Wednesday, September 7, 2011

ವೈಸರಾಯಿ ಸ್ವರೂಪಿ ಭೂಸ್ವಾಧೀನ ಕಾಯ್ದೆ-೨೦೧೧


ಕೇಂದ್ರ ಸರಕಾರದಲ್ಲೀಗ "ಬಿಲ್ಲು"ಗಳದ್ದೇ ಭರಾಟೆ.ಈಗ ಕೇಂದ್ರ ಮಂತ್ರಿಮಂಡಳದಲ್ಲಿ ಎಲ್ಲರೂ ಧನುರ್ದಾರಿಗಳೇ.ಜನಲೋಕಪಾಲವಾತು.ಅದೂ ತನ್ನ ಮೂಗಿನ ನೇರಕ್ಕೆ.ಅನಂತರ ಕೋಮುಗಲಭೆ ನಿಷೇಧ ಕಾಯ್ದೆ ಆಯಿತು.ಅದೂ ತನ್ನ ಮೂಗಿನ ನೇರಕ್ಕೆ."ಹೀಗೆ ತನ್ನ ಮೂಗಿನ ನೇರಕ್ಕೆ ಕಾನೂನುಗಳನ್ನು ಮಾಡುವುದು,ಅದನ್ನು ಮತ್ತೊಬ್ಬರ ಕುತ್ತಿಗೆಗೆ ಕುಣಿಕೆಯಾಗಿ ಮಾಡುವುದು ಹೇಗೆಂದು ಯುಪಿಎಗೆ ಚೆನ್ನಾಗಿ ಗೊತ್ತಿದೆ.ಸಂಸ್ಕತದಲ್ಲಿ ಯುಪಿಏ ಗೆ ವಧಸ್ತಂಭ ಎಂಬ ಹೆಸರೇನೋ ಇದೆಯಂತಲ್ಲ. ಅದು ಕಾಯ್ದೆಗಳ ಕಾರಣಕ್ಕೆ ಅನ್ವರ್ಥವೆನಿಸುತ್ತದೆ.
ಇದೀಗ ಅಂಥದ್ದೊಂದು ಕಾಯಿದೆ ಮತ್ತೊಂದು ಬಂದಿದೆ.ಅದು ಭೂಸ್ವಾಧೀನ ಮತ್ತು ಪುನರ್ವಸತಿ ಕಾದೆ-೨೦೧೧. ಅಂದರೆ national land acquirition and rehabitation and resettlement bill-2011ಈ ಭೂಸ್ವಾಧೀನ ಎಂಬ ಪದವೇ ಯಾಕೋ ದುರ್ಯೋಧನನನ್ನೇ ನೆನಪಿಸುತ್ತವೆ.ಪ್ರಸಕ್ತ ಕಾಯ್ದೆಯನ್ನು ನೋಡುವಾಗಲೂ ಕೂಡ ಆತನೇ ನೆನಪಾಗುತ್ತಾನೆ.ಕೊನೆಗೆ ಜಯರಾಮ ರಮೇಶ್ ಎಂದಾಗಲೂ ಕೂಡ ದುರ್ಯೋಧನನೇ ನೆನಪಾಗುತ್ತಾನೆ.ಕಳೆದ ಜುಲೈ ೨೭ರಂದು ಈ ಕಾಯ್ದೆಯ ಕರಡು ಸಿದ್ಧವಾಗಿದೆ. "ಭೂಮಿ ರಾಜ್ಯಗಳಿಗೆ ಸಂಬಂಧಪಟ್ಟ ಸಂಗತಿಯಾದರೂ ಅದನ್ನು ಅನ್ಯಾನ್ಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದರಲ್ಲಿ ಕೇಂದ್ರದ ಪಾತ್ರವಿದೆ.ಭೂಸ್ವಾಧೀನದ ಬಗೆಗಿನ ಕಾನೂನುಗಳನ್ನು ಏಕರೂಪಗೊಳಿಸುವ ಹಕ್ಕು ಕೇಂದ್ರದ್ದು" ಎಂದೆಲ್ಲ ಬರೆದಿದ್ದ ಆ ಕಾಯ್ದೆಯ ಕರಡಿಗೆ ಜುಲೈ ೨೯ರಂದು ಜಯರಾಮ ರಮೇಶ್ ಸಹಿಯನ್ನೂ ಹಾಕಿ ಕಾಯ್ದೆಯ ಬಗ್ಗೆ ಏನೇ ತಕರಾರುಗಳಿದ್ದರೂ ಆಗಸ್ಟ್ ೩೧ರೊಳಗೆ ಸಲ್ಲಿಸತಕ್ಕದ್ದು ಎಂದು ಹೇಳಿದ್ದಾರೆ.ಏಕೆಂದರೆ ಮುಂಗಾರು ಅಧಿವೇಶನದಲ್ಲಿ ಈ"ಬಿಲ್ಲನ್ನು"ಹೆದೆಯೇರಿಸಲಾಗುವುದಂತೆ.ಹಾಗಾಗಿ ತಂಟೆ ತಕರಾರುಗಳು ಶೀಘ್ರಾತಿಶೀಘ್ರ ಕೇಂದ್ರಕ್ಕೆ ಮುಟ್ಟಬೇಕು. ಜನಲೋಕಪಾಲದ ಅಲೆಯೇನಿದ್ದರೂ ಅದಕ್ಕೆ ಕೇಂದ್ರ ಹೊಣೆಯಲ್ಲ.ತಕರಾರುಗಳು ನಿರ್ದಿಷ್ಟ ಕಾಲಾವಧಿಯಲ್ಲಿ ಮುಟ್ಟದಿದ್ದರೆ ಆಕ್ಷೇಪಣೆಗಳೇನಿಲ್ಲ,ದೇಶದ ಸಮಸ್ತ ಜನಕ್ಕೆ ಕಾನೂನು ಪ್ರಿಯವಾಗಿದೆ ಎಂದು ಮುಲಾಜಿಲ್ಲದೆ ಜಾರಿಗೊಳಿಸಲಾಗುತ್ತದೆ. ಆದರೆ ತಂಟೆ ತಕರಾರುಗಳು ಹೇಗೆ ತಾನೇ ಮುಟ್ಟೀತು?ಕೇವಲ ಒಂದು ತಿಂಗಳ ಅವಧಿಯಲ್ಲಿ ಸಾರ್ವಜನಿಕ ಚರ್ಚೆಯಾಗಿ ,ಅಭಿಪ್ರಾಯಗಳು ಕ್ರೋಡೀಕರಣವಾಗುವುದು ಹೇಗೆ ಸಾಧ್ಯ?ಸಚಿವರ ಅಂಕಿತ ಬಿದ್ದು ತಿಂಗಳಾದರೂ ಇನ್ನೂ ಬಡ ಬೋರೇಗೌಡನಿಗೆ ಇಂಥದ್ದೊಂದು ಕಾಯಿದೆ ಬರುತ್ತಿರುವ ಬಗ್ಗೆ ಇನ್ನೂ ಗೊತ್ತಿಲ್ಲ. ಗೊತ್ತಾಗುವಂತಿದ್ದರೂ ಅದನ್ನು ಓದಿ ಅರ್ಥೈಸಲಾಗುತ್ತಿರಲಿಲ್ಲ.ಅರ್ಥೈಸಿಕೋಡಿದ್ದರೂ ಏನೂ ಮಾಡುವಂತಿರಲಿಲ್ಲವೇನೋ.ಏಕೆಂದರೆ ಕಾಯ್ದೆಯ ಕರಡು ಸಂಪೂರ್ಣ ಇಂಗ್ಲಿನಲ್ಲಿದೆ .ಯಾವ ಭಾರತೀಯ ಭಾಷೆಗೂ ಅದು ಅನುವಾದಗೊಂಡಿಲ್ಲ.ಹಾಗಾದರೆ ಸರಕಾರ ಯಾರಿಗಾಗಿ ಮಾಡಿತು ಇದನ್ನು?ಕಂಪೆನಿಗಳ ಸಿಇಒಗಳು ಮತ್ತು ಲೀಗಲ್ ಅಡ್ವೈಸರುಗಳಷ್ಟೇ ಅರಗಿಸಿಕೊಳ್ಳಬಹುದಾದ ಈ ಕಾದೆ,ಇದುವರೆಗಿನ ಎಲ್ಲಾ ಕಾಂಗ್ರೆಸ್‌ಪ್ರಣೀತ ಕಾದೆಗಳಂತೆ ಗೊಂದಲ,ಗೋಜಲುತನಗಳನ್ನು ಒಳಗೊಂಡಿದೆ.ಉದಾಹರಣೆಗೆ ,ಇಲ್ಲಿ ಭೂಮಿ ಕಳಕೊಳ್ಳುವುದು ಒಬ್ಬ.ಆದರೆ ಅದರ ನಿಯಮಾವಳಿಗಳನ್ನೇ ಆತ ತಿಳಿಯಲು ಅಸಮರ್ಥನೆಂದರೆ ಇದರ ಹಿಂದಿನ ಹುನ್ನಾರವೇನು?ತುರಾತುರಿಯಲ್ಲಿ ಅದನ್ನು ಪಾಸು ಮಾಡಲು ಯೋಜಿಸಿದ್ದೇಕೆ?ದೇಶಕ್ಕೆ ದೇಶವೇ ಅಣ್ಣಾಅಣ್ಣಾ ಎಂದು ಎದ್ದಿರುವಾಗ ಅವುಗಳ ಎಡೆಯಲ್ಲಿ ಇದನ್ನು ನುಸುಳಿ ಪಾಸು ಮಾಡುವುದು ಹಲವು ಸಂಶಯಗಳನ್ನು ಹುಟ್ಟಿಸುತ್ತವೆ.ಭೂಮಸೂದೆಗಳೆಂದರೆ ಭಾರತದಲ್ಲಿ ಸದಾ ಸಂಶಯವೇ.ಏಕೆಂದರೆ ಭಾರತದಲ್ಲಿ ಭೂಸ್ವಾಧೀನವೆಂದರೆ ಅದು ಮನೆಹಾಳು ಕೆಲಸವೆಂದೇ ಅರ್ಥ.ದೇಶದ ಯಾವುದೇ ಮೂಲೆಯ ಉದಾಹರಣೆಗಳನ್ನು ತೆಗೆದುಕೊಂಡರೂ ಅದು ಮಾಡಿದ್ದು ಅದನ್ನೇ.ಹೀಗಿರುವಾಗ ಪ್ರಸ್ತುತ ಕಾಯಿದೆ ಯ ತುರಾತುರಿಯ ಮಂಡನೆ ಸಾಮೂಹಿಕ ಮನೆಹಾಳು ಕಾಯೃಕ್ರಮಕ್ಕೆ ಆಡಿಗಲ್ಲಂತೆ ತೋರುತ್ತದೆ.
ಕಾಯ್ದೆ ಹೀಗೆ ಹೇಳುತ್ತದೆ:
"ಇದುವರೆಗೆ ಭಾರತದಲ್ಲಿದ್ದುದು outdated ಕಾನೂನು.೧೮೯೪ರ ಭೂಸ್ವಾಧೀನ ಕಾಯ್ದೆಯನ್ವಯ ಇಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದ್ದವು.ಆದ್ದರಿಂದ ಅದನ್ನು ಹೋಗಲಾಡಿಸಲು ಹೊಸ ಕಾಯ್ದೆಯೊಂದರ ಜರೂರತ್ತು ಇದೆ" ಹಾಗಾದರೆ ಮಂಗಳೂರಿನ ಕೃಷಿ ಭೂಮಿಯನ್ನು ನುಂಗಿದ್ದು,ಒರಿಸ್ಸಾದಲ್ಲಿ,ಬಂಗಾಳದಲ್ಲಿ ,ವಿಶಾಖಪಟ್ಟಣದಲ್ಲಿ ಭೂಮಿಯನ್ನು ನುಂಗಿಹಾಗಿ ರೈತರ ಬಾಳನ್ನು ಮೂರಾಬಟ್ಟೆ ಮಾಡಿದ್ದು ವೈಸರಾಯಿಗಳು ನಿರ್ಮಿಸಿದ್ದ ಕಾನೂನುಗಳು ಎಂದು ಆಶ್ಚರ್ಯಪಡಬೇಕಿಲ್ಲ.ಏಕೆಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳೂ ಕಳೆದರೂ ನಮ್ಮ ಕೆಐಎಡಿಬಿ ಕಾನೂನುಗಳ ಸಹಿತ ದೇಶದ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಯ ನಿಯಮಗಳು ಇಂದಿಗೂ ನಡೆಯುತ್ತಿರುವುದು ವೈಸರಾಯಿಗಳು ಮಾಡಿದ್ದ ಕಾನೂನುಗಳಿಂದಲೇ .ಆದರೆ ಭಾರತಕ್ಕೆ ಮಾತ್ರ ಸರ್ವತಂತ್ರ ಸಾರ್ವಭೌಮ ಗಣತಂತ್ರವೆಂಬ ಪುಗಸಟ್ಟೆ ಪಟ್ಟ.೧೮೫೭ರ ಕ್ರಾಂತಿಯ ಅನಂತರ ಈಸ್ಟ್ ಇಂಡಿಯಾದ ಆಡಳಿತ ಕೊನೆಗೊಂಡವು. ಮತ್ತು ಆವರೆಗೆ ಇದ್ದ ಕಾನೂನುಗಳನ್ನು ಅಲ್ಪಸ್ವಲ್ಪ ಬದಲು ಮಾಡಿ ಆಚರಣೆಗೆ ತರಲಾಯಿತು.ಅವುಗಳಲ್ಲಿ ಡಾಲ್ಹೌಸಿ ಮತ್ತು ವೆಲ್ಲೆಸ್ಲಿಯವರು ಜಾರಿಗೆ ತಂದ ಭೂಸ್ವಾಧೀನ ಕಾನೂನುಗಳೂ ಇದ್ದವು!ಅಂದರೆ ಇಂದು ನಡೆಯುತ್ತಿರುವುದು ಕೂಡ ಅಂಥವರು ನೆಟ್ಟುಬೆಳೆಸಿದ ಕಾನೂನುಗಳ ಚಿಗುರುಗಳೇ. ಹಾಗಾದರೆ ಸಹಾಯಕ ಸೈನ್ಯಪದ್ದತಿಯ ಕುರುಹುಗಳು ಸಂಪೂರ್ಣ ಮಾಸಿಲ್ಲ ಎಂದಾಗಿಲ್ಲವೇ?ಆದ್ದರಿಂದ ನಾವು ವಿನಾ ಕಾರಣ ನೆಹರೂ ,ಇಂದಿರಾ ,ರಾಜೀವ್,ಮನಮೋಹನರನ್ನು ಟೀಕಿಸಬಾರದು! ವೈಸರಾಯಿಗಳ ತಪ್ಪಲ್ಲವೇ!?ಇವುಗಳ ಆಧಾರದಲ್ಲೇ ಭಾರತದಲ್ಲಿ ೧೮ ಭೂಸ್ವಾಧೀನ ಕಾನೂನುಗಳೂ ಜಾರಿಗೆ ಬಂದವು.ಅವುಗಳೆಲ್ಲದರ ಮೂಲಬೇರು ೧೮೯೪ರ ಬಿಳಿಯರು ಮಾಡಿದ ಕಾನೂನೇ.ಹಾಗಾಗಿ ರೈತರ ನರಮೇಧ ನಡೆಯುವಾಗ ಸಾವಿರಾರು ಏಕರೆ ಕೃಷಿ ಭೂಮಿಯನ್ನು ಬಲವಂತದಿಂದ ವಶಪಡಿಸಿಕೊಳ್ಳುವಾಗ,ಮನೆಮಂದಿಯನ್ನು ಅಧಿಕಾರಿಗಳು ಹೊರದಬ್ಬುವಾಗ ಅಲ್ಲಿ ಭಾರತೀಯ ಮನಸ್ಸುಗಳಿರುವುದಿಲ್ಲ.ಈಗ ಮಂಡನೆಯಾಗುತ್ತಿರುವ LARR (national land acquirition and rehabitation and resettlement bill-2011) ಕಾಯಿದೆ ಕೂಡ ಅದೇ ಪುರಾತನ ವಾಸನೆಯನ್ನು ಹೊಂದಿರುವಂತಹ ಕಾನೂನು.ಕಾದೆಯ ಆರಂಭದಲ್ಲೇ ಅದನ್ನು "ಸುಧಾರಿತ"ಎಂದು ಕರೆಯಲಾಗಿದೆ.ಅಂದು ಬ್ರಿಟಿಷರು ಹೇಗೆ ಭೂಸ್ವಾಧೀನ ಮಾಡುತ್ತಿದ್ದರೋ ಹಾಗೇ ಈ ಕಾಯ್ದೆಯೂ ಭೂಸ್ವಾಧೀನವನ್ನು ಮಾಡುತ್ತದೆ. ಹಳೆಯ ಕಾನೂನುಗಳಿಗಿಂತ ಕೊಂಚ ಹೆಚ್ಚಿಗೆ ಪರಿಹಾರವನ್ನು ಕೊಡುವುದು ಇದೆ ವಿಶೇಷತೆ.ಪುನರ್ವಸತಿ ಮತ್ತು ಪುನರ್ ಚೈತನ್ಯ ಎಂಬ ಭಾಗಗಳಲ್ಲಿ ಒಂದಿಷ್ಟು ಸೇರ್ಪಡೆಗಳನ್ನು ಮಾಡಲಾಗಿದೆ.ಆದರೆ ರೈತ ಭೂ"ಯನ್ನೇ ಕಳಕೊಂಡಮೇಲೆ ಇನ್ನು ಚೈತನ್ಯವೆಲ್ಲಿ ಉಳಿದೀತು?
"ಕೈಗಾರಿಕೀಕರಣ ಮತ್ತು ಬೆಳೆಯುತ್ತಿರುವ ನಗರೀಕರಣಕ್ಕೆಂದೇ ಈ ಕರಡು ಸಿದ್ದಗೊಂಡಿದೆ"ಎಂದು ಕಾಯ್ದೆಯ ಪರಿಚಯ ಹೇಳುತ್ತದೆ.ಜೊತೆಗೆ "ಕಾಯ್ದೆ ರೈತರ ಹಿತಾಸಕ್ತಿಯನ್ನು ಕಾಪಾಡುತ್ತದೆ" ಎಂದೂ ಧ್ವನಿಗೂಡಿಸುತ್ತದೆ.ಇದು ಹೇಗೆ ಸಾಧ್ಯ?ರೈತರ ಬಾಳಿನ ಮೇಲೆ ಮತ್ತು ಕೃಷಿ ಭೂಮಿಯ ಮೇಲೆ ಸಮಾಧಿ ಕಟ್ಟಿ ಏಳುವ ಕೈಗಾರಿಕೆಗಳು ,ನಗರಗಳು ಇಂಥ ಹಸೀ ಸುಳ್ಳನ್ನು ಕಾಯ್ದೆಯಲ್ಲಿ ಹೇಳುತ್ತವೆ.ಇದುವರೆಗಿನ ವಿವಿಧ ಭೂಸ್ವಾಧೀನ ಪ್ರಕ್ರಿಯೆಗಳ ಉದ್ದೇಶ ಕೂಡ ನಗರೀಕರಣ ಮತ್ತು ಕೈಗಾರಿಕೀಕರಣವಾಗಿತ್ತು.ಮತ್ತು ಅದಕ್ಕಾಗಿ ಸ್ವಾಧೀನಗೊಂಡ ಭೂಮಿಯೆಲ್ಲವೂ ಕೃಷಿ ಭೂಮಿಗಳೇ ಆಗಿದ್ದವು. ಅಲ್ಲದೆ ಕೈಗಾರಿಕೆಗಳು ಅಪೇಕ್ಷೆ ಪಡುವುದೇ ಕೃಭೂಮಿಗಳನ್ನು ಅಲ್ಲಿ ರೈತನೊಬ್ಬನನ್ನು ಹುಟ್ಟಡಗಿಸಿದರೆ ಉಳಿದೆಲ್ಲವೂ ಸಂಪದ್ಭರಿತವಾಗಿಯೇ ಇರುತ್ತದೆ.ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಕೊಬ್ಬಿದ್ದೇ ಹೀಗೆ.ಇಲ್ಲದಿದ್ದರೆ ಮಂಗಳೂರಿನ MRPL ಗೆ "ಬಾಳ"ದಂತಹ ಭೂಮಿಯೇ ಏಕೆ ಬೇಕಿತ್ತು? ಬಿತ್ತುವ ಭೂಮಿಯ ಮೇಲೆಯೇ ಏಕೆ ಪೋಸ್ಕೋಗೆ ಕಣ್ಣು?ದೇಶದ ಸಮಸ್ತ SEZ ಗಳೆಲ್ಲಾ ಏಕೆ ರೈತರ ಮಣ್ಣಿಗೇ ಕನ್ಣು ಹಾಕುತ್ತವೆ? ಇನ್ನು ಇಂಥ ಹುನ್ನಾರಗಳಿಗೆಲ್ಲಾ ಹೊಸ ಕಾನೂನು ದಿಕ್ಕು ತೋರಿಸುತ್ತದೆ. ರೈತನಿಗೆ ಅರಿ"ಲ್ಲದಂತೆ ಮಂಡಿಸಲಾಗುತ್ತಿರುವ ಈ ಕಾಯ್ದೆ ಮುಂದಿನ ವರ್ಷಗಳಲ್ಲಿ ಎಷ್ಟೋ ರೈತರ ಭೂಮಿಯನ್ನು ಹೊಂಚುಹಾಕಲು ಕುಳಿತಿರುವ ಸುಪ್ತ ಜ್ವಾಲಾಮುಖಿಯಂತೆ ಭಾಸವಾಗುತ್ತದೆ.ಇದು ಹಿಂದಿನ ಕಾನೂನುಗಳ ಪರಿಷ್ಕರಣೆಯಾದರೆ ಪುನರ್ವಸತಿಯ ಬಗ್ಗೆಯೇ ಗಮನ ಕೇಂದ್ರೀಕರಿಸಿರುವುದು ಮುಂದಿನ ಅಪಾಯವನ್ನು ಸೂಚಿಸುತ್ತವೆ.ಏಕೆಂದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸರಕಾರಗಳು ಸಾಕಷ್ಟು ಏಟುತಿಂದವು. ಇವುಗಳನ್ನು ನಿವಾರಿಸಿಕೊಳ್ಳಲು ಅರ್ಥಾತ್ ಆಮಿಷದ ಮೂಲಕ ಭೂಮಿಯನ್ನು ವಶಪಡಿಸಿಕೊಳ್ಳಲೆಂದೇ ಇದನ್ನು ನಿರ್ಮಿಸಿದಂತಿದೆ.ಮೊದಲಿನಂತೆ ಗಿರಿಜನರನ್ನು ಒಕ್ಕಲೆಬ್ಬಿಸುವುದು ಇಲ್ಲೂ ನಡೆಯುತ್ತದೆ.ಭೂಮಿಯನ್ನು ವಶಪಡಿಸಿಕೊಲ್ಳುವ ಪ್ರಕ್ರಿಯೆಗಳೂ ಕೂಡ ಮೊದಲಿನಂತೆಯೇ.ಅಂದರೆ ಮೊದಲು ಕಂಪೆನಿಗಳು ಆಯಕಟ್ಟಿನ ನೆಲವನ್ನು ತನಗೆ ಬೇಕೆಂದು ಕೇಳುತ್ತದೆ.ಅಲ್ಲಿಂದ ಸರಕಾರಗಳು ಈ ಕಾಯ್ದೆಯ ಬಲದಿಂದ ಭೂಮಿಯನ್ನು ನೋಟಿಫೈ ಮಾಡುತ್ತದೆ.ಅನಂತರ ಅಹವಾಲು ಸ್ವೀಕರಿಸುತ್ತದೆ.ಆದರೆ ಯಾವುದೇ ಕಾರಣಕ್ಕೆ ಭೂಸ್ವಾಧೀನದಿಂದ ಹಿಂದೆ ಸರಿಯುವುದಿಲ್ಲ.ಏಕೆಂದರೆ ಸದ್ಯದ ಕಾನೂನಿನ ಮುಖ್ಯ ವ್ಯಾಖ್ಯಾನದಲ್ಲಿ "ಭೂಸ್ವಾಧೀನ ಮತ್ತು ಪುನರ್ವಸತಿಗಳು ಒಂದೇ ನಾಣ್ಯದ ಎರಡು ಮುಖಗಳು" ಎಂದು ಹೇಳುತ್ತದೆ.ಅಂದರೆ ಭೂಸ್ವಾಧೀನವನ್ನು ಶತಾಯಗತಾಯ ಸಮರ್ಥಿಸಿಕೊಳ್ಳುತ್ತದೆ.ಹೀಗೆ ಆರಂಭವಾಗುವ ಕಾನೂನು ಸಾರ್ವಜನಿಕ ತಕರಾರುಗಳನ್ನು ಆಲಿಸಿದ ಅನಂತರ ನೇರವಾಗಿ ಡೀಲಿಗಿಳಿಯುತ್ತದೆ.ಅದನ್ನು ಕಾಯ್ದೆಯ ಮುಖ್ಯ ಅಂಗ R&R(rehabitation and resettlement) ನಲ್ಲಿ ಉಲ್ಲೇಖಿಸಲಾಗಿದೆ.ಬದಲಿ ಭೂಮಿ ಅಥವಾ ಪರಿಹಾರರೂಪವಾಗಿ ಹಣ ಅಥವಾ ಅವೆರಡನ್ನೂ ಅನುಪಾತಾಧಾರದಲ್ಲಿ ಕೊಡುವ ವ್ಯವಸ್ಥೆಯನ್ನು ಇದು ತಿಳಿಸುತ್ತದೆ.ಸ್ವಾಧೀನವಾಗುವ ಜಮೀನಿನಲ್ಲಿರುವ ಗಿಡ,ಬಳ್ಳಿ,ಮರ,ಆಕಳು,ಕೊಟ್ಟಿಗೆಗಳಿಗೂ ಇಂಥಿಷ್ಟು ಎಂದು ದರ ನಿಗದಿ ಮಾಡುತ್ತದೆ.ಎಲ್ಲಾ ಹಳೆಯ ವಿಧಾನವನ್ನೇ ಅನುಸರಿಸಲಾಗುತ್ತದೆ.ಆದರೂ ಹೊಸರೂಪದಲ್ಲಿ ,ಹೊಸ ಮೇಕಪ್ ಧರಿಸಿ ಮತ್ತಷ್ಟು ಹಸಿವಿನಿಂದ ಕಾನೂನು ಬರುತ್ತಿದೆ.ಎಲ್ಲದಕ್ಕೂ ಬೆಲೆ ಕಟ್ಟಬಹುದು,ಬೆಲೆ ಕೊಡಬಹುದು.ಆದರೆ ಗಂಟು ಮೂಟೆ ಕಟ್ಟಿ ಹೊರಡುವಾಗ ರೈತನ ಕಡೆಯ ಉಸಿರಿಗೆ,ಕಟ್ಟಕಡೆಯ ಹೆಜ್ಜೆಯ ಭಾರಕ್ಕೆ ಈ ಕಾನೂನು ಯಾವ ದರವನ್ನೂ ನಿಗದಿಪಡಿಸುವುದಿಲ್ಲ.ಈ ಕಾನೂನು ರೈತನಲ್ಲದ ಭೂಮಿಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ರೈತನಿಗಿಂತ ಕೈಗಾರಿಕೆಗಳು ಮತ್ತು ನಗರೀಕರಣವೇ ಮುಖ್ಯ ಎನ್ನುವುದಾದರೆ ದೇಶದ ಬಹುಸಂಖ್ಯಾತ ಸಮುದಾಯ ರೈತರು ಎಲ್ಲಿಗೆ ಹೋಗಬೇಕು?
ಸರಕಾರಕ್ಕೊಂದು ಅವಕಾಶವಿತ್ತು. ಹಳೆಯ ಬಿಳಿಯರು ಮಾಡಿದ ಕಾನೂನನ್ನು ಗುಂಡಿಗೆ ಹಾಕಿ ಭಾರತೀಯ ರೈತನಿಗೆ ನೆಮ್ಮದಿ ನೀಡುವ ಕಾನೂನನ್ನು ಜಾರಿಗೊಳಿಸಬಲ್ಲ ಎಲ್ಲಾ ಅವಕಾಶಗಳೂ ಇದ್ದವು. ಆದರೆ ಕಾಂಗ್ರೆಸಿನ ಬಿಲ್ಲುಗಳೆಲ್ಲವೂ ಗುಬ್ಬಿಯನ್ನು ಉರುಳಿಸಲೆಂದೇ ನಿರ್ಮಾಣವಾಗಿರುತ್ತವೆ. ಇನ್ನಷ್ಟು SEZ ಗಳ ನಿರ್ಮಾಣದ ಹುನ್ನಾರ ಇದರಿಂದಲೇ ಗೋಚರವಾಗುತ್ತವೆ. ರೈತರು ಸತ್ತರೆ ಸರಕಾರಕ್ಕೆ ತಾನೇ ಏನು? ಐಪಿಎಲ್ ಗೆ ತೊಂದರೆಯೇ ಅಥವಾ ಸೋನಿಯಾಳಿಗೆ ಆಪತ್ತೇ?

No comments: