Monday, July 25, 2011

"ಆ ವಿಜಯದಲ್ಲಿ ಆದರ್ಶವಿದೆ" ಮೇ.ಜ(ನಿ.)ಮೂವೆರ ಸಿ.ನಂಜಪ್ಪ

1999ರ ಮೇ ತಿಂಗಳು. ನಾನಾಗ ಬೆಂಗಳೂರಿನ ರಿಕ್ರೂಟ್‌ಮೆಂಟ್‌ ವಿಭಾಗದಲ್ಲಿದ್ದೆ.ಕೇರಳ,ಕರ್ನಾಟಕ ಮತ್ತು ಗೋವಾವನ್ನೊಳಗೊಂಡ ಪ್ರದೇಶ ನನ್ನ ವ್ಯಾಪ್ತಿಗೆ ಬರುತ್ತಿತ್ತು.ಅದೇ ಸಮಯದಲ್ಲಿ ದೂರದ ಕಾರ್ಗಿಲ್‌ ನಲ್ಲಿ ಗಡಿ ನಿಯಮ ಉಲ್ಲಂಘಿಸಲಾಗಿದೆಯೆಂದೂ ತುರ್ತುಕಾರ್ಯಾಚರಣೆ ನಡೆಸಲಾಗುವುದು ಎಂದೂ ಸುದ್ಧಿಗಳು ಎಲಾ್ಲ ಕೇಂದ್ರಗಳಿಗೆ ರವಾನೆಯಾದವು.ಅದು ಸೈನ್ಯದಲ್ಲಿ ಬಿಗುವಿನಿಂದ ಕೂಡಿದ ಸಮಯ.ಮೊದಲು ಆ ಪ್ರದೇಶದಲ್ಲಿ ಕೆಲಸ ಮಾಡಿದ ಅನುಭವವಿದ್ದುದರಿಂದ ನನಗೆ ಅಲ್ಲಿನ ಪರಿಸ್ಥಿತಿ ಚೆನ್ನಾಗಿ ಅರ್ಥವಾಗುತ್ತಿತ್ತು.
ಕಾರ್ಗಿಲ್‌ ಒಂದು ಗುಡ್ಡಗಾಡು ಪ್ರದೇಶ.ಚಳಿಗಾಲ ಬಂತೆಂದರೆ ಆ ಪ್ರದೇಶ ಸಂಪೂರ್ಣ ಹಿಮಾವೃತವಾಗುತ್ತದೆ.ಎಲ್ಲೆಡೆ ಮಂಜುಗಡ್ಡೆಗಳು.ವಾಸಕ್ಕದು ಯೋಗ್ಯವಾಗುತ್ತಿರಲಿಲ್ಲ.ಅಂಥ ಪ್ರದೇಶದಲ್ಲಿ ಶ್ರೀನಗರದಿಂದ ಲೇಹ್‌ಗೆ ಸಾಗುವ ಹೈವೇ ಒಂದು ಹಾದುಹೋಗುತ್ತಿತ್ತು.ಆ ಹೆದ್ದಾರಿ ಭೌಗೋಲಿಕವಾಗಿ ಅತ್ಯಂತ ಮಹತ್ವದ ಪ್ರದೇಶವಾಗಿತ್ತು.ಚಳಿಗಾಲದಲ್ಲಿ ಆ ಹೈವೆಯೂ ಮಂಜಿನಿಂದಾವೃತವಾಗುತ್ತಿತ್ತು.ಅದರ ಪಕ್ಕದಲ್ಲೇ ಭಾರತೀಯ ಸೇನಾಪಡೆಗಳ ಕೇಂದ್ರಗಳೂ ಇದ್ದವು.ಗಡಿ ಪ್ರದೇಶದ ಹೆದ್ದಾರಿಗಳ ರಕ್ಷಣೆಯೆಂದರೆ ಗಡಿಗಳದ್ದೇ ರಕ್ಷಣೆ ಎಂಬ ಮಾತೊಂದಿದೆ.ಹಾಗಾಗಿ ಮೊದಲಿನಿಂದಲೂ ಗಡಿ ಮತ್ತು ಹೈವೆಯನ್ನು ರಕ್ಷಿಸಲು ನಿಗದಿತ ತುಕಡಿಗಳು ಅಲ್ಲಿದ್ದವು 1999ರಲ್ಲೂ ಕೂಡ ಸೇನೆಯ ಬಿಡಾರ ಅಲ್ಲಿದ್ದು ಗಡಿಯನ್ನು ಕಟ್ಟೆಚ್ಚರದಿಂದ ಕಾಯುತ್ತಿತ್ತು.ಆದರೆ ಚಳಿಗಾಲದ ಸಮಯದಲ್ಲಿ ಸೇನೆ ತನ್ನ ಬಿಡಾರವನ್ನು ಕೊಂಚ ಬದಲಿಸಿಕೊಳ್ಳುತ್ತದೆ.ಅತ್ತ ಪಾಕ್‌ ಕೂಡಾ ತನ್ನ ವಾಸ್ತವ್ಯವನ್ನು ಬದಲಿಸಿಕೊಳ್ಳುತ್ತದೆ.ಅದು ಮೊದಲಿನಿಂದಲೂ ಆಚರಣೆಯಲ್ಲಿದ್ದ ಒಂದು ಪದ್ದತಿ.
ಆದರೆ ಆ ವರ್ಷ ಹಾಗಾಗಲಿಲ್ಲ.ನಮ್ಮ ಸೈನ್ಯ ಚಳಿಗಾಲ ಮುಗಿದು ಏಪ್ರಿಲ್‌-ಮೇನಲ್ಲಿ ಹೋದಾಗ ಹೈವೇ ಪಕ್ಕದ ಬೆಟ್ಟಗಳಲೆಲ್ಲಾ ಪಾಕ್‌ ಅಡಗುತಾಣಗಳು ಸೃಷ್ಟಿಯಾಗಿದ್ದವು.ಕೆಳಗಿನ ಹೈವೇಯನ್ನು ಆ ಬೆಟ್ಟಗಳಿಂದಲೇ ನಿಯಂತ್ರಿಸಬಹುದಿತ್ತು.ಯಾವಾಗ ಮೇಲಿನ ಬೆಟ್ಟಗಳು ನಮ್ಮ ಕೈ ತಪ್ಪುತ್ತದೋ ಹೈವೇ ನಮ್ಮ ಹಿಡಿತದಲ್ಲಿರುವುದಿಲ್ಲ.ಹೈವೇ ಹಿಡಿತದಲ್ಲಿಲ್ಲವೆಂದರೆ ನಮ್ಮ ಅಸ್ತಿತ್ವ ಅಲ್ಲಿರುವುದಿಲ್ಲ.ಅಲ್ಲದೆ ಅದು ನಮ್ಮ ನೆಲ .ನಮ್ಮ ನೆಲಕ್ಕೆ ಪಾಕಿಗಳು ನುಗ್ಗಿದ್ದರು.ಅಂತಾರಾಷ್ಟ್ರೀಯ ಗಡಿ ನಿಯಮದ ಸ್ಪಷ್ಟ ಉಲ್ಲಂಘನೆ ಆಗಿತ್ತು.ಆಗಬಾರದ್ದು ಆಗಿತ್ತು.ಆರಂಭದಲ್ಲಿ ಪಾಕ್‌ ಗಡಿಯೊಳಕ್ಕೆ ನುಗ್ಗಿರುವುದು ನಮ್ಮ ಸೈನಿಕರಲ್ಲ.ಅವರು ಉಗ್ರಗಾಮಿಗಳಿರಬಹುದು ಎಂಬ ಸಬೂಬು ಹೇಳಿತು.ಆದರೆ ಒಳಗುಗ್ಗಿರುವವರು ಪಾಕ್‌ ಸೈನಿಕರೇ ಆಗಿದ್ದರು.ಈ ಹೈವೇ ಪಕ್ಕದ ಬೆಟ್ಟಗಳಲ್ಲಿ ಅಂದರೆ ಕಾರ್ಗಿಲ್‌ನಲ್ಲಿ ಆಡಗಿ ಕುಳಿತಿದ್ದ ಪಾಕ್‌ ಸೈನಿಕರನ್ನು ತೆರವುಗೊಳಿಸುವುದು ಕಷ್ಟದ ಕೆಲಸವಾಗಿತ್ತು.ಏಕೆಂದರೆ ಕಾರ್ಗಿಲ್‌ ನ ಭೂಮಿ ಸಾಮರಿಕ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಭೂಮಿಯಾಗಿತ್ತು.ಅಷ್ಟರವರೆಗೆ ಸಮೀಪದ ಕುಪಾ್ವರವೇ ತಲೆಬಿಸಿಯ ಪ್ರದೇಶ ಎಂದು ನಮ್ಮ ಅಭಿಪಾ್ರಯವಾಗಿತ್ತು.ಅಲ್ಲಿನ ತಂಗಾರ್‌ ಸೆಕ್ಟರ್‌,ಮಚ್ಚಲ್‌ ಸೆಕ್ಟರ್‌ಗಳ ಮೇಲೆ ಕೇಂದ್ರೀಕರಿಸಿಕೊಳ್ಳುತ್ತಿದ್ದ ಸೈನ್ಯ ಕಾರ್ಗಿಲ್‌ ಅನ್ನು ಸುಲಭವಾಗಿ ತೆರವು ಗೊಳಿಸುವಂತಿರಲಿಲ್ಲ.ಆದರೂ ಅದು ಮಾಡಬೇಕಾದ ಕಾರ್ಯ.ನಾವು ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೆವು.ಸೈನ್ಯ ಅದಕ್ಕೆ ಬಾರಿ ಬೆಲೆಯನ್ನೇ ತೆರಬೇಕಾಯಿತು.ನಮ್ಮ ಅನೇಕ ಹುಡುಗರು ಬಲಿದಾನಿಗಳಾಗಬೇಕಾಯಿತು. ಯುದ್ಧದ ತೀವೃತೆಯ ದೃಷ್ಟಿಯಿಂದ ಹೇಳುವುದಾದರೆ ಕಾರ್ಗಿಲ್‌ ಯುದ್ಧ 1971ರ ಯುದ್ಧದಷ್ಟು ದೊಡ್ಡದೇನಾಗಿರಲಿಲ್ಲ.ಆದರೆ 1999ರಲ್ಲಾದ ಬಲಿದಾನ ದೊಡ್ಡದು.ಕ್ಲಿಷ್ಟ ಸಂದರ್ಭದಲ್ಲಿ ನಮ್ಮ ಸೈನ್ಯ ದ ಹೋರಾಟ ಇತಿಹಾಸದಲ್ಲಿ ನಿಲ್ಲುವಂಥದ್ದು.ಎದೆಯೊಡ್ಡಿ ದೇಶವನ್ನು ರಕ್ಷಿಸಿದ ನೂರಾರು ಹೀರೋಗಳು ಅಂದು ಉದಯಿಸಿದ್ದರು.ಹಾಗಾಗಿ ಕಾರ್ಗಿಲ್‌ ವಿಜಯವೆಂದರೆ ಬಲಿದಾನಿಗಳನ್ನು ನೆನೆಯುವ ಹೊತ್ತು.
ಕಾರ್ಗಿಲ್‌ ಕಾರ್ಯಾಚರಣೆಯ ಹೊತ್ತು ನಮ್ಮ ಸೈನ್ಯ ಹಲವು ಆದರ್ಶಗಳನ್ನು ಮೆರೆಯಿತು.ಮುಕ್ಯವಾಗಿ ಈ ಕಾರ್ಯಾಚರನೆ ನಡೆದಿದ್ದೇ ಗಿಡಿ ಅತಿಕ್ರಮಣದ ವಿರುದ್ಧ.ಆ ಕಾರ್ಯವನ್ನು ನಮ್ಮ ಪಡೆ ಸುಸೂತ್ರವಾಗಿ ಮುಗಿಸಿದ ಬಳಿಕವೂ ನಮ್ಮ ಸೇನೆ ಎಲ್‌.ಓ.ಸಿ.ದಾಟಲಿಲ್ಲ.ಗಡಿ ನಿಯಮ ಉಲ್ಲಂಘಿಸಲಿಲ್ಲ.ನಾವು ನಮ್ಮ ಭೂಮಿಯನ್ನು ಶತ್ರುಗಳಿಂದ ರಕ್ಷಿಸಿಕೊಂಡೆವು.ನಾವು ಮನಸ್ಸು ಮಾಡಿದ್ದರೆ ಯುದ್ಧದ ಸ್ವರೂಪವೇ ಬದಲಾಗಿಹೋಗುತ್ತಿತ್ತು.ಏಕೆಂದರೆ ನಮ್ಮ ಶಕ್ತಿ ಸಾಮರ್ಥ್ಯದ ಮುಂದೆ ಪಾಕ್‌ನ ಬಲ ಏನೇನೂ ಇರಲಿಲ್ಲ.ನಮಗೆ ಗಡಿ ದಾಟಬೇಕೆಂದರೆ ಕಷ್ಟವೂ ಇರಲಿಲ್ಲ.ಅಡೆತಡೆಗಳಂತೂ ಇರಲೇ ಇಲ್ಲ. ಅತ್ತ ಪಂಜಾಬ್‌ ಇತ್ತು ,ಇತ್ತ ಕಾಶ್ಮೀರದ ಉದ್ದಕ್ಕೂ ನಮಗೆ ದಾರಿ ಮುಕ್ತವಾಗಿತ್ತು.ಆದರೆ ನಾವು ಟೈಗರ್‌ ಹಿಲ್‌ ಅನ್ನು ವಶಪಡಿಸಿಕೊಂಡವರು ಮತ್ತೆ ಮುಂದುವರೆಯುವ ಯೋಚನೆಯನ್ನೇ ಮಾಡಲಿಲ್ಲ.ನಮ್ಮ ಸೈನಿಕರು ಅರ್ಥಪೂರ್ಣವಾಗಿ ದೇಶಕ್ಕೆ ಪಾ್ರಣವನ್ನು ಅರ್ಪಿಸಿದರು.ನಮ್ಮ ರಕ್ಷಣೆಗಾಗಿ,ನಮ್ಮ ಶಾಂತಿಗಾಗಿ ಅವರು ಬಲಿದಾನಿಗಳಾಗಿದ್ದರು.ದ್ವೇಷವನ್ನು ಹೊತ್ತುಕೊಂಡು,ಕಾನೂನನ್ನು ಮುರಿದು ಒಳನುಗ್ಗಿದ ಬಲಿದಾನಿಗಳನ್ನು ನಾವು ಕಾಣಲಿಲ್ಲ.ಇದು ನಮ್ಮ ಸಂಸ್ಕೃತಿ.ಆ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಹೆಮ್ಮೆಪಡಬೇಕು.
ಇಂದು ಕಾರ್ಗಿಲ್‌ ವಿಜಯದ ದಿನವಾಗಿ 12 ವರ್ಷಗಳಾಗಿವೆ.ಯುದ್ಧದ ಅನಂತರ ನನ್ನನ್ನು ಕಾರ್ಗಿಲ್‌ನ ಪಶ್ಚಿಮಕ್ಕಿರುವ ಕುಪಾ್ವರ ಡಿವಿಶನ್ನಿನ ಕಮಾಂಡರ್‌ ನನಾ್ನಗಿ ನೇಮಕ ಮಾಡಲಾಯಿತು.ಆಪರೇಷನ್‌ ವಿಜಯದ ಅನಂತರ ಕಾರ್ಗಿಲ್‌ ಶಾಂತಿಯಿಂದ ಇರುವುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ.ಆದರೆ ಇಂದು ಕಾಶ್ಮೀರವನ್ನು ಕೇಂದ್ರೀಕರಿಸಿಕೊಂಡು ಹಲವು ಸಂಗತಿಗಳನ್ನು ಕೇಳುತ್ತಿದ್ದೇವೆ.ಸೇನೆಯನ್ನು ಹಿಂಪಡೆಯಬೇಕು ಎಂಬ ಚರ್ಚೆಯೂ ನಡೆದಿತ್ತು.ಆದರೆ ಗಡಿಯ ರಕ್ಷಣೆ ಎಲ್ಲಕ್ಕಿಂತ ಮುಖ್ಯ.ಅಲ್ಲಿಗೆ ಅವಶ್ಯ ಇರುವಷ್ಟು ಪಡೆಗಳು ಅಲ್ಲಿಗೆ ಬೇಕೇ ಬೇಕು.ಅದರಲ್ಲಿ ರಾಜಿ ಮಾಡಿಕೊಳ್ಳುವುದು ಸಲ್ಲದು.ಅಲ್ಲದೆ ಗಡಿ ಪ್ರದೇಶಗಳಲ್ಲಿ ಸೈನ್ಯ ಮತ್ತು ಸ್ಥಳೀಯರ ಮಧ್ಯೆ ವೈಮನಸುಗಳಿವೆಯೆಂದೂ ,ಸೇನೆ ಸ್ಥಳೀಯರನ್ನು ಹಿಂಸಿಸುತ್ತಿದೆಯೆಂದೂ ಪ್ರಚಾರಗಳು ನಡೆಯುತ್ತಿವೆ.ಇದೇನೂ ಮೊದಲಲ್ಲ.ವಾಸ್ತವವಾಗಿ ಗಡಿಪ್ರದೇಶದಲ್ಲಿ ಸ್ಥಳೀಯರು ಸೈನ್ಯದೊಟ್ಟಿಗೆ ಸ್ನೇಹದಿಂದಿರುವಷ್ಟು ಬೇರೆ ಪ್ರದೇಶದ ಸ್ಥಳೀಯರು ಅಷ್ಟಾಗಿ ಸ್ನೇಹದಿಂದಿರುವುದಿಲ್ಲ.ಗಡಿ ಪ್ರದೇಶಗಳ ಜನರಿಗೆ ಸೈನ್ಯದ ಬಗ್ಗೆ ಗೌರವದ ಭಾವನೆಯಿರುವುದನ್ನು ನಾನು ಹಲವಾರು ಗಡಿಭಾಗಗಳಲ್ಲಿ ಕಂಡಿದ್ದೇನೆ.ಸೈನ್ಯ ಮತ್ತು ಸ್ಥಳಿಯರ ದ್ವೇಷ ಎಂಬುದು ಶುದ್ಧ ಅಪಪ್ರಚಾರ.ಗಡಿಯನ್ನು ಅಭದ್ರಗೊಳಿಸಲು ಹಂಬಲಿಸುವ ಶಕ್ತಿಗಳ ಹುನಾ್ನರ.
ಕಾರ್ಗಿಲ್‌ ವಿಜಯದ ಹಿಂದೆ ಬಲಿದಾನದ ಇತಿಹಾಸವಿದೆ.ಆದರ್ಶದ ಪ್ರೇರಣೆಯಿದೆ.ವೀರತ್ವದ ಸಂಕೇತವಿದೆ.ಮೈಮರೆವಿಗೆ ಪಾಠವಿದೆ.ಅಪಪ್ರಚಾರಕ್ಕೆ ಉತ್ತರವಿದೆ.1999ರ ಆ ವೀರರಿಗೆ ನಮಿಸೋಣ.

No comments: