Tuesday, November 29, 2011

ಪ್ರತಿ ಫ್ರೆಂಡ್ ಬೇಕೇ ಬೇಕಾ?



ನೀವು ಪೋಷಕರೇ? ನಿಮಗೆ ವಯಸ್ಸಿಗೆ ಬಂದ ಅಥವಾ ವಯಸ್ಸಿಗೆ ಬರುತ್ತಿರುವ ಮಗಳಿದ್ದಾಳೆಯೇ? ನೀವು ಹೆತ್ತವರ ದಾಯಿತ್ವವನ್ನು ನಿಭಾಯಿಸುವ ತುಡಿತದಲ್ಲಿರುವಿರೇ? ಆಕೆಯ ಅಗತ್ಯದ ನೆಪದಲ್ಲಿ ಮೊಬೈಲ್ ಫೋನನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿರುವಿರೇನು? ಅಥವಾ ಕೊಡಲು ಯೋಚಿಸಿರುವಿರೇನು? ಹಾಗಾದರೆ ಈ ಘಟನೆಗಳತ್ತ ಒಮ್ಮೆ ಕಣ್ಣು ಹಾಯಿಸಿ.
ಆಕೆ ತುಮಕೂರಿನ ಸುಸಂಸ್ಕೃತ ಮನೆತನದ ಹೆಣ್ಣುಮಗಳು. ವೊದಲ ಪಿಯುಸಿ ವಿದ್ಯಾರ್ಥಿನಿ. ಹೆತ್ತವರು ೧೦ನೇ ತರಗತಿಯಲ್ಲಿ ಡಿಸ್ಟಿಂಗ್ಶನ್ ನಲ್ಲಿ ಪಾಸಾದಳೆಂದು ಮೊಬೈಲನ್ನು ಗಿಫ್ಟ್ ಕೊಡಿಸಿದರು. ಒಮ್ಮೆ ಎಲ್ಲೋ ರೀಚಾರ್ಜ್ ಮಾಡಿಸಿದ್ದಾಳೆ. ಅನಾಮಧೇಯ ಕರೆಗಳು ಬರಲಾರಂಭಿಸಿವೆ. ಮಗಳ ಜಗತ್ತು ವಿಶಾಲವಾಗಿದೆಯೆಂದು ಪೋಷಕರು ಒಳಗೊಳಗೇ ಹಿರಿಹಿರಿ ಹಿಗ್ಗಿದರು. ಆಕೆಗೆ ಕರೆ ಮಾಡುತ್ತಿದ್ದವ ತಿಪಟೂರಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುವ ಮುಸಲ್ಮಾನರ ಹುಡುಗ. ದಿನಕಳೆದಂತೆ ಮಗಳ ಫೋನ್ ಸಂಭಾಷಣೆ ಅತಿಯಾದವು. ಪೋಷಕರು ಹೆದರುವಷ್ಟು ಮಗಳು ಫೋನಿನಲ್ಲಿ ತಲ್ಲೀನಳಾದಾಗ ಕಡೆಗೂ ಎಚ್ಚೆತ್ತುಕೊಂಡರು. ಮೊಬೈಲ್ ಪರೀಕ್ಷಿಸಿದಾಗ ಒಂದೇ ನಂಬರಿಗೆ ಕರೆಗಳು ಬಂದಿರುವುದು , ಹೋಗಿರುವುದು ಪತ್ತೆಯಾಯಿತು. ಆ ನಂಬರಿನಾತ ಸಾಬರ ಹುಡುಗನೆಂಬುದೂ ಪತ್ತೆಯಾಯಿತು. ಪೋಷಕರು ಹಿಂದೂ ಸಂಘಟನೆಯ ಆಪ್ತರೊಬ್ಬರಲ್ಲಿ ಹೇಳಿಕೊಂಡರು . ಸಂಘಟನೆಯ ಪ್ರಮುಖರು ಹುಡುಗನ ಜಾತಕ ಜಾಲಾಡಿದಾಗ ಆತ ಕುಖ್ಯಾತ ಸಂಘಟನೆಯೊಂದರ ಕಾರ್ಯಕರ್ತನೆಂದೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದೂ ತಿಳಿದುಬಂತು. ಪ್ರಕರಣ ಪೊಲೀಸ್ ಠಾಣೆಗೆ ಹೋಯಿತು. ಅಷ್ಟಾಗುವಾಗಲೇ ಹುಡುಗನ ಹೆತ್ತವರು ವೊಬೈಲಿನಿಂದ ದಾಖಲಾದ ಎಸ್ಸೆಮ್ಮೆಸ್‌ಗಳ ಪ್ರತಿಯನ್ನು ತೆಗೆಸಿ ಹುಡುಗಿ ಮತ್ತು ಆಕೆಯ ಕುಟುಂಬವನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದರು. ಏಕೆಂದರೆ ಆಘಾತಕರವಾದ ಸಂದೇಶಗಳು ಅಲ್ಲಿದ್ದವು. ಆಗತಾನೇ ಕಾಲೇಜು ಏರಿದ್ದ ತಮ್ಮ ಮುದ್ದಿನ ಮಗಳು ಬಾತ್‌ರೂಮಿನಿಂದ ಕಳುಹಿಸಿದ ಮೆಸೇಜುಗಳು, ತಾನು ಬೆತ್ತಲಾಗುತ್ತಾ ಕಳುಹಿಸಿದ ಕಮೆಂಟ್ರಿಗಳು, ಆಡಿದ ಅಶ್ಲೀಲ ಕರೆಗಳ ಪಟ್ಟಿ ದೊಡ್ಡದಿತ್ತು. ಪೋಷಕರ ಪ್ರಕಾರ ಆಕೆ ತಮ್ಮ ಮುಗ್ದ ಮಗಳೇ. ಇಲ್ಲಿ ತಪ್ಪು ಯಾರದ್ದು? ಮೆಸೇಜ್ ಕಳುಹಿಸಿದ್ದ ಮಗಳದ್ದೇ? ಪೋಲಿ ಸಾಬರ ಹುಡುಗನದ್ದೇ? ಅಥವಾ ಮೊಬೈಲ್ ಕೊಡಿಸಿದ ಪೋಷಕರದ್ದೇ? ಪ್ರೀತಿಯಿಂದ ಕೊಡಿಸಿದ ಒಂದು ಗಿಫ್ಟ್ ಬದುಕಿಗೆ ಮಾರಕವಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಈ ಪ್ರಕರಣದ ಹಿಂದೆ ಸಾಗಿದ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಇಂಥದ್ದೇ ಹಲವು ಪ್ರಕರಣಗಳು ಎದುರಾಗುತ್ತಾ ಹೋದವು. ವಿಚಿತ್ರವೆಂದರೆ ಈ ಎಲ್ಲಾ ಪ್ರಕರಣಗಳಲ್ಲೂ ಪೋಷಕರ ಪ್ರೀತಿಯೇ ಎರವಾಗಿತ್ತು. ಮಗಳ ಓದು, ಅವಳ ಗ್ರೂಪ್ ಸ್ಟಡೀ, ಮತಭೇದವಿಲ್ಲದ ಗೆಳೆತನದ ತುಡಿತ, ದೂರದ ಊರಿಂದ ಬರುವ ಕರೆ ಅಥವಾ ಸಂದೇಶದ ಕುತೂಹಲ, ಯೌವನದ ಮದ- ಹುಚ್ಚುತನಕ್ಕೆ ಹಲವು ಅಪ್ರಾಪ್ತ ಹಿಂದೂ ಹುಡುಗಿಯರು ಬಲಿಯಾಗಿದ್ದರು. ಮಂಡ್ಯದ ಗೌಡರ ಮಗಳಿಗೂ ದೂರದ ಬೀದರಿನಲ್ಲಿ ಷಾಹಿ ಅರಸರ ಕುದುರೇಸವಾರನಂತಿರುವ ಗಡ್ಡಧಾರಿಗೂ ಸಂಬಂಭ ಬೆಳೆಸಿದ್ದು, ವೀರಾಜಪೇಟೆಯ ಕೊಡವತಿಗೂ ಮೈಸೂರಿನ ಮಟನ್ ಅಂಗಡಿಯ ಒರಟನಿಗೂ ನೆಂಟಸ್ಥನ ಬೆಳೆದಿದ್ದು, ಮಲೆನಾಡಿನ ಬ್ರಾಹ್ಮಣ ಹುಡುಗಿಗೂ ಶಿವಾಜಿನಗರದ ಸೆಂಟ್ ಹಾಕಿದ ಸೇಲ್ಸ್ ಮ್ಯಾನಿಗೂ,ಮಂಗಳೂರಿನ ತುಳುವರ ಹುಡುಗಿಗೂ ಸಕಲೇಶಪುರದಲ್ಲಿ ಗೂಡ್ಸ್ ವ್ಯಾಗನ್ನಿನಲ್ಲಿ ಕಲ್ಲಿದ್ದಲು ತುಂಬಿದಂತೆ ಕಾಣುವ ಹುಡುಗನಿಗೂ ಸಂಬಂಧ ಬೆಳೆಸಿಕೊಟ್ಟಿದ್ದು ಎಲ್ಲವೂ ಮೊಬೈಲ್ ಎಂಬ ಮಾಯೆ ಎಂಬುದು ಕಂಡುಬಂತು. ಪ್ರಕರಣಗಳಲ್ಲಿ ಅಶ್ಲೀಲತೆಗಳು ಸಾಕಷ್ಟು ಹರಿದಾಡಿದ್ದವು. ಇದು ಪ್ರೇಮವೇ? ಫೋನ್ ಮೂಲಕ ಕುದುರುವ ಸಂಬಂಧಗಳಲ್ಲಿ ಬಹುಬೇಗನೆ ನಗ್ನತೆ ನುಸುಳುತ್ತಿದ್ದುದು ಪ್ರಮುಖವಾಗಿ ಕಂಡುಬಂತು.
ಇದಕ್ಕೆಲ್ಲಾ ಕಾರಣಗಳನ್ನು ಹುಡುಕಿದರೆ ಕಾಣುವುದು ಅದೇ ಲವ್ ಜಿಹಾದ್ . ಪ್ರೇಮವನ್ನು ಜಿಹಾದಿನೊಂದಿಗೆ ಸಮೀಕರಿಸಿದರೆ ಅದರ ಸ್ವರೂಪ, ಬಂಡವಾಳ ನಗ್ನತೆ-ಅಶ್ಲೀಲತೆಗಳೇ. ಕೆಲವೊಂದು ಪ್ರಕರಣಗಳಿಂದ ಅದು ರಾಜ್ಯಾದ್ಯಂತ ಸುದ್ಧಿಯಾಗುತ್ತದೆ. ನಾಲ್ಕುದಿನ ಚರ್ಚೆಯೂ ಆಗುತ್ತದೆ. ಆದರೆ ಅದು ಸದಾ ಜಾಗೃತವಾಗಿರುವುದು ಅಷ್ಟೇ ಸತ್ಯ. ಮೇಲಿನ ಪ್ರಕರಣಗಳನ್ನು ಯಾವ ಮಾಧ್ಯಮಗಳೂ ಪ್ರಕಟಮಾಡುವುದಿಲ್ಲ. ಯಾವ ಬುದ್ಧಿಜೀವಿಯೂ ಭಾಷಣ ಮಾಡುವುದಿಲ್ಲ. ಅವ್ಯಾಹತವಾಗಿ ಸಾಗಿರುವ ಅದರ ತೀವ್ರತೆ ಎಷ್ಟಿದೆಯೆಂದರೆ ಕಳೆದ ಜುಲೈನಿಂದ ದಕ್ಷಿಣ ಕರ್ನಾಟಕದ ೧೯ ಜಿಲ್ಲೆಗಳಲ್ಲಿ ಇಂಥ ೩೯೦ ಪ್ರಕರಣಗಳಿ ದಾಖಲಾಗಿವೆ. ಕಳೆದ ಜನವರಿಯಿಂದ ಮೈಸೂರು ಜಿಲ್ಲೆಯೊಂದರಲ್ಲೇ ೧೭೦೦ರಷ್ಟು ಹಿಂದೂ ಹುಡುಗಿಯರು ಕಾಣೆಯಾಗಿದ್ದಾರೆಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಈ ಕಾಣೆಯಾದ ಹುಡುಗಿಯರು ಎಲ್ಲಿದ್ದಾರೆಂಬುದನ್ನು ಹುಡುಕಿದರೆ ಬುರ್ಖಾದ ಒಳಗಡೆ ಬೇಯುತ್ತಿರುವ, ಮಾಂಸದ ಅಡ್ಡೆಗಳಲ್ಲಿ ನರಳುತ್ತಿರುವ, ಮಹಾನಗರಗಳ ರೈಲ್ವೇ ಸ್ಟೇಷನ್‌ಗಳಲ್ಲಿ , ಬಸ್‌ಸ್ಟ್ಯಾಂಡ್‌ಗಳಲ್ಲಿ ತುಟಿಗೆ ಗ್ರಾಮುಗಟ್ಟಲೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಗಿರಾಕಿಗಳಿಗಾಗಿ ಕಾಯುತ್ತಿರುವ ಉದಾಹರಣೆಗಳು ತೆರೆದುಕೊಳ್ಳುತ್ತವೆ. ಅವರಲ್ಲಿ ಬಹುತೇಕರು ಸಾಬರ ಬಲೆಯಲ್ಲಿ ಸಿಕ್ಕಿ ಒದ್ದಾಡಿದವರೇ ಎನ್ನುವುದು ಲವ್‌ಜಿಹಾದ್ ಇನ್ನೂ ಜೀವಂತ ಎಂಬುದಕ್ಕೆ ಸಾಕ್ಷಿಗಳು. ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಲು ಇಂದು ಯೋಜಿತ ಕಾರ್ಯತಂತ್ರಗಳನ್ನು ನವನವೀನವಾಗಿ ಆಚರಣೆಗೆ ತರಲಾಗುತ್ತಿದೆ. ದೇವಬಂದ್‌ನಲ್ಲಿ ಹುಟ್ಟಿದ ಲವ್‌ಜಿಹಾದಿನ ಕೂಸು ಇಂದು ಪ್ರತಿಯೊಂದು ಮನೆಯ ಒಳನುಗ್ಗಲು ಹಾತೊರೆಯುತ್ತಿದೆ. ವಿಪರ್ಯಾಸವೆಂದರೆ ಹಿಂದೂ ಪೋಷಕರ ಮಧ್ಯಮ ವರ್ಗದ ನೈತಿಕತೆಯೋ ಅಥವಾ ಪ್ರತಿಷ್ಠೆಗಳೋ ಅದಕ್ಕೆ ಇಂಬು ಕೊಡುತ್ತಿವೆ. ಅತಿಯಾದ ವಿಶ್ವ್ವಾಸ ಮತ್ತು ಹಿಂದೆ ಮುಂದೆ ಯೋಚಿಸದೆ ಅಗತ್ಯಗಳ ನೆಪದಲ್ಲಿ ಮೋಜಿಗೆ ಪ್ರೇರೇಪಿಸುವ ಧಾವಂತಗಳೆಡೆಯಲ್ಲಿ ಕುಟುಂಬಗಳೇ ಕಣ್ಣೀರಿನಿಂದ ಕೈತೊಳೆಯುವ ಸಂದರ್ಭಗಳು ದಿನ ನಿತ್ಯ ವರದಿಯಾಗುತ್ತಿವೆ. ಮಂಡ್ಯ ಪಟ್ಟಣದಲ್ಲೊಂದು ಸ್ಮಾರ್ಟ್ ಸ್ಪೀಕಿಂಗ್ ಕೋರ್ಸ್ ಎಂಬ ಹೆಸರಿನ ಸಂಸ್ಥೆ . ಮಧ್ಯಮ ವರ್ಗ ಮತ್ತು ಶ್ರೀಮಂತರ ಮಕ್ಕಳೇ ಬರುವ ಆ ಸಂಸ್ಥೆಯಲ್ಲಿ ದಿನನಿತ್ಯ ಗ್ರೂಪ್ ಸ್ಟಡೀ ನೆಪದಲ್ಲಿ ಹಿಂದೂ ಹುಡುಗಿಯರು ಮತ್ತು ಮುಸಲ್ಮಾನ ಹುಡುಗರನ್ನು ಗ್ರೂಪ್‌ಗಳನ್ನಾಗಿ ಮಾಡಲಾಗುತ್ತದೆ. ಆದರೆ ಯಾವ ಕಾರಣಕ್ಕೂ ಮುಸಲ್ಮಾನ ಹುಡುಗಿಯರನ್ನು ಹಿಂದೂ ಹುಡುಗರ ಗ್ರೂಪಿಗೆ ಸೇರಿಸಲಾಗುತ್ತಿರಲಿಲ್ಲ. ದಿನ ಕಳೆದಂತೆ ಗ್ರೂಪ್ ಸ್ಟಡಿಗಳು ಅತಿರೇಕಕ್ಕೆ ಹೋಗತೊಡಗಿತು. ಹಿಂದೂ ಹುಡುಗಿಯರು ಒಬ್ಬೊಬ್ಬರಾಗಿ ಮತಾಂಧರ ಮುಷ್ಟಿಯೊಳಗೆ ಸಿಕ್ಕಿಹಾಕಿಕೊಳ್ಳಲಾರಂಭಿಸಿದರು. ಹಿಂದೂ ಸಂಘಟನೆಯ ಕಾರ್ಯಾಚರಣೆಯ ಫಲವಾಗಿ ಅವರೆಲ್ಲರೂ ಉಳಿದುಕೊಂಡರು. ಇಲ್ಲೂ ಪೋಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ವ್ಯಾಸಂಗದ ನೆಪದಲ್ಲಿ ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಪೋಷಕ ಸಮುದಾಯದ ಬಹುದೊಡ್ಡ ಕೊರತೆ . ಆ ಕೊರತೆಗೆ ಭಾರೀ ಬೆಲೆಯನ್ನೇ ತೆರಬೇಕಾಗಬಹುದು ಎಂಬುದು ಇನ್ನೂ ಅರಿವಿಗೆ ಬಂದಂತಿಲ್ಲ. ಪ್ರತೀ ಫ್ರೆಂಡ್ ಬೇಕೆ ಬೇಕಣೋ ಎನ್ನುವುದು ಜಾಹೀರಾತಿನ ವಾಕ್ಯವಿರಬಹುದು. ಕೆಲವೊಮ್ಮೆ ಬದುಕಿನಲ್ಲೂ ಅದು ನಿಜವಿರಬಹುದು. ಆದರೆ ಜಿಹಾದಿಗಳ ವಿಷಯದಲ್ಲಿ ಅದು ಅಪಾಯಕಾರಿ . ಅವರ ಸ್ನೇಹದಲ್ಲಿ ನಿರ್ಮಲತೆಯ ಕುರುಹುಗಳಿರುವುದಿಲ್ಲ. ನೋಟದಲ್ಲಿ ಹಸಿವನ್ನು ಬಿಟ್ಟು ಬೇರೇನನ್ನೂ ಕಾಣುವುದಿಲ್ಲ. ತೀರಾ ಅಸಹಜವಾದ ಹಾವಭಾವಗಳಲ್ಲಿ ಸ್ನೇಹ ಹುಟ್ಟುವುದಾದರೂ ಹೇಗೆ? ಅಂಥ ಪ್ರೀತಿ ಕೊನೆ ಮುಟ್ಟುವುದಾದರೂ ಹೇಗೆ? ಇದುವರೆಗೆ ಮುಸಲ್ಮಾನ ಹುಡುಗರೊಟ್ಟಿಗೆ ಓಡಿಹೋದ ಹಿಂದೂ ಹುಡುಗಿಯರ ಬದುಕನ್ನೇ ನೋಡಿದರೂ ನಮ್ಮ ಕಣ್ಣ ಮುಂದೆ ಸುಖವಾಗಿ ದಾಂಪತ್ಯವನ್ನು ಅನುಭವಿಸಿರುವ ಒಂದೇ ಒಂದೇ ಜೋಡಿಯನ್ನೂ ಕಾಣಲಾರೆವು. ಮೂರನೇ ಮದುವೆಯಾಗಿ ಗಲ್ಲಿಯಲ್ಲಿ ಮನೆ ಮಾಡಿ ಕೀಪ್‌ಗಳಂತೆ ಇಟ್ಟುಕೊಂಡ ಹಿಂದೂ ಹುಡುಗಿಯರು, ಬ್ರಾಹ್ಮಣ ಹುಡುಗಿಯನ್ನು ಮುಸ್ಲಿಂ ಮಾಡಿ ಕೋಳಿ ಅಂಗಡಿ ಯಲ್ಲಿ ಕೂರಿಸಿದವರು, ಲಿಂಗಾಯತ ಹುಡುಗಿಗೆ ಗೋಣಿ ಚೀಲ ಹೊಲಿಯುವ ಗೂಡು ಕೊಟ್ಟವರು, ಶೆಟ್ಟರ ಹುಡುಗಿಗೆ ಪಂಕ್ಚರ್ ಅಂಗಡಿ ಇಟ್ಟುಕೊಟ್ಟ ದಾಂಪತ್ಯಗಳೇ ಎದ್ದು ಕಾಣುತ್ತವೆ. ವಿಶೇಷವೆಂದರೆ ಓಡಿಹೋಗುವ ಮೊದಲು ಇವರೆಲ್ಲರೂ " ಪ್ರತಿ ಫ್ರೆಂಡ್ ಬೇಕೆ ಬೇಕಣೋ" ಎಂದು ಲಲ್ಲೆಗರೆದವರೇ. ಆ ಹೊತ್ತಲ್ಲಿ ಪೋಷಕರಿಷ್ಟು ಗಮನ ಹರಿಸಿದ್ದರೆ , ನಿರ್ಲಕ್ಷ ತಾಳದೇ ಇದ್ದಿದ್ದರೆ ಮಕ್ಕಳ ಬದುಕು ತಮ್ಮ ಕಣ್ಣ ಮುಂದೆಯೇ ನರಕವಾಗುವುದನ್ನಾದರೂ ತಪ್ಪಿಸಬಹುದಿತ್ತು.
ಇನ್ನು ಶ್ರೀಮಂತ ಮನೆಗಳ ಮಕ್ಕಳ ಕಥೆಗಳೇ ಬೇರೆ. ಮಕ್ಕಳ ದಿನಚರಿಯನ್ನು ಪ್ರಶ್ನಿಸುವುದು ಅಲ್ಲಿ ಶಿಷ್ಟಾಚಾರವಲ್ಲ ಎಂಬ ಭಾವನೆ. ಅನಾಚಾರ ಬೆಳೆಯಲು ಇನ್ನು ತಡವೆಲ್ಲಿದೆ?
ಹಾಸನ ಮೆಡಿಕಲ್ ಕಾಲೇಜು ಸುತ್ತ ಒಮ್ಮೆ ಸುತ್ತಾಡಿ ಬರಬೇಕು. ಡಾಕ್ಟರ್ ಹುಡುಗಿಯರ ಹಿಂದೆ ಲೋಕಲ್ ಮುಸಲ್ಮಾನ ಹುಡುಗರ ಪಟಾಲಮ್ಮು ಸುತ್ತುತ್ತಿರುತ್ತವೆ. ಕೆಲವು ತಿಂಗಳುಗಳಿಂದೀಚೆಗೆ ಇಲ್ಲಿ ೧೮ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ ಬಹುತೇಕ ಹುಡುಗಿಯರು ಉತ್ತರ ಭಾರತದವರು. ಅವರೆಲ್ಲರ ಪೋಷಕರ ಪ್ರಕಾರ ತಮ್ಮ ಮಗಳು ದೂರದೂರಿನಲ್ಲಿ ವ್ಯಾಸಂಗದಲ್ಲಿ ಮುಳುಗಿರುವ ಡಾಕ್ಟರುಗಳು. ಲವ್ ಜಿಹಾದಿನಲ್ಲಿ ಎರಡೇ ಎರಡು ಪರಿಸ್ಥಿತಿಗಳು ಎದುರಾಗುತ್ತವೆ.ಒಂದು ಅಪ್ಪಟ ಮತಾಂಧತೆ, ಇನ್ನೊಂದು ಅದಕ್ಕಿರುವ ದಾರಿಗಳು ಮತ್ತು ತಂತ್ರಗಳು. ಹರೆಯದ ದೌರ್ಬಲ್ಯಗಳು, ಬಿಸಿರಕ್ತದ ಭಾವನೆಗಳಿಗೆ ಮನಸ್ಸು ಕುರುಡಾಗುವುದು ಲವ್ ಜಿಹಾದಿನ ದಾಳಗಳಾದರೂ ಹರೆಯವೂ ಇಲ್ಲದ ಬಿಸಿರಕ್ತದ ಹಂಗೂ ಇಲ್ಲದ ಪೋಷಕರಿಗೇನಾಗಿದೆ? ಮಗಳ ಫೋನ್ ಏಕೆ ಸದಾ ಕಾರ್ಯನಿರತವಾಗಿರುತ್ತದೆ? ಗ್ರೂಪ್‌ಸ್ಟಡಿಗಳ ಆವಶ್ಯಕತೆಯೇನು? ಶೈಕ್ಷಣಿಕ ಪ್ರವಾಸಗಳಲ್ಲಿ ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದರ ಬಗ್ಗೆ ತಿಳಿಹೇಳದೆ ಇರುವುದೂ ಒಂದೇ ಅಳತೆ ಸರಿ ಇಲ್ಲದ ರೆಡಿಮೆಡ್ ಬಟ್ಟೆಗಳನ್ನು ಕೊಂಡುತರುವುದೂ ಒಂದೇ ಅಲ್ಲವೇ? ಹೀಗೆ ಮಗಳಿಗೆ "ಸಂಪೂರ್ಣ ಸ್ವಾತಂತ್ರ್ಯ"ವನ್ನು ಕೊಟ್ಟ ಮೈಸೂರಿನ ಕುಟುಂಬವೊಂದು ಬಜರಂಗದಳದ ಪ್ರಮುಖರೊಟ್ಟಿಗೆ ಗೋಳಾಡುತ್ತಿದ್ದರು. ಉತ್ತಮ ಡಿಗ್ರಿಪಡೆದು ಇನ್ಫೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಮಗಳು ಕಾರ್ಪೋರೇಟ್ ವಲಯದ ಶೋಕಿಗೆ ಮರುಳಾಗಿದ್ದು. ಮುಸಲ್ಮಾನ ಹುಡುಗನೊಟ್ಟಿಗೆ ಮದುವೆಯ ಪ್ರಸ್ತಾಪವನ್ನಿಟ್ಟಿದ್ದು. ವಿಧಿ ಇಲ್ಲದೆ ಪೋಷಕರು ಮದುವೆಗೆ ಒಪ್ಪಿದ್ದು, ಮದುವೆ ಹತ್ತಿರ ಬಂದಾಗ ಹುಡುಗಿಗೆ ಅಪಘಾತವಾಗಿ ಕಾಲು ಕಳೆದುಕೊಂಡಿದ್ದು, ಅದುವರೆಗೆ ಅಮರಾ ಮಧುರಾ ಪ್ರೇಮ ಎಂದು ಆಲಾಪಿಸಿದ್ದ ಹುಡುಗ ಊರುಬಿಟ್ಟಿದ್ದು, ಆ ಕಾರಣದಿಂದ ತನ್ನ ಮಗಳಿಗೆ ಇಂದಿಗೂ ಗಂಡು ಸಿಗದೆ ಪರದಾಡುವಂತಾದ ಕಥೆಯನ್ನು ಅವರು ಹೇಳುತ್ತಿದ್ದರು. ವಾಸ್ತವವಾಗಿ ಇದರಲ್ಲಿ ತಪ್ಪು ಯಾರದ್ದು?
ಇತ್ತೀಚೆಗೆ ಸುಪ್ರೀಂ ಕೋರ್ಟು ಹೆಣ್ಣಿಗೆ ಆಸ್ತಿಯ ಪಾಲಾಗಬೇಕು ಎಂಬ ತೀರ್ಪನ್ನಿತ್ತಿತು. ಈಗ ಲವ್ ಜಿಹಾದಿಗಳ ಕಣ್ಣು ಹೆಣ್ಣಿನೊಟ್ಟಿಗೆ ಅವಳ ಆಸ್ತಿಯ ಮೇಲೂ ಬಿದ್ದಿದೆ ಎನ್ನುತ್ತಾರೆ. ಸಂಘಟನೆಯ ಕಾರ್ಯಕರ್ತರು. ಹೆಣ್ಣು ಹೆತ್ತವರಿನ್ನು ಮಗಳನ್ನೂ ಕೊಟ್ಟು ಆಸ್ತಿಯನ್ನೂ ಕಳೆದುಕೊಳ್ಳಲಿದ್ದಾರೆ ಎನ್ನುವುದು ಮತ್ತೊಂದು ಆಘಾತಕರ ಸಂಗತಿ. ಇನ್ನು ಲಾಕರಿನಲ್ಲಿಟ್ಟ ಒಡವೆಗಳು, ಮಗನಿಗೆಂದು ಇಟ್ಟಿದ್ದ ತೋಟಗಳು, ರಿಲಯನ್ಸಿನ ಶೇರು, ಸಾಲಮಾಡಿ ತೆಗೆದುಕೊಂಡ ಸೈಟುಗಳು ಮುಸಲ್ಮಾನ ಅಳಿಯನ ಪಾಲಾಗಬಹುದು. ಮಗಳ ವೊಬೈಲ್ ಹರಟೆಯನ್ನು ಗಮನಿಸದ ತಪ್ಪಿಗೆ ಮನೆತನದ ಮಾನವನ್ನೂ ಆಸ್ತಿಯನ್ನೂ ಕಳೆದುಕೊಂಡು ಕುಟುಂಬ ಬೀದಿಗೆ ಬರಬಹುದು.
ಈಗ ಹೇಳಿ ಪ್ರತಿ ಫ್ರೆಂಡ್ ಬೇಕೇ ಬೇಕಾ?

No comments: