Wednesday, August 22, 2012

ದೇಶಕ್ಕೆ ವಲಸಿಗರ ಚಿಂತೆ: ಪ್ಲಾಂಟರುಗಳಿಗೆ ಆಳಿನ ಚಿಂತೆ

ದೇನು ತುಂಬಾ ಹಳೆಯ ಸಂಗತಿಯಲ್ಲ. ಅಸ್ಸಾಂನಲ್ಲಿ ನೆಲೆಸಿದ್ದ ಬಾಂಗ್ಲಾ ಮುಸಲ್ಮಾನನೊಬ್ಬ ಯಾವುದೋ ಕ್ರಿಮಿನಲ್  ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಆತ ಅಸ್ಸಾಂ ಬಿಟ್ಟಿದ್ದ . ಹೀಗೆ ಊರು ಬಿಟ್ಟಿದ್ದ ಅಸ್ಮತ್  ಅಲಿ ಎಂಬಾತನನ್ನು ಹುಡುಕಲು  ಅಸ್ಸಾಮಿ
ನಿಂದ ಗುಪ್ತಚರ ಇಲಾಖೆಯ ಸಿಬ್ಬಂದಿಗಳು ಜಾಡು ಹಿಡಿದು ನೇರವಾಗಿ ಕರ್ನಾಟಕದ ಕೊಡಗಿಗೆ ಬಂದರು.  ಕೊಡಗಿನ  ದೊಡ್ಡ ಪ್ಲಾಂಟರುಗಳ ತೋಟವನ್ನೆಲ್ಲಾ  ಜಾಲಾಡಿದರು. ಎಂಥಾ ಕ್ರಿಮಿನಲನೋ? ಎಲ್ಲಿಂದೆಲ್ಲಿಯ ಸಂಬಂಧವೋ ಎನ್ನುವುದು ತಿಳಿಯಲಿಲ್ಲ. ಆದರೆ ಕೊಡಗಿನ ಕಾಫಿ ತೋಟಕ್ಕೂ ಬಾಂಗ್ಲಾ ವಲಸಿಗ ಅಸ್ಸಾಂ ಮುಸ್ಲಿಮರಿಗೂ ನೇರಾನೇರ ಸಂಪರ್ಕವಿದೆ ಎಂಬ ಸಂಗತಿ ಒಳಗೊಳಗೇ ಇದ್ದಿದ್ದು ಮಾತ್ರ ಬಹಿರಂಗವಾಗಿತ್ತು.
ಇತ್ತೀಚೆಗೆ ಕೊಡಗಿನ ಅಮ್ಮತ್ತಿ-ಹೊಸೂರು ಪ್ರದೇಶದ ದೊಡ್ಡ ಪ್ಲಾಂಟರ್ ಒಬ್ಬರು ಆಳುಗಳಿಗೆ  ಸಂಬಳ ಕೊಡಲು ಎರಡು ದಿನ ತಡವಾಯಿತು.  ಇದರಿಂದ  ಸಿಟ್ಟಿಗೆದ್ದ ಆಳುಗಳು ತೋಟದ ಗೇಟನ್ನೇ ಸ್ಪೋಟಿಸಿದರು! ಕಾಫಿ ತೋಟದ  ಆಳುಗಳು ಸ್ಪೋಟವನ್ನೂ  ನಡೆಸುತ್ತಾರೆ. ಆಗಲೂ ಜನರು ಬಾಂಗ್ಲಾ ವಲಸೆಯ ಬಗ್ಗೆ ಮಾತಾಡಿಕೊಂಡರು.  ಇನ್ನೊಮ್ಮೆ ನಾಪೋಕ್ಲು  ಪರಿಸರದ  ಮಸೀದಿಯಲ್ಲಿ ಹಬ್ಬದ ಉಡುಗೊರೆಯಾಗಿ ಕಾಫಿ ತೋಟದ ಮುಸಲ್ಮಾನರಿಗೆ  ಸ್ಥಳೀಯ ಮುಸಲ್ಮಾನರು ಟೋಪಿ ಮತ್ತು ಬುರ್ಖಾಗಳನ್ನು ವಿತರಿಸಿದರು. ಎಲ್ಲಿಂದಲೋ ಬಂದ ಆಳುಗಳಿಗೆ ಇನ್ನೆಲ್ಲಿನದೋ ಊರಿನ ಮಸೀದಿಯಿಂದ ಟೋಪಿ ವಿತರಣೆ! ಆಗಲೂ ಜನ ‘ಇವರೆಲ್ಲಾ ದೇಶ ಇಡುವುದುಂಟಾ?’ ಎಂದು ಮಾತಾಡಿಕೊಂಡಿದ್ದರು.  ಕಳೆದ ವರ್ಷ ತಲಕಾವೇರಿ, ಭಾಗಮಂಡಲಕ್ಕೆ ಹೋಗುವ ದಾರಿಯಲ್ಲಿ ಸಿಗುವ ಚೇರಂಬಾಣೆ ಎಂಬ ಸಣ್ಣ ಊರೊಂದಕ್ಕೆ ೮೦ ಜನ   ಅಸ್ಸಾಂ ಮೂಲ ಎಂದು ಹೇಳಿಕೊಂಡು ಒಂದು ವರ್ಷವಿದ್ದು ಹೋದರು ಎಂಬುದನ್ನು ಕೆಲವರು ಇಂದಿಗೂ ಭೀತಿಯಿಂದ ಮಾತಾಡಿಕೊಳ್ಳುತ್ತಿದ್ದಾರೆ. ಉರಿಯುತ್ತಿರುವ ಅಸ್ಸಾಂ, ಅದರ ಕಿಡಿಗಳು  ದೇಶಾದ್ಯಂತ ಹೊತ್ತಿಕೊಳ್ಳುತ್ತಿರುವ ಸಂದರ್ಭದಲ್ಲಿ  ಪ್ರಜ್ಞಾವಂತರು ಈ ಎಲ್ಲಾ ಘಟನೆಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಬೆಚ್ಚಿ ಬೀಳುತ್ತಿದ್ದಾರೆ.
ಅವರ ಭೀತಿಗೂ ನ್ಯಾಯಯುತವಾದ ಕಾರಣವಿದೆ. ಗುಪ್ತಚರ ಇಲಾಖೆಯ ಪ್ರಕಾರ ಕೊಡಗಿನಲ್ಲಿ ೧೦ರಿಂದ ೧೪ ಸಾವಿರದಷ್ಟು ಬಾಂಗ್ಲಾ ವಲಸಿಗರಿದ್ದಾರೆ. ಎಲ್ಲರೂ ಕೊಡಗಿನ ಕಾಫಿ ತೋಟಗಳಲ್ಲಿ ,ಕಟ್ಟಡ  ಗುತ್ತಿಗೆದಾರರ ಬಳಿ  ಕೂಲಿಗಳಾಗಿದ್ದಾರೆ ಎಂಬುದನ್ನು ಗುಪ್ತಚರ ಇಲಾಖೆ ತಿಳಿಸಿತು. ಕಳೆದ ೫ ವರ್ಷಗಳಿಂದ ಇದರ ಸೇರ್ಪಡೆಯಾಗುತ್ತಿದ್ದರೂ ಈಗಿನ ೨ ವರ್ಷಗಳಿಂದ ಇದು ಬಹಿರಂಗವಾಗುತ್ತಿದೆ ಎಂಬುದು ಗಮನಾರ್ಹ ಅಂಶ.  ಮಡಿಕೇರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು “ಅಸ್ಸಾಂ, ಬಿಹಾರ ಎಂದು ಹೇಳಿಕೊಂಡು ಬರುವ ಎಲ್ಲಾ  ತೋಟದ ಕೂಲಿಗಳ ಬಳಿ ಸ್ಥಳೀಯ ಆಡಳಿತ ಕೊಟ್ಟಿದೆ ಎನ್ನಲಾದ ಪರಿಚಯ ಪತ್ರವೊಂದಿರುತ್ತದೆ. ಬಹುತೇಕ ಪರಿಚಯ ಪತ್ರಗಳ ಮೂಲ ಅಸ್ಸಾಮಿನ ಶಿಲ್ಲಾಂಗ್ ಎಂದಿರುತ್ತದೆ ” ಎನ್ನುತ್ತಾರೆ. ಆ ಗುರುತಿನ ಪತ್ರವೂ  ಒಂದು ಸೋಜಿಗ.
ಒಂದು ಪರಿಚಯ ಪತ್ರ ಹೀಗಿದೆ.
 ಆರಂ‘ದಲ್ಲಿ ‘ರತ ಸರಕಾರದ ಲಾಂಛನ. ಅದರ ಕೆಳಗೆ Govt. of GAONBURHA  ಎಂಬ ಬರಹ. ಭಾರತ ಸರಕಾರದ ಲಾಂಛನದ ಕೆಳಗೆ ಹೆಸರು ಕೇಳಿಲ್ಲದ ದೇಶವೋ, ಊರೋ, ಪಂಚಾಯತಿಯೋ ಏನೂ ತಿಳಿಯದು. ದೇಶದ ಎಲ್ಲಾ  ರಾಜ್ಯಗಳಿಗೂ ಅವುಗಳದ್ದೇ ಆದ ಲಾಂಛನಗಳಿರುತ್ತವೆ. ಆದರೆ ಇಲ್ಲಿ ಮಾತ್ರ ಅದಿಲ್ಲ. GAONBURHA  ಎಂಬುದೇ  ಒಂದು ದೇಶ. ಅದರ ಕೆಳಗೆ ಹೀಗೊಂದು ವಿಳಾಸ.
MD. ABDUL REHMAN
VILL CHENIBARI
PO RANI PUKURI
MOUZA - SH AYANABARI
P.S.DHULA
Dist. DARRANG (ASSAM)
ಈ ವಿಳಾಸದ ವ್ಯಕ್ತಿಯನ್ನು  ಪರಿಚಯ ಮಾಡಿ ಈತನ ವರ್ತನೆ ಉತ್ತಮ ಎಂದು ಬರೆದು ಕಳಿಸಿದವನು M.D HABIBAR REHMAN, S/O ABDUL JALIL  ಎಂಬ ಪಂಚಾಯತಿ ಸದಸ್ಯ ಇಂಥ ಕ್ಯಾರೆಕ್ಟರ್ ಸರ್ಟಿಫಿಕೇಟ್ ಪಡೆದವರೆಲ್ಲರೂ ಸಮೀವುಲ್ಲಾ , ಜಾಫರ್, ಅತಾವುಲ್ಲಾಖಾನ್, ಮುಜಾಫರ್ , ಶರೀಫ್ ಹೆಸರಿನವರು. ಇವರೆಲ್ಲರೂ ಕೊಡಗಿನ ದೊಡ್ಡ ಧಣಿಗಳ ತೋಟದಲ್ಲಿ ಕೆಲಸಕ್ಕೆ ಸೇರುತ್ತಾರೆ. ಕಳೆದುಹೋಗುತ್ತಾರೆ. ಸ್ಥಳೀಯ ಮಸೀದಿಗಳು ಇಂದು  ಟೋಪಿ, ಬುರ್ಖಾ ಕೊಟ್ಟವರು ನಾಳೆ ಮನೆಕಟ್ಟಿ ಕೊಡಲಾರರು ಎಂದೇನೂ ಹೇಳದಿರಲಾಗುವುದಿಲ್ಲ.
ಮಡಿಕೇರಿಯ ನಾಗರಿಕರು ಇನ್ನಷ್ಟು ಹೇಳುತ್ತಾ ಹೋದರು. ಕೆಲವು ದಾಖಲೆಗಳನ್ನು ತೋರಿಸಿದರು. ವಿಪರ್ಯಾಸವೆಂದರೆ  ಅದೇ ಚೇರಂಬಾಣೆ  ಎಂಬ ಸಣ್ಣ ಊರಿನ ಬ್ಯಾಂಕೊಂದರಿಂದ  ದೊಡ್ಡ ಮೊತ್ತದ ಹಣ ಅಸ್ಸಾಮಿನ ಜಾಕೀರ್  ಹುಸೇನ್ ಎಂಬ  ವೈದ್ಯನೊಬ್ಬನಿಗೆ ಸಂದಾಯವಾಗುತ್ತಿದೆ. ಈತ ಕಾಫಿ ತೋಟಕ್ಕೆ ಕೂಲಿಯಾಳುಗಳನ್ನು ಕಳುಹಿಸುವ  ದಂಧೆ ನಡೆಸುವವನು. ಒಬ್ಬ ಆಳಿಗೆ ತಲಾ ಎರಡೂವರೆ ಸಾವಿರ ರೂಪಾಯಿ ಸಂದಾಯ ಮಾಡಿದರೆ  ಒಬ್ಬನನ್ನು ಮುಂಗಡ ಕಾಯ್ದಿರಿಸಿದಂತೆ. ಇಂಥ  ಆಳುಗಳನ್ನು ಅಸ್ಸಾಂನಿಂದ ಕಳುಹಿಸುವ  ಏರ್ಪಾಡು ಆತನದ್ದು. ರೈಲು ನಿಲ್ದಾಣದಿಂದ  ಕರೆತರುವ  ವ್ಯವಸ್ಥೆ  ಸ್ಥಳೀಯ ದಲ್ಲಾಳಿಗಳದ್ದು. ಕೇವಲ ೧೦೦ರಿಂದ ೧೫೦ ರೂ.ಗೆ ದಿನಗೂಲಿಗೆ ಸಿಕ್ಕುವ ಈ ಕೂಲಿಯಾಳುಗಳಿಗೆ  ಕೊಡಗಿನಲ್ಲಿ  ಬೇಡಿಕೆ ಹೆಚ್ಚು. ದೊಡ್ಡ ಪ್ಲಾಂಟರುಗಳಿಗೆ ಉಳಿದೆಲ್ಲವೂ ಗೌಣ. ಆಳೊಂದೇ ಪ್ರಧಾನವಾದ್ದರಿಂದ   ಸಮಸ್ಯೆಗಳು ಮತ್ತೊಂದು  ಮಗ್ಗುಲಿಗೆ  ಹರಡಿಕೊಂಡಿದೆ. ಹಾಗಾಗಿ ಕೊಡಗಿನ  ದೊಡ್ಡ ಪ್ಲಾಂಟೇಶನ್‌ಗಳಿರುವೆಡೆಯಲ್ಲೆಲ್ಲಾ  ಬಾಂಗ್ಲಾ ವಲಸಿಗರು  ತುಂಬಿದ್ದಾರೆ. ಸಿದ್ದಾಪುರ  ಮತ್ತು   ಪಾಲಿಬೆಟ್ಟ  ಸುತ್ತಮುತ್ತ, ಸುಂಟಿಕೊಪ್ಪ, ಬೆಟ್ಟಗೇರಿ, ದ.ಕೊಡಗಿನ  ಕುಟ್ಟಾ, ಭಾಗಮಂಡಲದ ಸುತ್ತಮುತ್ತಲೆಲ್ಲಾ  ತೋಟದ ಕೆಲಸಗಾರರು ಎಂದರೆ   ಒರಟೊರಟಾಗಿ ಕಾಣುವ ಬಾಂಗ್ಲಾ ಮುಸಲ್ಮಾನರೇ.
ಇದೇಕೆ ಹೀಗೆ? ಬಾಂಗ್ಲಾ ಆಳುಗಳೇಕೆ ಇಲ್ಲಿನ ತೋಟಗಳಿಗೆ ಬರುತ್ತಾರೆ ಎಂಬುದಕ್ಕೆ ಪೂರ್ವರಂಗವನ್ನು ಗಮನಿಸಲೇ ಬೇಕು.
ಶತಮಾನಗಳ ಹಿಂದೆ ಕೊಡಗಿನಲ್ಲಿ ಬ್ರಿಟಿಷರು  ಕಾಫಿ ಪ್ಲಾಂಟೇಶನ್‌ಗಳನ್ನು ಪ್ರಾರಂಭಿಸುವಾಗ ನಂಬಿಕೊಂಡಿದ್ದು ಕೊಡಗಿನ  ಬುಡಕಟ್ಟು ಜನಾಂಗಗಳಾದ ಕುರುಬರು  ಮತ್ತು ಎರವರನ್ನು. ಇದು ಇತ್ತೀಚಿನ ೨೦ ವರ್ಷಗಳ ಹಿಂದಿನವರೆಗೂ ನಡೆದುಕೊಂಡು ಬಂದಿತ್ತು.
ಹಾಗಾಗಿ  ದೊಡ್ಡಪ್ಲಾಂಟರುಗಳ ತೋಟದಲ್ಲೆಲ್ಲಾ  ಸಾಲುಸಾಲು ಲೈನ್ ಮನೆಗಳು,  ಬಾವಿಗಳಿವೆ ಮತ್ತು ಹಾಡಿಗಳಿಗೆ  ಸಮೀಪವಿರುವ ಪ್ರದೇಶಗಳಲ್ಲೇ ದೊಡ್ಡ ದೊಡ್ಡ ಪ್ಲಾಂಟೇಶನ್‌ಗಳಿವೆ. ಯಾವಾಗ ಪುನರ್ವಸತಿ ಹೆಸರಿನಲ್ಲಿ ಈ ಬುಡಕಟ್ಟುಗಳನ್ನು  ಕಾಡಿನಿಂದ ಒಕ್ಕಲೆಬ್ಬಿಸುವ ಕೆಲಸ ಆರಂಭವಾಯಿತೋ ಆಗಿನಿಂದ ಈ ತೋಟಗಳಿಗೆ ಕೂಲಿಯಾಳುಗಳ ಸಮಸ್ಯೆ ಕಾಡಲಾರಂಭಿಸಿತು.  ಜೊತೆಗೆ ಲೈನ್‌ಮನೆಗಳಲ್ಲಿದ್ದ ಆಳುಗಳು  ತೋಟದ ಕೆಲಸವನ್ನು ಬಿಟ್ಟು ಪೇಟೆ ಸೇರಲಾರಂಭಿಸಿದರು. ಹೀಗೆ ನೋಡನೋಡುತ್ತಲೇ ಕಾಫಿ ತೋಟದ ಶ್ರಮದಾಯಕ ಕೆಲಸಕ್ಕೆ ಕೂಲಿ ವಿಪರೀತ ಹೆಚ್ಚಿತು. ಪೇಟೆಯ ಕಾಲೋನಿಗಳ ಕಾರ್ಮಿಕರನ್ನು ಮುಸಲ್ಮಾನ್ ದಳ್ಳಾಳಿಗಳು ಜೀಪುಗಳಲ್ಲಿ ಬೇರೆ  ಊರುಗಳಿಗೆ ಕಳುಹಿಸಿ ಕಾರ್ಮಿಕರ ಅಸಮತೋಲನ ಸೃಷ್ಟಿಸುವ ಕೆಲಸವನ್ನೂ ಆರಂಭಿಸಿದರು. ಇದರಿಂದ  ದೊಡ್ಡ ತೋಟದಲ್ಲಿ ಅರೇಬಿಕಾ  ಕಾಫಿ ಬೆಳೆಸುವ, ವರ್ಷಪೂರ್ತಿ ಕೆಲಸವನ್ನು ಅಪೇಕ್ಷಿಸುವ ತೋಟಗಳಿಗೆ ಕೆಲಸಗಾರರ ಅಭಾವ ತೀವ್ರವಾಗಿ ಬಾಧಿಸಿತು. ಆಗ ಅದರ ಲಾಭವನ್ನು  ಪಡೆದುಕೊಂಡಿದ್ದೇ ಮುಸಲ್ಮಾನ ದಲ್ಲಾಳಿಗಳು. ಆದರೆ ಸ್ಥಳೀಯ ದಲ್ಲಾಳಿಗಳಿಗೆ ದೂರದ ಅಸ್ಸಾಂನ ದಲ್ಲಾಳಿಗಳ ಪರಿಚಯವಾಗಿದ್ದು ಹೇಗೆ?  ಇವರೆಲ್ಲರೂ ಸೋದರರೇ? ಎಂದು ಕೇಳಿದರೆ ಕೋಮುವಾದದ  ಪ್ರಶ್ನೆಗಳಾಗಿಬಿಡುತ್ತವೆ.
ರಾಯರ್ ಫ್ಯಾಮಿಲಿಗಳ ದೊಡ್ಡ ಪ್ಲಾಂಟರುಗಳಿಗಂತೂ ಇದಾವುದರ ಪರಿವೆ ಇರುವುದಿಲ್ಲ. ತನ್ನ ತೋಟದ ಕೆಲಸ ಆಗಬೇಕಷ್ಟೇ ಎಂಬ ಭಾವನೆ. ಹಾಗಾದರೆ ದೇಶದ ಸ್ಥಿತಿ! ವಿಚಿತ್ರವೆಂದರೆ ಈ ರಾಯಲ್ ಫ್ಯಾಮಿಲಿಗಳಿಗೆ  ಕಾರ್ಯಪ್ಪ, ತಿಮ್ಮಯ್ಯರುಗಳೆಂದರೆ ವಿಪರೀತ ಹೆಮ್ಮೆ. ಅವರು ಯಾರ ವಿರುದ್ಧ ಹೋರಾಡಿ ದೇಶ ಬಿಟ್ಟು ಓಡಿಸಿದರೋ ಅವರನ್ನೇ ಈ ಪ್ಲಾಂಟರಗಳು ತಮ್ಮ ತೋಟಗಳಿಗೆ ಬಿಟ್ಟುಕೊಂಡಿದ್ದಾರೆ. ಇದು ಘೋರ ಅಣಕವಷ್ಟೇ ಅಲ್ಲ. ಮಹಾವಿಕೃತಿ.
ಬ್ರಿಟಿಷರ ಕಾಲ ನೆನಪಾಗುತ್ತದೆ. ೧೯ನೇ ಶತಮಾನದ ಆರಂಭದಲ್ಲಿ ಅಸ್ಸಾಮಿನ ಚಹಾತೋಟಗಳಲ್ಲಿ ಕೆಲಸ ಮಾಡಲು ಇಂದಿನ ಕೊಡಗಿನಂತೆ ಅಂದೂ  ಬಂಗಾಳಿ ಮಾತಾಡುವ ಮುಸಲ್ಮಾನರನ್ನು ತಂದು ಕೂರಿಸಿದ್ದರು. ಇಂದು ಅದೇ ಮುಸಲ್ಮಾನರು ಸ್ಥಳೀಯರಾಗಿ ಬಾಂಗ್ಲಾ ವಲಸಿಗರಿಗೆ ಸಹಕಾರ ನೀಡುತ್ತಿದ್ದಾರೆ. ಅಂದು ಬ್ರಿಟಿಷರು  ಮಾಡಿದ್ದನ್ನೇ ಇಂದು ಕೊಡಗಿನ ಪ್ಲಾಂಟರುಗಳು ಮಾಡುತ್ತಿದ್ದಾರೆ.  ಈಗಾಗಲೇ ಸಣ್ಣ ಜಿಲ್ಲ್ಲೆಯಲ್ಲಿ ಹದಿನಾಲ್ಕು  ಸಾವಿರ ಬಾಂಗ್ಲಾದೇಶಿಯರು ಇದ್ದಾರೆ ಎಂದರೆ ಮುಂದಿನ ದಿನಗಳಲ್ಲಿ  ಪರಿಸ್ಥಿತಿ ಏನಾಗಲಿದೆ? ವಿಪರ್ಯಾಸವೆಂದರೆ ಕೊಡಗಿನಲ್ಲಿ  ಪ್ರಬಲ ಮೂಲ ನಿವಾಸಿಗಳೆಂದು ಕರೆಯಲ್ಪಡುವ  ಕೊಡವರ ಸಂಖ್ಯೆ ೧ ಲಕ್ಷವೂ ಇಲ್ಲ. ದಿನೇ ದಿನೇ ಅವರ ಸಂಖ್ಯೆ ಕುಸಿಯುತ್ತಿದೆ. ಆದರೆ ಕೇವಲ ನಾಲ್ಕೈದು ವರ್ಷದಲ್ಲಿ ಬಾಂಗ್ಲಾದವರ ಸಂಖ್ಯೆಯೆ ಹದಿನಾಲ್ಕು ಸಾವಿರ! ಅಲ್ಲದೆ ಕೊಡಗಿನ  ಇತರ ಮೂಲ ನಿವಾಸಿಗಳಾದ ಅಮ್ಮಕೊಡವ, ಮಲಯ, ಮೇದ, ಹೆಗ್ಗಡೆ, ಪಣಿಕರ ಸಂಖ್ಯೆಗಿಂತಲೂ ಇವರ ಸಂಖ್ಯೆಯೇ ಹೆಚ್ಚು! ಎಲ್ಲವೂ ದೊಡ್ಡ ಪ್ಲಾಂಟರುಗಳ ಮಹಿಮೆ. ಅಂದು ಬ್ರಿಟಿಷರ ಜೊತೆ ಪಾರ್ಟಿ ಮಾಡುತ್ತಾ ಮೋಜು  ಮಾಡಿ ಇಂದು ರಾಯಲ್ ಕುಳಗಳಾಗಿರುವ ಇವರು ಇಂದೂ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಜಮ್ಮಾ ಆಸ್ತಿ ಮತ್ತು ವಿಶೇಷ ಶಸ್ತ್ರ  ಕಾಯಿದೆಯ ಅಹಂಕಾರದಿಂದ ಬೀಗುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ. ೨೧ರಷ್ಟು  ಮುಸಲ್ಮಾನರು ತುಂಬಿದ್ದಾರೆ. ಕುಸಿಯುತ್ತಿರುವ  ಸ್ಥಳೀಯರು, ಏರುತ್ತಿರುವ ವಿದೇಶಿ ಪೀಳಿಗೆಯವರ ಪ್ರವಾಹ ಇದೇ ರೀತಿ ಏರಿದರೆ  ಅವರನ್ನು ರಕ್ಷಿಸಲು ಜಮ್ಮಾ ಹಕ್ಕು ಇರುವುದಿಲ್ಲ. ಗೋಡೆಯಲ್ಲಿ  ತೂಗು ಹಾಕಿದ ಕೋವಿಯೂ ಇರುವುದಿಲ್ಲ.  ತೋಟವೂ  ಇರುವುದಿಲ್ಲ ಎಂಬ ಸಂಗತಿಯನ್ನು ಅರಿತುಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ.  ಏಕೆಂದರೆ ಯಾವ ಪ್ಲಾಂಟರನೂ ಇದುವರೆಗೆ ಎಚ್ಚೆತ್ತುಕೊಂಡಿಲ್ಲ. ಪೊಲೀಸರಿಗೆ ಸುದ್ದಿ ಮುಟ್ಟಿಸಿಲ್ಲ. ಇನ್ನು ಒಂದು ದಿಗ್ಭ್ರಮೆ  ಹುಟ್ಟಿಸುವ ಸಂಗತಿ ಎಂದರೆ ಟಾಟಾದವರ ತೋಟಗಳಲ್ಲೂ ಇವರು ನುಸುಳಿದ್ದಾರೆ ಎನ್ನುವುದು.  ದೊಡ್ಡವರಿಗೆ ತೋಟದ ಚಿಂತೆ, ಉಳಿದವರಿಗೆ  ದೇಶದ ಚಿಂತೆ. ದೇಶ  ಕೊಳ್ಳೆ ಹೊಡೆದರೆ ಇವರ ತೋಟ ಉಳಿದೀತೇ? “ಕತ್ತಿ-ಕೋವಿಯನ್ನಿಟ್ಟು ಸುಮ್ಮನೆ  ನಾವು ಪೂಜಿಸುತ್ತಿಲ್ಲವೇ?” ಎಂಬುದು ಕೇವಲ ಹಾಡು ಅಲ್ಲ.  ಅದು ಕೊಡಗಿನ ಪ್ಲಾಂಟರುಗಳ  ಮನಸ್ಥಿತಿ ಎಂಬುದು ಇದೀಗ ಅರಿವಾಗುತ್ತಿದೆ.
ಇವೆಲ್ಲವೂ ಮುಂಬರುವ ಅಪಾಯದ   ಪೂರ್ವಸೂಚನೆಯನ್ನು  ತರುತ್ತಿದೆ. ಅತ್ತ ಬೆಂಗಳೂರಿನಲ್ಲಿ ಸಾವಿರಾರು ಅಸ್ಸಾಮೀಯರು ಊರು ಬಿಟ್ಟರು. ಆದರೆ ಬಾಂಗ್ಲಾ ದೇಶಿಯರು?  ಬಾಂಗ್ಲಾ ವಲಸಿಗರಿಗಾಗಿ ಮಂಗಳೂರಿನಲ್ಲಿ ಹಣ ಸಂಗ್ರಹವಾಗುತ್ತದೆ. ಮುಂಬೈ, ಉತ್ತರ ಪ್ರದೇಶಗಳಲ್ಲಿ ದಂಗೆಗಳು ನಡೆಯುತ್ತದೆ. ಬೆಂಗಳೂರಿನ  ಶಾಂತಿ ಸಭೆಯಲ್ಲಿ ಸೇರಿದಾಗಲೂ ಮುಸ್ಲಿಂ ಮುಖಂಡರಿಗೆ ‘ಹೊಸದಿಗಂತ’ದ ಬಗ್ಗೆ ವಿಪರೀತ ಕೋಪ ಬರುತ್ತದೆ. ಬಾಂಗ್ಲಾ ವಲಸೆಯ ಬಗ್ಗೆ ಚರ್ಚಿಸುವಾಗಲೂ ಅಲ್ಲಿ ಪುಂಡರಸನೊಬ್ಬನ ಪ್ರಸ್ತಾಪವಾಗುತ್ತದೆ. ಆದರೆ ನಮ್ಮ ಪ್ಲಾಂಟರ್ ಗಳು? ಮನೆಯಲ್ಲೂ ಇಂಗ್ಲಿಷ್ ಮಾತಾಡುತ್ತಾರೆ. ಲೇಬರ್ ಪ್ರಾಬ್ಲಂ ಎನ್ನುತ್ತಾರೆ. ಕಾಫಿಯ ರೇಟಿನ ಬಗ್ಗೆ  ಚರ್ಚಿಸುತ್ತಾರೆ. ಸಂಜೆ ಕ್ಲಬ್‌ಗಳಿಗೆ ಹೋಗುತ್ತಾರೆ.  ಜೀವನಪೂರ್ತಿ ಅಹಂಕಾರ ಪಡುತ್ತಲೇ ಒಂದು ದಿನ ಸತ್ತು ಹೋಗುತ್ತಾರೆ.
ತೋಟ ಕೆಲಸಕ್ಕೆ ಬಂದ ಬಾಂಗ್ಲಾದವರ ಈ ಪ್ರಮಾಣ ಮತ್ತು ಅವರಿಗೆ ಟೋಪಿ ಮತ್ತು ಬುರ್ಖಾ ಕೊಟ್ಟ ಸ್ಥಳೀಯರ ಉತ್ಸಾಹಗಳನ್ನು ನೋಡಿದರೆ ದೊಡ್ಡ ಪ್ಲಾಂಟರುಗಳಿಗೂ, ಸಣ್ಣ ಪ್ಲಾಂಟರುಗಳಿಗೂ, ಪ್ಲಾಂಟರುಗಳಲ್ಲದವರೆಲ್ಲರಿಗೂ ಕೂಡ ಇನ್ನು ನೆಮ್ಮದಿಯ  ಸಾವೂ ಕೂಡ ಇಲ್ಲವೆಂದೇ ಯಾಕೋ ಅನಿಸುತ್ತಿದೆ. ಅಪಶಕುನ ಅನಿಸುತ್ತಿದೆ. ಶಿಲಾಯುಗದ ಜನರು ನೆನಪಾಗುತ್ತಿದ್ದಾರೆ.