊಂಡು ಸುಖವಾಗಿಯೇ ಇದ್ದರು. ಆದರೆ ಯಾವಾಗ ಟೋಪಿವಾಲಾಗಳು ಬಾಂಗ್ಲಾದಿಂದ ಮಾವನ ಮನೆಗೆ ಬಂದಂತೆ ಬರತೊಡಗಿದರೋ ಸಮಸ್ಯೆಗಳು ಒಂದೊಂದಾಗಿ ಆರಂಭವಾಗತೊಡಗಿದವು.  ಆರಂಭದಲ್ಲಿ ವನವಾಸಿಗಳಿಂದ ಕಾಡುತ್ಪತ್ತಿಗಳನ್ನು ಕೊಂಡುಕೊಳ್ಳಲು ಆರಂಭಿಸಿದವರು ನಂತರ  ಕಾಡನ್ನೇ ಕದಿಯಲು ಶುರುಮಾಡಿದರು. ಆರಂಭದಲ್ಲಿ ಘರ್ಷಣೆಗಳು ಹೀಗೆ ಪ್ರಾರಂಭವಾದವು. ಮೆಲ್ಲಮೆಲ್ಲನೆ ಅವರಿರುವಲ್ಲೇ ನೆಲೆಯೂರತೊಡಗಿದರು. ನೋಡನೋಡುತ್ತಿದ್ದಂತೆ ಬಾಂಗ್ಲಾದವರ ಸಂಖ್ಯೆ ಆಸ್ಸಾಮೀಯರ ಸಂಖ್ಯೆಗಿಂತ ವೇಗವಾಗಿ ಬೆಳೆಯತೊಡಗಿತು. ಪರಿಣಾಮ ಇಂದು ಅಸ್ಸಾಂನಲ್ಲಿ ಒಂದು ಕೋಟಿಗೂ ಅಧಿಕ ಬಾಂಗ್ಲಾ ಮುಸಲ್ಮಾನರಿದ್ದಾರೆ.  ೧೪ಕ್ಕೂ ಹೆಚ್ಚಿನ ಜಿಹಾದಿ ಸಂಘಟನೆಗಳಿವೆ.  ಫರಾನ್ ಶೇಖ್ ಮತ್ತು ಅವರಂಥ ಹಲವರ ಪ್ರಕಾರ ಇವರೆಲ್ಲರೂ ಅಜಾದ್ ಮೈದಾನದಲ್ಲಿದ್ದವರೂ ಸೋದರರು!  ಇವರ ಪ್ರಕಾರ ಶೇ. ೫ರಷ್ಟಿರುವ ಬೋಡೋಗಳು ಶೇ. ೩೫ರಷ್ಟಿರುವ ಮುಸಲ್ಮಾನರನ್ನು ಕೊಲ್ಲುತ್ತಿದ್ದಾರಂತೆ. ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆಯಂತೆ.
ಇದು ಕೇವಲ ೧೦ ವರ್ಷಗಳ ಹಿಂದಿನ ಘಟನೆ.
ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅಸ್ಸಾಂ ನತ್ತ ನುಸುಳುತ್ತಿರುವ ಬಾಂಗ್ಲಾ ಮುಸ್ಲಿಮರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅದರ ಮರುದಿನವೇ ಮುಖ್ಯಮಂತ್ರಿಗಳನ್ನು ಹತ್ತಾರು ಮುಲ್ಲಾಗಳು  ಭೇಟಿಯಾದರು. ಆ ಮುಲ್ಲಾಗಳು" ಮುಂದಿನ ಚುನಾವಣೆಯ ಬಗ್ಗೆ" ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದರು ಎಂದು ಮೂಲಗಳು ಬಹಿರಂಗ ಮಾಡಿದ್ದವು. ಅದಾದ ಒಂದೆರಡು ದಿನದಲ್ಲೇ ಮುಖ್ಯಮಂತ್ರಿ ಗೊಗೋಯ್ "ಅಸ್ಸಾಮಿನಲ್ಲಿ ಒಬ್ಬನೇ ಒಬ್ಬ ಬಾಂಗ್ಲಾ ಮುಸಲ್ಮಾನನಿಲ್ಲ"ಎಂಬ ಹೇಳಿಕೆ ಕೊಟ್ಟಿದ್ದರು.  ಹೀಗಂದ ಗೊಗೋಯ್‌ಗೆ ಗಡಿಯ ಪ್ರಜ್ನೆ ಇಲ್ಲವೆಂದಲ್ಲ.  ಅಸ್ಸಾಮ್ ಮತ್ತು ಬಾಂಗ್ಲಾದ ಹಲವು ಭಾಗಗಳಲ್ಲಿ  ಗಡಿಯೆಂದು ಗುರುತಿಸಲು  ಒಂದು ಮಣ್ಣಿನ ದಿಬ್ಬವೂ ಇಲ್ಲ ಎಂದು ಅಸ್ಸಾಮಿಗೆ ಹೋಗಿದ್ದ ವಿದ್ಯಾರ್ಥಿ ಪರಿಷತ್ತಿನ ಹುಡುಗರು ಹೇಳುತ್ತಾರೆ. ಇಂಥ ಗಡಿಯನ್ನು ದಾಟಿ ಬಾಂಗ್ಲಾದ ಊರಿನಿಂದ ಅಟೋಗಳು ಭಾರತಕ್ಕೆ ಬರುತ್ತವೆ. ಅಸ್ಸಾಂನಲ್ಲಿ ಅಟೋ ಓಡಿಸಿ ಸಂಜೆ ಬಾಂಗ್ಲಾದ ಮನೆಗೆ ಮರಳುವವರೂ ಇದ್ದಾರೆ. ಇವರೂ ಭಾರತೀಯ ಮುಸಲ್ಮಾನರಿಗೆ ಸಹೋದರರೇ!
೧೯೫೧ರಲ್ಲಿ ಅಸ್ಸಾಂ ನಲ್ಲಿ ೧೯೮೧೮೫೭ ರಷ್ಟಿದ್ದ ಮುಸಲ್ಮಾನರು ೧೯೯೯ರ ಹೊತ್ತಿಗೆ ೬೩೭೩೨೦೪ಕ್ಕೆ ಏರಿತು. ಅಂದರೆ ಈ ಅವಯಲ್ಲಿ ಶೇ. ೩೦ರಷ್ಟು ಮುಸಲ್ಮಾನರು ಹೆಚ್ಚಿದ್ದರು. ೨೦೦೫ರ ಹೊತ್ತಿಗೆ ಇವರಲ್ಲಿ ಪುನಃ ಶೇ. ೩ರಷ್ಟು  ಹೆಚ್ಚಳವಾಯಿತು. ಇದಕ್ಕೆಲ್ಲಾ ಕುಟುಂಬ ಯೋಜನಾ ಸಾಮಾಗ್ರಿಗಳ ವೈಫಲ್ಯ ಎಂದು ತಿಪ್ಪೇ ಸಾರಿಸುವಂತಿಲ್ಲ. ಏಕೆಂದರೆ ಕಳೆದ ೨೦ ವರ್ಷಗಳಲ್ಲಿ ಹಿಂದುಗಳ ಸಂಖ್ಯೆ ಶೇ. ೫ರಷ್ಟು ಕುಸಿದಿದೆ. ಹೀಗೆ ಏರುತ್ತಿರುವವರು  ಬಾಂಗ್ಲಾದೇಶಿ ಮುಸಲ್ಮಾನರು. ಮತಾಂಧರು. ಇವರಿಗೆ ಬೆಂಬಲ ಕೊಡುತ್ತಿರುವವರು ದೇಶದ ಹೃದಯ ಭಾಗದಲ್ಲಿರುವವರು. ಹಿಂದು ಎಲ್ಲೆಲ್ಲಿಯೂ ಅನುಭವಿಸಬೇಕು. ಅಸ್ಸಾಂ ನಲ್ಲೂ ಪೆಟ್ಟು ತಿನ್ನಬೇಕು. ಇಲ್ಲೂ ಅದೇ ಕಾರಣಕ್ಕೆ  ಸ್ವದೇಶಿಯರಿಂದಲೂ ಪೆಟ್ಟುತಿನ್ನಬೇಕು.  ಏಕೆ ಹೀಗೆ? ಉತ್ತರ ಸ್ಪಷ್ಟ ಮತ್ತು ಒಂದೆ. ಮುಸಲ್ಮಾನರಿಗೆ ವಿನಾ ಕಾರಣ ಸಿಟ್ಟು ಬರುತ್ತದೆ. ಹಿಂದುಗಳಿಗೆ ಕಾರಣವಿದ್ದರೂ ಸಿಟ್ಟು ಬರುವುದಿಲ್ಲ. 
ಯುಗಾದಿ ಮತ್ತೆ ಮತ್ತೆ ಬರುವಂತೆ ಸ್ವಾತಂತ್ರ್ಯ ದಿನವೂ ಮತ್ತೆ ಬಂದಿದೆ.  ಈ ದಿನಕ್ಕಾಗಿ ಕೆಂಪು ಕೋಟೆಯನ್ನು ಸಿಂಗರಿಸಲಾಗುತ್ತದೆ.  ಹಾಜಾರಗಳನ್ನು ಉಜ್ಜಿ ಉಜ್ಜೀ ಹೊಳಪು ಮಾಡಿ ನಾಯಿ ಕರೆಸಿ ಪರೀಕ್ಷಿಸಲಾಗುತ್ತದೆ.  ರಸ್ತೆಗಳನ್ನು ಅಂದಗಾಣಿಸಲಾಗುತ್ತದೆ. ಆಸುಪಾಸಿನ ಕಟ್ಟಡಗಳನ್ನು ಭದ್ರತಾಪಡೆಗಳು ವಶಕ್ಕೆ ತೆಗೆದುಕೊಳ್ಳುತ್ತವೆ.  ನಿಗದಿತ ಸಮಯಕ್ಕೆ ಸರಿಯಾಗಿ  ಕೀ ಕೊಟ್ಟ ಗೊಂಬೆಯಂತೆ ಪ್ರಧಾನಿಗಳು ಬರುತ್ತಾರೆ. ದೇಶದ ಸ್ವಾತಂತ್ರ್ಯ , ಸಾರ್ವಭೌಮತೆಗಳನ್ನು  ಉದ್ದರಿಸಿ ಭಾಷಣ ಮಾಡುತ್ತಾರೆ.   ಮಕ್ಕಳು ಕುಣಿಯುತ್ತಾರೆ. ಚಾನಲ್‌ಗಳು ರಂಗ್‌ದೇ ಬಸಂತಿ ಸಿನಿಮಾ ಪ್ರಸಾರ ಮಾಡುತ್ತವೆ. ಎಸ್ ಎಂ ಎಸ್ ಗಳು ಬರುತ್ತವೆ. ಆ ಸ್ವಾತಂತ್ರ್ಯಕ್ಕೆ  ಅಸ್ಸಾಂ ನ ಉರಿ ನೆನಪಾಗುವುದಿಲ್ಲ. ಮತಾಂಧತೆಯ ತೀವ್ರತೆ ಅರಿವಾಗುವುದಿಲ್ಲ.  ಅದು ಶುದ್ಧ ಸೆಕ್ಯುಲರ್ ಸ್ವಾತಂತ್ರ್ಯೋತ್ಸವ. ಅತ್ತ ಗಡಿಗಳು,  ಇತ್ತ ರಾಜಧಾನಿಗಳೇ  ಸರಿ ಇಲ್ಲದಿರುವಾಗ  ಈ ಸ್ವಾತಂತ್ರ್ಯ ದಿನ ತೀರಾ ಕೃತಕವೆನಿಸುತ್ತದೆ.  ಇಲ್ಲದಿದ್ದರೇನು ೨೦೦೦೦ ಜನರು ಒಂದೆಡೆ ಸೇರಿ  ವ್ಯವಸ್ಥೆಯನ್ನೇ ಕ್ಕರಿಸಿ,ಸ್ವಾತಂತ್ರ್ಯ, ಸಾರ್ವಭೌಮತೆಗೆ ಸೆಡ್ಡು ಹೊಡೆದಿರುವಾಗ ಧ್ವಜ ಆರೋಹಣವಾಗುತ್ತದೆ.  ಆ ಸ್ವಾತಂತ್ರ್ಯಕ್ಕೆ ಮುಂಬೈನಲ್ಲಿ ನಡೆದಿರುವುದು ನಾಳೆ ಭಟ್ಕಳದಲ್ಲಿ ನಡೆದರೇನು ಎಂಬ ಆತಂಕವಿಲ್ಲ. ಮಡಿಕೇರಿಯಲ್ಲಿ ನಡೆದರೆ ಇಡೀ ಕೊಡಗೇ ಇರುವುದಿಲ್ಲ ಎಂಬ ಸುಳಿವೇ ಇಲ್ಲ.  ಆ ಧ್ವಜವನ್ನು ಕಾಶ್ಮೀರದಲ್ಲಿ ಹಾರಿಸುವ ತಾಕತ್ತಿಲ್ಲ.  ಸ್ವಾತಂತ್ರ್ಯ ಮುಂದೊಂದು ದಿನ ಗಂಜಿ ಕೇಂದ್ರದಲ್ಲಿರಬಹುದು ಎಂದು ಅನಿಸುವುದೇ ಇಲ್ಲ. 
ಅಸ್ಸಾಮಿನ ಘಟನೆಗಳು ಉರಿಯನ್ನೇ ಎಬ್ಬಿಸುತ್ತಿರುವಾಗ " ಸ್ವಾತಂತ್ರ್ಯವೆನ್ನುವುದು ಬೆಚ್ಚಗಿನ ಭಾವನೆ"ಎಂದು ಹೇಗೆ ಹೇಳುವರೋ ?