
ಇಂಗ್ಲಿಷಿನ ಪಿಲಾಸಫಿ ಇಂದು ಜಗತ್ತಿನಲ್ಲಿ ಅತ್ಯಂತ ಜನಪ್ರೀಯ ಶಾಸ್ತ್ರ. ವಿವಿಧ ಜನವರ್ಗಕ್ಕೆ ಪ್ರಿಯವಾದ ಪಿಲಾಸಫಿ ಇಂದು ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಕಲಿಸಲ್ಪಡುತ್ತಿದೆ. ಅದರ ಜನಪ್ರಿಯತೆಗೆ ಕಾರಣವೇನೆಂದು ಚಿಂತಿಸಿದರೆ ಕಾಣುವುದು ಮನುಷ್ಯನೇ. ಆತನ ಮೂಲವೇ. ಏಕೆಂದರೆ ಮನುಷ್ಯ ಮೂಲತಃ ಕುತೂಹಲಿ. ತಾನಾರು? ತಾನು ಎಲ್ಲಿಂದ ಬಂದವನು ಎಂಬ ಪ್ರಶ್ನೆಗಳ ಸುಳಿಯೊಳಗೆ ಸಾಗುವುದೇ ಈ ಪಿಲಾಸಫಿ. ಭಾರತೀಯ ಪರಿಭಾಷೆಯಲ್ಲಿ ಈ ಪಿಲಾಸಫಿಯನ್ನು ವೇದಾಂತ ಎಂದು ಕುಹಕ ನುಡಿಯುವವರಿದ್ದಾರೆ. ಅಲ್ಲದೆ ಭಾರತೀಯ ತತ್ತ್ವಶಾಸ್ತ್ರಕ್ಕೂ ಪಾಶ್ಚಾತ್ಯ ಪಿಲಾಸಫಿಗೂ ವ್ಯತ್ಯಾಸಗಳಿವೆ. ಪಾಶ್ಚಾತ್ಯ ಪಿಲಾಸಫಿಯ ಉದ್ದೇಶ ಕುತೂಹಲವನ್ನು ತಣಿಸುವುದು ಮಾತ್ರವಾಗಿದ್ದರೆ ಭಾರತೀಯ ತತ್ತ್ವಶಾಸ್ತ್ರ ಚಿಂತನ ಪ್ರಧಾನವಾದದ್ದು. ಚಿಂತನೆಯಾಧಾರದಲ್ಲಿ ಅರಿವನ್ನು ಹುಡುಕುತ್ತಾ ಮಾನವತೆಯನ್ನು ಹುಡುಕುವುದು. ಚಿಂತನೆಯಲ್ಲೇ ಸಮಾಜವನ್ನು ಅರಿಯುವುದು. ಸಾಗುತ್ತಾ ಸಾಗುತ್ತಾ ಉತ್ತುಂಗವೆಂಬ "ಸ್ಥಿತಿ"ಯನ್ನು ಮುಟ್ಟುವುದು. ಆ "ಸ್ಥಿತಿ" ಎಂಬುದು ಪಡೆದವರಷ್ಟೇ ಅರಿತ ಅಂತಿಮ ಸತ್ಯ. ಆ "ಸ್ಥಿತಿ"ಪಾಶ್ಚಾತ್ಯದಂತೆ ಕತ್ತಲ ಕೋಣೆಯಲ್ಲಿ ಕರಿ ಬೆಕ್ಕನ್ನು ಹುಡುಕಿದಂತಲ್ಲ. ಹಾಗಾಗಿ ಭಾರತೀಯ "ದರ್ಶನ"ಗಳಿಗೂ ಪಾಶ್ಚಾತ್ಯ ಪಿಲಾಸಫಿಗೂ ವ್ಯತ್ಯಾಸವಿದೆ.
ಭಾರತದಲ್ಲಿ ಪಿಲಾಸಫಿ ಒಂದು ಶಾಸ್ತ್ರ, ಜ್ಞಾನ ಮೀಮಾಂಸೆ, ಅರಿವಿನ ಹುಡುಕಾಟ, ತನಗೆ ಇಂದ್ರಿಯಗಳು ಇರುವುದು ವಾಸ್ತವವೆಂದಾದರೆ ಅದು ತನ್ನೊಬ್ಬನಿಂದಲೇ ನಡೆಯತಕ್ಕದ್ದಲ್ಲ. ಹಾಗಾದರೆ ಅದೇನು ಎಂಬಲ್ಲಿಂದ ಪ್ರಾರಂಭಗೊಂಡು ಯಾವುದು ನಿಜ? ಯಾವುದು ಭ್ರಮೆ? ಎಲ್ಲಿದೆ ವ್ಯಾಪ್ತಿ? ಎಲ್ಲಿದೆ ಮಿತಿ? ಎಂಬ ತರ್ಕಗಳೆಡೆಗೆ ಸಾಗುವುದು ಭಾರತೀಯ ತತ್ತ್ವಶಾಸ್ತ್ರದ ಲಕ್ಷಣ. ಭಾರತೀಯ ತತ್ತ್ವಶಾಸ್ತ್ರಗಳು ಏಕಕಾಲಕ್ಕೆ ಇತಿಹಾಸವೂ ಹೌದು, ದರ್ಶನವೂ ಹೌದು. ಆದರೆ ಪಾಶ್ಚಾತ್ಯ ಚೌಕಟ್ಟಿನ ಕತ್ತಲೆ ಕೋಣೆಯಲ್ಲಿ ಕರಿಬೆಕ್ಕು ಹುಡುಕುವ ಪ್ರಕ್ರಿಯೆ ವಿಡಂಭನಾತ್ಮಕವಾಗಿ ಕಾಣುವುದಷ್ಟೇ ಅಲ್ಲದೆ ಭಾರತೀಯ ತತ್ತ್ವಗಳೆಡೆಯಲ್ಲಿ ಅವು ತೀರಾ ಕ್ಷಣಿಕವೆಂದು ಕಾಣುತ್ತವೆ. ಅಂಥಲ್ಲಿ ಅರಿವನ್ನು ಹುಡುಕುವವರಿಗೆ ವಿಷವಿಕ್ಕಿದ ಉದಾಹರಣೆಗಳೂ ಸಿಗಬಹುದೇ ಹೊರತು ಭಾರತೀಯ ದರ್ಶನ ಶಾಸ್ತ್ರಗಳಲ್ಲಿ ಅಂಥ ಸಂಗತಿಗಳು ಗೋಚರಿಸುವುದಿಲ್ಲ.
ಭಾರತದಲ್ಲಿ ಹುಟ್ಟಿಬೆಳೆದ ದರ್ಶನಗಳಲ್ಲಿ ಹಲವಾರು ಪ್ರಬೇಧಗಳು. ಅವು ಇತಿಹಾಸದ ಮೂಸೆಯಲ್ಲಿ ಅದ್ದಿ ತೆಗೆದವುಗಳಲ್ಲದೆ ಬೇರೇನೂ ಅಲ್ಲ. ಆಯಾಯ ಕಾಲಘಟ್ಟದಲ್ಲಿ ನಡೆದ ಸಾಮಾಜಿಕ ಸ್ಥಿತ್ಯಂತರಗಳ ಹಿಂದೆ ಭಾರತೀಯ ದರ್ಶನಗಳ ನೆರಳಿದೆ. ಸಮಾಜವನ್ನು ಆಯಾಯ ದರ್ಶನಗಳಿಂದಲೇ ಗುರುತಿಸುವಷ್ಟು ಪ್ರಬಲವಾಗಿದ್ದವೆಂದರೆ ದರ್ಶನಗಳು ಇತಿಹಾಸದ ಮಹಾಘಟ್ಟಗಳಲ್ಲದೆ ಮತ್ತೇನು? ಈ ಹಿನ್ನಲೆಯಲ್ಲಿ ಅಧ್ಯಯನದ ದೃಷ್ಟಿಯಿಂದ ಅವುಗಳನ್ನು ವಿಂಗಡಿಸುವುದೇ ಬಹು ಶ್ರಮದಾಯಕ ಕೆಲಸ ಎಂಬುದನ್ನು ವಿದ್ವಾಂಸರೇ ಅಭಿಪ್ರಾಯಪಟ್ಟಿದ್ದಾರೆ. ಆ ಶ್ರಮದಾಯಕ ಕೆಲಸ ದರ್ಶನಗಳನ್ನು ಇತಿಹಾಸವೆಂಬ ಪಟ್ಟದಿಂದ ದೂರವಾಗಿಸಿದೆಯೇ ಎಂಬ ಸಂದೇಹವೂ ಉಂಟಾಗುತ್ತದೆ. ಅಲ್ಲದೆ ಪಾಶ್ಚಾತ್ಯ ರಿವಾಜಿನಂತೆ ತತ್ತ್ವಶಾಸ್ತ್ರಗಳು ಇತಿಹಾಸಗಳಲ್ಲ. ಅದು ಬೇರೆಯೇ ಆದ ಶಾಸ್ತ್ರ. ಅಲ್ಲಿ ತತ್ತ್ವಶಾಸ್ತ್ರ ಮತ್ತು ಇತಿಹಾಸಗಳಿಗೆ ವಿಭಿನ್ನವಾದ ವ್ಯಾಖ್ಯಾನಗಳಿವೆ. ಆ ವ್ಯಾಖ್ಯಾನಗಳು ಅಲ್ಲಿಗೆ ಅನ್ವಯಿಸುವುದು ಸರಿಯಾಗಿರಬಹುದು. ಆದರೆ ತತ್ತ್ವಶಾಸ್ತ್ರಕ್ಕೂ ಇತಿಹಾಸಕ್ಕೂ ನೇರಾನೇರಾ ಸಂಬಂಧವಿರುವ ಭಾರತದಂತಹ ದೇಶದಲ್ಲಿ ದರ್ಶನಗಳನ್ನು ಇತಿಹಾಸಗಳೆಂದು ಏಕೆ ಪರಿಗಣಿಸುತ್ತಿಲ್ಲ?
ಪ್ರಸ್ತುತ ಇತಿಹಾಸವೆಂಬ ಶಾಸ್ತ್ರಕ್ಕೆ ಪ್ರಮಾಣಗಳು ಬೇಕಾಗಿವೆ. ಏಕೆಂದರೆ ಇದು ಪ್ರಬಲವಾಗಿ ಮಂಡಿಸತಕ್ಕ ಮತ್ತು ಸಕಲ ವೈಖರಿಯೊಡನೆ ವಾದಿಸತಕ್ಕ ವಿಷಯ. ಇಂಥ ವಿಷಯಕ್ಕೆ ಅನಿವಾರ್ಯವಾಗಿ ಸೀಮಿತತೆಯೊಂದು ತನ್ನಿಂದತಾನೇ ಸೃಷ್ಟಿಯಾಗಿಬಿಟ್ಟಿರುತ್ತದೆ. ಅದು ಅದರ ಕೊರತೆ. ಈ ಕೊರತೆಗೆ ತರ್ಕ, ಪ್ರಮಾಣಗಳಿರುವ ದರ್ಶನಗಳು ಮರೆಯಲ್ಲಿರಬೇಕು! ಭಾರತೀಯ ದರ್ಶನಗಳ ಅಧ್ಯಯನವೆಂದರೆ ಒಟ್ಟೊಟ್ಟಿಗೆ ಭಾರತೀಯ ಮಾನವೇತಿಹಾಸದ ಅಧ್ಯಯನ ಮತ್ತು ಹಿಂದುತ್ವದ್ದೂ ಅಧ್ಯಯನ. ಆದರೆ ತತ್ತ್ವಶಾಸ್ತ್ರಗಳನ್ನು ಇತಿಹಾಸದ ಚೌಕಟ್ಟಿನಿಂದ ಹೊರಗಿಟ್ಟ ಕಾರಣ ಇವೆರಡೂ ಅಧ್ಯಯನಗಳಿಗೆ ತೊಡಕಾಗಿವೆ. ದ್ವೈತ-ಅದ್ವೈತ-ಸಾಂಖ್ಯ-ಮೀಮಾಂಸ-ಚಾರ್ವಾಕ-ಜೈನ ಇತ್ಯಾದಿಗಳ ಸೆಲೆಗಳು ಇಂದು ಮೂಲೆಗುಂಪಾಗುತ್ತಿವೆ. ದರ್ಶನಗಳ ಸರಿಯಾದ ಜ್ಞಾನವಿಲ್ಲದೆ ಡಾಂಭಿಕತೆಯ ಧಾರ್ಮಿಕತೆಗಳು ನುಸುಳಲು, ಬುದ್ಧಿಜೀವಿಗಳಿಗೆ ತೆಗಳಲು ಸರಕೂ ಆಗಿ ನಮ್ಮೆದುರು ನಿಂತಿವೆ. ಉದಾಹರಣೆಗೆ ಇಂದು ಬೌದ್ಧ ಎಂಬುದು ಇತಿಹಾಸದಲ್ಲಿ ಕಂಡುಬರುವುದು ಅದನ್ನು ಅಳವಡಿಸಿಕೊಂಡ ರಾಜರ ಕಥೆಗಳಿಂದ ಮಾತ್ರ.
ಪಾಶ್ಚಾತ್ಯ ಪ್ರಣೀತ ಇತಿಹಾಸ, ಹಿಂದೂ ದಮನದ ಇತಿಹಾಸ ಮತ್ತು ಅಸತ್ಯವನ್ನೇ ಅಧ್ಯಯನ ಮಾಡಬೇಕಾದ ಅನಿವಾರ್ಯತೆಗಳ ಹಿಂದೆ ದರ್ಶನ ಶಾಸ್ತ್ರವೊಂದು ಉದಾಹರಣೆಯೆನಿಸುತ್ತದೆ. ಪ್ರಸ್ತುತ ಸಂಚಿಕೆಯಲ್ಲಿ ಇತಿಹಾಸದ ಸುತ್ತಮುತ್ತಲಿನ ಸಂಗತಿಗಳನ್ನೇ ಚರ್ಚಿಸಿದ್ದೇವೆ.
ಭಾರತದಲ್ಲಿ ಪಿಲಾಸಫಿ ಒಂದು ಶಾಸ್ತ್ರ, ಜ್ಞಾನ ಮೀಮಾಂಸೆ, ಅರಿವಿನ ಹುಡುಕಾಟ, ತನಗೆ ಇಂದ್ರಿಯಗಳು ಇರುವುದು ವಾಸ್ತವವೆಂದಾದರೆ ಅದು ತನ್ನೊಬ್ಬನಿಂದಲೇ ನಡೆಯತಕ್ಕದ್ದಲ್ಲ. ಹಾಗಾದರೆ ಅದೇನು ಎಂಬಲ್ಲಿಂದ ಪ್ರಾರಂಭಗೊಂಡು ಯಾವುದು ನಿಜ? ಯಾವುದು ಭ್ರಮೆ? ಎಲ್ಲಿದೆ ವ್ಯಾಪ್ತಿ? ಎಲ್ಲಿದೆ ಮಿತಿ? ಎಂಬ ತರ್ಕಗಳೆಡೆಗೆ ಸಾಗುವುದು ಭಾರತೀಯ ತತ್ತ್ವಶಾಸ್ತ್ರದ ಲಕ್ಷಣ. ಭಾರತೀಯ ತತ್ತ್ವಶಾಸ್ತ್ರಗಳು ಏಕಕಾಲಕ್ಕೆ ಇತಿಹಾಸವೂ ಹೌದು, ದರ್ಶನವೂ ಹೌದು. ಆದರೆ ಪಾಶ್ಚಾತ್ಯ ಚೌಕಟ್ಟಿನ ಕತ್ತಲೆ ಕೋಣೆಯಲ್ಲಿ ಕರಿಬೆಕ್ಕು ಹುಡುಕುವ ಪ್ರಕ್ರಿಯೆ ವಿಡಂಭನಾತ್ಮಕವಾಗಿ ಕಾಣುವುದಷ್ಟೇ ಅಲ್ಲದೆ ಭಾರತೀಯ ತತ್ತ್ವಗಳೆಡೆಯಲ್ಲಿ ಅವು ತೀರಾ ಕ್ಷಣಿಕವೆಂದು ಕಾಣುತ್ತವೆ. ಅಂಥಲ್ಲಿ ಅರಿವನ್ನು ಹುಡುಕುವವರಿಗೆ ವಿಷವಿಕ್ಕಿದ ಉದಾಹರಣೆಗಳೂ ಸಿಗಬಹುದೇ ಹೊರತು ಭಾರತೀಯ ದರ್ಶನ ಶಾಸ್ತ್ರಗಳಲ್ಲಿ ಅಂಥ ಸಂಗತಿಗಳು ಗೋಚರಿಸುವುದಿಲ್ಲ.
ಭಾರತದಲ್ಲಿ ಹುಟ್ಟಿಬೆಳೆದ ದರ್ಶನಗಳಲ್ಲಿ ಹಲವಾರು ಪ್ರಬೇಧಗಳು. ಅವು ಇತಿಹಾಸದ ಮೂಸೆಯಲ್ಲಿ ಅದ್ದಿ ತೆಗೆದವುಗಳಲ್ಲದೆ ಬೇರೇನೂ ಅಲ್ಲ. ಆಯಾಯ ಕಾಲಘಟ್ಟದಲ್ಲಿ ನಡೆದ ಸಾಮಾಜಿಕ ಸ್ಥಿತ್ಯಂತರಗಳ ಹಿಂದೆ ಭಾರತೀಯ ದರ್ಶನಗಳ ನೆರಳಿದೆ. ಸಮಾಜವನ್ನು ಆಯಾಯ ದರ್ಶನಗಳಿಂದಲೇ ಗುರುತಿಸುವಷ್ಟು ಪ್ರಬಲವಾಗಿದ್ದವೆಂದರೆ ದರ್ಶನಗಳು ಇತಿಹಾಸದ ಮಹಾಘಟ್ಟಗಳಲ್ಲದೆ ಮತ್ತೇನು? ಈ ಹಿನ್ನಲೆಯಲ್ಲಿ ಅಧ್ಯಯನದ ದೃಷ್ಟಿಯಿಂದ ಅವುಗಳನ್ನು ವಿಂಗಡಿಸುವುದೇ ಬಹು ಶ್ರಮದಾಯಕ ಕೆಲಸ ಎಂಬುದನ್ನು ವಿದ್ವಾಂಸರೇ ಅಭಿಪ್ರಾಯಪಟ್ಟಿದ್ದಾರೆ. ಆ ಶ್ರಮದಾಯಕ ಕೆಲಸ ದರ್ಶನಗಳನ್ನು ಇತಿಹಾಸವೆಂಬ ಪಟ್ಟದಿಂದ ದೂರವಾಗಿಸಿದೆಯೇ ಎಂಬ ಸಂದೇಹವೂ ಉಂಟಾಗುತ್ತದೆ. ಅಲ್ಲದೆ ಪಾಶ್ಚಾತ್ಯ ರಿವಾಜಿನಂತೆ ತತ್ತ್ವಶಾಸ್ತ್ರಗಳು ಇತಿಹಾಸಗಳಲ್ಲ. ಅದು ಬೇರೆಯೇ ಆದ ಶಾಸ್ತ್ರ. ಅಲ್ಲಿ ತತ್ತ್ವಶಾಸ್ತ್ರ ಮತ್ತು ಇತಿಹಾಸಗಳಿಗೆ ವಿಭಿನ್ನವಾದ ವ್ಯಾಖ್ಯಾನಗಳಿವೆ. ಆ ವ್ಯಾಖ್ಯಾನಗಳು ಅಲ್ಲಿಗೆ ಅನ್ವಯಿಸುವುದು ಸರಿಯಾಗಿರಬಹುದು. ಆದರೆ ತತ್ತ್ವಶಾಸ್ತ್ರಕ್ಕೂ ಇತಿಹಾಸಕ್ಕೂ ನೇರಾನೇರಾ ಸಂಬಂಧವಿರುವ ಭಾರತದಂತಹ ದೇಶದಲ್ಲಿ ದರ್ಶನಗಳನ್ನು ಇತಿಹಾಸಗಳೆಂದು ಏಕೆ ಪರಿಗಣಿಸುತ್ತಿಲ್ಲ?
ಪ್ರಸ್ತುತ ಇತಿಹಾಸವೆಂಬ ಶಾಸ್ತ್ರಕ್ಕೆ ಪ್ರಮಾಣಗಳು ಬೇಕಾಗಿವೆ. ಏಕೆಂದರೆ ಇದು ಪ್ರಬಲವಾಗಿ ಮಂಡಿಸತಕ್ಕ ಮತ್ತು ಸಕಲ ವೈಖರಿಯೊಡನೆ ವಾದಿಸತಕ್ಕ ವಿಷಯ. ಇಂಥ ವಿಷಯಕ್ಕೆ ಅನಿವಾರ್ಯವಾಗಿ ಸೀಮಿತತೆಯೊಂದು ತನ್ನಿಂದತಾನೇ ಸೃಷ್ಟಿಯಾಗಿಬಿಟ್ಟಿರುತ್ತದೆ. ಅದು ಅದರ ಕೊರತೆ. ಈ ಕೊರತೆಗೆ ತರ್ಕ, ಪ್ರಮಾಣಗಳಿರುವ ದರ್ಶನಗಳು ಮರೆಯಲ್ಲಿರಬೇಕು! ಭಾರತೀಯ ದರ್ಶನಗಳ ಅಧ್ಯಯನವೆಂದರೆ ಒಟ್ಟೊಟ್ಟಿಗೆ ಭಾರತೀಯ ಮಾನವೇತಿಹಾಸದ ಅಧ್ಯಯನ ಮತ್ತು ಹಿಂದುತ್ವದ್ದೂ ಅಧ್ಯಯನ. ಆದರೆ ತತ್ತ್ವಶಾಸ್ತ್ರಗಳನ್ನು ಇತಿಹಾಸದ ಚೌಕಟ್ಟಿನಿಂದ ಹೊರಗಿಟ್ಟ ಕಾರಣ ಇವೆರಡೂ ಅಧ್ಯಯನಗಳಿಗೆ ತೊಡಕಾಗಿವೆ. ದ್ವೈತ-ಅದ್ವೈತ-ಸಾಂಖ್ಯ-ಮೀಮಾಂಸ-ಚಾರ್ವಾಕ-ಜೈನ ಇತ್ಯಾದಿಗಳ ಸೆಲೆಗಳು ಇಂದು ಮೂಲೆಗುಂಪಾಗುತ್ತಿವೆ. ದರ್ಶನಗಳ ಸರಿಯಾದ ಜ್ಞಾನವಿಲ್ಲದೆ ಡಾಂಭಿಕತೆಯ ಧಾರ್ಮಿಕತೆಗಳು ನುಸುಳಲು, ಬುದ್ಧಿಜೀವಿಗಳಿಗೆ ತೆಗಳಲು ಸರಕೂ ಆಗಿ ನಮ್ಮೆದುರು ನಿಂತಿವೆ. ಉದಾಹರಣೆಗೆ ಇಂದು ಬೌದ್ಧ ಎಂಬುದು ಇತಿಹಾಸದಲ್ಲಿ ಕಂಡುಬರುವುದು ಅದನ್ನು ಅಳವಡಿಸಿಕೊಂಡ ರಾಜರ ಕಥೆಗಳಿಂದ ಮಾತ್ರ.
ಪಾಶ್ಚಾತ್ಯ ಪ್ರಣೀತ ಇತಿಹಾಸ, ಹಿಂದೂ ದಮನದ ಇತಿಹಾಸ ಮತ್ತು ಅಸತ್ಯವನ್ನೇ ಅಧ್ಯಯನ ಮಾಡಬೇಕಾದ ಅನಿವಾರ್ಯತೆಗಳ ಹಿಂದೆ ದರ್ಶನ ಶಾಸ್ತ್ರವೊಂದು ಉದಾಹರಣೆಯೆನಿಸುತ್ತದೆ. ಪ್ರಸ್ತುತ ಸಂಚಿಕೆಯಲ್ಲಿ ಇತಿಹಾಸದ ಸುತ್ತಮುತ್ತಲಿನ ಸಂಗತಿಗಳನ್ನೇ ಚರ್ಚಿಸಿದ್ದೇವೆ.

